ಮತ್ತೆ ಮಳೆ ಹುಯ್ಯುತಿದೆ
ಮತ್ತೆ ಮಳೆ ಹುಯ್ಯುತಿದೆ.
- Read more about ಮತ್ತೆ ಮಳೆ ಹುಯ್ಯುತಿದೆ
- 10 comments
- Log in or register to post comments
ಮತ್ತೆ ಮಳೆ ಹುಯ್ಯುತಿದೆ.
(ಈ ಲೇಖನ ನಿನ್ನೆ [:http://kannada.indiawaterportal.org|ಕನ್ನಡ ವಾಟರ್ ಪೋರ್ಟಲ್ ನಲ್ಲಿ] ಪ್ರಕಟವಾಗಿತ್ತು.)
ಒಲೆ ಹತ್ತಿ ಉರಿದಡೆ ನಿಲಲುಬಹುದು, ಧರೆ ಹತ್ತಿ ಉರಿದೊಡೆ ನಿಲಬಹುದೇ,
ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ತಂದೆ ಕೂಡಲಸಂಗಮದೇವ?
--ಈ ವಿಪರ್ಯಾಸಗಳ ಸರಣಿಗೆ ಮತ್ತೊಂದು ಸೇರ್ಪಡೆ ಗಂಗೆ ಅಂತರ್ದಾನವಾದೊಡೆ...?!
--ಇದು ಯಾವುದೋ ಪುರಾಣದಲ್ಲಿನ ಪ್ರಸ್ತಾಪ ಅಲ್ಲ. ಗಂಗೆ ಪಾತ್ರ ಬಯಲಾದೀತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಹೌದು, ಗಂಗೆಯ ಮಡಿಲಲ್ಲಿ ಕೈಗೆತ್ತಿಕೊಂಡಿರುವ ಜಲ ವಿದ್ಯುತ್ ಯೋಜನೆ ಹಾಗೂ ಆಣೆಕಟ್ಟುಗಳಿಂದಾಗಿ 50 ಕಿಮೀಗೂ ಹೆಚ್ಚು ದೂರ ಗಂಗೆ ಗುಪ್ತಗಾಮಿನಿಯಾಗಿ ಹೋಗುವ ಆತಂಕ ಪರಿಸರ ಪ್ರಿಯರಲ್ಲಿ ಮಡುಗಟ್ಟಿದೆ.
ಇಂಥದೊಂದು ಆತಂಕವನ್ನು ಹೊರ ಹಾಕಿರುವ ಪ್ರೊ|ಜಿ.ಡಿ. ಅಗರ್ ವಾಲ್ ಸಾಮಾನ್ಯ ವ್ಯಕ್ತಿಯಲ್ಲ. ಇವರು ಖ್ಯಾತ ಪರಿಸರ ವಿಜ್ಞಾನಿ, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರದಲ್ಲಿ ಡೀನ್ ಆಗಿದ್ದವರು. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಥಮ ಸದಸ್ಯ ಕಾರ್ಯದರ್ಶಿಯಾಗಿದ್ದವರು.
ವಾಯಲಿನ್ ನುಡಿಸುತ್ತಿದೆ ನಿನ್ನ ನೋವ ನನ್ನ ಹೃದಯದಲ್ಲಿ...
ಆದರೂ ಕಣ್ಣ ಹನಿ ನಿಲ್ಲದು...
ವಾಯಲಿನ್ ಅಳುತ್ತಿದೆ ನಿನ್ನ ನೆನೆ,ನೆನೆದು...ದು:ಖದಲ್ಲಿ.
ಆದರೂ ಬತ್ತದು ನಿನ್ನ ನೋವು.
ವಾಯಲಿನ್ ರೋಧಿಸುತ್ತಿದೆ ನಿನ್ನ ಪ್ರೀತಿಯಲ್ಲಿ.
ಆದರೂ ಮರೆಯಲಾಗದು ನಿನ್ನ ಮೋಸ...
ವಾಯಲಿನ್ ಕೊರೆಯುತ್ತಿದೆ ನನ್ನ ಹೃದಯ.
ಆದರೂ ಬಿಡದು ನಿನ್ನ ಒಲವು..
ಇವತ್ತೇಕೊ ಅದೃಷ್ಟವೇ ಸರಿಯಿಲ್ಲ. ಟೈಮೂ ಖರಾಬು
ಬೆಳಗ್ಗೆ ಅಮ್ಮನ ಮನೆಯಲ್ಲಿ ಮಗೂನ ಬಿಟ್ಟು ಕೋರಮಂಗಲಕ್ಕೆ ಹೋಗೋಣ ಅಂತ ಹೋಗಿದ್ದಾಯಿತು
ಅಮ್ಮನ ಮನೆ ಬಂಡೆ ಪಾಳ್ಯದಲ್ಲಿ ಇರೋದು
ಅಲ್ಲಿಂದ ಶಾರ್ಟ್ ಕಟ್ ನಲ್ಲಿ ಕೋರಮಂಗಲಕ್ಕೆ ಹೋಗಬಹುದು ಅಂತ ಅಮ್ಮ ಹೇಳಿದರು
ಸರಿ ಅಂತ ಹೊರಟೆ ಅದೇನೋ ದಾರಿಯೇ ತಿಳಿಯಲಿಲ್ಲ
ತೊಟ್ಟಿಲು+ಕಾಯಿ = ತೊಟ್ಟಿಲುಗಾಯಿ =>ತೊಟ್ಲುಗಾಯಿ
ಬಟ್ಟಲು+ಕಾಯಿ = ಬಟ್ಟಲುಗಾಯಿ => ಬಟ್ಲುಗಾಯಿ
ತೊಟ್ಟಿಲು+ಕಾಯಿ = ತೊಟ್ಟಿಲುಗಾಯಿ =>ತೊಟ್ಲುಗಾಯಿ
ಬಟ್ಟಲು+ಕಾಯಿ = ಬಟ್ಟಲುಗಾಯಿ => ಬಟ್ಲುಗಾಯಿ
ಇಲ್ಲಿ ಎರಡು ಒರೆಗಳು ಸೇರಿ ಬೇರೆ ಜೋಡಿಪದವಾಗಿ ಇನ್ನೊಂದು ಅರಿತವನ್ನು ಕೊಡುತ್ತೆ. ಏನದು ಹೊಸ ಅರ್ತ?
ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಮಾರ್ಗಶಿರ, ಪೌಷ, ಮಾಘ ಮತ್ತು ಫಾಲ್ಗುಣ ಹೀಗೇಕೆ ಕರೆಯುತ್ತಾರೆ?
ಕಾರಣ
ಹುಣ್ಣಿಮೆಯ ದಿನಕ್ಕೆ ಸರಿಸುಮಾರಾಗಿ ಚಂದ್ರ (ತಿಂಗಳ್) ಆಯಾ ನಕ್ಷತ್ರಗಳನ್ನು ಪ್ರವೇಶಿಸುವುದಱಿಂದ ಮಾಸಗಳಿಗೆ ಆಯಾ ನಕ್ಷತ್ರದ ಸಂಬಂಧದಿಂದ ಕರೆಯುತ್ತಾರೆ.
ಚೈತ್ರ=ಹುಣ್ಣಿಮೆಯ ದಿನ ಸರಿಸುಮಾರು ಚಂದ್ರ ಚಿತ್ರಾ ನಕ್ಷತ್ರಪ್ರವೇಶ
ಕನ್ನಡ ಭಾಷೆ ಕುಱಿತಂತೆ ಕನ್ನಡಿಗರಲ್ಲಿ ವೈಚಾರಿಕತೆ ಕಡಿಮೆಯಾಯ್ತೇ? ಯಾಕೆಂದರೆ ನನ್ನ ಹಲವು ವಿಚಾರಗಳಿಗೆ ಪರ ವಿರೋಧ ಹೇೞುವವರ ಸಂಖ್ಹ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಈ ಲೇಖನ ಹೋದವಾರ [:http://kannada.indiawaterportal.org/|ಇಂಡಿಯ ವಾಟರ್ ಪೋರ್ಟಲ್ ನಲ್ಲಿ] ಪ್ರಕಟವಾಗಿತ್ತು.
ನಾಡಿನ ವಿಖ್ಯಾತವಾದ ಹಾಗೂ ಅಷ್ಟೇ ವಿಶಿಷ್ಟವಾದ ಜಲಾಗಾರಗಳ ಪೈಕಿ ಪ್ರಮುಖವಾದುದು ಎಂದರೆ ಸಂತೆ ಹೊಂಡ. ಹೆಸರು ಈಚಿನದಾದರೂ, ಹೊಂಡ ಹಳೆಯದೇ. ಐತಿಹಾಸಿಕವಾದುದು.
ದುರ್ಗದ ಊರ ನಡುವಿರುವ ಈ ಹೊಂಡವನ್ನು ಕಟ್ಟಿಸಿದ್ದು ಬಿಚ್ಚುಗತ್ತಿ ಭರಮಣ್ಣ ನಾಯಕರು, ಕ್ರಿಸ್ತ ಶಕ 1693ರಲ್ಲಿ ಎಂದು ದಾಖಲೆಗಳು ಹೇಳುತ್ತವೆ. ದುರ್ಗದ ಐತಿಹಾಸಿಕ ಕೋಟೆಯಿಂದ ಸುಮಾರು ಒಂದು ಮೈಲಿ ದೂರದಲ್ಲಿರುವ ಈ ಹೊಂಡದ ಸುತ್ತಲೂ ಸೈನ್ಯ ಬೀಡ ಬಿಟ್ಟಿರುತ್ತಿತ್ತು. ಸೈನ್ಯದ ಬಳಕೆಗೂ ಆಯಿತು. ನಾಗರಿಕರೂ, ದಾರಿಹೋಕರ ದಾಹಕ್ಕೂ ಆಗುತ್ತಿತ್ತು. ಕಾಲಾಂತರದಲ್ಲಿ ಈ ಹೊಂಡದ ಸುತ್ತ ಸಂತೆ ನೆರೆಯಲು ಆರಂಭಿಸಿದ್ದರಿಂದ, ಇದಕ್ಕೆ ಸಂತೆ ಹೊಂಡ ಹೆಸರು ಬಂತು.
ದುರ್ಗದ ಪ್ರಖ್ಯಾತ ಪಾಳೆಗಾರರಾಗಿದ್ದ ಭರಮಣ್ಣನಾಯಕರು ಶೌರ್ಯ, ಪರಾಕ್ರಮಕ್ಕೆ ಹೆಸರಾಗಿದ್ದರಿಂದ ಅವರಿಗೆ ಬಿಚ್ಚುಗತ್ತಿ ಎಂಬ ಅಭಿದಾನ ಬಂದಿತ್ತು. ಬರೀ ಶೌರ್ಯ, ಪರಾಕ್ರಮಗಳ ಕುರಿತು ಐತಿಹಾಸಿಕ ದಾಖಲೆಗಳು, ಜಾನಪದ ಕತೆಗಳೂ ಉಂಟು. ಆದರೆ, ಅವರ ವ್ಯಕ್ತಿತ್ವದ ಮತ್ತೊಂದು ಮಹತ್ವದ ಮಗ್ಗುಲಿಗೆ ಸಾಕಷ್ಟು ಸಾಕ್ಷ್ಯಗಳು ಇನ್ನೂ ಕಣ್ಣೆದುರೇ ಇವೆ. ನೀರುಣಿಸಲು ಜಲಾಗಾರಗಳ ನಿರ್ಮಾಣದಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕರ ಕೊಡುಗೆ ಅತಿ ಮಹತ್ವದ್ದು. ದುರ್ಗದ ಸಂತೆ ಹೊಂಡವೂ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಹೊಂಡಗಳನ್ನು ನಿರ್ಮಿಸಿದ್ದರು ಎಂದು ಇತಿಹಾಸ ಹೇಳುತ್ತದೆ.