ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮುಗಿದ ಸಂಪದ ತಂಡದ ಪ್ರವಾಸ...

ಹೊರನಾಡಿಗೆಂದು ಹೊರಟಿತು ಸಂಪದ ತಂಡ...

ಇಸ್ಮಾಯಿಲ್ ಬಸ್ಸನ್ನು ಏರಿ ಸಡಗರದಿಂದ...

 

ಕೋಮಲ್, ಗೌಡಪ್ಪ, ಕಿಸ್ನ,ಗಣೇಶಣ್ಣ, ಶಾನಕ್ಕ, ಪ್ರಸನ್ನ ಹಾಗು ಇಬ್ಬರು ಜಗಜಟ್ಟಿಯರ ಜೊತೆಗೆ

ಹೆಗ್ಡೆಯವರು, ಗೋಪಿನಾಥರು, ದುಬೈ ಮಂಜಣ್ಣರು ಹೊರಟರು ಹೊರನಾಡಿಗೆ..

 

ಸಂಪದ ತಂಡವನ್ನು ಸಂತೋಷದಿಂದ ಬರ ಮಾಡಿಕೊಂಡರು ನಾವಡರು..

ಊಟದ ಮನೆಯಲ್ಲಿ ಗೌಡಪ್ಪನ ವಾಸನೆಗೆ ಮೂರ್ಚೆ ತಪ್ಪಿದರು ಹಲವರು...

 

ನಾವಡರು ಮಾಡಿಸಿದರು ಗೌಡಪ್ಪನಿಗೆ ನಸುಗುನ್ನಿ ಕಾಯಿಯ ಸ್ನಾನವನ್ನು...

ಕೆರೆದು ಕೆರೆದು ಕೆಂಪಾಗಿಸಿಕೊಂಡನು ಗೌಡಪ್ಪ ತನ್ನ ಮೈಯನ್ನು...

 

ಗೌಡಪ್ಪನ ವಾಸನೆ ತಾಳಲಾರದೆ ಶಾನಕ್ಕ, ಪ್ರಸನ್ನ ನಿರ್ಧರಿಸಿದರು...

ಜಗಜಟ್ಟಿಯರ ಒಡಗೂಡಿ ಮಹಾಸ್ನಾನವ ಮಾಡಿಸಿದರು...

 

ಸಿ. ಎಸ್. ಎಲ್. ಸಿ. (CSLC) ಗೆ ಕೆಲವು ಪ್ರಶ್ನೆಗಳು

ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಸಿ.ಎಸ್.ಎಲ್.ಸಿ. ಎಂಬ ವಿಭಾಗದ ಅಡಿಯಲ್ಲಿ ಭಾರತೀಯ ಸಂಸ್ಕೃತಿ ಬಗ್ಗೆ ಪಾಸ್ಚಾತ್ಯ ದೃಷ್ಟಿಯ ಹೊರತಾಗಿ ವಿಭಿನ್ನ ದೃಷ್ಟಿಕೋನದಲ್ಲಿ ಅಧ್ಯಯನ ನಡೆಸುತ್ತಿರುವುದು ನಮ್ಮೆಲ್ಲರ ಅರಿವಿಗೆ ಬಂದಿದೆಯಷ್ಟೆ. ಈ ಪ್ರಯತ್ನವನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಾದುದು, ಅಷ್ಟೇ ಅಲ್ಲ, ಅವರ ಅಧ್ಯಯನದಲ್ಲಿ ನಾವೂ ಪಾಲ್ಗೊಳ್ಳುವುದು (ಅನಧಿಕೃತವಾಗಿ :) ) ಅವಶ್ಯ ಎಂದು ನನ್ನ ಅನಿಸಿಕೆ. ಆ ನಿಟ್ಟಿನಲ್ಲಿ ಈ ಬರಹ.

 

ಸಿ.ಎಸ್.ಎಲ್.ಸಿ. ಯ ಈ ವರೆಗಿನ ಸಂಶೋಧನೆ ನನಗೆ ಅರಿವಾದಂತೆ ಅದರ ಸಾರ ಇಂತಿದೆ :

 

೧. ಭಾರತ ಭಿನ್ನ ಸಂಸ್ಕೃತಿಗಳನ್ನು ಒಳಗೊಂಡೂ ಒಂದು ಸಂಸ್ಕೃತಿ ಇನ್ನೊಂದನ್ನು ಗೌರವಿಸುವ ಮಹಾಸಂಸ್ಕೃತಿ (ಈ ಶಬ್ದ ನಾನೇ ಬಳಸಿರುವುದು) ಹೊಂದಿದ ಸಮಾಜ

ಎರಡು ಸಂಬಾಷಣೆ ಮತ್ತು ನಡುವಿನ ಅಂತರ

ಸಂಬಾಷಣೆ - ೧
ಇಬ್ಬರು ಗೆಳತಿಯರ ನಡುವಿನ ಸಂಬಾಷಣೆ
ಗೆಳತಿ ೧ - "ನನ್ನ ನಿನ್ನೆಯ ಸಂಜೆ ತುಂಬಾ ಮಜವಾಗಿತ್ತು, ನಿನ್ನದು ...?"
ಗೆಳತಿ 2 - "ತುಂಬಾ ನಿರಾಶೆಯ ಸಂಜೆಯಾಗಿತ್ತು,ಆಫೀಸ್ ನಿಂದ ಬಂದ ಗಂಡ ೩ ನಿಮಿಷದಲ್ಲೇ ಊಟ ಮುಗಿಸಿ, ಮುಂದಿನ ೫ ನಿಮಿಷದಲ್ಲೇ ನಿದ್ರೆಗೆ ಶರಣಾಗಿದ್ದರು, ಅದಿರಲಿ ನಿನ್ನ ಬಗ್ಗೆ ಹೇಳು .." 

ರಾಜಕೀಯ ಮಿಸಳಭಾಜಿ

* ಕಾಲುಕುಪ್ಪಸದವರು ಮೇಲೆ ಟೊಪ್ಪಿಗೆಯವರು
  ಬಾಲೆಯರ ಮುಖದ ಕಪಿಗಳು ಶ್ರೀರಂಗವ
  ಆಳಹೋದಾರು ಸರ್ವಜ್ಞ
- ಡೊಳ್ಳುಹೊಟ್ಟೆಯ ಜನರು ಕಳ್ಳಜೇಬಿನ ಖಳರು
   ಸುಳ್ಳುಹೇಳುವ ಮಂದಿ ಆಳಿ ಈ ದೇಶವನು
   ಕೊಳ್ಳೆಹೊಡೆಯುವರು ಸರ್ವಘ್ನ

* ಕೇಳುವವರಿದ್ದರೇ ಹೇಳುವುದು ಬುದ್ಧಿಯನು
  ಕೋಳದಲಿ ಬಿದ್ದು ನರಳುವಗೆ ಬುದ್ಧಿಯನು
  ಹೇಳಿ ಫಲವೇನು ಸರ್ವಜ್ಞ
- ಹೇಳುವುದು ಯಾರು ಈ ನೀಚರಿಗೆ ಬುದ್ಧಿಯನು
   ಕೇಳುವರೆ ಇವರು ಪ್ರಜೆ ಹೇಳ್ವ ಬುದ್ಧಿಯನು
   ಖೂಳರಿವರಯ್ಯ ಸರ್ವಘ್ನ

* ಬೇವಿನ ಬೀಜವ ಬಿತ್ತಿ
  ಬೆಲ್ಲದ ಕಟ್ಟೆಯ ಕಟ್ಟಿ
  ಆಕಳ ಹಾಲನೆರೆದು
  ಜೇನುತುಪ್ಪವ ಹೊಯ್ದಡೆ
  ಸಿಹಿಯಾಗಬಲ್ಲುದೆ,
  ಕಹಿಯಹುದಲ್ಲದೆ?

ಹಲೋ ..ಹಲೋ..

ಮಿಂಚಂಚೆಯಲ್ಲಿ ಬಂದದ್ದು...ಆಂಗ್ಲದಿಂದ ಕನ್ನಡಕ್ಕೆ ಅನುವಾದಿಸಿದ್ದೇನೆ...


 


ಹಲೋ ..ಹಲೋ..

 

ದಯವಿಟ್ಟು ಮಾತಾಡು ನನ್ ಜೊತೆ...ಯಾಕೆ ಫೋನ್ ಎತ್ತಲಿಲ್ಲ...?

 

"ಯಾಕೆ ಏನಾಯ್ತು, ಎಲ್ಲ ಚೆನ್ನಾಗಿದೆ ತಾನೇ?

 

ಏನ್ ಚೆನ್ನಾಗಿರೋದು..ಏನು ಚೆನ್ನಾಗಿಲ್ಲ...ಗಡಿಯಾರ ನೋಡು..ರಾತ್ರಿ ೧೧ ಗಂಟೆ...ಈಗಿನ್ನೂ ಆಫೀಸ್ ಮುಗಿಸಿಕೊಂಡು ಮನೆಗೆ ಹೋಗುತ್ತೀದ್ದೀನಿ..ಇವತ್ತೂ ಊಟ ಇಲ್ಲ.. ಈಗ ಮನೆಗೆ ಹೋಗಿ ನಾನೇ ಅಡಿಗೆ ಮಾಡಿ

ಊಟ ಮಾಡಬೇಕು..ಕಳೆದ ಮೂರು ದಿನದಿಂದ ಬರಿ ನೂಡಲ್ಸ್ ತಿನ್ನುತ್ತಿದ್ದೇನೆ..ನನ್ನ "ಪಿ..ಎಂ." ನನ್ನ ತಿನ್ನುತ್ತಿದ್ದಾನೆ...ಬೆಲೆ ಏರಿಕೆ ನೋಡಿದ್ಯಾ..ನಾಳೆಯಿಂದ ಎಲ್ಲ ೨/- ರೂಪಾಯಿ ಜಾಸ್ತಿ...ನನ್ನ ಸಂಬಳ ಒಂದನ್ನು ಬಿಟ್ಟು..

ನನಗನ್ನಿಸುತ್ತೆ ನಮ್ಮ ಆಫೀಸ್ ನ ಮುಂದಿರುವ ಭಿಕ್ಷುಕ ನನಗಿಂತ ಹೆಚ್ಚಾಗಿ ಸಂಪಾದಿಸುತ್ತಾನೆ ಎಂದು...

 

ಹಿರಿಯ ಸ೦ಪದಿಗ ಕವಿ ನಾಗರಾಜರಿಗೆ ಜನ್ಮದಿನದ ಶುಭಾಶಯಗಳು.

ಈ ದಿನ ನಮ್ಮ ನಲ್ಮೆಯ ಹಿರಿಯ ಸ೦ಪದಿಗ ಕವಿ ನಾಗರಾಜರ ಜನ್ಮದಿನ. ೫೯ ವಸ೦ತಗಳನ್ನು ಪೂರೈಸಿ ೬೦ ನೆಯ ವಸ೦ತಕ್ಕೆ ಕಾಲಿಟ್ಟಿರುವ ಹಿರಿಯ ಚೇತನಕ್ಕೆ ಭಗವ೦ತನು ಆಯುರಾರೋಗ್ಯ ಐಶ್ವರ್ಯಗಳನ್ನು ನೀಡಿ ಹರಸಲೆ೦ದು ಹಾರೈಸುವೆ.  ತಮ್ಮ "ಸೇವಾ ಪುರಾಣ"ದ ಮೂಲಕ ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿದವರು, "ಮೂಢ ಉವಾಚ"ದಲ್ಲಿ ಅತ್ಯುತ್ತಮವಾದ ಮಾತುಗಳನ್ನು ಬರೆದವರ ಬಾಳು ಬ೦ಗಾರವಾಗಲಿ.

ಪಿತೃ ಪಕ್ಷ - ಮಹಾಲಯ ಅಮಾವಾಸ್ಯೆ.

ಇ೦ದು ಮಹಾಲಯ ಅಮಾವಾಸ್ಯೆ, ೧೪ ದಿನಗಳ ಪಿತೃ ಪಕ್ಷದ ಕೊನೆಯ ದಿನ, ನಾಳೆಯಿ೦ದ ನವರಾತ್ರಿ ಆರ೦ಭ.  ಈ ಪಿತೃ ಪಕ್ಷ ಹಿ೦ದೂಗಳ ಮನೆಗಳಲ್ಲಿ ಅಗಲಿದ ಹಿರಿಯರನ್ನು ನೆನೆದು ಅವರ ಆತ್ಮಗಳಿಗೆ ಶಾ೦ತಿ ಸಿಗಲೆ೦ದು ವ೦ದಿಸುವ ಸಡಗರ.  ಬಗೆ ಬಗೆಯ ಭಕ್ಷ್ಯ ಭೋಜನಗಳನ್ನು ಮಾಡಿ, ಹಿರಿಯರ ಹೆಸರಿನಲ್ಲಿ ಎಡೆ ಇಟ್ಟು, ಬ೦ಧು ಬಾ೦ಧವರು, ಸ್ನೇಹಿತರೆಲ್ಲ ಸೇರಿ ನಮಿಸುವ ದಿನ.  ನಮ್ಮ ಗೌಡರ ಮನೆಗಳಲ್ಲಿ ಈ ಹಬ್ಬಕ್ಕೆ ಎಲ್ಲಿಲ್ಲದ ಮಹತ್ವ, ಬಡವರಿ೦ದ ಶ್ರೀಮ೦ತರವರೆಗೂ ಎಲ್ಲರ ಮನೆಯಲ್ಲೂ ಪಿತೃ ಪಕ್ಷದ ಆಚರಣೆ ಸರ್ವೆ ಸಾಮಾನ್ಯ.  ಸಿಹಿ ಅಡುಗೆಯ ಜೊತೆಗೆ ಮಾ೦ಸಾಹಾರಿ ಅಡುಗೆ ಇಲ್ಲಿ ಕಡ್ಡಾಯ!  ಕೆಲವರು ಇನ್ನೂ ಒ೦ದು ಹೆಜ್ಜೆ ಮು೦ದೆ ಹೋಗಿ ಅವರಪ್ಪ, ತಾತ೦ದಿರು ಕುಡಿಯುತ್ತಿದ್ದ ಬ್ರಾ೦ದಿ ವಿಸ್ಕಿಗಳನ್ನು, ಜೊತೆಗೆ ಬೀಡಿ, ಸಿಗರೇಟು, ಬೆ೦ಕಿ ಪೊಟ್ಟಣಗಳನ್ನೂ ಎಡೆಗಿಟ್ಟು ಕೈ ಮುಗ