ದೊರೆತ ಅವಕಾಶದ ಸದುಪಯೋಗ ಬಹುಮುಖ್ಯ
1 day 18 hours ago - Ashwin Rao K Pನಮ್ಮ ಜೀವನದಲ್ಲಿ ನಮಗೆ ಬಹಳಷ್ಟು ಅವಕಾಶಗಳು ಬರುತ್ತವೆ. ಆದರೆ ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಬಹುಮುಖ್ಯ. ಅವಕಾಶ ಮತ್ತು ಅದೃಷ್ಟಗಳು ತುಂಬಾ ಸಮಯ ಇರುವುದಿಲ್ಲ. ಸಿಕ್ಕಾಗ ಬಾಚಿಕೊಳ್ಳುವುದೇ ಜಾಣತನ. ಕೈಗೆ ಸಿಕ್ಕಿದ ಬಳಿಕ ಅವುಗಳನ್ನು ಚೆನ್ನಾಗಿ ಬಳಸಿಕೊಳ್ಳುವುದೂ ಒಂದು ಬಗೆಯ ಕಲೆ ಎನ್ನಬಹುದು. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಕುರಿತಾದ ಒಂದು ಪುಟ್ಟ ನೀತಿ ಕಥೆ ಇಲ್ಲಿದೆ. ಇದರಲ್ಲಿ ದೊರೆತ ಅವಕಾಶವನ್ನು ಬಳಸಿಕೊಂಡವರಿಗೆ ಏನು ಸಿಕ್ಕಿತು? ಅವಕಾಶವನ್ನು ಕಳೆದುಕೊಂಡವರ ಗತಿ ಏನಾಯಿತು ಎನ್ನುವುದನ್ನು ಗಮನಿಸಿ ನಾವೂ ಬಾಳಿನಲ್ಲಿ ಉತ್ತಮ ಹೆಜ್ಜೆಯನ್ನು ಇಡೋಣ…
ಒಂದು ಕಾಡಿನಲ್ಲಿ ಹಲವಾರು ಮಂಗಗಳು ವಾಸಿಸುತ್ತಿದ್ದವು. ಆ ಕಾಡಿನ ದಾರಿಯಾಗಿ ಒಂದು ನಗರಕ್ಕೆ ಹೋಗಬಹುದಿತ್ತು. ಆ ನಗರವನ್ನು ಸಂಪರ್ಕಿಸಲು ಆ ಕಾಡಿನ ದಾರಿ ಬಹು ಹತ್ತಿರದ ದಾರಿಯಾಗಿತ್ತು. ಆ ಕಾರಣದಿಂದ ಹಲವಾರು ಮಂದಿ ಜನರು ಈ ದಾರಿಯನ್ನು ಉಪಯೋಗಿಸುತ್ತಿದ್ದರು. ಮಂಗಗಳು ಈ ದಾರಿಯಲ್ಲಿ ಯಾರೇ ಸಂಚರಿಸಿದರೂ ಅವರ ಮೇಲೆರಗಿ, ಅವರ ಬಟ್ಟೆಗಳನ್ನು ಹರಿಯುವುದು, ಅವರ ಬಳಿ ಇದ್ದ ತಿಂಡಿಗಳನ್ನು ಕಸಿಯುವುದು ಮಾಡುತ್ತಿದವು. ಅವುಗಳ ಉಪಟಳ ವಿಪರೀತವಾದ ಕಾರಣ ಬಹಳಷ್ಟು ಜನ ಆ ದಾರಿಯಲ್ಲಿ ಹೋಗುವುದನ್ನು ಕಡಿಮೆ ಮಾಡಿದ್ದರು.
ಒಮ್ಮೆ ಒಬ್ಬ ಗುರು ತನ್ನ ಶಿಷ್ಯಂದಿರ ಜೊತೆ ಅದೇ ದಾರಿಯಲ್ಲಿ ಬಂದರು. ಅವರು ಬಹಳ ದೂರದಿಂದ ನಡೆದುಕೊಂಡು ಬಂದಿದ್ದುದರಿಂದ ಆ ದಾರಿಯ ಮಧ್ಯ ಇದ್ದ ಒಂದು ಮರದ ಕೆಳಗೆ ವಿಶ್ರಾಂತಿಯನ್ನು ಪಡೆದುಕೊಂಡರು. ಅದೇ ಸಮಯ ಆ ಮಂಗಗಳ ಗುಂಪು ಅವರ ಮೇಲೆ ದಾಳಿ ಮಾಡಿತು. ಒಂದೊಂದು ಮಂಗ ಒಬ್ಬೊಬ್ಬರನ್ನು ಆರಿಸಿಕೊಂಡು, ಅವರ ಬಟ್ಟೆಗಳನ್ನು ಹರಿಯುವುದು, ಅವರ ಬಳಿ ಇದ್ದ ಚೀಲದಿಂದ ಸಾಮಾಗ್ರಿಗಳನ್ನು ಹೊರಗೆಳೆಯುವುದು, ತ… ಮುಂದೆ ಓದಿ...