ಇವತ್ತಿನ ವಚನ
ಸರ್ವಜ್ಞನೆ೦ಬುವನು ಗರ್ವದಿ೦ದಾದವನೆ
ಸರ್ವರೊಳು ಒ೦ದು೦ದು ನುಡಿಗಲಿತು
ವಿದ್ಯೆಯಾ ಪರ್ವತವೆ ಆದ ಸರ್ವಜ್ಞ ||
- Read more about ಇವತ್ತಿನ ವಚನ
- Log in or register to post comments
ಸರ್ವಜ್ಞನೆ೦ಬುವನು ಗರ್ವದಿ೦ದಾದವನೆ
ಸರ್ವರೊಳು ಒ೦ದು೦ದು ನುಡಿಗಲಿತು
ವಿದ್ಯೆಯಾ ಪರ್ವತವೆ ಆದ ಸರ್ವಜ್ಞ ||
ಪ್ರೇಮದಾ ಹೊಳೆ ಹರಿಯೆ ಮೊದಲನೇ ನೋಟದಲೆ ,
ಬಿಸಿಯುಸಿರ ಉನ್ಮಾದ ನತರದಲಿ |
ಕೊನೆಗೊಮ್ಮೆ ಕಳಚುವುದು ಹುಸಿ ಪ್ರೇಮದಾ ಕೊಂಡಿ,
ಶ್ರೀ ರಾಮಚಂದ್ರನ ಶ್ರೇಷ್ಠ ಗುಣ ಯಾವದು ನಿಮಗೆ ಗೊತ್ತೇ ? ಅದು ಮಾತಿಗೆ ಮೊದಲು ಮುಗುಳ್ನಗುವ ಗುಣ .
ನಾನು ಆಗ ಮೊದಲ ಪದವಿ ಪೂರ್ವ (೧೧ನೇ) ತರಗತಿ ಎಂದು ನೆನಪು. "ಹಂಸಗೀತೆ" ಚಿತ್ರದಲ್ಲಿ ಬಾಲಮುರಳಿಯ ಗೀತಗೋವಿಂದದ ಹಾಡುಗಳನ್ನು ಕೇಳಿ ಪುಳಕಿತನಾಗಿದ್ದೆ. ಸರಿ ಗೀತ ಗೀತ-ಗೋವಿಂದದ ಪುಸ್ತಕಕ್ಕೆ ಹುಡುಕತೊಡಗಿದೆ. ನನ್ನ ಅಜ್ಜಿಯ ಬಳಿ ಗೀತಗೋವಿಂದ ಓದಬೇಕು ಎಂದಾಗ ಅಷ್ಟು ದೊಡ್ಡವನಾಗಿದ್ದೀಯಾ ಎಂದು ನಕ್ಕಿದ್ದರು. ಪುಸ್ತಕವೇನೋ ಸಿಕ್ಕಿತು ಆದರೆ ನನ್ನ ಸೋಮಾರಿತನ ಪುಸ್ತಕವನ್ನು ಮೂಲೆಗೆ ಸರಿಸಿತು. ಮೊನ್ನೆ ಸಂಜಯ್ ಸುಬ್ರಹ್ಮಣ್ಯಂ ಅವರ ಕಛೇರಿ ಕೇಳಿದ ನಂತರ ಆಸಕ್ತಿ ಕೆರಳಿತು. ಅದನ್ನು ಸಂಪದದಲ್ಲಿ ಯಾವ ವರ್ಗಕ್ಕೆ ಸೇರಿಸಬೇಕು ಎಂದು ತೋರದೆ ನನ್ನ ಬ್ಲಾಗಿಗೆ ಹಾಕಲು ನಿರ್ಧರಿಸಿದೆ. ಯಾವ ವರ್ಗಕ್ಕೆ ಸೂಕ್ತ ಎಂದು ತಿಳಿಸಿದರೆ ಅಲ್ಲಿಗೆ ಸೇರಿಸಲು ಸಿದ್ಧ. (ಅಥವಾ ಇದು ಸಂಪದಕ್ಕೆ ಹಾಕಲು ಸೂಕ್ತವೇ ಅಲ್ಲವೇ ಎಂದೂ ತಿಳಿಸಿದರೆ ಒಳ್ಳೆಯದು)
ಅಕ್ಕರವು ಲೆಕ್ಕಕ್ಕೆ ತರ್ಕ ತಾ ವಾದಕ್ಕೆ
ಮಿಕ್ಕ ಓದುಗಳು ತಿರುಪೆಗೆ ಮೋಕ್ಷಕ್ಕೆ
ಎರಡಕ್ಕರವೆ ಸಾಕೆ೦ದ ಸರ್ವಜ್ಞ
೦೬-೪-೨೦೦೬ - ಗುರುವಾರ - ಮಧ್ಯಾನ್ಹ ೧-೦೦ ಗಂಟೆ
ಆತ್ಮೀಯ ಸಂಪದದ ಸ್ನೇಹಿತರೇ,
ಬೇಸಿಗೆ ಬಂದಿದೆ. ಆಹಾರದಲ್ಲಿ ಎಚ್ಚರ ವಹಿಸಿ. ಹೊರಗಡೆ ಏನನ್ನೂ ತಿನ್ನಲು ಹೋಗಬೇಡಿ. ಅದರಲ್ಲೂ ಎಣ್ಣೆ ಹಾಕಿದ ತಿಂಡಿಗಳು, ಮಸಾಲೆ ದೋಸೆ ಇತ್ಯಾದಿ, ಪಾನೀ ಪೂರಿ ಇತ್ಯಾದಿ, ಐಸ್ ಕ್ರೀಂ ಇವನ್ನೆಲ್ಲಾ ತಿನ್ನಲು ಹೋಗಬೇಡಿ. ಧಾರಾಳವಾಗಿ ಸಿಹಿ ಹಣ್ಣಿನ ರಸ ಕುಡಿಯಿರಿ. ಶುದ್ಧವಾದ ನೀರು ಯಥೇಚ್ಚವಾಗಿ ಕುಡಿಯಿರಿ. ಇಲ್ಲದಿದ್ದರೆ ಚೆನ್ನಾಗಿ ಕಾಯಿಸಿ ಆರಿಸಿರುವ ನೀರನ್ನೂ ಬೇಕಾದರೂ ಕುಡಿಯಬಹುದು. ಹೊಟ್ಟು ಸಮೇತ ಇರುವ ಧಾನ್ಯಗಳನ್ನು, ಅಂದರೆ ಪಾಲೀಶ್ ಮಾಡದಿರುವ ಕೆಂಪಕ್ಕಿ, ಹೊಟ್ಟು ತೆಗೆಯದೆ ಇರುವ ಗೋಧಿ, ಹೆಸರು ಕಾಳು, ಕಡ್ಲೆ ಕಾಳು ಇತ್ಯಾದಿ, ಎಲ್ಲಾ ತರಹದ ಮೊಳಕೆ ಬರಿಸಿದ ಕಾಳುಗಳ ಸೇವನೆಯನ್ನು ಮಾಡಿರಿ. ಪಾಲೀಶ್ ಮಾಡದೇ ಇರುವ ಕೆಂಪಕ್ಕಿ ಯನ್ನು ಊಟ ಮಾಡಿದರೆ ಈ ಕಡು ಬಿಸಿಲ ಬೇಗೆಯನ್ನು ಖಂಡಿತವಾಗಿ ಎದುರಿಸಬಹುದು. ಸುಸ್ತಾಗುವುದಿಲ್ಲ ಮತ್ತು ಸಂಕಟವಾಗುವುದಿಲ್ಲ.
ಸಂಪದಕ್ಕೆ ನನ್ನ ರಂಗ ಪ್ರವೇಶ ಇಂದೇ.. ಅದಕ್ಕೆ ಈ ಸ್ವ-ಪರಿಚಯ...
ನನ್ನ ಹೆಸರು: ಅಜೇಯ ಕುಮಾರ ... ಚಿಕ್ಕಮಗಳೂರು ಜಿಲ್ಲೆ.. ಬಾಲ್ಯ ಕಳೆದಿದ್ದೆಲ್ಲ ಬಾಳೆಹೊನ್ನೂರಿನ ಹತ್ತಿರದ ಜೇನುಗದ್ದೆಯ ಕಾಫಿ ತೋಟದ ಕಾಡಿನ ಮಡ್ಯದ ಒಂದು ಹಳ್ಳಿಯಲ್ಲಿ...ನಮ್ಮ ಹಳ್ಳಿಯಿಂದ ಬಸ್ ಗಾಗಿ ಸಹ ೭-೮ ಮೈಲಿ ಕಾಡಲ್ಲಿ ನಡೆದು ಬರಬೇಕು.. ಹಾಗಂತ ಕಾಡು ಮನುಷ್ಯ ಎಂದುಕೊಳ್ಬೇಡಿ...
ಮೊದಲ ಬ್ಲೊಗ್ ಎಂದೂ ಸಪ್ಪೆಯಾಗಿರಬೇಕು :-)
ಬ್ಲಾಗ್ ಮಾಡುವುದಕೆ ಸಾಕಷ್ಟು ಮುಂಚೆಯೆ ಶುರು ಮಾಡಿದ್ದರೂ ಕನ್ನಡದಲ್ಲಿ ಇತ್ತೀಚೆಗೆ ಮಾತ್ರ....
ಗ್ರೆಗೊರಿ ಪೆಕ್ : ಒಂದು ಸ್ಮರಣೆ. 'ಗನ್ಸ್ ಆಫ್ ನವರೊನ್', 'ಮೆಕೆನ್ನಾಸ್ ಗೋಲ್ಡ್,' ನಂತಹ ಪ್ರಸಿದ್ದ ಚಿತ್ರಗಳಲ್ಲಿ ಭಿನಯಿಸಿದ 'ದೀಮಂತ' ನಟ,ಬದುಕಿದ್ದಿದ್ದರೆ, ಈ ದಿನ ಅವನಿಗೆ 90 ಅರ್ಷ ತುಂಬುತ್ತಿತ್ತು ! 'ಪೆಕ್' ಹುಟ್ಟಿದ್ದು ಅಮೆರಿಕದ ಕ್ಯಾಲಿಫೋರ್ನಿಯ,ದಲ್ಲಿ. ಮುಂದೆ ಅವನು ಥಿಯೇಟರ್ ಗಳಲ್ಲಿ ದುಡಿದು, ನಂತರ ಹಾಲಿವುಡ್ ಸಿನಿಮಾ ರಂಗವನ್ನು ಪ್ರವೇಶಿಸುತ್ತಾನೆ. 5 ಬಾರಿ 'ಆಸ್ಕರ್ ಪ್ರಶಸ್ತಿ'ಗೆ ನೇಮಕಾತಿಯಾಗಿದ್ದು, 1962 ರಲ್ಲಿ ರಿಲೀಸ್ ಆದ 'ಆಟಿಕಸ್ ಫಿಂಚ್' ಎಂಬ ಚಿತ್ರದಲ್ಲಿ ಶ್ರೇಷ್ಟ ಅಭಿನಯ ಮಾಡಿದ್ದಕ್ಕೆ ಪುರಸ್ಕ್ರುತನಾದನು.