ಕವನಗಳು

ವಿಧ: ಕವನ
September 03, 2024
ಶತಕದ ಪರಿಧಿಯ ಮಿತಿಯನು ನೆನೆಯದೆ ಮತಿಯಲಿ ಯೌವನ ಹುರುಪಿನಲಿ ಸತಿಯನು ನಗಿಸುತ ಪತಿಯವ ನಿಂತಿಹ ಚ್ಯುತಿಯನು ತಾರದೆ ಒಲವಿನಲಿ   ಹಿಂದಿನ ಬದುಕಿನ ಸುಂದರ ಕ್ಷಣಗಳ ಚಂದವ ಬಣ್ಣಿಸಿ ಪತಿರಾಯ ಬಂಧದ ಖುಷಿಯನು ಹೊಂದುತ ಮಡದಿಯು ಕುಂದದೆ ಬೀರಲು ನಸುನಗೆಯ   ಗಂಡನ ನುಡಿಗಳ ಹೆಂಡತಿ ಆಲಿಸಿ ತಂದಿರೆ ಲಜ್ಜೆಯ ಮನದಲ್ಲಿ ಚಂದದ ಒಲವಿನ ನಂದದ ಬೆಳಕಲಿ ಕಂಡಿತು ಕೆಂಪದು ಮೊಗದಲ್ಲಿ   ಬಳಗವು ಸನಿಹಕೆ ಸುಳಿಯದೆ ಹೋದರು ಕಳೆದಿರೆ ನೋವಿನ ದಿನದಲ್ಲಿ ಗೆಲುವನು ತಂದಿದೆ ಬಳುವಳಿ ನೀಡಿದೆ ಗೆಳೆತನ ಸತಿ ಪತಿ ನಡುವಲ್ಲಿ…
ವಿಧ: ಕವನ
September 01, 2024
ಶರಣು ಹರಿಹರ ತನಯಾ ಮಣಿಕಂಠ ಜ್ಯೋತಿ ಸ್ವರೂಪ ಕಲಿಯುಗ ವರದಾ ದಯೆ ತೋರೋ   ಅಯ್ಯಪ್ಪ ಕಾಯೊ ತಂದೆ ನಾ ನಿನ್ನ ನೋಡಲೆಂದೆ ಇರುಮುಡಿಯ ಹೊತ್ತು ಬಂದೆ ಬೇಡಿ ದರ್ಶನ ||ಅಯ್ಯಪ್ಪ||   ಉದಯದಲ್ಲಿ ಎದ್ದು ಬೇಗ ಶುದ್ಧನಾಗುವೆ ಅನ್ನದಾನ ಪ್ರಭುವೆ ನಿನ್ನ ನಿತ್ಯ ನೆನೆಯುವೆ ನಿನ್ನ ಒಲುಮೆ ದೊರೆತರಾಗ ಬಾಳು ಸಾರ್ಥಕ ಬಾಳ ನಡತೆ ಶುದ್ಧವಿರಿಸೆ ನೀನು ಪ್ರೇರಕ   ಕಪ್ಪು ಉಡುಗೆ ತೊಟ್ಟು ಕಠಿಣ ವ್ರತವ ಮಾಡಿದೇ ನಿನ್ನ ಚರಣ ಸೇವೆ ಗೈವ ಆಸೆಯೊಂದಿಗೆ ಹಗಲು ಇರುಳು ನಿನ್ನ ನಾಮ ಮನದೆ ಪಠಿಸಿದೆ ಭಕ್ತ ಬಂಧು ದೇವ ನೀನು…
ವಿಧ: ಕವನ
August 31, 2024
ಮೌನಗಳ ನಡುವೆ ಮುತ್ತನ್ನು ಬಿತ್ತುವರ ಕತ್ತು ಕೊಯ್ಯಲು ಬೇಡಿ ಓ ಮನುಜರೆ ಹತ್ತು ಜನ ಬದುಕುವರೆ ಸುತ್ತ ಊರಿನಲಿ ಸುಖದಿ ಮತ್ತೆ ಬೈಯುವಿರಿ ಏಕೆ ಓ ಮನುಜರೆ   ಆ ಪಕ್ಷ ಈ ಪಕ್ಷ ಯಾವುದಾದರೆ ಏನು ಕೊನೆಯ ಪಕ್ಷ ನಾಡು ಬೆಳಗುತಿರಲೀ ಸಾಕು ಸ್ವಾರ್ಥಕ್ಕೆ ದುಡಿಯುವವರ ದೂರವಿರಿಸಿರಿ ಇಂದು ಸಾಮಾನ್ಯರೊಳು ಬೆರೆವವರ ಕೈ ಹಿಡಿಯಿರಿಂದು   ಬಡಜನರ ತೆರಿಗೆಗಳು ಬಡಜನಕೆ ಸೇರಲಿ ಉಪವಾಸ ಗಿಪವಾಸ ದೂರವಯ್ಯಾ ಜತನದಿಂ ಕಾಪಿಟ್ಟ ಮಾನಗಳು ಉಳಿಯಲಿ ಸನ್ಮಾನ ದಾರಿಯೊಳು ಸಾಗಲಯ್ಯಾ   ಯಾರೊ ಹೇಳಿದರೆಂದು ತಲೆ…
ವಿಧ: ಕವನ
August 30, 2024
ಗಝಲ್ ೧ ತಾನೇ ಎನ್ನದಿರು ಹಿಂದೆ ಇನ್ನೂ ದೊಡ್ಡವರಿದ್ದಾರೆ ಗಟ್ಟಿಯಾಗಿ ಇರದಿದ್ದರೆ ಮೆತ್ತಗೆ ತಟ್ಟುವರಿದ್ದಾರೆ   ಮುಖ ಸಡಿಲಿಸಿ ಮಾತನಾಡುವುದ ಕಲಿಯಲಿಲ್ಲವೆ ಬೆಣ್ಣೆ ಸವರಿದಂತೆ ಇರುವರ ಜೊತೆ ಬಾಗುವರಿದ್ದಾರೆ   ಗುಂಡು ಕಲ್ಲಿನಂತೆ ಯಾವತ್ತೂ ಇರುವೆನೆಂದೆನಬೇಡ ಕಟ್ಟಿರುವ ಮನವನ್ನು ಹೀಗೆಯೇ ಬೀಳಿಸುವರಿದ್ದಾರೆ   ವಿವಿಧತೆಯಲ್ಲಿ ಏಕತೆಯೆನ್ನುವವರು  ಕುರುಡಾಗಿಹರು ಬರವಣಿಗೆಯಲ್ಲಿನ ಅಂತರಂಗವನ್ನು ಅಳಿಸುವರಿದ್ದಾರೆ   ಜಾಣರಿಂದು ತಮ್ಮದೆನುವ ಮೋಹದಲ್ಲಿದ್ದಾರೆ ಈಶಾ ಅಶುದ್ಧದ ನಡುವೆಯೂ ನಾವು…
ವಿಧ: ಕವನ
August 29, 2024
ಹಾಲಿನ ಕಡಲಿನ ಮಥನದ ವೇಳೆ ಭಾಗ್ಯದ ದೇವತೆ ಉದಿಸಿದೆಯಂತೆ ಜಗದೋದ್ದಾರಕ ಶ್ರೀ ಹರಿ ಹೃದಯದೆ ಒಲವಲಿ ನೀನು ನೆಲೆಸಿದೆಯಂತೆ   ತಾವರೆ ಹೂವನು ಕರದಲಿ ಹಿಡಿದು ಪೂಜಿಸೆ ನಿಂತರು ಭಕ್ತರು ಬಂದು ಮಾತೆಗೆ ಬಯಸುತ ಸುಪ್ರಭಾತಾ ಒಲವಲಿ ನೋಡೆಯ ಭಕ್ತಜನರತ್ತ   ಕೋಗಿಲೆ ಹಾಡಿದೆ ಸ್ವಾಗತ ಕೋರಿ ಹೂಗಳು ಅರಳಿವೆ ಗಂಧವ ಬೀರಿ ಭಕ್ತಿಯ ವಂದನೆ ಸಲಿಸುವೆ ಮಾತೆ ಬಾಳನು ಬೆಳಗೂ ಭಾಗ್ಯವಿಧಾತೆ   ಹಸಿವಿನ ಕೂಗದು ತೊರೆಯಲಿ ಧರೆಯ ಎಲ್ಲರ ಬದುಕಿಗೆ ನೀಡುತ ಭಾಗ್ಯ ಹೊನ್ನಿನ ಗೆಜ್ಜೆಯ ಸದ್ದನು ಮಾಡುತ ದರ್ಶನ ನೀಡೆಯ ಓ ಸಿರಿ…
ವಿಧ: ಕವನ
August 28, 2024
ಮೇಘವರ್ಣನೆ ಏಕೆ ಈತರ ಕಾಡುತಿರುವೆಯೊ ಕಂದನೇ ನಾರಿಮಣಿಗಳು ದೂರು ತಂದಿರೆ ಹೇಗೆ ಇರುವುದು ಸುಮ್ಮನೆ   ಗಡಿಗೆ ಒಡೆಯುವೆ ಬೆಣ್ಣೆ ಕದಿಯುವೆ ಎಂಬ ಮಾತನು ನುಡಿವರು ಜಳಕಕಿಳಿದಿರೆ ತರುಣಿ ನದಿಯಲಿ ಸೀರೆ ಕದಿಯುವೆ ಎನುವರು   ವಿಷದ ಉರಗವ ಹಿಡಿದು ಬಾಗಿಸಿ ಶಿರದಿ ಮಾಡಿದೆ ನರ್ತನ ಒಂದು ಬೆರಳಲಿ ಗಿರಿಯನೆತ್ತಿದೆ ಎಂದು ಕೊಟ್ಟರು ದೂರನಾ   ಎತ್ತಿಕೊಳ್ಳುತ ಮೊಲೆಯನುಣಿಸಿರೆ ಸತ್ತು ಬಿದ್ದಳು ಪೂತನಿ ಮರದ ಕಾಂಡಕೆ ಕಟ್ಟಿ ಬಿಗಿದರೆ ಸರಿಸಿ ಬಿಟ್ಟೆಯ ಮರವನೇ   ಮಾತೆ ಮಾತಿಗೆ ನುಡಿಯನಾಡದೆ ಮನದೆ ನಗುವನು…
ವಿಧ: ಕವನ
August 27, 2024
ಒಲಿದು ಬಾ ಕೃಷ್ಣಯ್ಯಾ ಎನ್ನ ಕಷ್ಟಕ್ಕಯ್ಯಾ ಒಡಲ ಬೇಗೆಯ ತಣಿಸು ಬಾರೋ ಎನ್ನಯ್ಯಾ ಮನದೊಳಗೆ ಹಸಿವಿಲ್ಲ ನಿನ್ನ ಬಜಿಪಲು ಇಲ್ಲ ಸೋತು ಹೋಗಿಹೆನಿಂದು ಬಾರೋ ಎನ್ನಯ್ಯಾ   ಸೇವೆಗೈಯಲು ಬಂದೆ ಮಧ್ಯವರ್ತಿಗಳೆಲ್ಲ ಒಲುಮೆಯೊಳು ಮನೆಗೆ ಬಾರೋ ಎನ್ನಯ್ಯಾ ಅಲೆಯುತಿಹೆ ಗುಡ್ಡದಲಿ ಕಲ್ಲು ಮುಳ್ಳುಗಳೆಡೆಯೆ ತನುವದುವು ಸೋಲಲು ಬಾರೋ ಎನ್ನಯ್ಯಾ   ಲಾಲಿಸೈ ಪಾಲಿಸೈ ಮುದ್ದು ಮುರಳೀ ಲೋಲ ಉಡುಪಿಯೊಳು ಸೇರಿದೆ ಬಾರೋ ಎನ್ನಯ್ಯಾ ದೀನನಾಗಿಹೆನಿಂದು ಕಾಪಾಡು ಜಗಬಂಧು ನೀಲಮೇಘ ಶ್ಯಾಮ ಬಾರೋ ಎನ್ನಯ್ಯಾ   -ಹಾ ಮ ಸತೀಶ…
ವಿಧ: ಕವನ
August 27, 2024
ಹಗಲಿರುಳೆನ್ನದೆ ಸುರಿದಿಹ ಮಳೆಯದು ಈದಿನ ಏತಕೊ ಸುರಿದಿಲ್ಲ ಆಡುವ ವಯಸ್ಸಿನ ಚಿಣ್ಣರ ಮನದಲಿ ಆಡುವ ಆಸೆಗೆ ಕೊನೆಯಿಲ್ಲ   ವಾರದ ನಂತರ ಒಟ್ಟಿಗೆ ಸೇರಿತು ಗೆಳೆಯರ ಗುಂಪದು ಸಂತಸದಿ ಊರಿನ ನಡುವಿನ ಬಯಲಿಗೆ ಬಂದರು ತೊಡಗಿದರಾಟಕೆ ಖುಷಿಯಲ್ಲಿ   ಬಾನಿನ ಸೂರ್ಯನು ಪಡುವಣ ಕಡಲಿಗೆ ಇಳಿಯಲು ತೊಡಗಿದ ಸಂಜೆಯಲಿ ಕತ್ತಲ ಭಯದಲಿ ಆಟವ ನಿಲ್ಲಿಸಿ ತೆರಳುವ ವೇದನೆ ಮಕ್ಕಳಲಿ   ಆಟವ ಅರ್ಧಕೆ ನಿಲ್ಲಿಸಬೇಕಿದೆ ಮುಂದಿಹ ತಂಡವು ನೋವಿನಲಿ ಅರ್ಧವ ನಾಳೆಗೆ ಆಡುವ ಎಂದರು ಗೆಲ್ಲುವ ಹಂಬಲ ತಂಡದಲಿ||   -ಪೆರ್ಮುಖ…
ವಿಧ: ಕವನ
August 26, 2024
ಇವನು ಭೃಷ್ಟ ಎನುವನಾತ ಅವನು ಭೃಷ್ಟ ಎನುವನೀತ ಯಾರ ಮಾತು ಸತ್ಯವೆಂದು ಅರಿಯದಾಗಿದೆ   ಇಬ್ಬರಲ್ಲು ಹುಳುಕು ಇದ್ದು ಹೊಡೆದುದೆಲ್ಲ ಜನರ ದುಡ್ಡು ಯಾರು ಎಷ್ಟು ಹೊಡೆದರೆಂದು ಅರಿಯಬೇಕಿದೆ   ಮುಷ್ಟಿಯೊಳಗೆ ಗುಟ್ಟನಿಟ್ಟು ವೈರಿಕಡೆಗೆ ನೋಟ ನೆಟ್ಟು ತನ್ನ ಹೊಲಸು ಕಾರ್ಯಕೆಲ್ಲ ಮಾಡಿ ಸೇತುವೆ   ಇವನಲುಂಟು ಅವನ ಗುಟ್ಟು ಅವನಲುಂಟು ಇವನ ಜುಟ್ಟು ಇಬ್ಬರೂನು ಬಿಟ್ಟುಕೊಡರು ಬರಿದೆ ನಾಟಕ   ದೊರೆವ ಹಣದ ಗಂಟಿಗಾಗಿ ಇವರ ಹಿಂದೆ ಜನರು ಹೋಗಿ ಅರ್ಥವಿರದ ಮಾತಿಗೆಲ್ಲ ಕರದ ತಾಡನ   ಎಷ್ಟು ಮಾಡಿಕೊಂಡರೇನು ಕಡೆಗೆ…
ವಿಧ: ಕವನ
August 25, 2024
ಕಪ್ಪು ಬಿಳುಪಿನ ಕಾಲ ಸಂದಿದೆ ಈಗ ಬಣ್ಣದ ಜಗವಿದು ನೀನು ಏತಕೆ ರೂಪ ಬದಲದೆ ಹಿಂದಿನಂತೆಯೆ ಉಳಿದುದು   ಹೊಸತು ಕಂಡರೆ ಹಳತು ಮೂಲೆಗೆ ಸರಿಸಿ ಬಿಡುವರು ಈ ಜನ ಸೊಗಸಿನೆಲ್ಲವು ತನ್ನದೆನ್ನುತ ಬಳಸಿ ಎಸೆಯುವ ದುರ್ಗುಣ   ನಿನ್ನ ಸ್ವಂತಿಕೆ ಉಳಿಸಿಕೊಂಡಿಹೆ ಅದುವೆ ಶ್ರೇಷ್ಠವು ಎನಿಸಿತೆ ಮನುಜನಂತೆಯೆ ಬಣ್ಣ ಬದಲಿಪ ಗೀಳು ಬಾರದೆ ಹೋಯಿತೆ?   ಸುತ್ತ ಹಸಿರಿನ ಸಸ್ಯ ತುಂಬಿದೆ ಹೂವನರಸುತ ಬಂದೆಯಾ ದಣಿವನಾರಿಸೆ ಕೊಂಚ ಸಮಯಕೆ ಪಡೆದ ಎಲೆಗಳ ಆಶ್ರಯಾ||   -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ:…