ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗಾಯ

ಹೂವಿಗಾಗಿ ಕೈ ಮಾಡಿದೆ

ಸಿಕ್ಕಿದ್ದು ಬರೀ ಮುಳ್ಳಿನ ಗೀರು ಗಾಯ

 

ಹಣ್ಣಿಗಾಗಿ ಮರವೇರ ಹೋದೆ

ಸಿಕ್ಕಿದ್ದು ಬರೀ ಮೈತುಂಬ ಪರಚು ಗಾಯ

 

ಹಾಲು ಕೊಡೆಂದು ಹಸುವ ಕೇಳಿದೆ

ಸಿಕ್ಕಿದ್ದು ಬರೀ ಅದರ ಒದೆತದ ಗಾಯ

 

ನಲಿವಿನ ಹೊತ್ತು ನೀಡಲು ನೆನಪನು ಕೇಳಿದರೂ

ಸಿಕ್ಕಿದ್ದು ಬರೀ ಮನನೊಂದ ಹಸಿ ಗಾಯ

ಡಾ.ರಾಜ್‌ರಿಲ್ಲದೇ........... ಎರೆಡು ವರ್ಷ : ಒಂದು ನೆನಪು

ಮೊನ್ನೆ ಮಡಿಕೇರಿಯಲ್ಲಿ ನಡೆದ ಹೊಗೇನಕಲ್ ಧರಣಿಯ ಬಗ್ಗೆ ಬರೆಯುತ್ತ ವಿಜಯ ಕರ್ನಾಟಕದಲ್ಲಿ ಒಂದು ವಾಕ್ಯ
"ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಹೋರಾಟದಲ್ಲಿ ಒಂದು ನಾಯಕರಿಲ್ಲದ ಅನಾಥ ಪ್ರಜ್ನೆ ಕಾಡಿತು."

ಐಟಿ ಜನರು ಸ್ವಾರ್ಥಿಗಳು ಮತ್ತು ಸ್ವಂತದ್ದನ್ನು ಮಾತ್ರವೆ ಯೋಚಿಸುವವರು

[ಹಿಂದಿನ ಬ್ಲಾಗ್ ಲೇಖನ "ನನ್ನ ಐಟಿ ಸಹಬಾಂಧವರಿಗೊಂದು ಪತ್ರ..." ದಲ್ಲಿ ಉಲ್ಲೇಖಿಸಿರುವ ಲೇಖನದ ಕನ್ನಡ ರೂಪ.]

ಬೆಂಗಳೂರಿನ ಐಟಿ ಕ್ಷೇತ್ರದ ಸೋದರ ಸೋದರಿಯರೆ,

ನಿಮ್ಮಂತೆಯೆ ನಾನೂ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್. ನಾನು ನಿಮ್ಮ ಬೆಂಬಲವನ್ನು ಕೋರುತ್ತಿದ್ದೇನೆ.

ಬೆಂಬಲ? ಯಾಕೆ?

"ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯಗಳಿಗಾಗಿ..."

ಇತ್ತೀಚಿನ ದಿನಗಳಲ್ಲಿನ ಕರ್ನಾಟಕದಲ್ಲಿನ ರಾಜಕಾರಣದ ಕೀಳುಮನರಂಜನೆಯ ನಾಟಕವನ್ನು ಮತ್ತು ಸಂಪೂರ್ಣವಾಗಿ ಇಲ್ಲವಾಗಿಬಿಟ್ಟಿರುವ ರಾಜಕೀಯ ಮೌಲ್ಯಗಳನ್ನು ನೀವೆಲ್ಲ ನೋಡಿಯೇ ಇರುತ್ತೀರ ಎನ್ನುವುದು ನನ್ನ ಖಚಿತ ಅಭಿಪ್ರಾಯ. ಅಧಿಕಾರಲಾಲಸೆ, ಹಣ, ಜಾತಿ, ಮತ್ತು ಕೋಮು ಉನ್ಮಾದಗಳು ಚುನಾವಣಾ ರಾಜಕಾರಣದ ಮುಖ್ಯ ಭಾಗಗಳಾಗಿ ಹೋಗಿವೆ. ಬೆಂಗಳೂರು ನಗರವಂತೂ ರಿಯಲ್ ಎಸ್ಟೇಟ್ ಮತ್ತು ಗಣಿ ದೊರೆಗಳ ಒಡ್ಡೋಲಗವಾಗಿ ಹೋಗಿದೆ.

ಇಂತಹ ಪರಿಸ್ಥಿತಿಯಲ್ಲಿ, ಬರಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ, ಯಾವ ಅಭ್ಯರ್ಥಿ ಹತ್ತಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿರುವನೊ ಅವನು ಮಾತ್ರ ಗೆಲ್ಲಲಿದ್ದಾನೆ. ಮತದಾರರಿಗೆ ಉಡುಗೊರೆಗಳನ್ನು ಕೊಟ್ಟರೆ ಮಾತ್ರ, ಕೀಳು ಮಟ್ಟದ ಜಾತಿ ಮತ್ತು ಕೋಮು ಭಾವನೆಗಳನ್ನು ಉದ್ಧೀಪಿಸಿದರೆ ಮಾತ್ರ, ಅಂತಿಮವಾಗಿ ನಮ್ಮನ್ನೆಲ್ಲ ಒಡೆದರೆ ಮಾತ್ರ ಅವನು ಗೆಲ್ಲಲಿದ್ದಾನೆ. ಅವನು ಚುನಾಯಿತನಾಗಲು ಇನ್ಯಾವುದೆ ಒಳ್ಳೆಯ ಸಕಾರಣಗಳು ಪರಿಗಣಿತವಾಗುವುದಿಲ್ಲ. ನಮ್ಮ ಜನರೇಷನ್ನಿನ ಮತ್ತು ನಮ್ಮ ಈ ಸಮಕಾಲೀನ ಸಂದರ್ಭದ ಸವಾಲುಗಳನ್ನು ಅರಿಯದ ಜನರೆ ಹೀಗೆ ಚುನಾಯಿತರಾಗಲಿದ್ದಾರೆ.

ಇವರು ಖರ್ಚು ಮಾಡಲಿರುವ ಪ್ರತಿಯೊಂದು ರೂಪಾಯಿಯೂ ಅನೈತಿಕವಾಗಿ ಸಂಪಾದಿಸಿದ, ಕಳ್ಳಮಾರ್ಗಗಳಿಂದ ಮಾಡಿದ, ಯಾವುದೆ ಲೆಕ್ಕಪತ್ರಗಳಿಲ್ಲದ, ಕಪ್ಪುಹಣ. ದುಡ್ಡಿರುವ ಜನ ಈ ಚುನಾವಣೆಯನ್ನು ಕೊಳ್ಳಲಿದ್ದಾರೆ. ಪ್ರತಿಯೊಂದು ರಾಜಕೀಯ ಪಕ್ಷವೂ ನೆಲದ ಕಾನೂನನ್ನು ಮತ್ತು ಜನಮತವನ್ನು ಉಲ್ಲಂಘಿಸಲಿವೆ ಮತ್ತು ಲೇವಡಿ ಮಾಡಲಿದೆ.

ಭಾರತ ದೇಶದ ಚುನಾವಣಾ ಆಯೋಗವು ವಿಧಾನಸಭೆಯ ಚುನಾವಣೆಗೆ ಒಬ್ಬ ಅಭ್ಯರ್ಥಿ ೧೫ ಲಕ್ಷ ರೂಪಾಯಿಗಳಗಿಂತ ಹೆಚ್ಚಿಗೆ ಖರ್ಚು ಮಾಡಬಾರದೆಂಬ ಕಾನೂನಿನ ಮಿತಿಯನ್ನು ವಿಧಿಸಿದೆ. ಅದರೆ, ಬಹುಪಾಲು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅದರ ಹತ್ತರಷ್ಟನ್ನು ಖರ್ಚು ಮಾಡಲಿದ್ದಾರೆ. ಮತ್ತು ಬೆಂಗಳೂರಿನಲ್ಲಂತೂ ಕೆಲವು ಅಭ್ಯರ್ಥಿಗಳು ಆ ಕಾನೂನು ಮಿತಿಯ ನೂರು ಪಟ್ಟಿಗಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದಾರೆ. ಅನೈತಿಕವಾಗಿ ಮಾಡಿದ, ಲೆಕ್ಕಾಜಮಾ ಇಲ್ಲದ, ಕಪ್ಪುಹಣವನ್ನೆ

ಲಿನಕ್ಸ್ ಅಥವಾ ವಿಂಡೋಸ್ ನ ಬೂಟ್ ಲೋಡರ್ ರಿಕವರ್ ಮಾಡೋದು ಹೇಗೆ?

"ಹಾರ್ಡ್ ಡಿಸ್ಕ್ ವಿಭಜನೆ ಮತ್ತು ಬೂಟ್ ಲೋಡರ್ ಬಗೆಗಿನ ಲೇಖನ " ಇದನ್ನೊಮ್ಮೆ ಓದಿ. 

ವಿಂಡೋಸ್ ಇನ್ಸ್ಟಾಲ್ ಮಾಡಿದ್ರಿಂದನೋ ಅಥವಾ ಇನ್ಯಾವ್ದಾದ್ರು ಕಾರಣದಿಂದ ಲಿನಕ್ಸ್ ಗೆ  ಬೂಟ್ ಆಗಲು ತೊಂದರೆ ಇದ್ರೆ GRUB ನ recover ಮಾಡ್ಬೇಕು. ಇದನ್ನು ತುಂಬಾ ತರಹದಲ್ಲಿ ಸರಿ ಮಾಡಬಹುದು, ನನಗೆ ಗೊತ್ತಿರೋ ಎರಡು ವಿಧಾನದಲ್ಲಿ ವಿವರಿಸುವ  ಪ್ರಯತ್ನ ಮಾಡಿದ್ದೇನೆ.

ಈ ಸಂಜೆ ಹಾಯಾಗಿದೆ

ನೀನಿಲ್ಲದೆ,
ಈ ಸಂಜೆ ಹಾಯಾಗಿದೆ
-----

ಈ ಮೌನ ಸಿಹಿಯಾಗಿದೆ ..ಹೋ.. ಈ ಮೌನ ಸಿಹಿಯಾಗಿದೆ.

ಮತ್ತೊಂದು ಪ್ಯಾರೋಡಿ ಅಂದ್ಕೋಬೇಡಿ. ಇದು, ನಾನು ಏಪ್ರಿಲ್ ೧ ಸಂಜೆ ಮನೆಗೆ ಬಂದಾಗ ನನ್ನ ಗಂಡ ಗುನುಗುತ್ತಿದ್ದ ಹಾಡು :-)

ಯಾಕೆ- usual ವಿರಸ
ಯಾರಿಂದ - ನನ್ನಿಂದ, ಆದರೆ ನಾನು ಸಂಪದ ಮತ್ತು hpn ಅವರನ್ನು ಹೆಚ್ಚಾಗಿ ಹೊಣೆಯಾಗಿಸುತ್ತಿದ್ದೇನೆ.

ಗ್ನೂ/ಲಿನಕ್ಸ್ ಹಬ್ಬ - ಟೆಕ್ನಿಕಲ್ volunteerಗಳ ಮುಖಾಮುಖಿ

ಭಾನುವಾರ ಮಧ್ಯಾಹ್ನ ಮೂರು ಗಂಟೆಗೆ ಬಸವನಗುಡಿಯಲ್ಲಿ ಲಿನಕ್ಸ್ ಹಬ್ಬದ
technical volunteerಗಳ ಮುಖಾಮುಖಿ ಇದೆ. ಟೆಕ್ನಿಕಲ್
ವಿಷಯಗಳಲ್ಲಿ ಸಹಾಯ ಮಾಡಲು ಆಸಕ್ತಿ ಇದ್ದವರು ನಮ್ಮನ್ನಿಲ್ಲಿ ಬೇಟಿ ಮಾಡಬಹುದು. ಒಂದುಸಂದೇಶವನ್ನ ಈ-ಮೈಲ್ ಮೂಲಕ ಕಳಿಸಿದರೆ ಚೆಂದ.

ಜಾಗ : ಬಸವನಗುಡಿ ಬ್ಯೂಗಲ್ ರಾಕ್ ಉದ್ಯಾನ, ಡಿ.ವಿ.ಜಿ ಪ್ರತಿಮೆ ಬಳಿ
ಸಮಯ: ಮಧ್ಯಾಹ್ನ ೩ ಗಂಟೆ

"ಬೆಂಗಳೂರಿನ ಮಿಡ್-ಡೇ ಪತ್ರಿಕೇಲಿ ಗ್ನು/ಲಿನಕ್ಸ್ ಹಬ್ಬ ಕುರಿತು ಬ್ಲರ್ಬ್"

ಬೆಂಗಳೂರಿನ ಮಿಡ್-ಡೇ ಪತ್ರಿಕೆಯಲ್ಲಿ
ನಿನ್ನೆ ಗ್ನು ಲಿನಕ್ಸ್ ಹಬ್ಬದ ಕುರಿತು ಬರೆದಿದ್ದಾರೆ. 'ಟೆಕ್-ಅಡ್ಡಾ'  ಅನ್ನೋ ಕಾಲಂ
ನಲ್ಲಿ ಬಂದಿದೆ (ಪುಟ ೯, ಬಲಬದಿಯ ಕಾಲಂ)

ನೋಡಿ.
 

ದೇವರಿಂದ ಪಡೆಯುವುದೇಕೇ? ಹೇಗೆ...?

ಈ ಪ್ರಶ್ನೆಗೆ ತಟ್ಟನೆ ಉತ್ತರ ಹೇಳುವುದು ಕಷ್ಟ. ಆದರೂ ದೇವರಿಂದ ಪಡೆಯ ಬೇಕೆಂದೇ ಪೂಜೆ ಪುನಸ್ಕಾರಗಳನ್ನು ಮಾಡುವವರೂ ತತ್ ಕ್ಷಣ ಏನೊಂದನ್ನೂ ಸ್ಪಷ್ಟವಾಗಿ ಹೇಳಲಾರರು. ನಮ್ಮ ನಮ್ಮ ನಂಬಿಕೆ ಎಂದಾರಷ್ಟೇ.