ಚರ್ಚಾ ವಿಷಯದ ಪುಟ ಬದಲಾವಣೆ
ಇನ್ನೊಂದು ಕನ್ನಡ ದಿನಾಚರಣೆ ಬಗ್ಗೆ ಇರುವ ಚರ್ಚಾ ವಿಷಯವನ್ನು ಸಮುದಾಯ ಪುಟದಿಂದ ಸಮಾಜ ಪುಟಕ್ಕೆ ಸೇರಿಸಲು ವಿನಂತಿ.
- Read more about ಚರ್ಚಾ ವಿಷಯದ ಪುಟ ಬದಲಾವಣೆ
- Log in or register to post comments
ಇನ್ನೊಂದು ಕನ್ನಡ ದಿನಾಚರಣೆ ಬಗ್ಗೆ ಇರುವ ಚರ್ಚಾ ವಿಷಯವನ್ನು ಸಮುದಾಯ ಪುಟದಿಂದ ಸಮಾಜ ಪುಟಕ್ಕೆ ಸೇರಿಸಲು ವಿನಂತಿ.
ಇಂದು ಕಾವೇರಿ ನ್ಯಾಯಾಧಿಕಾರಣದ ತೀರ್ಪಿನ ವಿರುದ್ದ ಪ್ರತಿಭಟನೆಯನ್ನು IT ಕನ್ನಡಿಗರ ಸಮೂಹ ಹಮ್ಮಿಕೊಂಡಿತ್ತು. ಯಾರೋ ಹೇಳಿದರು ಬೆಂಗಳೂರಿನಲ್ಲಿ 70 ರಿಂದ 80 ಸಾವಿರ ಕನ್ನಡಿಗರು software company ಗಳಲ್ಲಿ ಕೆಲಸ ಮಾಡ್ತಾ ಇದ್ದಾರೆ ಅಂತ. ಇವತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಸುಮಾರು 500-600 ಜನ ಮಾತ್ರ. ಸಂತೋಷದ ವಿಷಯವೆಂದರೆ ಕಾರ್ಯಕ್ರಮವು ಅಂದುಕೊಂಡಹಾಗೆ ಶಾಂತಿಯುತವಾಗಿ ನೆರವೇರಿತು. ಆದರೆ ಬರಿ ಅಷ್ಟೆ ಜನ ಭಾಗವಹಿಸಿದರು ಅಂತ ಬೇಜಾರು ಆಯಿತು. ನಮ್ಮ ಜನರಿಗೆ ತಮ್ಮ ಮನೆಗಳಿಗೆ ಕಾವೇರಿ ನೀರು ಮಾತ್ರ ಬೇಕು, ಅದಕ್ಕಾಗಿ ಸ್ವಲ್ಪ ಮಟ್ಟಿಗಾದರು ಶ್ರಮಿಸಲಿಕ್ಕೆ ಹಿಂದೇಟು ಹಾಕುತ್ತಾರೆ. ಯಾರು ಯೆಷ್ಟು ದುಡಿದರೇನು ಬಂತು? ತಮ್ಮ ತಾಯ್ನಾಡಿನ ಮೇಲೆ ಸ್ವಲ್ಪವು ಅಭಿಮಾನ ಇಲ್ಲವೆಂಬಮೇಲೆ ಅವರನ್ನು ಮನುಷ್ಯರೆಂದು ಪರಿಗಣಿಸುವುದಕ್ಕು ಅಸಾದ್ಯವೆನಿಸುತ್ತದೆ. Democracy ಯು ಸರಿಯಾಗಿ ನಡೆಯಬೇಕಾದರೆ, ಜನರು ಯೆಚ್ಚ್ಹೆತ್ತುಗೊಳ್ಳಬೇಕು. People must come out of dormancy and start actively participating in the society. ತಮ್ಮ ಇಂದಿನ ಕ್ಷಣಿಕ ಸುಖಕ್ಕಾಗಿ ತಮ್ಮ ಹಾಗು ಎಲ್ಲಾ ಜನರ ಭವಿಷ್ಯವನ್ನು ಕತ್ತಲಿನತ್ತು ನೂಕುತ್ತಿದ್ದಾರೆ. No point in blaming the politicians for every wrong doing happening in our society. Educated class of people like us has a greater responsibility towards the society. It's high time we wake up, take stock of the situation and change things for the better.
ನಾನು ಒಂದು ವರ್ಷದ ಹಿಂದೆ ರಾಜಸ್ಥಾನದ ಚಿತ್ತೋಡ್ ಗಡಕ್ಕೆ ಪ್ರವಾಸದ ನಿಮಿತ್ತ ಭೇಟಿಯಿತ್ತಾಗ ಒಂದು ವಿಚಾರ ನನ್ನನ್ನು ಆಕರ್ಷಿಸಿ ಆಸಕ್ತಿ ಮೂಡಿಸಿತು. ಅದಕ್ಕೂ ಮೊದಲು ಚಿತ್ತೋಡಗಡ ಬಗ್ಗೆ ವಿಕಿಪಿಡಿಯಾದಲ್ಲಿ ನೋಡಿ ...
ರಿಮೋಟ್ ಕಂಟ್ರೋಲ್ನ ಸಹ ಅನ್ವೇಷಕರಲ್ಲಿ ಒಬ್ಬರಾದ ರಾಬರ್ಟ್ ಅಡ್ಲರ್ ಅವರು ಇಂದು ನಿಧನ ಹೊಂದಿದರಂತೆ. ನಮ್ಮೆಲರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿರುವ ಇಂತಹ ಸಾಧನವನ್ನು ಕಂಡು ಹಿಡಿದ ಅಡ್ಲರ್ರಿಗೆ Hats-off. ತನ್ನ ಅನ್ವೇಷಕನಿಕೆ ಸಂತಾಪ ಸೂಚಿಸಲೋ ಎನೋ ಎಂಬಂತೆ ನಿನ್ನೆಯಿಂದ ನಮ್ಮ ಮನೆಯ ರಿಮೋಟ್ ಕಾರ್ಯನಿರ್ವಹಿಸುವುದು ನಿಲ್ಲಿಸಿಬಿಟ್ಟಿದೆ. ಅರ್ಧ ಗಂಘೆಗೊಮ್ಮೆ ಟಿವಿಯಲ್ಲಿ ಬರುವ ಎಲ್ಲ ೧೦೦ ಚಾನೆಲ್ಗಳನ್ನು scan ಮಾಡಿ, ಬರುವ ಎಲ್ಲಾ ಕಾರ್ಯಕ್ರಮಗಳ collage ಅನ್ನೇ ಒಂದು ಮನೋರಂಜನೆಯಾಗಿಸಿ ಕೊಂಡಿದ್ದ ನನಗೆ, ರಿಮೋಟ್ ಇಲ್ಲದ ಕಾರಣ ಕೈ ಮುರಿದಂತಾಗಿದೆ. ಪದೇ ಪದೇ ಟೀವಿಯ ಬಳಿ ಹೋಗಿ channel ಬದಲಾಯಿಸಿಲು ಮನಸಿಲ್ಲದೇ (ಅದಕ್ಕಿಂತಾ ಹೆಚ್ಚಾಗಿ ಸೋಮಾರಿತನದ ಅಡ್ಡಿ) ಇಂದು ಟೀವಿಯಿಂದ ಒಂದು break. ಅದರಿಂದಲೇ ಎನೋ ಸಂಪದದಲ್ಲಿ ಸದಸ್ಯನಾದ ೪೩ ವಾರಗಳ ನಂತರ ಒಂದು ಬ್ಲಾಗನ್ನು ಬರೆಯುತ್ತಿರುವೆ.
ಛೀ ಈ ಮನುµÀå ಏನ¥Àà ಹೇಗೆ¯Áè ವwðಸುvÁÛನೆ ಎಂದು ಬೇರೆಯವರ ಬUÉÎ AiÉÆÃಚಿಸುವಾಗ, ನಾವು ಬೇರೆಯವರೊಡನೆ ಹೇಗೆ¯Áè ಸಹ್ಯವಾಗಿರಬೇಕೆಂದು ಯೋಚಿಸಲೇಬೇಕು. ಇಂಥ ಸಾಧನೆ ಬದುQಗೆ ಅಳವಡಿಸಿಕೊಂಡಾಗಲೇ ಬದುಕು ಸºÀå. ದೇಹ ಮvÀÄÛ ಮನ¸ÀÄì ಎರಡೂ ಆgÉÆÃUÀåವಾಗಿರುvÀÛದೆ. ನಾವು ಧೀಘð ಕಾಲ ಬದುಕುವುದೇ ಗುರಿಯ®è. ಬದುಕಿರುವµÀÄÖ ಸಮಯ ಬೇರೆಯವರಿಗೆ ಉಪಕಾರಿಯ®èದಿzÀÝರೂ ಅಪಕಾರಿಯಾಗದೇ ಬದುಕಿದಾಗ ಆರೋUÀåವಂತ ಸಮಾಜ ನಿªÀiÁðಣವಾಗುvÀÛದೆ.
ಕಾವೇರಿ ವಿಷಯ:- ನಾಲ್ಕು ರಾಜ್ಯಗಳು ವಿಸ್ತ್ರತ ಅಂಕಿ ಅಂಶ ಒದಗಿಸಿ ಉತ್ತಮ ವಾದ ಮಂಡಿಸಿದರೂ ಈ ತೀರ್ಪು ತಮಿಳು ನಾಡಿನಪರ ಏಕೆ? ನ್ಯಾಯಧಿಕರಣಕ್ಕೆ ಸಹಾಯಕ್ಕಿರುವ ಅಧಿಕಾರಿಗಳ ತಪ್ಪೆ. ನ್ಯಾಯಾಧಿಕರಣ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲವೋ? ಅಂತು ಕರ್ನಾಟಕಕ್ಕೆ ಹೆಚ್ಚಿನ ಅನ್ಯಾಯ ಆಗಿದೆ. ಇದಕ್ಕೆ ಪರಿಹಾರ ಕೇಂದ್ರ ಅಂತರ್ ರಾಜ್ಯ ನೀರು ಹಂಚಿಕೆಗೆ ಸಂಬಂಧ ಪಟ್ಟಂತೆ ಕಾನೂನು ರಚಿಸುವದು. ಸೂಕ್ತ ಜಲಮಾಪನ ವ್ಯವಸ್ಥೆ ಕಲ್ಪಿಸುವದು. ಅಲ್ಲಿ ಸಂಬಂಧ ಪಟ್ಟ ರಾಜ್ಯಗಳ ಅಧಿಕಾರಿಗಳನ್ನು ನೇಮಿಸುವದು. ಯಾವುದೇ ರಾಜ್ಯಕ್ಕೆ ತನ್ನ ನೀರಾವರಿ ಜಮೀನನ್ನು ಎಷ್ಟು ಬೇಕಾದರೂ ಅಭಿವೃದ್ಧಿ ಪಡಿಸುವ ಸ್ವಾತಂತ್ರ ಕೊಡುವದು. ಆದರೆ ಇದು ಅದರ ಪಾಲಿನ ನೀರಿಗೆ ಮಾನದಂಡ ವಗದಂತೆ ಕಾನೂನು ರೂಪಿಸುವದು.
ಒಂದು ಹಾಸ್ಯ ಪ್ರಸಂಗ ಗೊತ್ತುಂಟೆ ಸ್ವಾಮೀ ನಿಮಗೆ? ೫೦ ಮಂದಿಯನ್ನು ಹೊತ್ತು ಸಾಗಿಸ ಬಲ್ಲ ಬಸ್ಸೊಂದಿದೆ. ಇಂಧನದೆ ಬೆಲೆ ಲೀಟರಿಗೆ ೧ ರೂ ಏರಿದರೆ, ಈ ಬಸ್ಸಿನಲ್ಲಿ ಚೀಟಿಯ ಬೆಲೆ ತಲೆಗೆ ೧ ರೂಯಂತೆ ಏರುತ್ತದೆ. ಇನ್ನೂ ಕೇಳಿ. ಕಿ.ಮಿ ಗೆ ತಲೆಗೆ ೧ ರೂ ಕೇಳುತ್ತಾರೆ. ಇನ್ನೂ ಕೇಳಿ. ಇಂಧನದ ಬೆಲೆ ಇಳಿದರೆ ಈ ಬಸ್ಸಿನ ಚೀಟಿಯ ಬೆಲೆ ಇಳಿಯುವುದಿಲ್ಲ. ನಿರ್ವಾಹಕನಿಗೆ ಚಿಲ್ಲರೆಯ ತೊಂದರೆಯಾಗುತ್ತದಂತೆ. ಇದು ಯಾವ ಲೋಕದ ಗಣಿತ ಶಾಸ್ತ್ರ ಸ್ವಾಮೀ. ಹೇಗೆ ತರ್ಕ ಮಾಡುವುದು ಇದನ್ನು. ತರ್ಕಶಾಸ್ತ್ರವೇ ಬಿದ್ದು ಹೋಗಿದೆ ಇಲ್ಲಿ. ಏಕೆ ಬಿದ್ದಿದೆ ಅಂದರೆ ಇದು ನಿರ್ಣಯವಾಗುವುದು ಉನ್ನತ ಅಧಿಕಾರಿ, ಮಂತ್ರಿಗಳ ಸಭೆಯಲ್ಲಿ. ಇದು ಹಾಸ್ಯ. ಇದನ್ನು ಇಲ್ಲಿಗೆ ಬಿಡಿ. ಇನ್ನು ವಾಸ್ತವಿಕತೆಗೆ ಬರುವ.
ನನಗೆ ತುಂಬ ದಿನದಿಂದ ಊಆರ್ಎಲ್ ಗೆ ವಿಸ್ತ್ರುತ ರೂಪವಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿತ್ತು.
ಶಿವರಾತ್ರಿ ಅಂದರೆ ನನಗೆ ನೆನಪಾಗುವುದು ದೇವರಿಗಿಂತ ಹೆಚ್ಚು ಆ ಹಬ್ಬದಂದು ರಾತ್ರಿಯಲ್ಲಿ ನಡೆಯುತ್ತಿದ್ದ ಆವಾಂತರಗಳು. ಶಿವರಾತ್ರಿಯ ದಿನ ಜಾಗರಣೆ ಮಾಡಬೇಕೆಂದೋ ಅಥವಾ ಮತ್ತೆ ಯಾವುದೋ ಕಾರಣಕ್ಕೆ ರಸ್ತೆಯ ನಡುವೆ ಕಲ್ಲು, ಡ್ರಮ್ ಏನಾದರು ಇಡುವವರಿದ್ದರು.ಅಂಗಡಿಯ ಫಲಕಗಳು ಎಲ್ಲೆಲ್ಲೋ ಇರುತ್ತಿದ್ದುವು. ಜಾಗರಣೆ ಮಾಡುವಾಗ ದೇವರ ಧ್ಯಾನ ಮಾಡುತ್ತಾ ಕಳೆಯದೆ ಇಂತಹ ಕೆಟ್ಟ ಕೆಲಸದಲ್ಲಿ ಕಳೆಯಬೇಕೆಂದು ಅವರಿಗೆ ಅದ್ಯಾರು ಹೇಳುತ್ತಿದ್ದರೋ! ಇದಕ್ಕಿಂತ ಭಯಾನಕವಾಗಿ ಆಗಿನ ಹಂಚಿನ ಮನೆಗಳಿಗೆ ಕಲ್ಲು ಎಸೆಯುವುದು ಸಾಮಾನ್ಯವಾಗಿತ್ತು. ಮನೆಯವರು ಆಕ್ಶೇಪಿಸಿದರೆ ಇನ್ನೂ ಹೆಚ್ಚು ಕಲ್ಲು ಬೀಳುತ್ತಿದ್ದುವು.ಬೇರೆಯವರ ಬಾಯಿಯಿಂದ ಶಾಪ ಹಾಕಿಸಿಕೊಳ್ಳದೆ ಇರಬಾರದು ಎಂಬ (ಮೂಢ)ನಂಬಿಕೆ ಸಾಮಾನ್ಯವಾಗಿತ್ತು.ತೆಂಗಿನಮರ ಏರಿ ಬೊಂಡ(ಸೀಯಾಳ) ಕುಡಿಯುವ ಧೈರ್ಯಶಾಲಿಗಳಿಗೆ ಬರವಿರಲಿಲ್ಲ. ಪೇಟೆ ಪಟ್ಟಣಗಳಲ್ಲಿ ಶಿವರಾತ್ರಿಗೆ ಮೊದಲೇ ಪೊಲೀಸರು ಇಂತಹ ಕುಕೃತ್ಯಗಳ ವಿರುದ್ಧ ಜನರಿಗೆ ಎಚ್ಚರಿಕೆ ನೀಡುವುದು,ರಾತ್ರಿ ಗಸ್ತು ನಡೆಸುತ್ತೇವೆ ಎಂದು ಪತ್ರಿಕಾ ಹೇಳಿಕೆ ನೀಡುತ್ತಿದ್ದರು. ಆದರೆ ಕೇಡಿಗಳು ತಮ್ಮ ಕೀಟಲೆಗಳನ್ನು ಸಲೀಸಾಗಿ ನಡೆಸುತ್ತಿದ್ದರು.ಪೊಲೀಸರ ಗಸ್ತು ನಡೆಯುತ್ತಿತ್ತೋ ಇಲ್ಲವೋ ನೋಡಲು ನಾವು ಮನೆಯ ಹೊರಗೆ ಬಂದರೆ ತಾನೇ?
ಅದೃವಶಾತ್ ಇತ್ತೀಚಿನ ವರ್ಷಗಳಲ್ಲಿ ಅಂತಹ ಘಟನೆಗಳು ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗಿವೆ. ನಾವು ಮುಂದುವರಿಯುತ್ತಿರುವುದಕ್ಕೆ ಇದೊಂದು ಸಾಕ್ಷಿಯಿರಬಹುದು. ಶಿವರಾತ್ರಿಯ ಜಾಗರಣೆ ಬೇರೆಡೆಯೂ ಹೀಗೇ ಇರುತ್ತಿದ್ದುವೋ ಅಲ್ಲ,ನಮ್ಮ ಕರಾವಳಿ ತೀರದ ಪ್ರದೇಶಗಳಲ್ಲಿ ಮಾತ್ರಾ ಇಂತಹ ಪರಿಸ್ಥಿತಿಯಿತ್ತೋ ಎನ್ನುವ ಕಲ್ಪನೆ ನನಗಿಲ್ಲ.ಈ "ಜಾಗರಣೆ" ಎರಡ್ಮೂರು ದಿನಕ್ಕೆ ವ್ಯಾಪಿಸಿಕೊಳ್ಳುತ್ತಿದ್ದುವು. ಶಿವರಾತ್ರಿ ಕಳೆದ ಮನೆಯ ಹಂಚು ಬದಲಾಯಿಸಬೇಕಾಗಿ ಬರುತ್ತಿತ್ತೇ ಈಗ ನೆನಪಾಗುತ್ತಿಲ್ಲ.
ಇಂತಹ "ಜಾಗರಣೆ"ಯನ್ನು ನಾನಾಗಲಿ ನನ್ನ ಗೆಳೆಯರಾಗಲಿ ಎಂದೂ ನಡೆಸಿರಲಿಲ್ಲ ಎನ್ನುವುದು ನಮ್ಮ ಸಭ್ಯತೆಗೆ ಹಿಡಿದ ಕನ್ನಡಿ ಅಲ್ಲದೆ ಇನ್ನೇನು?ಈಗಲೂ ಇಂತಹ "ಆಚರಣೆ"ಗಳು ಮುಂದುವರೆದಿದ್ದರೆ ಕೋಮು ಗಲಭೆಗಳೇ ಆಗುತ್ತಿದ್ದುವೋ ಏನೋ!