ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡ ಸಾಹಿತ್ಯ ಸೇವೆಯಲ್ಲಿ ನಿಮ್ಮ ಸಹಾಯ ಬೇಕಾಗಿದೆ..

ನನ್ನ ಸ೦ಪದಿಗ ಮಿತ್ರ ಮಹನೀಯರುಗಳೇ,


ಕೋಟ ಶಿವರಾಮ ಕಾರ೦ತರದು ಕನ್ನಡ ಸಾಹಿತ್ಯದಲ್ಲಿ,ಕಲಾ ರ೦ಗದಲ್ಲಿ ಬಹುದೊಡ್ಡ ಹೆಸರು.ಯಕ್ಷಗಾನವನ್ನು ವಿದೇಶಗಳಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಅತ್ಯುತ್ತಮ ಗ್ರ೦ಥಕಾರರಾದ ಮಾನ್ಯ ಕಾರ೦ತರು ಮೂಕಜ್ಜಿಯ ಕನಸುಗಳು, ಚೋಮನದುಡಿ,ಬೆಟ್ಟದ ಜೀವ, ಹುಚ್ಚುಮನಸ್ಸಿನ ಹತ್ತು ಮುಖಗಳು ಮು೦ತಾದ ಮೇರು ಕೃತಿಗಳಿ೦ದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಿ೦ಚಿ ಮರೆಯಾದವರು.ಜ್ಞಾನಪೀಠ ಪ್ರಶಸ್ತಿ ವಿಜೇತರಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾದವರು.ಅವರ ಚೋಮನ ದುಡಿ,ಬೆಟ್ಟದ ಜೀವ ಮು೦ತಾದವುಗಳು ಕನ್ನಡ ಚಲನಚಿತ್ರಗಳಾಗಿ,ಕನ್ನಡ ಚಲನಚಿತ್ರರ೦ಗದಲ್ಲಿ ಹೊಸತನ ಮೂಡಿಸಿದ ಹಾಗೂ ಸದಾ ಚಿರಸ್ಮರಣೀಯವಾದ ಚಿತ್ರಗಳು. “ಕಡಲ ತೀರದ ಭಾರ್ಗವ“ನೆ೦ದು ಕರೆಯಲ್ಪಡುವ ಕಾರ೦ತರು  ಯಕ್ಷಗಾನ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದವರು. “ಬಾಲವನ“ ಅವರ ಕನಸಿನ ಕೂಸು.

ಅಪೂರ್ವ ಸಂಗಮ..

"ಸಂಪದ" ಈ ಹೆಸರೇ ಎಷ್ಟು ಚೆಂದ ..


ಮನಸಿಗೆ ತರುವುದು ಆನಂದ...


 


ಕಥೆ, ಕವನ, ಹಾಸ್ಯ, ಪ್ರಬಂಧ, ಅನುಭವ, ಚರ್ಚೆಗಳ ಸಂಗಮ..


ಎಲ್ಲ ಬರಹಗಾರರ ಅಪೂರ್ವ ಸಂಗಮ...


 


ಎಲ್ಲರಿಗೂ ಬರೆಯಲು ಅವಕಾಶ ಕೊಟ್ಟಂತ ವೇದಿಕೆ...


ಕನ್ನಡಕ್ಕೋಸ್ಕರ ಮೈದಳೆದು ನಿಂತ ಅದ್ಭುತ ವೇದಿಕೆ..


 


ಮುಕ್ತವಾಗಿ ಬರೆಯಬಹುದು ಎಲ್ಲರು ತಮ್ಮ ಅನಿಸಿಕೆ...


ಕೆಲವೊಮ್ಮೆ ಹೊಗಳಿಕೆ..ಕೆಲವೊಮ್ಮೆ ತೆಗಳಿಕೆ...


 


ಸಂಪದ ಬರಹಗಾರರ ಅಪೂರ್ವ ಮಿಲನ..


ಅದುವೇ "ಸಂಪದ - ಸಮ್ಮಿಲನ "


 


ಹೀಗೆ ಬೆಳೆಯಲಿ "ಸಂಪದ" ದ ಬೆಳವಣಿಗೆ..

ಆ ಬಸ್ ಟಿಕೆಟ್ಟು

’ಅವಳ ಕೈಯಲ್ಲಿ ತಾನು ನೋಡಿದ್ದು ನಿಜವಾಗಿಯೂ ಬಸ್ ಟಿಕೆಟ್ಟಾ? ಅವಳು ನಿಜವಾಗಿಯೂ ಬೆಂಗಳೂರಿಗೆ ಹೋಗುತ್ತಿದ್ದಾಳಾ?’ ಎಂಬ ಪ್ರಶ್ನೆಗಳು ರಾತ್ರಿಯಿಂದ ಇವಳ ಮನಸ್ಸಿನಲ್ಲಿ ತುಯ್ದಾಡುತ್ತಿತ್ತು. ಅಪರಿಚಿತ ವ್ಯಕ್ತಿಯನ್ನು ಅಷ್ಟು ಹೇಗೆ ನಂಬುತ್ತಿ ಎಂದು ಯಾವಾಗಲೋ ಒಮ್ಮೆ ಕೇಳಿದ್ದಕ್ಕೆ, ’ಈವನ್ ಮೊಮ್ ಇಸ್ ಸ್ಟ್ರೇಂಜರ್ ವೆನ್ ವಿ ಬೊರ್ನ್ ರೈಟ್? ಡೋಂಟ್ ಅಡ್ವೈಸ್ ಮಿ, ಐ ನೊ ವ್ಹಾಟ್ ಐ ಅಮ್ ಡೂಯಿಂಗ್’ ಎಂದು ಡೈಲಾಗ್ ಹೊಡೆದು ತನ್ನ ಉಳಿದ ಮಾತುಗಳಿಗೆ ಕತ್ತರಿಯಿಟ್ಟಾಗ ಕೇವಲ ಮುಖವನ್ನೂ ನೋಡದ ಹುಡುಗನ ಪರವಹಿಸಿ ನನ್ನ ಬಳಿ ಹೀಗೆ ಮಾತನಾಡುವುದೇ ಎಂದೆನಿಸಿತ್ತು.

ರಾಜಕೀಯದಿಂದ - ರಾಜಕೀಯಕ್ಕೆ...

ನಾಲ್ಕು ಜನ ಟೀ ಕುಡಿಯುವಾಗ ಏನು ಕೆಲಸ ಇಲ್ಲದೆ ಶುರು ಹಚ್ಚಿಕೊಂಡ ಸಂಭಾಷಣೆ ಎಲ್ಲಿಂದ ಎಲ್ಲಿಗೆ ಯಾವ ಯಾವ ರೂಪ ಪಡೆಯುತ್ತದೆ ಎಂದು ಒಂದು ಸಣ್ಣ ಕಲ್ಪನೆ...


 

ಏನೋ ಮಗಾ..ಸರ್ಕಾರ ಬಿದ್ದೋಗತ್ತಂತೆ ಹೌದಾ?..ಹೇ ಇಲ್ಲ ಮಗಾ...ಇವರದೆಲ್ಲ ಡೌ ಗಳು...ಲಾಸ್ಟ್ ಟೈಮ್ ಹಿಂಗೆ ಅಗಿರ್ಲಿಲ್ವಾ...

ಅದೇ ಗಣಿಧಣಿಗಳು ಬೇರೆ ಹೋಗ್ತಿವಿ ಅಂದಾಗ ಕೊನೆಗೆ ಸುಷ್ಮಕ್ಕ ಬಂದು ರಾಜಿ ಮಾಡಿಸ್ಲಿಲ್ವ..ಇದು ಅಷ್ಟೇನೆ...ನೆನ್ನೆ ಅದ್ಯಾವನೋ ಆಚಾರ್ಯ ಅಂತಲ್ಲ

ಅವ್ನು ಬಿಟ್ಟು ಹೋಗ್ತೀನಿ ಅಂದಿದ್ದವ್ನು ಇವತ್ತು ನೋಡು ಆಗಲೇ ಇವರೇ ನಮ್ಮ ಮು.ಮಂ.ಗಳು ಅಂತಾನೆ...ಬರೀ ನಾಟಕ...

ನಾಟಕನಾ ಮಗಾ ಕೃಷ್ಣ ಸಂಧಾನ ನಾಟಕ ನೋಡಿದೆ ಮಗಾ ನೆನ್ನೆ ನಕ್ಕು ನಕ್ಕು ಸಾಕಾಗೋಯ್ತು...ಅದ್ರಲ್ಲಿ ಹಳ್ಳಿಯವರು ನಾಟಕ

ಮಾಡ್ತಾರೆ ಏನ್ ಮಜಾ ಗೊತ್ತ...ಅವ್ರ ಡೈಲಾಗ್ ಗಳಂತೂ ಸೂಪರ್...ಅದ್ರಲ್ ನೋಡ್ಬೇಕು ಮಗಾ ದುರ್ಯೋಧನ ಪಾರ್ಟು ಊರ್ ಗೌಡ ಹಾಕಿರ್ತಾನೆ..,

ಒಲವಿನ ಆಮಂತ್ರಣ

ಆತ್ಮೀಯ,

 

ನನ್ನ ಮದುವೆಯ ಮಂಗಳ ಕಾರ್ಯವು ಬರುವ ನವೆಂಬರ್ ತಿಂಗಳಿನ ೧೧ನೇ ತಾರೀಖು ಬೆಂಗಳೂರಿನ ಬಸವನ ಗುಡಿಯಲ್ಲಿರುವ ಬುಲ್ ಟೆಂಪಲ್ ರಸ್ತೆಯ "ಶ್ರೀ ಗುರುನರಸಿಂಹ ಕಲ್ಯಾಣಮಂದಿರ" ದಲ್ಲಿ ನೆರವೇರಲಿದೆ.  ಈ ಮಂಗಳಕಾರ್ಯಕ್ಕೆ ತಾವು ತಮ್ಮ ಕುಟುಂಬ ಹಾಗು ಮಿತ್ರರೊಂದಿಗೆ ಬಂದು ಯಥೋಚಿತ ಸತ್ಕಾರ ಸ್ವೀಕರಿಸಿ ವಧು-ವರ ರಿಗೆ ಹಾರೈಸಬೇಕಾಗಿ ಕೋರಿಕೆ.

 


ಭಾವಾಂತರಂಗದ ಅಲೆಗಳ ನಡುವೆ


ಬಾಳಿನ ಪಯಣದಿ ಒಂಟಿ ಸಾಗುತ್ತಿದ್ದೆ


ಮನದ ಭಾವನಗಳನರಿತು ಜೊತೆಗೂಡಿ


ನಡೆಯಲು "ಪ್ರಭಾ" ಎನ್ನೊಡನೆ ಬರಲಿದ್ದಾಳೆ


ಗುರು ಹಿರಿಯರ ಆಶೀರ್ವಾದದೊಂದಿಗೆ


ಮಂಗಳಕಾರ್ಯ ನೆರವೇರಲಿದೆ

ಮಗುವನ್ನೂ ಮೀರಿಸಿದ ಮುಗ್ದತೆ

ಒಂದು ಮಗುವನ್ನು ಹೊಂದಿದ ಒಂದು ಕುಟುಂಬ ಇತ್ತು,ಅಂದು ತಾಯಿ ಆ ೩ ವರುಷದ ಮಗುವನ್ನು ತಂದೆಯ ಜವಾಬ್ದಾರಿಯಲ್ಲಿ ಬಿಟ್ಟು ತನ್ನ ಕೆಲಸಕ್ಕೆಂದು ಹೊರಹೊಗಿದ್ದಳು.ತಂದೆ ಸಂಜೆಯ ಸಮಾಚಾರ ನೋಡುತ್ತಾ ಹೊರ ಕೋಣೆಯಲ್ಲಿ ಕೂತಿರಲು, ಒಳಗೆ ಮಗುವು ತನ್ನ ಜನುಮದಿನದಂದು ಯಾರೋ ಉಡುಗೊರೆ ನೀಡಿದ ಅಡುಗೆಮನೆ ಪರಿಕರದ ಆಟಿಕೆಯೊಂದಿಗೆ ಆಡುತ್ತಿತ್ತು.
ಸಲ್ಪ ಸಮಯದಲ್ಲಿ ಮಗು ಒಂದು ಟೀ ಕಪ್ ನಲ್ಲಿ ತಾನು ಮಾಡಿರುವ ಟೀ ಕುಡಿಯಿರಿ ಎಂದು ತಂದೆಗೆ ಹೇಳಿದಾಗ, ಆ ತಂದೆ ತಂದ ನೀರನ್ನೇ ಟೀ ಎಂದು ಕುಡಿದರು, ಹೀಗೆ ಪ್ರತಿ ೨ ನಿಮಿಷಕ್ಕೊಮ್ಮೆ ಮಗು ತಂದೆಗೆ ಟೀ ಮಾಡಿ ತಂದು ಕೊಡುತ್ತಿದ್ದರೆ ತಂದೆ ಒಂದರ ಹಿಂದೆ ಒಂದರಂತೆ ಕಪ್ ಖಾಲಿ ಮಾಡುತ್ತಾ ಮಗುವನ್ನು ಹೊಗಳುತ್ತಿದ್ದರು, ಮಗುವಿಗೂ ತಾನು ಏನೋ ಸಾಧನೆ ಮಾಡಿದ್ದೇನೆ ಎಂಬ ಭಾವನೆ.

ಎಂತಾ ದೇಶಾನ್ರಿ ನಮ್ದು

ಎಂತಾ ದೇಶಾನ್ರಿ ನಮ್ದು


ಹಳ್ಳಿನಾಗೆ ಅಡ್ನಾಡಿ ದನಗಳ್ನ ಹಿಡಿದು


ದೊಡ್ಡಿನಾಗೆ ತುಂಬಿದಂಗೆ


CWG ವಿಲೇಜ್ ದಾಗೆ ಹಾವ್ಗಳ್ನ  ಹಿಡ್ದಾಕ್ಡಂಗೆ


ಕಾಲಿಗೆ ಕಚ್ತು ಅಂತ


ಕಾರ್ಪೋರೇಶನ್ ಮಂದಿ ನಾಯಿ ಹಿಡ್ದು


ವ್ಯಾನೀಗೆ ತುಂಬಿದಂಗೆ


ಅಸೆಂಬ್ಲಿನಾಗೆ ಒಂದು ಕಂಬ ಅಲ್ಲಡಿದ್ರು ಸಾಕು


ನಮ್ಮ ನಾಯಕ್ರೆನ್ನಲ್ಲ ಹಿಡಿದು


ರೆಸಾರ್ಟ್ಗೆ ಹಾಕ್ತಾರಲ್ಲ ಶಿವ


ಎಂಥಾ ದೇಶಾನ್ರಿ ನಮ್ದು


 


 

ತಲೆ ಹರಟೆ ಶ್ಯಾಮ್ ರಾಯರು....

ಏನ್ರೀ ಕಾಣುತ್ತಾ ಇಲ್ಲ ಎಂದರು. ಹೊಸದಾಗಿ ಎದಿರು ಮನೆಗೆ ಬಂದಿರುವ ಶ್ಯಾಮ್ ರಾಯರು. ನಾನು ಘಾಬರಿ!!, ಆನೆ ಹಾಗೆ ಇರುವ ನಾನೇ ಕಾಣುವಾದಿಲ್ಲವಾ? ಎಂದು. ನನಗೆ ಆಶ್ಚರ್ಯ,ಮತ್ತೆ ಹೇಗೆ ಕಂಡು ಹಿಡಿದರು ನಾನೇ ಎಂದು. ನನಗೆ ಹೇಳಿದರಾ ಅಥವಾ ಬೇರೆ ಮತ್ಯಾರಿಗೋ ಎಂದು ಹಿಂದೆ ನೋಡಿದೆ. ಯಾರು ಇಲ್ಲ. ನಾನೇ ಎಂದು ಖಾತರಿ ಆದ ಮೇಲೆ, ಏನು ಕಾಣಬೇಕಿತ್ತು ರಾಯರೆ ಎಂದೆ. ತುಂಬಾ ತಲೆ ತಿನ್ನೋ ಮನುಷ್ಯ. ಇದೆ ಡೈಲಾಗ್ ಏನಾದರೂ ನನ್ನ ಗೆಳೆಯರ ಸಂಗಡ ಆಗಿದ್ದರೆ, ಸಕ್ಕತ್ ತಮಾಷೆ ಆಗಿರೋದು. ಒಂದು ತರಹ ಕಾಶೀನಾಥ ಫಿಲ್ಮ್ ಡೈಲಾಗ್ ತರಹ. ಬೇಕಾದರೆ ಇನ್ನೊಮ್ಮೆ ಮೊದಲಿನಿಂದ ಓದಿ ನೋಡಿ.

ಮದುವೆ ಆಗಿಲ್ಲ. ಅದಕ್ಕೆ ಇರಬೇಕು ಅಷ್ಟು ಫ್ರೀ ಆಗಿ ಇರುತ್ತಾರೆ. ಯಾರಾದರೂ ಹರಟೆಗೆ ಸಿಕ್ಕರೆ ಸಾಕು ಎನ್ನುವಂತ ಪ್ರಾಣಿ. ಆದರೆ ಹೇಳುವದು ಕೂಡ ಪೂರ್ತಿ ಇರಲ್ಲ. ನಾನು ಸ್ವಲ್ಪ ಫ್ರೀ ಇದ್ದೇ. ಏಕೆಂದರೆ ಮಡದಿ ತವರು ಮನೆಗೆ ಹೋಗಿದ್ದಳು.

ನಿಮಗೆ ನಮ್ಮ ಅಳಿಯ ರೋಹಿತ್ ಗೊತ್ತಾ? ಎಂದರು.
ಇಲ್ಲ ಎಂದೆ.
ಏನು ಡೆಲಿವರೀ ಮಾಡುತ್ತಾನೆ ಗೊತ್ತಾ? ಎಂದರು.
ಓ ಹೇರಿಗೆ ಡಾಕ್ಟರ್ರಾ? ಎಂದೆ.

ವಿಮಾನ ದುರಂತ

ಮಿಂಚಂಚೆಯಲ್ಲಿ ಬಂದ ಆಂಗ್ಲ ಲೇಖನ...ಅನುವಾದಿಸಿದ್ದೇನೆ...

 

ನಾನು ವಿಮಾನದಲ್ಲಿದ್ದೆ...ಕೆಲಸದ ಮೇಲೆ ಮತ್ತೊಮ್ಮೆ ವಿದೇಶಕ್ಕೆ ಹೊರಡುತ್ತಿದ್ದೆ..ಬಹಳ ಖುಶಿಯಲ್ಲಿದ್ದೆ.. ಕಿಟಕಿಯ ಆಚೆ ಮುಸ್ಸಂಜೆಯ ಸವಿಯನ್ನು ಸವಿಯುತ್ತಿದ್ದೆ...

ಸ್ವರ್ಗದಲ್ಲಿದ್ದಂತೆ ಭಾಸವಾಗುತ್ತಿತ್ತು..ನನ್ನನ್ನು ನಾನು ಮೈ ಮರೆತಿತಿದ್ದೆ ಆ ಸೌಂದರ್ಯದಲ್ಲಿ.. ಅಷ್ಟರಲ್ಲಿ ಒಂದು ದನಿ ನನ್ನನ್ನು ವಾಸ್ತವಕ್ಕೆ ಕರೆದುಕೊಂಡು ಬಂತು...

 

" ಸರ್, ತಿನ್ನಲು ಅಥವಾ ಕುಡಿಯಲು ಏನಾದರು ತೆಗೆದುಕೊಳ್ಳುವಿರ? "

 

ನಾನು ತಿರುಗಿ ನೋಡಿದೆ, ಆಶ್ಚರ್ಯ ಚಕಿತನಾದೆ ನನ್ನ ಕಾಲೇಜ್ ಸಹಪಾಟಿಯನ್ನು ಕಂಡು..ಸುಂದರವಾದ "ಸಾಕ್ಷಿ".

 

"ಹೇ ಸಾಕ್ಷಿ, ನೀನೇನಾ, ಅದು ನೀನು,,ಇಷ್ಟು ಸುಂದರವಾಗಿ ಈ ಗಗನ ಸಖಿಯ ಪೋಷಾಕಿನಲ್ಲಿ.."

 

ಸಾವಿರ ಸಾಲುಗಳು

ಸಾವಿರ ಸಾಲುಗಳಲ್ಲಿ ಸರಿಯಾದ ಪದಗಳಿಲ್ಲ
ಸಾಕಾಗಿ ಹೋಗಿದೆ ಮಲ್ಲಿ ಪದಪುಂಜ ಹುಡುಕೊದ್ರಲ್ಲಿ


ಸಾಲು ಸಾಲಗಿ ಬಂದು
ಪದಗಳು ಸೋತಿವೆ
ಬಣ್ನಿಸಲಾಗದೆ ನಿನ್ನ
ಬೆರಗಾಗಿ ಕುಳಿತಿವೆ


ಬಣ್ನಿಸಲು ಬಾರದಾಗಿ
ಪದಗಳೆಲ್ಲ ಬರಿದಾಗಿ
ನೆನಪುಗಳೇಲ್ಲ ಮನದಲ್ಲಿ
ನೆನಪಾಗಿಯೇ ಉಳಿದಿವೆ


ಸಾವಿರ ಸಾಲುಗಳಲ್ಲಿ ಸರಿಯಾದ ಪದಗಳಿಲ್ಲ
ಸಾಕಾಗಿ ಹೋಗಿದೆ ಮಲ್ಲಿ ಪದಪುಂಜ ಹುಡುಕೊದ್ರಲ್ಲಿ


ನೆನಪಲಿ ಬರೆದ
ನನ್ನೀ ಕಲರವ
ಪದಗಳು ಸಿಗದ
ಕೊನೆಯ ಪದ್ಯವ