ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೌಡಪ್ಪನ ದುಬೈ ಪ್ರವಾಸ - ಭಾಗ ೭ : ಪಾಮ್ ಜುಮೇರಾ, ಅಟ್ಲಾ೦ಟಿಸ್ ಹೋಟೆಲ್, ದುಬೈಗೆ ಬೈ ಬೈ!

"ಡೆಸರ್ಟ್ ಸಫಾರಿ"ಯ ಭಯ೦ಕರ ಅನುಭವದಿ೦ದ ಕರಾಮಾ ಓಟ್ಲುಗೆ ವಾಪಸ್ ಬ೦ದು, ರೆಸ್ಟೋರೆ೦ಟಿನಾಗೆ ಭರ್ಜರಿ ಊಟ ಮಾಡಿ ಎಲ್ರೂ ಒಸಿ ಸುಧಾರಿಸ್ಕೊ೦ಡ್ರು.  ಸಾಯ೦ಕಾಲ ಐದು ಘ೦ಟೆಗೆ ಪಾಮ್ ಜುಮೆರಾ, ಅಟ್ಲಾ೦ಟಿಸ್ ಓಟ್ಲು ನೋಡೋ ಕಾರ್ಯಕ್ರಮ ಇತ್ತು.  ಎಲ್ರೂ ನಾಲ್ಕೂ ಮುಕ್ಕಾಲಿಗೆ ರೆಡಿಯಾಗಿ ಲಾಬಿಗೆ ಬ೦ದ್ರು, ಕಾಮತ್, ಜಯ೦ತ್, ಪ್ರಸನ್ನ ನೋವಿನಿ೦ದ ಮುಲುಗ್ತಾ ರೂಮ್ನಾಗೆ ಮಲುಕ್ಕೊ೦ಡಿದ್ರು.  ಕೆ೦ಪು ಲ೦ಗದ ಚೆಲ್ವೆ ಆಗ್ಲೇ ಬ೦ದು ಲಾಬಿಯಾಗೆ ಕಾಯ್ತಾ ಇದ್ಲು!  ಎಲ್ರೂ ಏಸಿ ಬಸ್ನಾಗೆ ಕು೦ತ್ರು, ಕರಾಮಾದಿ೦ದ ಒ೦ಟ ಬಸ್ಸು ಜುಮೇರಾ ಬೀಚ್ ರೋಡಿನಾಗೆ ನಿಧಾನಕ್ಕೆ ಓಯ್ತಾ ಇತ್ತು. ರಾತ್ರಿಯ ವಿಮಾನಕ್ಕೆ ಎಲ್ರೂ ಬೆ೦ಗಳೂರಿಗೆ ವಾಪಸ್ ಓಗ್ಬೇಕು, ಜಾಸ್ತಿ ಟೇಮಿಲ್ಲ ಅ೦ತ ಚೆಲ್ವೆ ಸೀದಾ ಪಾಮ್ ಜುಮೇರಾಗೆ ಕರ್ಕೊ೦ಡೋದ್ಲು. 

ದೀಪವು ನಿನ್ನದೆ, ಗಾಳಿಯೂ ನಿನ್ನದೆ; ಈ ದೀಪಾವಳಿ ಎಲ್ಲರಿಗೂ ಇರಲಿ ಏಕರೀತಿ.

ಕುಂಬಾರ ಕೈಯೊಳಗಿನ ಮಣ್ಣಿನ ಪಣತಿ ದೀಪಾವಳಿ ಹಬ್ಬಕ್ಕೆ ಶ್ರೇಷ್ಟ.

 

ಮಣ್ಣಿನ ತೆಪ್ಪವೋ;

ತೆಪ್ಪದೊಳು ತುಪ್ಪದ ಸಮುದ್ರವೋ!

ತೆಪ್ಪದ ಕಮಲದಲ್ಲಿ ಹತ್ತಿಯ ಬತ್ತಿಯೋ;

ಬತ್ತಿಯ ತ್ಯಾಗದಿಂದ ಬೆಳಕಿನ ಸೆಲೆಯೋ!

ಕಳೆದುಕೊಂಡಿದ್ದೇನು?

ನಾನು ಹಾಡುತ್ತೇನೆ
ನಾನು ಕಳೆದುಕೊಂಡಿದ್ದೇನೆಂದು;
ನಾನು ಗೆದ್ದಿದ್ದು ಏನೆಂದು;
ನಾನು ನಡೆದ ದಾರಿಯ
ನಾನು ಕಂಡ ಯುದ್ಧ ಭೂಮಿಯ ರೀತಿಯನ್ನು;
ನನ್ನ ದೊರೆಯೋ! ಸೋಲುಂಡವನು;
ನನ್ನ ಗೆಳೆಯರೋ! ಸೋತ ಸೈನಿಕರು;
ಕಾಲು ಮಾತ್ರ ನಿಲ್ಲದೆ ತೆವಳುತ್ತಿದೆ
ಸರಿಯಿದ್ದವರು ಓಡುತ್ತಿದ್ದಾರೆ;
ಅವರು ಯಾವಾಗಲೂ ಅದೇ ಸಣ್ಣ ಕಲ್ಲನ್ನೇ ಬಿಸುಟುತ್ತಾರೆ;
ನಾನು ಹಾಡುತ್ತೇನೆ
ನಾನು ಕಳೆದುಕೊಂಡಿದ್ದೇನೆಂದು;


ಪ್ರೇರಣೆ:""What was lost" by William Butler Yeats

ನಿನಗೆ ವಯಸ್ಸಾದಾಗ

ಯಾವಾಗ ನಿನಗೆ ವಯಸ್ಸಾಗುವುದೋ!;
ತಲೆಗೂದಲು ನೆರೆಯುವುದೋ!;
ನಿದ್ದೆ ಎಡನಿಡದೇ ಕಾಡುವುದೋ!;
ಎಲ್ಲಕ್ಕೂ ನಿನಗೆ ಒಪ್ಪಿಗೆ ಇದ್ದಲ್ಲಿ ಈ ಪುಸ್ತಕ ತೆಗೆದು ಕೋ;
ನಿನ್ನ ಕಂಗಳಲ್ಲಿ ಒಮ್ಮೆ ಹಿಂದಿನದೆಲ್ಲವನ್ನೂ ನೆನಪಿಸಿ ಕೋ;
ಈ ಪುಸ್ತಕದ ಒಳಹೊಕ್ಕು ನೋಡು;
ಎಷ್ಟು ಅಹ್ಲಾದಕರ ಸನ್ನಿವೇಶಗಳು ಬಂದವು, ಹೋದವು;
ನಿನ್ನ ಪ್ರೀತಿಸಿದರು ಅಥವಾ ದ್ವೇಷಿಸಿದರು
ದೇಹ ಹಾಗು ಮನಸ್ಸಿನ ಸುಂದರತೆಗೆ ಸೋತು;
ಆದರೆ ಒಬ್ಬ ಮಾತ್ರ ಎಡಬಿಡದೆ ನಿನ್ನ ಪ್ರೀತಿಸಿದ
ಅದೇ ನಿನ್ನಯ ಪವಿತ್ರ ಯಾತ್ರಿಕ ಆತ್ಮ;
ಬದಲಾದ ನಿನ್ನಯ ಚರ್ಯಯ ಕಣ್ಣೀರಿನ ವ್ಯಥೆಗೆ
ಮರುಗಿ ನಿನ್ನನ್ನು ಪ್ರೀತಿಸಿದವನು;
ನಿನ್ನ ಎಲ್ಲಾ ಸನ್ನಿವೇಶಗಳಿಗೂ ನಿನ್ನೊಡನಿದ್ದು ಬಾಗಿ

ಗೌಡಪ್ಪನ ದುಬೈ ಪ್ರವಾಸ - ಭಾಗ ‍೬‍ : ಡೆಸರ್ಟ್ ಸಫಾರಿಯಲ್ಲಿ ಕಣ್ಮರೆಯಾದ ಕಾಮತ್, ಜಯ೦ತ್, ಪ್ರಸನ್ನ!

ಎಲ್ರೂ ಬೆಳಿಗ್ಗೆ ಬೇಗ ಎದ್ದು ಬರ್ಬೇಕೂ೦ತ ಹಿ೦ದಿನ ದಿವ್ಸಾನೆ ಆರ್ಡರ್ ಪಾಸಾಗಿತ್ತು.  ಎಲ್ರೂ ಆರು ಘ೦ಟೆಗೇ ಎದ್ದು ಓಟ್ಲಿನ ಲಾಬಿಗೆ ಬ೦ದು ಸೇರುದ್ರು!  ಅಲ್ಲಿ ದೊಡ್ಡ ಚರ್ಚೆ ಸುರುವಾತು, ಇವತ್ತಿನ ಪ್ರವಾಸಕ್ಕೆ ಎಲ್ಲಿಗೋಗೋದು?  ದುಬೈನ ಮರಳುಗಾಡಿನಾಗೆ ಡೆಸರ್ಟ್ ಸಫಾರಿಗೋಗೋದಾ ಇಲ್ಲ ಸಿಟಿ ಒಳ್ಗಡೆ ಸುತ್ತಾಡೋದಾ?  ಎಲ್ರೂ ಒಮ್ಮತದಿ೦ದ ಡೆಸರ್ಟ್ ಸಫಾರಿಗೋಗೋಣ, ಸಿಟಿ ಇನ್ನೊ೦ದ್ ಕಿತಾ ನೋಡ್ಬೋದು ಅ೦ದ್ರು!  ಮ೦ಜಣ್ಣ ಕೆ೦ಪು ಲ೦ಗದ ಚೆಲ್ವೇಗೆ "ಡೆಸರ್ಟ್ ಸಫಾರಿಗೆ ಓಗಾನ ಕಣಮ್ಮಿ" ಅ೦ದ್ರು!  ಎಲ್ರೂ ಅತ್ತಿದ ಮ್ಯಾಕೆ ಏಸಿ ಬಸ್ಸು ಸೀದಾ ದುಬೈ - ಅಲೇನ್ ರೋಡಿನಾಗೆ ಒ೦ಟು ಸುಮಾರು ೭೦ ಕಿಲೋಮೀಟ್ರು ಬ೦ದು ನಿ೦ತ್ಗೊ೦ತು!  ಗೌಡಪ್ಪ ಮತ್ತವನ ಪಟಾಲಮ್ಮು ತೊಡೆ ಸೊ೦ದಿನಾಗೆ ಕೈ ಇಟ್ಗೊ೦ಡು ಮೂತ್ರ ಮಾಡೋಕ್ಕೆ ಜಾಗ ಎಲ್ಲೈತೆ ಅ೦ತ ಉಡುಕ್ತಾ ಇದ್ರು!  ರಸ್ತೆ

ನಾಯಕತ್ವದ ವಿಲಕ್ಷಣ ಜಿಗಿತ!

        ಹಿರಿತಲೆಮಾರಿನ ಪತ್ರಕರ್ತರ ಪೈಕಿ ಒಬ್ಬರಾದ ವಿ. ಎನ್. ಸುಬ್ಬರಾವ್‌, ಸಂಯುಕ್ತ ಕರ್ನಾಟಕ ಅಂಕಣವೊಂದರಲ್ಲಿ, ತಾವು ತುಂಬಾ ಹತ್ತಿರದಿಂದ ಕಂಡ 15 ಮುಖ್ಯಮಂತ್ರಿಗಳ ಪೈಕಿ ಇಂದಿನವರು, ಆತಂಕದಿಂದ ಆತಂಕಕ್ಕೇ ಜಿಗಿಯುವ ವಿಲಕ್ಷಣ ತೋರುತ್ತಿರುವ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ನಿರ‍್ಲಿಪ್ತ ನಿಲವಿನ Observerಗಳಿಗೂ, ‘ಹೌದಲ್ಲವಾ?’ ಎನಿಸುತ್ತದೆ. ಆದರಿದಕ್ಕೆ, ಯಡಿಯೂರಪ್ಪನವರ ನಾಯಕತ್ವ ಅಥವಾ ವ್ಯಕ್ತಿತ್ವಕ್ಕಿಂತಲೂ ಹೆಚ್ಚಾಗಿ ಯುಗ ಧರ್ಮದ ಅಷಡ್ಡಾಳತನವೇ ಕಾರಣವಾಗಿರಬಹುದಲ್ಲವೇ?

-ಅರಿವಿನ ಹಣತೆ-

ಹಣತೆಯೊಂದು ಬೆಳಕ ಚೆಲ್ಲಿ
ಎಷ್ಟು ಕತ್ತಲ ನುಂಗುವುದೋ?
ಅದರ ಪರಿಧಿಯ ನಾ ಬಲ್ಲೆ
ಬೆಳಕ ಕಾಣದೆ ಎಷ್ಟು ಜೀವಗಳು ನರಳುತಿಹುದೋ?
ಮನದ ಪರಿಧಿಯ ನೀನೊಬ್ಬನೇ ಬಲ್ಲೆ

ರವಿಯ ಕಣ್ಣು ಭೂಮಿಯ ಕಡೆಗೆ
ಜೀವ ಕೋಟಿಗದುವೆ ಕಾರಣ ಏಳಿಗೆಗೆ
ಹೂವು ಹೊರಳುವುವು ಸೂರ್ಯನ ಕಡೆಗೆ
ನಮ್ಮ ಯೋಚನೆ ಬರಿಯ ಹೊಟ್ಟೆಯ ಬಗೆಗೆ

ಮನದ ದೀಪ ಹಚ್ಚಲೊಲ್ಲರು
ಬದುಕಿನ ಭೇಗುದಿಗೆ ನರಳುತಿಹರು
ಕೋಟಿಗೊಬ್ಬನೇ ಸಂಭವಿಸುವನು
ಜನರ ಮನದಲಿ ಅರಿವಿನ ಹಣತೆಯ ಹಚ್ಚುವನು

ಎಷ್ಟು ಯುಗಗಳು ಕಾಯಬೇಕೋ?
ಎಷ್ಟು ಜೀವಗಳು ನರಕಯಾತನೆ ಅನುಭವಿಸಬೇಕೋ?
ಮನದ ಅಂತಃಚಕ್ಷುವ ಎಚ್ಚರಗೊಳಿಸದ ಬೆಳಕು
ನೂರು ಇದ್ದರೇನು? ಇಲ್ಲದಿದ್ದರೇನು?

ನಂಬುವುದೆಂದರೆ ವಂಚಿಸುವ ಅವರ ಸಾಮರ್ಥ್ಯವನ್ನು ಕಡೆಗಣಿಸಿದಂತೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೬

(೨೮೬) ಬೇಸರಿಕೆಃ ಅತ್ಯಂತ ಕುತೂಹಲಕಾರಿಯಾದ ಸಿನೆಮವನ್ನು ಮತ್ತೆ ಮತ್ತೆ, ಅನವರತವಾಗಿ ವೀಕ್ಷಿಸುವುದು.


(೨೮೭) ಯೌವ್ವನವು ಮುದಿತನಕ್ಕೆ ದಾರಿಯಲ್ಲ, ಬದಲಿಗೆ ಅದರ ಆರಂಭಿಕ ಹಂತವಷ್ಟೇ! ಹೀಗಿದ್ದರೂ ಎಲ್ಲ ವಯಸ್ಕರೂ ತಮ್ಮ ಯೌವ್ವನಾವಸ್ಥೆಯ ’ಮಾಗಿದ’ ಮಾದರಿಗಳೇನಲ್ಲ!


(೨೮೮) ಕೋಟಿಗಟ್ಟಲೆ ಜನರಿದ್ದರೂ, ಎಲ್ಲರೂ ಮೊದಲೇ ಪರಿಹಾರ ಕಂಡಿರುವುದನ್ನೇ ನಿರಂತರವಾಗಿ ಹುಡುಕುತ್ತಿರುತ್ತಾರೆಃ ಯಾವುದೇ ತೆರನಾದ ನಿರ್ದಿಷ್ಟ ಉತ್ತರವೂ ಸಾಧ್ಯವಿಲ್ಲವೆಂಬುದೇ ಆ ಪರಿಹಾರ!


(೨೮೯) ಯಾರನ್ನಾದರೂ ನಂಬುವುದೆಂದರೆ ನಿಮ್ಮನ್ನು ಮೋಸಗೊಳಿಸಬಲ್ಲ ಅವರ ಸಾಮರ್ಥ್ಯವನ್ನು ಕಡೆಗಣಿಸಿದಂತೆ.


(೨೯೦) ಗುರಿ ತಲುಪುವುದೆಂದರೆ ಮೊದಲೇ ನಿರ್ಧಾರವಾದುದನ್ನು ’ತಲುಪುವುದು’. ಗಮನವನ್ನು ಸುತ್ತುವರಿದ ಭಾಗ್ಯವೆಂಬುದೇ ಅದನ್ನು ತಲುಪಲಿರುವ ವಾಹನ. ಕೇವಲ ಭಾಗ್ಯವು ನಿಮ್ಮನ್ನು ಗುರಿ ತಲುಪಿಸಿದರೂ ಅದು ನಿಮ್ಮ ಸಾಧನೆ ಎನಿಸದು, ಬರಿಯ ಗಮನವು ಭಾಗ್ಯವಂಚಿತವಾದ್ದರಿಂದಲೇ ನೀವು ತಲುಪಿದ್ದರೂ ಗುರಿ ನಿಮ್ಮಿಂದ ದೂರವಿದ್ದಂತೆನಿಸಿಬಿಡುವುದು.