ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಂಟಿ,.. ಬಂಟಿ,... ಬಂಟಿಂಗ್ಸ್.... ಬೇಕೆ?

ಬಂಟಿ,.. ಬಂಟಿ,... ಬಂಟಿಂಗ್ಸ್.... ಬೇಕೆ?

ಇಲ್ಲೊಬ್ಬ ಹುಡುಗನ ಭಾವಚಿತ್ರದ ಫ್ಲೆಕ್ಸ್‌ಗಳನ್ನು ದೀಪದ ಕಂಬಗಳಿಗೆ, ರಸ್ತೆಯ ಮಧ್ಯೆಯಲ್ಲಿರುವ ವೃತ್ತದಲ್ಲಿ ಕಟ್ಟಲಾಗಿದೆ.  ಏನೆಂದು ಓದಿದರೆ, ಆತನ ಹೆಸರು, ಜನ್ಮ ದಿನಾಂಕ, ಮರಣ ದಿನಾಂಕ ಎಲ್ಲ ನಮೂದಿಸಿದ್ದಾರೆ.

ಮತ್ತೊಂದು ಭಾವಚಿತ್ರ ಕಾಣಿಸಿತು. ಅದರಲ್ಲಿ ಒಬ್ಬ ಯುವಕ. ಹಸನ್ಮುಖಿಯ ಚಿತ್ರ.  ಆದರೆ, ಅದರಲ್ಲಿಯೂ ಹೆಸರು, ದಿನಾಂಕ ಇತ್ಯಾದಿ.  

ಬ್ಲಾಗ್ ಗೋಡೆಗಳೇಕೊ ಖಾಲಿ ಖಾಲಿ

ಬ್ಲಾಗ್ ಗೋಡೆಗಳೇಕೊ ಖಾಲಿ ಖಾಲಿ


ಕಳೆದವಾರ ಸಂಪದ ಸಮ್ಮೇಳನ ನಡೆಯಿತು. ನಂತರ ಸಂಪದದಲ್ಲಿ ಏಕೊ ಒಂದು ರೀತಿ ಜಡವಾದ ವಾತವರಣ. ಮದುವೆಯ ಸಂಭ್ರಮವೆಲ್ಲ ಕಳೆದಮೇಲೆ ಮನೆಯಲ್ಲಿನ ನೆಂಟರೆಲ್ಲ ಊರಿಗೆ ಹೊರಟನಂತರ ಮನೆಯಲ್ಲ ಭಣಭಣವೆನಿಸುವ ರೀತಿ ಏಕೊ ಸಂಪದ ಸಪ್ಪೆ ಸಪ್ಪೆ. ಅದಕ್ಕೆ ಪೂರಕವೆನೆಸುವಂತೆ ಬೆಂಗಳೂರಿನ ವಾತವರಣವೂ ಏಕೊ ಬಾನುವಾರದಿಂದ ಮೋಡ ಮೋಡ ಚಳಿ ಚಳಿ.

ಮೂಢ ಉವಾಚ -48

             ಮೂಢ ಉವಾಚ -48


ಹುಳುಕು ಹುಡುಕುವರೆಲ್ಲೆಲ್ಲು ವಿಷವನೇ ಕಕ್ಕುವರು|
ಚಾಡಿಯನು ಹೇಳುವರು ಸಂಬಂಧ ಕೆಡಿಸುವರು||
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು|
ಸಂಬಂಧ ಉಳಿಸಿ ಬೆಳೆಸುವರವರು ಮೂಢ||


 


ಕ್ಷಮಿಸುವರು ನರರು ಬಲಹೀನತೆಯಿಂದ|
ಆಸೆ ಪಡದಿಹರು ದೊರೆಯದಿರುವುದರಿಂದ||
ಧೀರನಾ ಕ್ಷಮೆಗೆ ಬೆಲೆಯಿರುವ ಪರಿ ಯೋಗಿಯ|
ನಿರ್ಮೋಹತೆಗೆ ಬಲವುಂಟು ಮೂಢ||


*************************


-ಕವಿನಾಗರಾಜ್.

ಪ್ರೀತಿಗೆ ಮೋಸವ ಮಾಡಿದ ಮೋಸಗಾತಿ

ಯಾಕೆ ಬಂದೆ ಹುಡುಗಿ ನನ್ನ ಬಾಳಿನಲ್ಲಿ...


ಪ್ರಶಾಂತವಾಗಿದ್ದ ನನ್ನ ಮನಸಿನಲ್ಲಿ ಬಿರುಗಾಳಿ


ಎಬ್ಬಿಸಿ ಹೊರಟುಹೋದೆ ಏಕೆ?


 


ಸ್ನೇಹದ ಹೆಸರಲ್ಲಿ ಹತ್ತಿರವಾದ ನೀನು


ಪ್ರೀತಿಯ ಆಸೆ ಹುಟ್ಟಿಸಿ ನನ್ನ ಮನದಲಿ..


ಪ್ರೀತಿಯ ನಾಟಕವಾಡಿ ಏಕೆ ಮೋಸಮಾಡಿದೆ..


 


ನೀನೆ ನನ್ನ ಜೀವ ಎಂದೆ, ನೀನೆ ನನ್ನ ಪ್ರಾಣ ಎಂದೆ..


ಜೀವನ ಪೂರ್ತಿ ನಿನ್ನೊಡನೆ ಇರುವೆನೆಂದೆ...


ಕಪಟತನ ಅರಿಯದ ನನ್ನೊಡನೆ ಚೆಲ್ಲಾಟವ ಆಡಿದೆ ಏಕೆ..


 


ಎರಡು ದೋಣಿಯ ಮೇಲೆ ಒಟ್ಟಿಗೆ ನಡೆದೆ ಹುಡುಗಿ ನೀನು...


ನೀ ಮೋಸವ ಮಾಡಿದ್ದು ನನಗಲ್ಲ ಹುಡುಗಿ..

ಬದಲಾಗುವ ಬಣ್ಣಗಳು

ಹೊತ್ತಿಗೆ ತಕ್ಕ ಹಾಗೆ ಬಣ್ಣ ಬದಲಿಸೋ ಜನರನ್ನ ದಿನ ನಿತ್ಯ ನೋಡ್ತಾನೇ ಇರ್ತೀವಿ. ಇನ್ನು ಗೋಸುಂಬೆ ಅಂತಹ ಬಣ್ಣ ಬದಲಿಸೋ ಪ್ರಾಣಿಗಳನ್ನೂ ನೋಡಿದೀವಿ. ಆದ್ರೆ ನಾನು ಹೇಳ್ತಾ ಇರೋ ಬಣ್ಣಗಳೇ ಬೇರೆ! ’ಕಾಲಾಯ ತಸ್ಮೈ ನಮಃ ’ ಅಂತ ಕಾಲ ಕಾಲಕ್ಕೆ ಬಣ್ಣ ಬದಲಿಸೋ ಗಿಡ ಮರಗಳ ಬಗ್ಗೆ ಹೇಳ್ತಿದೀನಿ ನಾನು. ಭೂಮಧ್ಯರೇಖೆ ಇಂದ ದೂರ ಹೋದಷ್ಟೂ, ಚಳಿಗಾಲದಲ್ಲಿ ಎಲೆ ಉದುರಿಸೋ ಮರಗಳು ಹೆಚ್ಚುತ್ತಾ ಹೋಗುತ್ತವೆ. ಎಲೆ ಉದುರಿಸೋ ಮೊದಲು ಇವು ಹಳದಿ ಕೆಂಪು ಕಂದುಗಳ ನೂರಾರು ಛಾಯೆಗಳನ್ನು ತಾಳಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಎಷ್ಟೋ ಬಾರಿ ಹೀಗೆ ಬದಲಾಗುವ ಬಣ್ಣಗಳನ್ನ ನೋಡೋದಕ್ಕೇ ಅಂತಲೇ ನೂರಾರು ಮೈಲಿ ಹೋಗಿದ್ದೂ ಇದೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಎಲೆ ಉದುರಿಸುತ್ತಾ ನವಂಬರ್ ಹೊತ್ತಿಗೆ ಮರಗಳೆಲ್ಲ, ಪಾಪ, ಬೋಳಾಗಿ ನಿಂತು ಬಿಡುತ್ತವೆ.

ಸುನಾಮಿ

(ಕವಿತೆ ಬರೆದ ಹಿನ್ನೆಲೆ: ಹಲವು ವರ್ಷಗಳ ಹಿಂದೆ ಆಂದ್ರ ಹಾಗು ತಮಿಳು ನಾಡಿನ ಕೆಲವು ಸಮುದ್ರ ತೀರದ ಹಳ್ಳಿ,ಪಟ್ಟಣಗಳ ಮೇಲೆ ಸಮುದ್ರರಾಜ ಮುನಿದು ತನ್ನ ಪ್ರರಾಕ್ರಮ ತೋರಿಸಿ ನಮ್ಮ ಜನರನ್ನು ಸಂಕಷ್ಟಕ್ಕೆ ಗುರಿಮಾಡಿದ ಸಂಗತಿ ನಿಮಗೆಲ್ಲಾ ತಿಳಿದಿದೆ. ಈ ಕವಿತೆ ಬರೆದು ತುಂಬಾ ವರ್ಷಗಳಾದರೂ ಅಂದು ನಡೆದ ಅಲ್ಲಿನ ಜನರ ಸಂಕಷ್ಟಗಳಿಗೆ ಬಹಳಷ್ಟು ಮಂದಿ ಸ್ಪಂದಿಸುತ್ತಿದ್ದರೂ ಕೆಲವು ಮತೀಯ ಗುಂಪು ಜನರ ಸಂಕಷ್ಟದ ಸಮಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಬಯಸಿ ಜನರಿಗೆ ಆಮೀಷಗಳನ್ನು ಒಡ್ಡಿ ತಮ್ಮ ಮತಕ್ಕೆ ಸೆಳೆಯಲೆತ್ನಿಸಿದ ಸಂಗತಿಗಳನ್ನು ಓದಿ,ನೋಡಿ ,ನೊಂದು ಈ ಕವಿತೆಯನ್ನು ಬರೆದೆ.)


 


 


ವಾರಣಾಸಿ - ಇದು ನ್ಯಾಯವೇ??

 

ನೆನ್ನೆ ವಾರಣಾಸಿಯಲ್ಲಿ ಮತ್ತೆ ಉಗ್ರರು ತಮ್ಮ ಅಟ್ಟಹಾಸ ತೋರಿಸಿದ್ದಾರೆ. ಹದಿನೆಂಟು ತಿಂಗಳ ಹಸುಗೂಸೊಂದು ಬಲಿಯಾಗಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಅಸಲಿಗೆ ಏನು ಸಾಧಿಸಲು ಹೊರಟಿದ್ದಾರೆ ಈ ಉಗ್ರರು ಅಮಾಯಕರ ಬಲಿ ತೆಗೆದುಕೊಂಡು?

 

ಚಿತ್ರ ಕೃಪೆ : ಅಂತರ್ಜಾಲ

ಹೌದು, ಇನ್ನೂ ಇಲ್ಲಿಯೇ ಇದ್ದಾನೆ!

ಹೆಂಡತಿಯೊಬ್ಬಳು ರಾತ್ರಿ ಪೂರ್ತಿ ಮನೆಯೊಳಗಿರಲಿಲ್ಲ. ಮಾರನೆ ದಿನ ಗಂಡನಿಗೆ "ನಾನು ರಾತ್ರಿ ಪೂರ್ತಿ ನನ್ನ ಸ್ನೇಹಿತೆಯೊಬ್ಬಳ ಮನೆಯಲ್ಲಿ ಇದ್ದೆ" ಎಂದು ಹೇಳಿದಳು. ಗಂಡ ಅವಳ ಆಪ್ತರೆನಿಸಿದ ಹತ್ತಾರು ಸ್ನೇಹಿತೆಯರಿಗೆ ಫೋನಾಯಿಸಿ ಕೇಳಿದ. ಎಲ್ಲರೂ "ಇಲ್ಲವಲ್ಲ, ನಮ್ಮ ಮನೆಗೆ ಬಂದಿರಲಿಲ್ಲ" ಎಂದುಲಿದರು.

 

ಮುಂದೊಂದು ದಿನ ಗಂಡ ರಾತ್ರಿಪೂರ್ತಿ ಮನೆಯಲ್ಲಿರಲಿಲ್ಲ. ಮಾರನೆಯ ದಿನ ಹೆಂಡತಿಗೆ "ನಾನು ಸ್ನೇಹಿತನ ಮನೆಯಲ್ಲಿ ಇದ್ದೆ" ಎಂದು ಹೇಳಿದ. ಹೆಂಡತಿಯ ಆತನ ಆಪ್ತರಾದ ಹತ್ತು ಜನರಿಗೆ ಫೋನು ಮಾಡಿ ಕೇಳಿದಾಗ ಐದು ಜನ "ಹೌದು ನನ್ನ ಮನೆಯಲ್ಲಿಯೇ ಇದ್ದ" ಎಂದು ಖಚಿತಪಡಿಸಿದರೆ ಇನ್ನೂ ಐದು ಮಂದಿ "ಇನ್ನೂ ನನ್ನೊಂದಿಗೇ ಇದ್ದಾನಲ್ಲ! ಮಧ್ಯಾಹ್ನ ಕಳುಹಿಸಿತ್ತೇವೆ ಬಿಡಿ" ಎಂದು ಉತ್ತರಿಸಿದರು.

 

ವಚನ ಸಾಹಿತ್ಯ ದ ಸರಕಾರೀ ಸೈಟು ಕೆಲಸ ಮಾಡ್ತಾ ಇದೆ!

ನನಗೆ ವಚನ ಸಾಹಿತ್ಯದ ಬಗ್ಗೆ in general ಕನ್ನಡ ಸಾಹಿತ್ಯ / ಭಾಷೆ ಬಗ್ಗೆ ಆಸಕ್ತಿ ಮರುಕಳಿಸಿದ್ದು ದೇಶದಾಚೆ ಇರಬೇಕಾದ ಪರಿಸ್ತಿತಿಯಿಂದಲೇ.

ಆಗಲೇ ನನಗೆ www.vachanasahitya.org ಮತ್ತು ಸಂಪದ ಗಳ ಪರಿಚಯವಾಗಿದ್ದು.

www.vachanasahitya.org ಪರಿಚಯವಾದ ಕೆಲವೇ ತಿಂಗಳುಗಳಲ್ಲಿ ಆ ಸೈಟು ನಿಂತೂ ಹೋಯ್ತು. ಇದರ ಬಗ್ಗೆ ಸಂಪದದಲ್ಲಿ ಒಮ್ಮೆ ಪ್ರಸ್ತಾಪಿಸಿಯೂ ಇದ್ದೆ.

ನಂತರ ಭಾರತಕ್ಕೆ ಬಂದಾಗ ಕನ್ನಡ ಸಂಸ್ಕೃತಿ ಇಲಾಖೆಗೆ ಫೋನ್ ಮಾಡಿದ್ದೆ. ಸ್ವತ ನಿರ್ದೇಶಕರಾದ ಮನು ಬಳಿಗಾರರೆ ಮಾತಾಡಿ ಕೆಲ ದಿನಗಳ ನಂತರ ಹೆಚ್ಚಿನ ವಿಷಯ ತಿಳುಸ್ತೀನಿ ಅಂದಿದ್ದರು. ನಂತರ ಮಾತಾಡಿದಾಗ , ಈ ಸೈಟು ಮಾಡಿಕೊಟ್ಟವರ ಜೊತೆ ಸರ್ಕಾರಕ್ಕೆ ಕಾಪಿರೈಟು ವಿಷಯದ ಬಗ್ಗೆ ಗೊಂದಲವಿರುವಂತೆ ಅನ್ನಿಸಿತು.ಅವರು ಅದನ್ನು ನಿವಾರಿಸಿ ಆದಷ್ಟು ಬೇಗೆ NIC (National Infarmatics Center) ಗೆ ಅಪ್ಲೋಡ್ ಮಾಡಲಾಗುತ್ತೆ ಅಂದಿದ್ದರು.

ನಂತರ ನನ್ನ ಗಮನ ಆ ಕಡೆ ಹೋಗಲೇ ಇಲ್ಲ.

ನಾಯೀ ನನ್ನ ಒಲವಿನ ನಾಯಿ..

ಬಂಧನ ಚಿತ್ರದ ಬಣ್ಣ ನನ್ನ ಒಲವಿನ ಬಣ್ಣ ಹಾಡಿಗೆ ಸಾಹಿತ್ಯ ಬದಲಿಸಿ ಬರೆದಿದ್ದೇನೆ..ಇದು ಕೇವಲ ಹಾಸ್ಯಕ್ಕಾಗಿ...


ನಾಯೀ..ಈ..ಈ  ನನ್ನ ಒಲವಿನ ನಾಯಿ..

ನನ್ನ ಪ್ರೀತಿಯ ನಾಯೀ...ನನ್ನ ಮುದ್ದಿನ ನಾಯೀ..

ನೀ ಬೌ ಬೌ ಬೊಗಳು..ಜೋರಾಗಿ ಬೊಗಳು...ನೂರಾರು ಬ್ರೀಡಿನ ನಾಯೀ...

ನಾಯೀ...ನಾಯೀ...ನಾಯೀ...ನಾಯೀ...


ನಾಯೀ..ಈ..ಈ  ನನ್ನ ಒಲವಿನ ನಾಯಿ..

ನನ್ನ ಪ್ರೀತಿಯ ನಾಯೀ...ನನ್ನ ಮುದ್ದಿನ ನಾಯೀ..

ನೀ ಬೌ ಬೌ ಬೊಗಳು..ಜೋರಾಗಿ ಬೊಗಳು...ನೂರಾರು ಬ್ರೀಡಿನ ನಾಯೀ...

ನಾಯೀ...ನಾಯೀ...ನಾಯೀ...ನಾಯೀ

ಈ ನೀಲಿ ಮೋಹಕ ಕಣ್ಣ..ಚೆಲುವಲ್ಲಿ ನಿಂತಿರೋ ನಾಯೀ..

ರಂಗಾದ ಮೈಯ್ಯ ತುಂಬಾ ಕೂದಲಿರೋ ಮುದ್ದಿನ ನಾಯೀ...

ನಾ ತಂದೆ ಪೆಡಿಗ್ರೀ ಇಂದು..ನಿನಗಾಗಿ ತಿನ್ನು ನಾಯೀ..

ಮನೆ ಮುಂದೆ ತೋಟದಲ್ಲಿ ಹೊಸ ಗೂಡು ಕಟ್ಟಿದೆ ನಿನಗೆ..