ಇವರಲ್ಯಾರು ನನ್ನವರು?
ಬಂದು ಹೋದವರು ನನ್ನ ಹಾದಿಯಲಿ ಬಹಳವಲ್ಲ
ಆದರೂ ನನ್ನಿಂದ ಅವರ ಲೆಕ್ಕ ಇಡಲಾಗಲಿಲ್ಲ
ನಿನ್ನೆಯ ಆಗುಹೋಗುಗಳು ಇಂದು ನೆನಪಿಲ್ಲ
- Read more about ಇವರಲ್ಯಾರು ನನ್ನವರು?
- 3 comments
- Log in or register to post comments
ಬಂದು ಹೋದವರು ನನ್ನ ಹಾದಿಯಲಿ ಬಹಳವಲ್ಲ
ಆದರೂ ನನ್ನಿಂದ ಅವರ ಲೆಕ್ಕ ಇಡಲಾಗಲಿಲ್ಲ
ನಿನ್ನೆಯ ಆಗುಹೋಗುಗಳು ಇಂದು ನೆನಪಿಲ್ಲ
ಒಬ್ಬ ರಾಜ ತನ್ನ ತಮ್ಮನ ಹೆಂಡತಿಯಲ್ಲಿ ಮೋಹಗೊಂಡು ಅವಳು ತನ್ನ ವಶವಾಗದೆ , ಆ ಸಿಟ್ಟಿನಲ್ಲಿ ತಮ್ಮನನ್ನು ಕೊಲ್ಲಿಸುತ್ತಾನೆ . ಆ ತಮ್ಮನ ಹೆಂಡತಿ ತನ್ನನ್ನು ಕಾಪಾಡಿಕೊಳ್ಳಲು ಮಗ ಯಶೋಭದ್ರನೊಂದಿಗೆ ಓಡಿ ಹೋಗಿ ಒಬ್ಬ ಸನ್ಯಾಸಿನಿಯ ಮನೆಯಲ್ಲಿ ಆಶ್ರಯ ಪಡೆಯುತ್ತಾಳೆ . ಅಲ್ಲಿ ಧರ್ಮಬೋಧೆಯನ್ನು ಕೇಳುತ್ತ ವೈರಾಗ್ಯವನ್ನು ಹೊಂದುತ್ತಾಳೆ . ಮಗನಿಗೂ ಉಪದೇಶ ಮಂತ್ರದೀಕ್ಷೆ ಮುಂತಾದವನ್ನು ಕೊಡಿಸಿದಳು .
೨೨. ಧರ್ಮದಲ್ಲಿ ಶೃದ್ಧೆ , ಮಾತಿನಲ್ಲಿ ಮಾಧುರ್ಯ , ದಾನದಲ್ಲಿ ಉತ್ಸಾಹ , ಗೆಳೆಯರಲ್ಲಿ ಮೋಸ ಮಾಡದಿರುವದು , ಗುರು ಹಿರಿಯರಲ್ಲಿ ವಿನಯ , ಗಂಭೀರ ಮನಸ್ಥಿತಿ , ಶುದ್ಧ ನಡವಳಿಕೆ , ಸದ್ಗುಣಗಳಲ್ಲಿ ಆಸಕ್ತಿ , ಶಾಸ್ತ್ರಗಳಲ್ಲಿ ಜ್ಞಾನ , ಸುಂದರ ರೂಪ , ದೇವರಲ್ಲಿ ಭಕ್ತಿ ಈ ಎಲ್ಲ ಗುಣಗಳು ಸಜ್ಜನರಲ್ಲಿಯೇ ಕಾಣಸಿಗುವವು.
ಉಪಮುಖ್ಯಮಂತ್ರಿ ಯಡಿಯೂರಪ್ಪನವರು ಅಂಬೇಡ್ಕರರ ಭಾವಚಿತ್ರವನ್ನು ತೆಗೆಸಿದ್ದಾರೆಂದು ಅವರ ವಿರುದ್ಧ ಕೂಗು ಕೇಳಿಬರುತ್ತಿದೆ.ಅದಕ್ಕೆ ಒಂದು ಉನ್ನತಸ್ಥಾನದಲ್ಲಿರುವ ಅವರ ಪ್ರತಿಕ್ರಿಯೆ ನಗುಬರಿಸುತ್ತದೆ.
ಹಲವಾರು ಬಾರಿ ನಮ್ಮ ಬಳಿ ಇರುವ ಎಷ್ಟೋ ಪುಸ್ತಕಗಳ ಮೌಲ್ಯ ನಮಗೇ ತಿಳಿದಿರುವುದಿಲ್ಲ. ಕೆಲವೊಮ್ಮೆ ನಮ್ಮ ಬಳಿ ಇಲ್ಲದಿದ್ದಾಗ ಅವುಗಳ ಮೌಲ್ಯ ಗೊತ್ತಾದರೆ ಕೆಲವೊಮ್ಮೆ ವರ್ಷಾನುಗಟ್ಟಲೆ ನಮ್ಮ ಬಳಿ ಬಿದ್ದಿದ್ದವುಗಳನ್ನ ಒಮ್ಮೆ ತಿರುಗಿಸಿ ನೋಡಿದಾಗ "ಓ! ಎಷ್ಟೊಂದು helpful, ಈ ಪುಸ್ತಕ... " ಅಂತ ಅನ್ನಿಸುತ್ತದೆ. ಅಂಥವೇ ಅಮೂಲ್ಯ ಪುಸ್ತಕಗಳು ಕೆಲವನ್ನು ನಿಮಗೆ ಪರಿಚಯ ಮಾಡಿಕೊಡೋಣವೆಂದು ಈ ಪುಟ್ಟ scribble:
೧) ಕನ್ನಡ ಸಾಹಿತ್ಯ ಪರಿಷತ್ತಿನ - ಕನ್ನಡ ರತ್ನಕೋಶ
ಇಡೀ ವಿಶ್ವದಲ್ಲಿ ಬರಿಯ ೧೫ರೂಪಾಯಿಗಳಿಗೆ ಸಿಗಬಲ್ಲ ಬಹುಶಃ ಬೇರೊಂದು ಇಷ್ಟೊಂದು ಅಮೂಲ್ಯವಾದ ಪುಸ್ತಕವಿಲ್ಲ. ನಾವು ಬಳಸುವ ಕನ್ನಡದ ಪ್ರತಿಯೊಂದು ಪದವೂ ಇದರಲ್ಲಿದೆ. ನಮ್ಮ ಮನೆಯಲ್ಲಿ ಈ ಪುಟ್ಟ ನಿಘಂಟು ಬಹಳ ವರ್ಷಗಳಿಂದಲೇ ಇತ್ತು. ಅಮ್ಮ ಟೈಪ್ ರೈಟಿಂಗ್ ಕಲಿಯುವಾಗ ಕಿಟ್ಟೆಲ್ ನಿಘಂಟಿನೊಂದಿಗೆ ತಂದಿಟ್ಟುಕೊಂಡಿದ್ದರಂತೆ. ಮನೆಯಲ್ಲದು ಇದ್ದಾಗ ಒಂದು ಬಾರಿಯೂ ಉಪಯೋಗಿಸಿದ್ದು ನೆನಪಿಲ್ಲ. ಶಿವಮೊಗ್ಗೆಯಿಂದ ಸಾಮಾನು ಬೆಂಗಳೂರಿಗೆ ಸಾಗಿಸುವ ಭರದಲ್ಲಿ ಕಳೆದುಹೋದದ್ದವುಗಳಲ್ಲಿ ಈ ಪುಸ್ತಕವೂ ಒಂದು... ಮೊನ್ನೆ ಮೊನ್ನೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೊಂಡುಕೊಂಡೆ. ಈಗದರ ಮೌಲ್ಯ ತಿಳಿಯುತ್ತಿದೆ :)
ಹಳೆಯ ಕಡತಗಳಿಂದ -- ಚೆನ್ನೈನಲ್ಲಿದ್ದಾಗಿನ ನನ್ನ ಒಂದು ಅನುಭವ
Adyar? ಪ್ರಶ್ನೆಯಲ್ಲಿ ಕರ್ತೃವಿಲ್ಲ-ಕ್ರಿಯಾಪದವಿಲ್ಲ
ಶ್ರೀ ಕೃಷ್ಣನ ಬಾಲ್ಯಗೆಳೆಯ ಸುಧಾಮನ ಕಥೆ ನಿಮಗೆ ಗೊತ್ತು. ಅದನ್ನು ಕಥೆಗಾರ ಮಾಸ್ತಿಯವರು ಹೇಗೆ ನೋಡುತ್ತಾರೆ ಗೊತ್ತೆ ?
ಒಂದೂರಿನಲ್ಲಿ ಒಬ್ಬ ನಾಯಿಂದ ಇದ್ದ, ಆ ಊರಿಗೆಲ್ಲ ಒಬ್ಬನೆ ನಾಯಿಂದ. ಯಾರಿಗೆ ತಲೆ ಗಡ್ಡಗಳಾಗಬೇಕಾದರೂ ಇವನ ಅಂಗಡಿಗೆ ಬರಬೇಕು, ಇಲ್ಲ ಅವರಾಗಿಯೆ ಮಾಡಿಕೊಳ್ಳಬೇಕು. ನಮ್ಮ ಈ ನಾಯಿಂದ ಒಂದು ವ್ರತ ತೊಟ್ಟಿದ್ದ: ತಾನು ಕ್ಷೌರ ಮಾಡಬೇಕಾದರೆ ಅದು ತಾವೇ ಮಾಡಿಕೊಳ್ಳದವರಿಗೆ ಮಾತ್ರ; ತಾವೇ ಕ್ಷೌರ ಮಾಡಿಕೊಂಡವರಿಗೆ ಮಾಡಲಾರ.
೧೯.
ಸಂಕಟ ಸಮಯದಲ್ಲಿ ಧೈರ್ಯ , ಏಳಿಗೆಯ ಸಮಯದಲ್ಲಿ ಕ್ಷಮಾಗುಣ , ಸಭೆಯಲ್ಲಿ ಪಾಂಡಿತ್ಯ , ರಣರಂಗದಲ್ಲಿ ಪರಾಕ್ರಮ , ಕೀರ್ತಿಯಲ್ಲಿ ಅಭಿರುಚಿ , ಶಾಸ್ತ್ರಗಳಲ್ಲಿ ಅಭಿಲಾಷೆ , ಈ ಗುಣಗಳು ಮಹಾತ್ಮರಿಗೆ ಸಹಜವಾಗಿ ಸಿದ್ಧಿಯಾಗಿರುವವು.
ವಿಪದಿ ಧೈರ್ಯಂ , ಅಥ ಅಭ್ಯುದಯೆ ಕ್ಷಮಾ
ಸದಸಿ ವಾಕ್ಪಟುತಾ ಯುಧಿ ವಿಕ್ರಮ: |
ಯಶಸಿ ಚಾಭಿರುಚಿ: ವ್ಯಸನಂ ಶ್ರುತೌ ಪ್ರಕೃತಿ-
ಸಿದ್ಧಮಿದಂ ಹಿ ಮಹಾತ್ಮನಾಂ ||
೨೦.
ತನ್ನ ಒಳ್ಳೆಯ ನಡತೆಯಿಂದ ತಂದೆಯನ್ನು ಸಂತೋಷಗೊಳಿಸುವ ಮಗನು , ಗಂಡನ ಹಿತವನ್ನೇ ಬಯಸುವ ಹೆಂಡತಿ , ಸುಖದಲ್ಲಿಯೂ , ಆಪತ್ತಿನಲ್ಲಿಯೂ ಸಮನಾಗಿ ಇರುವ ಗೆಳೆಯ ಇವರು ಮೂವರು ಜಗತ್ತಿನಲ್ಲಿ ಪುಣ್ಯವಂತರಿಗೆ ಮಾತ್ರ ದೊರಕುತ್ತಾರೆ.
ರಾಣಿ ಅಮೃತಮತಿ ಸುಂದರಿ , ಏನೂ ಕೊರತೆಯಿಲ್ಲ ಅವಳಿಗೆ . ಅವಳನ್ನು ತುಂಬ ಪ್ರೀತಿಸುವ ಸದ್ಗುಣಿ , ಸುಂದರ ರಾಜ . ಹೀಗಿರುವಾಗ ಅವಳಿಗೆ ಒಬ್ಬ ಕುರೂಪಿ ಮಾವುತ - ಹೆಸರಿಗೆ ತಕ್ಕಂತೆ ಅಷ್ಟಾವಕ್ರ , ಅಷ್ಟೇ ಅಲ್ಲ ನೀಚ , ಕ್ರೂರಿ ಕೂಡ - ನ ಮೇಲೆ ಮೋಹವುಂಟಾಗುತ್ತದೆ. ರಾಜನ ಕಣ್ಣು ತಪ್ಪಿಸಿ ಅವನ ಹತ್ತಿರ ಹೋಗುತ್ತಿರುತ್ತಾಳೆ.