ಸ್ವಗತ : ತಿರುಗ ಹೋಗೋಣು ಬಾರೋ ಶ್ರೀಕಾ
(ಶ್ರೀ ಪುರಂದರದಾಸರ ಕ್ಷಮೆ ಕೇಳಿ-ಆಡಲು ಪೋಗುವ ಬಾರೋ ರಂಗ ಕೂಡಿ ಯಮುನ ತೀರದಲ್ಲಿ ಎಂಬಂತೆ )
- Read more about ಸ್ವಗತ : ತಿರುಗ ಹೋಗೋಣು ಬಾರೋ ಶ್ರೀಕಾ
- 4 comments
- Log in or register to post comments
(ಶ್ರೀ ಪುರಂದರದಾಸರ ಕ್ಷಮೆ ಕೇಳಿ-ಆಡಲು ಪೋಗುವ ಬಾರೋ ರಂಗ ಕೂಡಿ ಯಮುನ ತೀರದಲ್ಲಿ ಎಂಬಂತೆ )
ಹೊಸ ವರ್ಷದ ಪಾರ್ಟಿಯಲ್ಲಿ ಮೂವರು ಮುದುಕರು ಕೂತು ಮಾತಾಡುತ್ತಿದ್ದರು. “ಇವತ್ತು ಪಾರ್ಟಿಗೆ ಬಂದಿರುವವರಲ್ಲಿ ಎಷ್ಟು ಜನ ಮುಂದಿನ ವರ್ಷದ ಪಾರ್ಟಿಗೆ ಯಾರಿರುತ್ತಾರೋ ಯಾರಿಲ್ಲವೋ, ಯಾರಿಗೆ ಗೊತ್ತು?” ಅವನ ಗೆಳೆಯ ಹೇಳಿದ, “ನೀನು ಮುಂದಿನ ವರ್ಷ ಅಂದದ್ದು ದೂರದ ಮಾತು. ಇವತ್ತು ರಾತ್ರಿ ನಾವು ಮನೆಗೆ ಹೋಗಿ ಶೂ ಬಿಚ್ಚಿ, ಸಾಕ್ಸು ತೆಗೆದಿಟ್ಟ ಮೇಲೆ ನಾಳೆ ಬೆಳಗ್ಗೆ ಅವನ್ನು ಹಾಕಿಕೊಳ್ಳಲು ಇರುತ್ತೇವೋ ಇಲ್ಲವೋ ಯಾರಿಗೆ ಗೊತ್ತು?” ಮೂರನೆಯಾತ ನುಡಿದ: “ಅಯ್ಯಾ ನೀನು ನಾಳೆ ಎಂದು ಬಲು ದೂರದ ಮಾತು ಹೇಳುತ್ತಿರುವೆ. ನಾವು ಬಿಟ್ಟ ಉಸಿರು ಗೊತ್ತು, ಬಿಟ್ಟ ಉಸಿರನ್ನು ಒಳಗೆ ಎಳೆದುಕೊಳ್ಳಲು ಇರುತ್ತೇವೋ ಇಲ್ಲವೋ ಯಾರಿಗೆ ಗೊತ್ತು?”
ಸುಖಿಸಿದವರು ಸುಖಿಸದವರು
ಸುಖಿಸಿದವರು ದು:ಖಿಸುವವರು
ದು:ಖಿಸಿದವರು ದು:ಖಿಸದವರು
ದು:ಖಿಸಿದವರು ಸುಖಿಸಿದವರು
ನನ್ನ ಮುಂದಿದ್ದ ಮೊದಲ ಪ್ರಶ್ನೆಯೆಂದರೆ ಇಸ್ಮಾಯಿಲ್ ಅವರ ಲೇಖನಕ್ಕೆ ಉತ್ತರಿಸ ಬೇಕೆ ಅಥವಾ ಭಿನ್ನವಾದೊಂದು ಲೇಖನವನ್ನು ಮಾಡಬೇಕೆ ಎಂಬುದು. ಇದಕ್ಕೆ ಕಾರಣ ನನ್ನ ವಾದವನ್ನು ಮಂಡಿಸಲು ಪ್ರೇರಣೆಯಾದುದು ಅವರ ` ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಸಂಸ್ಕೃತ ವಾರ್ತೆ`. ಕೊನೆಗೆ ಪ್ರತ್ಯೇಕ ಲೇಖನವನ್ನೇ ಮಾಡಲು ನಿರ್ದರಿಸಿದೆ.
ಕೆಲವು ದಿನಗಳ ಹಿಂದೆ ಸಂಪದದ ಓದುಗರೊಬ್ಬರು ಕುವೆಂಪು ಅವರ ಈ ಕವಿತೆಯ ಕೆಲವು ಪದಗಳ ಬಗ್ಗೆ ಪ್ರಶ್ನೆಯನ್ನು ಕೇಳಿದ್ದರು. ಆಗ ಕವಿತೆ ಕೈಗೆ ಸಿಕ್ಕಿರಲಿಲ್ಲ, ಸಿಕ್ಕ ಮೇಲೆ ನಾನು ಊರಲ್ಲಿರದೆ ಸಮಯವಾಗಿರಲಿಲ್ಲ. ಈಗ ಯಾರು ಆ ಪ್ರಶ್ನೆ ಕೇಳಿದ್ದರೋ ಹುಡುಕಲು ಆಗದು. ಆದರೆ ಈ ಟಿಪ್ಪಣಿ ಕವಿತೆಯಲ್ಲಿ ಆಸಕ್ತರಾದವರಿಗೆ ಸಹಾಯವಾದೀತೆಂದು ಬರೆದಿರುವೆ.
ಇವತ್ತು "Ask Yahoo!"ನ ಒಂದು ಪ್ರಶ್ನೆಯ ಉತ್ತರವನ್ನೋದುತ್ತಿರುವಾಗ ಕಂಡುಬಂದದ್ದು. ಜಗತ್ತಿನಲ್ಲಿರುವ ಜಾತಿಗಳ ವಿಭಜನೆ ಅದರ ಅನುಯಾಯಿಗಳ ಸಂಖ್ಯೆಯನ್ನಾಧರಿಸಿ ಮಾಡಿ [:http://www.adherents.com/Religions_By_Adherents.html|ಅದನ್ನೊಂದು ಪೈ ಗ್ರಾಫ್ ಮೂಲಕ ಹಾಕಿದ್ದಾರೆ ಒಂದು ತಾಣದಲ್ಲಿ].
ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು.
ನನ್ನೂರಂತೆ ಹಳ್ಳಿಗಾಡು
ಹಂದಿ ನಾಯಿ ಮರಿಗಳ ಗೂಡು
ಅನಾಗರಿಕ, ಅಸಭ್ಯರ ನೆಲೆವೀಡು
ಡಾಂಬರಿನ ರಸ್ತೆಯಿಲ್ಲದ ಸುಡುಗಾಡು ... ಅಂತೆ
ಮತ್ತೊಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಅಥವಾ ಕೇವಲ ಸಾಹಿತ್ಯದ ಸಮ್ಮೇಳನ ನಡೆಯುತ್ತಿದೆ. ಇಲ್ಲಿರುವ ಹತ್ತಾರು ಗೋಷ್ಠಿಗಳ, ವಿಶೇಷ ಉಪನ್ಯಾಸಗಳ ವಿಷಯಗಳನ್ನು ನೋಡಿದರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳನ ಸಂಘಟಿಸುತ್ತಿರುವವರು ಸಂಪೂರ್ಣ ಸಂವೇದನಾ ಶೂನ್ಯರಾಗಿದ್ದಾರೆಯೇ ಎಂಬ ಅನುಮಾನ ಬರುತ್ತಿದೆ.