ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಗೀತದಲ್ಲಿ `ರಾಮನ್ ಪರಿಣಾಮ'

ರೈಧುನ್ನಲ್ಲಿ ಮಧುರವಾದ ವೀಣೆಯ ನಾದ ತೇಲಿ ಬರುತ್ತಿತ್ತು. ಕಲ್ಯಾಣಿ ರಾಗದ ಆಲಾಪನೆ ಮನಮೋಹಕವಾಗಿ ನನ್ನ ಕಿವಿಗಳಿಗೆ ಜೇನನ್ನು ಸುರಿಸುತ್ತಿತ್ತು. ಪಿಚ್ಚುಮಣಿ ಅಯ್ಯರ್ ವೀಣೆ ಕೇಳುತ್ತಲೇ ನನ್ನ ವೀಣೆಯ ಕಡೆ ಒಮ್ಮೆ ಕಣ್ಣು ಹಾಯಿಸಿದೆ. ಈಗ್ಗೆ ಒಂದು 15 ವರ್ಷಗಳ ಕೆಳಗೆಲ್ಲಾ ಆಸೆಯಿಂದ ನುಡಿಸುತ್ತಿದ್ದ ವೀಣೆ ಮುಸುಕು ಹಾಕಿ ನಿಶ್ಚಲವಾಗಿ ಕೂತಿತ್ತು. ಸ್ಕೂಲ್ ಕೆಲಸಗಳ ನಡುವೆ ಬಿಡುವು ಆಗದೇ ನುಡಿಸುವುದೇ ಬಿಟ್ಟು ಹೋಗಿತ್ತು. ಈಗ ನುಡಿಸಲು ಹೋದರೆ ಒಂದು ಗೀತೆ ಕೂಡ ನುಡಿಸಲು ಸಾಧ್ಯವಾಗುತ್ತದೋ ಇಲ್ಲವೋ ಎಂಬ ಅನುಮಾನ ಬಂತು. ಪರೀಕ್ಷಿಸಿಕೊಳ್ಳಲು ಧೈರ್ಯವಾಗದೇ ಸುಮ್ಮನೆ ಕುಳಿತೆ. ವೀಣೆಯನ್ನು ನೋಡುತ್ತಾ ಕುಳಿತಿದ್ದಾಗ ಪಿಚ್ಚುಮಣಿ ಅಯ್ಯರ್ ಅವರು ತಾರ ಸ್ಥಾಯಿಯಲ್ಲಿ ಆಲಾಪನೆ ಮಾಡುತ್ತಿದ್ದರು. ತಾರಸ್ಥಾಯಿಗೆ ಹೋದ ಹಾಗೂ ನಮ್ಮ ಎರಡು ಕೈಗಳ ನಡುವಿನ ಅಂತರ ಕಡಿಮೆ ಆಗುವುದನ್ನೂ ಕೆಳಗಿನ ಸ್ಥಾಯಿಗೆ ಬರುವಾಗ ಅಂತರ ಹೆಚ್ಚುವುದನ್ನೂ ನೆನೆಯುತ್ತಾ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರ ನೆನಪಾಯಿತು. ಅವರೇ ತಾನೆ ಸಂಗೀತ ವಾದ್ಯಗಳಲ್ಲಿ ಉಂಟಾಗುವ ನಾದದ ಬಗ್ಗೆ ಪ್ರಯೋಗಗಳನ್ನು ನಡೆಸಿ ಸಂಗೀತದಲ್ಲಿ ವಿಜ್ಞಾನವನ್ನು ನುಸುಳಿಸಿದವರು! ಅವರು ತಮ್ಮ ಗಮನವನ್ನು ಮೊದಲು ಕೇಂದ್ರೀಕರಿಸಿದ್ದು ಪಿಟಿಲಿನ ಕಡೆಗೆ. ಅವರ ಗಮನ ಹೀಗೆ ಕಂಪನ ತರಂಗಗಳ ಮತ್ತು ಧ್ವನಿ ವಿಜ್ಞಾನದ ಕಡೆ ತಿರುಗಲು ಎರಡು ಕಾರಣಗಳು. ಮೊದಲನೆಯದು ಅವರ ಚಿಕ್ಕ ವಯಸ್ಸಿನಲ್ಲೇ ಜೆರ್ಮನ್ ವಿಜ್ಞಾನಿ ಹೆಲ್ಮ್ಹೋಲ್ಟ್ಸ್ (Scientist Helmholtz) ಅವರು ಧ್ವನಿ ವಿಜ್ಞಾನದಲ್ಲಿ (acoustics) ಮಾಡಿದ ಪ್ರಯೋಗಗಳ ಬಗ್ಗೆ ಓದಿದ್ದು. ಮತ್ತೊಂದು ಅವರ ತಂದೆ ಶ್ರೀಯುತ ಚಂದ್ರಶೇಖರ ಅಯ್ಯರ್ ಅವರು ಅತ್ಯದ್ಭುತವಾಗಿ ವಯೋಲಿನ್ ನುಡಿಸುತ್ತಿದ್ದುದು.

ಓದಿದ್ದು ಕೇಳಿದ್ದು ನೋಡಿದ್ದು-25

ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಲಭ ಗಳಿಸುವ ಹತ್ತು ವಿಧಾನಗಳು ಗೊತ್ತೇ?

------------------------------------------------------

ht

-----------------------------------------------------

ನಾಳೆ ಹಬ್ಬ!

ನನಗೂ ಮರೆತು "ನಾಳೆ ಹಬ್ಬ ಅಲ್ವ?" ಅಂತ ಮಾತ್ರ ಹೇಳಿದೆ, ಪರಿಚಯದವರೊಬ್ಬರೊಂದಿಗೆ ಫೋನಿನಲ್ಲಿ ಮಾತನಾಡುವಾಗ. "ನಾಳೆ ಯಾವ ಹಬ್ಬಾರಿ?" ಎಂದು ಒಂದು ಕ್ಷಣ ತಲೆಕೆಡಿಸಿಕೊಂಡರು "ನಾಳೆ ಯಾವುದೂ ಇದ್ದ ಹಾಗಿಲ್ವಲ್ಲ?"

ಮಗನ ಪಕ್ಕದಿಂದ ಗುಂಡಿನ ಮಳೆಯತ್ತ

ಆ ಸುದ್ದಿ ಬಂದಾಗ, ದೆಹಲಿಯ ವಿಶೇಷ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಡೆಂಗೆ ಜ್ವರದಿಂದ ಬಳಲುತ್ತಿದ್ದ ತಮ್ಮ ೧೦ ವರ್ಷದ ಮಗನ ಪಕ್ಕದಲ್ಲಿದ್ದರು. ದೆಹಲಿಯ ಜಾಮಿಯಾನಗರದ ಸ್ಥಳದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಸುದ್ದಿ ತಿಳಿಯುತ್ತಲೇ ಎದ್ದವರೇ ಸೀದಾ ಕಾರ್ಯಾಚರಣೆಗೆ ತೆರಳಿದರು. ಸತತ ೭೫ ಯಶಸ್ವಿ ಕಾರ್ಯಾಚರಣೆ ನಡೆಸಿ ೩೫ಕ್ಕೂ ಹೆಚ್ಚು ಉಗ್ರರನ್ನು ಕೊಂದ ಟಫ್ ಪೊಲೀಸ್ ಅಧಿಕಾರಿ ಅವರು.

ಆದರೆ, ೭೬ನೇ ಕಾರ್ಯಾಚರಣೆಯ ಯಶಸ್ಸನ್ನು ಕಾಣಲು ಅವರೇ ಉಳಿಯಲಿಲ್ಲ. ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ, ನಾಲ್ಕು ಗುಂಡುಗಳು ಅವರ ದೇಹ ಹೊಕ್ಕವು. ವಿಪರೀತ ರಕ್ತಸ್ರಾವವಾಗುತ್ತಿದ್ದ ಶರ್ಮಾ ಅವರನ್ನು ತಕ್ಷಣ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಪರೇಶನ್ ಟೇಬಲ್ ಮೇಲೆಯೇ ಅವರು ಜೀವ ಬಿಟ್ಟರು. ನಾಡಿನ ರಕ್ಷಣೆಗಾಗಿ ಹೋರಾಡುತ್ತ ಹೋರಾಡುತ್ತ ಮತ್ತೊಂದು ಜೀವ ಹುತಾತ್ಮವಾಯಿತು.

ನಾಳೆ ನಮ್ಮೂರಲ್ಲಿ ನಿಜಕ್ಕೂ ನೀವೇ ದೇವರು!

ನಮ್ಮ ಕಷ್ಟ ಹೇಳಿಕೊಳ್ಳುವುದಕೆ ಯಾವ ದೇವರಾದರೇನು?
ನಮ್ಮ ಹೊಟ್ಟೆ ತುಂಬಿಸುವಾತ ಯಾವ ಮತದವನಾದರೇನು?

ಅಂಗಡಿಗೆ ಬರುವ ಗಿರಾಕಿಗಳ ಜಾತಿ ಕೇಳುವವರುಂಟೇನು?
ನಮ್ಮ ಸಂಪಾದನೆಯ ಹಣಕ್ಕೆ ಯಾವುದೇ ಜಾತಿ ಉಂಟೇನು?

ಇಲ್ಲಿ ಹುಟ್ಟಿ ದೇವರು ಎನಿಸಿಕೊಂಡವರ, ಪೂಜಿಸುವವರೇ ಎಲ್ಲ,
ಆದರೆ ಅವರಾಡಿ ಹೋದ ಮಾತನಿಂದು ನೆನೆಸುವವರೇ ಇಲ್ಲ;