ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿದ್ರೆ ಬಾರದ ದಿನಗಳು

 

ಎದೆಯ ಬಡಿತವ ಕಹಳೆಯಾಗಿಸಿ

ಮನದ ಕಡಲಲಿ ಅಲೆಗಳೆಬ್ಬಿಸಿ

ಕ್ಷಣಿಕವಾದರು ಬುದ್ದಿ ಮರೆಯದ

ಹತ್ತು ಹಲವು ಕ್ಷಣಗಳು

ಬಂದುಹೋದವು ಹುಟ್ಟಿನಿಂದಲಿ

ನಿದ್ರೆ ಬರದಾ ದಿನಗಳು

ಆ ನಿದ್ರೆ ಬಾರದ ದಿನಗಳು

 

ಮಾತು ಬಾರದ ಮೂಕ ಮನಸದು

ಕಣ್ಣ ತೆರೆದು ಜಗಕೆ ಬರುವುದು

ಜಗದ ಗದ್ದಲ ದೊಳಗೆ ಬೆರೆತು

ಅದೇ ಮಾತೆಂದು ತಿಳಿವುದು

ತಿಳಿವು ಬಲಿತು ಅರಿವು ಮೂಡದೆ

ಅರ್ಧ ನಿದ್ರೆಯ ಮರೆವುದು

 

ಮಾತು ಕಲಿತ ಮರುಘಳಿಗೆಯೆ

ಅರಿವು ಗಳಿಸುವ ಕಾಯಕ

ಹಲವು ಶಕೆಗಳು ಕಳೆವವಲ್ಲಿ

ಜೀವನ ಬಲು ರೋಚಕ

ಮೊದಲ ಸ್ನೇಹ , ಮೊದಲ ಪ್ರೀತಿ

ಹಲವು ಮೊದಲುಗಳಲ್ಲಿಯೇ

ಮೊದಲು ಮೊದಲೇ ಅರಿವು ಮೂಡುವ

ಬಿಹಾರದ “ನೀತಿ” ಪಾಠ

ಬಿಹಾರದ “ನೀತಿ” ಪಾಠ


ಬಿಹಾರದ ವಿಧಾನ ಸಭೆಗೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಜನತಾ ದಳ (ಸಂಯುಕ್ತ) ಮತ್ತು ಭಾಜಪ ಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ಆಶ್ಚರ್ಯ ತರದಿದ್ದರೂ ವಿಜಯದ ಪ್ರಮಾಣ ಮತ್ತು ಕಾಂಗ್ರೆಸ್, ಲಾಲೂ ಪಕ್ಷಗಳ ಧೂಳೀಪಟ ಎಲ್ಲರನ್ನೂ ದಂಗು ಬಡಿಸಿದ್ದಂತೂ ನಿಜ. ಬಹುಶಃ ಇಂದಿರಾ ವಧೆಯ ನಂತರ ನಡೆದ ಚುನಾವಣೆಯಲ್ಲಿನ ಕಾಂಗ್ರೆಸ್ ಜಯಭೇರಿಯ ಪ್ರಮಾಣವನ್ನೂ ಮೀರಿಸುವ ಗೆಲುವಾಗಿರಬಹುದು ನೀತೀಶರದು. ಅಷ್ಟೇ ಅಲ್ಲ ರಾಹುಲ್ ಗಾಂಧಿಯವರ ವರ್ಚಸ್ಸನ್ನು ಉಪಯೋಗಿಸಿ ಉತ್ತರ ಪ್ರದೇಶದ ರೀತಿಯ ಫಲಿತಾಂಶ ನಿರೀಕ್ಷಿಸಿದ್ದ ಕಾಂಗ್ರೆಸ್ಸಿಗರಿಗೆ ಈ ಚುನಾವಣೆ ಒಂದು ಕಹಿ ಅನುಭವ. ಬಿಹಾರದ ಚುನಾವಣೆಯ ಮತ್ತೊಂದು ಸ್ವಾರಸ್ಯ ಮತ್ತು positive outcome ಏನೆಂದರೆ ಈ ಗೆಲುವಿನೊಂದಿಗೆ ಜನತಾ ದಳ ದ ಮೈತ್ರಿ ಪಕ್ಷಕ್ಕೆ “ನೀತಿ” ಪಾಠ ಸಹ ಸಿಕ್ಕಿದ್ದು. 

ಸ್ಟಾರ್ ವಾರ್

೧೯೮೧ ರಿಂದ ೧೯೮೯ ರವರೆಗೆ ಅಮೆರಿಕೆಯ ೪೦ ನೇ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಅಮೆರಿಕೆಯ ಅತ್ಯಂತ ಜನಪ್ರಿಯ ಅಧ್ಯಕ್ಷರಲ್ಲೊಬ್ಬರು. ಇವರ ಕಾಲದಲ್ಲಿಯೇ ಅಮೇರಿಕ SDI (Strategic Defence Initiative) ಕಾರ್ಯಕ್ರಮದ ಅಡಿಯಲ್ಲಿ star war ತಂತ್ರಜ್ಞಾನಕ್ಕೆ ಮುನ್ನುಡಿ ಬರೆದಿದ್ದು. ವಿಕಿಲೀಕ್ ಹಗರಣ ಈಗ ಒಂದು ರೀತಿಯ star war ರೀತಿಯ ಕದನಕ್ಕೆ ದಾರಿ ಮಾಡಿ ಕೊಡುತ್ತಿದೆ. ಅಸಾಂಜ್ ನನ್ನು ಬಂಧಿಸಿದ್ದರಿಂದ ಅವನ ಬೆಂಬಲಿಗರು ತಮ್ಮ ಸಮರವನ್ನು ನಭೋ ಮಂಡಲಕ್ಕೆ ಒಯ್ದಿದ್ದಾರೆ. ಅಂದರೆ ಪೂರ್ಣ ಪ್ರಮಾಣದ assault through web sphere. ಅಮೆರಿಕೆಯನ್ನೂ ಒಳಗೊಂಡು ವಿಶ್ವದ ಬಹುತೇಕ ರಾಷ್ಟ್ರಗಳ ರಾಜತಾಂತ್ರಿಕರ, ಆಳುವವರ ಮಧ್ಯೆ ನಡೆದ ಮಾತುಕತೆ, ರಹಸ್ಯಗಳನ್ನು ಕ್ಷಣ  ಮಾತ್ರದಲ್ಲಿ ವಿಶ್ವದೆಲ್ಲೆಡೆ ವೆಬ್ ತಂತ್ರಜ್ಞಾನದ ಮೂಲಕ ಹರಡಿದ ಕಾರಣ ಭುಗಿಲೆದ್ದ ವಿವಾದ ಮತ್ತು ಸಮರಕ್ಕೆ ನಭೋ ಮಂಡಲವೇ ಯುದ್ಧ ಭೂಮಿ. ಅದೇ ಸಮಯ ಅಸಾಂಜ್ ನಿಗೂ ಬೆಂಬಲದ ಮಹಾಪೂರ ವೆಬ್ ಟೆಕ್ಕಿಗಳಿಂದ ಮತ್ತು ಪಾರದರ್ಶಕತೆ ಯಲ್ಲಿ ವಿಶ್ವಾಸ ಇರಿಸಿದ ಆಸಕ್ತರಿಂದ. ಈಗ ಆರಂಭ mother of all battles.

ಆಸೆ

ಆತ  ಸುಮಾರು ೪೦ರ  ಆಸುಪಾಸಿನ , ರೈಲಿನ್ನಲ್ಲಿ ಕಡಲೆ ಕಾಯಿ  ಮಾರುವ ವ್ಯಕ್ತಿ . ಆತನಿಗೆ  ಎಡಗಾಲು ಹಾಗೂ ಎಡಗೈಗಳಲ್ಲಿ  ಪೂರ್ಣ ಶಕ್ತಿ ಇಲ್ಲ.

ಆ ಕೈಯಲ್ಲೇ ಒ೦ದು ಸಣ್ಣ ಚೀಲ , ಅದರಲ್ಲಿ  ಹುರಿದ ಕಡಲೆಕಾಯಿ  ಮತ್ತು  ಪೊಟ್ಟಣ ಕಟ್ಟಲು ಕಾಗದದ ಹಾಳೆಗಳು .ಒ೦ದು ಕಾಲನ್ನು ಎಳೆದು ಹಾಕುತ್ತಾ  ರೈಲಿನ ಜನ ಜ೦ಗುಳಿಯಲ್ಲಿ ನುಗ್ಗುತ್ತಾ ಕಡಲೆಕಾಯಿ ಮಾರುವುದು ಆ  ವ್ಯಕ್ತಿಯ ಜೀವನೋಪಾಯ.

 

ನಾನು ಬಹಳ ಸಲ ಆ ವ್ಯಕ್ತಿಯನ್ನು  ಗಮನಿದ್ದೇನೆ. ಆತ ಎ೦ದಿಗೂ ಪೊಟ್ಟಣ ಕಟ್ಟಿ ಅದರಲ್ಲಿ ಕಡಲೇಕಾಯಿ ಹಾಕಿ  ಕೊಟ್ಟದ್ದೇ ಇಲ್ಲ.  ಆತನ  ಎಡಗೈ ಪೊಟ್ಟಣ  ಕಟ್ಟಲು ಸಹಕರಿಸುತ್ತಿರಲಿಲ್ಲ. ಕಡಲೆಕಾಯಿ ಕೊಳ್ಳುವವರ ಕೈಗೆ ಹಾಳೆಯನ್ನು ಕೊಟ್ಟು ಅದರಲ್ಲಿ ಕಡಲೆಕಾಯನ್ನು  ಹಾಕುತ್ತಿದ್ದ.

 

ಎಲ್ಲ ಬಿಟ್ಟು ಅವಳು ಅವನ ಹಿಂದೆ ಹೋದದ್ದಾದರೂ ಏಕೆ?

ನಮ್ಮಲ್ಲಿ ಗಂಡ ಹೆಂಡತಿಯನ್ನು ಬಿಟ್ಟು ಹೋದರೆ ಜನ ಮಾತಾಡಿಕೊಳ್ಳುವದಿಲ್ಲ. ತಲೆಕೆಡಿಸಿಕೊಳ್ಳುವದಿಲ್ಲ. ಅಸಲಿಗೆ ಅದೊಂದು ಸುದ್ದಿಯಾಗುವದಿಲ್ಲ. ಹೋದರೆ ಹೋದ. ಇಲ್ಲೇ ಎಲ್ಲೋ ಹೋಗಿರಬೇಕು. ಇವತ್ತಲ್ಲ ನಾಳೆ ಮತ್ತೆ ಬರುತ್ತಾನೆ ಎಂದು ತುಂಬಾ ಉದಾಸೀನವಾಗಿ ಮಾತಾಡಿ ಜನ ಮತ್ತೆ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಹೆಚ್ಚೆಂದರೆ ಅವನೆಲ್ಲಿದ್ದಾನೆಂದು ಹುಡುಕಿ, ಅವನಿಗೊಂದಿಷ್ಟು ಬೈದು, ಇನ್ಮೇಲೆ ಹಂಗೆಲ್ಲಾ ಬಿಟ್ಟುಹೋಗಬೇಡ ಅಂತಾ ನಾಲ್ಕು ಬುದ್ದಿ ಮಾತು ಹೇಳಿ ವಾಪಾಸು ಕರೆತರುತ್ತಾರೆ. ಹಾಗೆ ವಾಪಾಸು ಬಂದವನಿಗೆ ಅದ್ದೂರಿ ಸ್ವಾಗತವೂ ಇರುತ್ತೆ. ಆತ ಕ್ಷಮೆಗೆ ಅರ್ಹನು ಹೌದೋ ಅಲ್ವೋ ಆದರೂ ಅವನನ್ನು ಕ್ಷಮಿಸಿ ಸಮಾಜದಲ್ಲಿ ಆತನಿಗೊಂದು ಮೊದಲಿನ ಸ್ಥಾನವನ್ನು ಕಲ್ಪಿಸಿಕೊಡುತ್ತಾರೆ.

ಕಾಗುಣಿತಗಳು

ದಿ|ಡಿ.ವಿ.ಜಿ.ಯವರ ಜ್ಞಾಪಕ  ಚಿತ್ರಶಾಲೆ ಯಲ್ಲಿ ಕಾಗುಣಿತಗಳ ಕುರಿತು -ಅ ಆ ಇ ಗಳ ಕುರಿತು -ಒಂದು ಪದ್ಯವಿದೆ.ಅದರ ಪೂರ್ಣ ಪಾಠ ಬಲ್ಲವರು ತಿಳಿಸುವಿರಾ?

ಪೇಜಾವರಶ್ರೀ - ೮೦

            ಬರುವ ಏಪ್ರಿಲ್ ೨೭ಕ್ಕೆ ಅಕ್ಷರಶಃ 79 ‘ವಸಂತ’ಗಳನ್ನು ಪೂರೈಸಲಿರುವ ಸಾತ್ವಿಕ ಸುಜೀವಿ ಪೇಜಾವರ ಸ್ವಾಮಿಗಳು, ಇತರೆಲ್ಲಾ ನಾಡಾಡಿ ಸಂನ್ಯಾಸಿಯಂತಲ್ಲದೆ ವಿವಿಧ ಕಾರಣಗಳಿಗಾಗಿ ಮನೆಮಾತಾಗಿರುತ್ತಾರೆ; ಅಷ್ಟಷ್ಟೂ ಜನಪ್ರಿಯರಾಗಿದ್ದಾರೆ! ಈ ಹಿರಿಜೀವಿಯಿಂದ ಇನ್ನೇನನ್ನಲ್ಲದ್ದಿದ್ದರೂ ನಾವು ಧಾರಾಳವಾಗಿ ಪಡೆಯಬಹುದಾದ್ದು, ಪಡೆಯಲೇ ಬೇಕಾದ್ದು ಜೀವನದ ಪ್ರಾಮಾಣಿಕ ತುಂಬು ಉತ್ಸಾಹ ಮತ್ತು ಸಾತ್ವಿಕ ಸ್ಫೂರ್ತಿ.