ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?
ನಾವೇಕೆ ಹೀಗೆ?
- Read more about ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?
- Log in or register to post comments
ನಾವೇಕೆ ಹೀಗೆ?
ನಾವೇಕೆ ಹೀಗೆ?
ಗುಡ್ಡ ಸುತ್ತಿ ಮೈಲಾರಕ್ಕೆ ಹೋದಹಾಗೆ? ಯಾವುದೇ ವಿಷಯವಿರಲಿ, ಆ ಪರಿಸ್ಥಿತಿಯ ಆಳ, ಅಗಲ, ವ್ಯಾಪ್ತಿ ಮತ್ತು ಪರಿಣಾಮಗಳನ್ನು ಗಮನಿಸದೇ ಸಾರ್ವತ್ರಿಕವಾಗಿ ಹೇರ ಹೋಗುವುದು?
ಹೋಗಲಿ. ಅದು ವ್ಯಕ್ತಿ, ಸಮುದಾಯ ಅಥವಾ ಪ್ರಾದೇಶಿಕ ಹಂತದಲ್ಲಿ ಪರಿಹಾರ ಕಂಡುಕೊಳ್ಳಬಲ್ಲ ಸಮಸ್ಯೆಯಾಗಿದ್ದರೆ ಅಡ್ಡಿ ಇಲ್ಲ.
ಆತ ಸಣ್ಣ ಕಾರ್ಖಾನೆಯೊಂದರಲ್ಲಿ ಕೆಲಸದಲ್ಲಿದ್ದ. ಮಹಾ ಜಿಪುಣ. ಪೈಸೆಗೆ ಪೈಸೆ ಲೆಕ್ಕ ಹಾಕಿದ. ಆದರೆ ಕೆಲಸದ ಸಮಯದಲ್ಲಿ ಕಾಫಿ, ತಿಂಡಿಗೆಂದು ಹಣ ಖರ್ಚು ಮಾಡುತ್ತಿದ್ದ. ಒಮ್ಮೆ ಅವನ ಆಪ್ತ ಗೆಳೆಯ ಸಲಹೆ ಮಾಡಿದ- "ಕೆಲಸದ ವೇಳೆ ಹೊರಗಿನ ಕಾಫಿ, ತಿಂಡಿ ತಿನ್ನುವುದಕ್ಕಿಂತ ಮನೆಯಿಂದಲೇ ಬುತ್ತಿ ತಂದರೆ ಉಳಿತಾಯವಾಲ್ಲವೇ?". ಆತನಿಗೆ ಹೌದು ಎಂದೆನಿಸಿತು.
ವೆಂಕಟರಮಣ ಸ್ವಾಮಿ ದೇವಸ್ಥಾನದ ಹೊರಭಾಗದಲ್ಲಿ ಹೂ ಮಾರುವ ಕಾಯಕ ಹೊತ್ತ ಹೂಗಾರನನ್ನು ನೋಡಿದಾಗಲೆಲ್ಲಾ ನನ್ನಲ್ಲಿ ಒಂದು ಕುತೂಹಲ ಮನೆ ಮಾಡುತಿತ್ತು. ಕಾರಣ ಆತನ ಕೈಯಲ್ಲಿ ಸದಾ ಯಾವುದಾದರೊಂದು ಕನ್ನಡ ಪುಸ್ತಕವಿರುತ್ತಿತ್ತು, ಬೆಳಗ್ಗೆ ೬ ರಿಂದ ರಾತ್ರಿ ೧೦ ವರೆಗೆ ಆತ ಅಲ್ಲಿರುತ್ತಿದ್ದ, ಆತನಿಲ್ಲದ ಸಮಯದಲ್ಲಿ ಆತನ ಅಮ್ಮ ಅಲ್ಲಿರುತ್ತಿದ್ದಳು.
ವೆಂಕಟರಮಣ ಸ್ವಾಮಿ ದೇವಸ್ಥಾನದ ಹೊರಭಾಗದಲ್ಲಿ ಹೂ ಮಾರುವ ಕಾಯಕ ಹೊತ್ತ ಹೂಗಾರನನ್ನು ನೋಡಿದಾಗಲೆಲ್ಲಾ ನನ್ನಲ್ಲಿ ಒಂದು ಕುತೂಹಲ ಮನೆ ಮಾಡುತಿತ್ತು. ಕಾರಣ ಆತನ ಕೈಯಲ್ಲಿ ಸದಾ ಯಾವುದಾದರೊಂದು ಕನ್ನಡ ಪುಸ್ತಕವಿರುತ್ತಿತ್ತು, ಬೆಳಗ್ಗೆ ೬ ರಿಂದ ರಾತ್ರಿ ೧೦ ವರೆಗೆ ಆತ ಅಲ್ಲಿರುತ್ತಿದ್ದ, ಆತನಿಲ್ಲದ ಸಮಯದಲ್ಲಿ ಆತನ ಅಮ್ಮ ಅಲ್ಲಿರುತ್ತಿದ್ದಳು.
ನಾವು ಹಳ್ಳಿಗೆ ರಜೆಯಲ್ಲಿ ಹೋದಾಗ ಈ ವೆಂಕಟರಮಣ ದೇವಸ್ಥಾನಕ್ಕೆ ಹೋಗುತ್ತಿದ್ದೆವು ರಜೆ ಇದ್ದಷ್ಟು ದಿನ, ದಿನಾ ಹೋಗಿ ಬರುವುದು ಪ್ರತೀತಿ. ಆಗ ನಾವು ಚಿಕ್ಕವರು ಆತ ಅಲ್ಲಿ ಹೂಮಾರುತ್ತಾ ಓದುತ್ತಾ ಕುಳಿತಿರುತ್ತಿದ್ದ. ತನ್ನ ಶಾಲಾ ಜೀವನ ಮುಗಿಸಿ ಹೂಗಾರನಾಗಿ ತನ್ನ ಕಾರ್ಯವನ್ನು ಆರಂಭಿಸಿ ಬಿಟ್ಟಿದ್ದ, ಅಮ್ಮನೊಂದಿಗೆ ದೇವಸ್ಥಾನಕ್ಕೆ ಹೋದಾಗ ಅಮ್ಮನ ಸೆರಗಿನಿಂದೆ ಅಡಗಿನಿಂತು, ಆತ ಮುಗುಚಿಟ್ಟಿ ಪುಸ್ತಕಗಳ ಹೆಸರು ಓದುವುದು. ಆದರೆ ಅದನ್ನು ಕೂಡಿಸಿ ಓದುವಷ್ಟರಲ್ಲಿ ಅಮ್ಮ ಹೂ ಕೊಂಡು ಹೊರಟು ಬಿಡುತ್ತಿದ್ದಳು. ಆತ ಮುಗುಳು ನಗುತ್ತಾ "ಏನ್ ಪುಟ್ಟಿ ಅನ್ನುತ್ತಿದ್ದ ?"
ನಾನೋ ಪೆದ್ದು ಪೆದ್ದು ನಗೆ ಬೀರಿ, ಪುಸ್ತಕ ಯಾವುದೆಂದು ಕೇಳಲು ಭಯ, ಪುಸ್ತಕದತ್ತ ಕೈ ತೋರಿದರೆ ಅದಾ ಎಂದು ಅದರ ಹೆಸರೇನೋ ಹೇಳುತಿದ್ದ, ಆಗ ಅದು ಅರ್ಥವಾಗದ ವಯಸ್ಸು ಬಿಡಿ. ನನ್ನ ಅರಿವಿಗೆ ಬಂದಂತೆ ಅದು ಹಳಗನ್ನಡ ಅದಕ್ಕೇ ನನಗೆ ಅದನ್ನು ಸೇರಿಸಿ ಓದಲು ಕಷ್ಟವಾಗುತ್ತಿತ್ತು.
ಕನ್ನಡ ದನಿಗಳ ಅಱಿವಿನ ಬಗ್ಗೆ ಬರೆಯುತ್ತಿದ್ದೇನೆ.
ಉಸಿರುಲಿಗಳು(ಸರಗಳು=ಸ್ವರಗಳು):
ಅ ಆ (ಕೊರಲು(ಳು)ಲಿ).
ಇ ಈ (ಅಂಗುೞುಲಿ).
ಉ ಊ (ತುಟಿಯುಲಿ).
(ಋ, ೠ) (ನೆತ್ತಿಯುಲಿ)
ಎ ಏ ಐ (ಕೊರಲಂಗುೞುಲಿ).
ಒ ಓ ಔ (ಕೊರಲ್ದುಟಿಯುಲಿ).
ತಡೆಯುಲಿಗಳು(ಬೆಂಜನಗಳು):
ಕ (ಖ) ಗ (ಘ) ಙ (ಕೊರಲುಲಿಗಳು) ನನ್ನ ಪ್ರಕಾರ ಮೆದುವಂಗುೞುಲಿ .
ಇತ್ತೀಚಿನ ದಿನಗಳಲ್ಲಿ Reality Show ಗಳು ಪ್ರತಿಯೊಂದು ಚಾನೆಲ್ ಗಳನ್ನೂ ಆಕ್ರಮಿಸಿಕೊಂಡಿವೆ. ನನಗೆ ನೆನಪಿರುವ ಹಾಗೆ " ಮೇರಿ ಆವಾಜ್ ಸುನೋ " ನಾನು ನೋಡಿದ ಮೊದಲ Reality Show [Though it was not called Reality show at that time]. ಹದಿನೈದು ವರ್ಷಗಳ ಹಿಂದೆ ದೂರದರ್ಶನದಲ್ಲಿ ಅ ಕಾರ್ಯಕ್ರಮ ಪ್ರಸಾರವಾಗಿತ್ತು.
ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈತ ನಿರಕ್ಷರಸ್ಥ. ಆದರೆ, ಹದಿನಾರು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾನೆ.
ಬಾಗಲಕೋಟೆ ಜಿಲ್ಲೆ ಬೀಳಗಿಯ ಸಿದ್ದಪ್ಪ ಸಾಬಣ್ಣ ಬಿದರಿ ಎಂಬ ನಿರಕ್ಷರ ಆಶುಕವಿಯ ಸಾಹಸಗಾಥೆಯಿದು. ದೊಡ್ಡ ಕುಟುಂಬದಲ್ಲಿ ಜನಿಸಿ, ಬಡತನದಿಂದಾಗಿ ಬಾಲ್ಯದಿಂದಲೇ ಕೃಷಿಯಲ್ಲಿ ತೊಡಗಿದ ಸಿದ್ದಪ್ಪನಿಗೆ ಓದುವ ಭಾಗ್ಯ ದೊರೆಯಲಿಲ್ಲ.
ಆದರೇನಂತೆ, ಕಾವ್ಯ ಸರಸ್ವತಿ ಒಲಿದಿದ್ದಳು. ಚಿಕ್ಕಂದಿನಿಂದಲೇ ಪದ್ಯದ ಗೀಳು. ಸುತ್ತಲಿನ ಪರಿಸರವೇ ಕವಿತೆಯ ವಸ್ತುಗಳಾದವು. ಅವನ್ನೇ ಪ್ರಾಸಬದ್ಧವಾಗಿ, ಜಾನಪದ ಶೈಲಿಯಲ್ಲಿ ಜೋಡಿಸಿ ಹಾಡುತ್ತಿದ್ದ ಸಿದ್ದಪ್ಪ ಸುತ್ತಲಿನ ಜನರನ್ನು ಆಕರ್ಷಿಸಿದ. ಚೆನ್ನಾಗಿವೆ ಎಂದು ಅನ್ನಿಸಿದ ಕವಿತೆಗಳನ್ನು ಊರಿನ ಕೆಲವು ಅಕ್ಷರಸ್ಥರು ಆತನಿಗೆ ಬರೆದು ಕೊಟ್ಟರು. ಅವನ್ನೇ ನೋಟ್ಬುಕ್ನಲ್ಲಿ ಇಟ್ಟುಕೊಂಡು ಹರ್ಷಪಡುತ್ತ ದಿನಗಳೆದ ಸಿದ್ದಪ್ಪ.
ಕ್ರಮೇಣ ನೋಟ್ಬುಕ್ಗಳ ಸಂಖ್ಯೆ ಬೆಳೆಯಿತು. ಆಗ ಯಾರೋ ಒಬ್ಬರು, ’ಒಂದು ಕವಿತಾ ಸಂಕಲನ ಪ್ರಕಟಿಸಬಹುದಲ್ಲ?’ ಎಂದು ಸೂಚಿಸಿದರು. ಅಕ್ಷರವೇ ಬಾರದ ತಾನು ಏನಂತ ಪ್ರಕಟಿಸಬೇಕು ಎಂದು ಅನ್ನಿಸಿದರೂ, ಹಿತೈಷಿಗಳು ಒತ್ತಾಯಿಸಿದರು. ಕವಿತೆ ಕೇಳಿ ಮೆಚ್ಚಿದ ಸಹೃದಯರು ಪ್ರಕಟಿಸಲು ಮುಂದೆ ಬಂದರು. ಒಂದಷ್ಟು ಹಣ ಸಂಗ್ರಹಿಸಿ, ೧೯೯೦ರಲ್ಲಿ ಮೊದಲ ಕವಿತಾ ಸಂಕಲನ ’ಹೊಳಿ ಸಾಲಿನ ಹೋರಿ’ ಪ್ರಕಟಿಸಿದ ಸಿದ್ದಪ್ಪ.
ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈತ ನಿರಕ್ಷರಸ್ಥ. ಆದರೆ, ಹದಿನಾರು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾನೆ.
ಬಾಗಲಕೋಟೆ ಜಿಲ್ಲೆ ಬೀಳಗಿಯ ಸಿದ್ದಪ್ಪ ಸಾಬಣ್ಣ ಬಿದರಿ ಎಂಬ ನಿರಕ್ಷರ ಆಶುಕವಿಯ ಸಾಹಸಗಾಥೆಯಿದು. ದೊಡ್ಡ ಕುಟುಂಬದಲ್ಲಿ ಜನಿಸಿ, ಬಡತನದಿಂದಾಗಿ ಬಾಲ್ಯದಿಂದಲೇ ಕೃಷಿಯಲ್ಲಿ ತೊಡಗಿದ ಸಿದ್ದಪ್ಪನಿಗೆ ಓದುವ ಭಾಗ್ಯ ದೊರೆಯಲಿಲ್ಲ.
ಇವತ್ತು ಸ್ವಲ್ಪ ತಂಪಾಗಿದೆ . ಇಲ್ದೆ ಇದ್ರೆ ಸುಡೋ ಉರಿಬಿಸ್ಲು ! ಅದೂ ಕಾರವಾರದ ಬಿಸಿಲು ಅಂದ್ರೆ ಕೇಳ್ಬೇಕಾ ? ಕಲ್ಲೂ ಕರ್ಗೋಗೋಷ್ಟು . ತಂಪಾದ ಗಾಳಿ ಬೇರೆ ಬೀಸ್ತಾ ಇದೆ. ಎಲ್ಲೋ ಮಳೆ ಆಗಿರ್ಬೇಕು . ಸಮುದ್ರ ಮಾತ್ರ , ಯಾರನ್ನೋ ಕಾಯ್ತಾ ಇರೊವ್ರ ತರ ಮೊರಿತಾ ಇದ್ದಿದ್ದು ಈಗ ಒಮ್ಮೆಗೆ ಭೋರ್ಗರೀತಾ ಇದೆ . ಅದ್ರ ಮೂಡ್ ನೊಡಿ ನಂಗೂ ಖುಶಿ ಆಯ್ತು.