ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸವಾಲೊಡ್ಡುತ್ತಿದ್ದಾಳೆ ಮಹಿಳೆ...!

ಹೌದು... ಮತ್ತೆ ಬಂದಿದೆ ಮಹಿಳೆಯರಿಗೊಂದು ದಿನ. ಮಡುಗಟ್ಟಿಹೋಗಿರುವ ಮತ್ತು ಒತ್ತಾಯಪೂರ್ವಕವಾಗಿ ಹತ್ತಿಕ್ಕಿಕೊಂಡಿರುವ ತಮ್ಮೆಲ್ಲಾ ನೋವು ನರಳಿಕೆ, ಯಾತನೆಗಳನ್ನು ಹೊರಗೆಡಹಲೊಂದು ವೇದಿಕೆಯಾಗಬಲ್ಲ ದಿನ ಅಂತ ಸಂಭ್ರಮಿಸಬಹುದು.

ಸಮಾಜಕ್ಕೆ ಬೆಲೆವೆಣ್ಣುಗಳು ಬೇಕೆ?

ಮಹಿಳೆಯರ ಮೇಲಿನ ದಬ್ಬಾಳಿಕೆ ಶೋಷಣೆ ಇಂದು ನಿನ್ನೆಯ ಕಥೆಯಲ್ಲ. ಮನೆಯಲ್ಲಾದರೂ, ಕಚೇರಿಯಲ್ಲಾದರೂ ಶೋಷಣೆಗೆ ಒಳಪಡುವವಳು ಮಹಿಳೆಯೇ. ಮಾನಸಿಕವಾಗಿ ಅಥವಾ ಶಾರೀರಿಕವಾಗಿ ಶೋಷಣೆ ನಡೆಸುತ್ತಾ ಬಂದಿರುವ ಪುರುಷ ಪ್ರಧಾನ ಸಮಾಜವು ಶೋಷಣೆಗೊಳಗಾದ ಮಹಿಳೆಯನ್ನು ಯಾವ ರೀತಿ ಸ್ವೀಕರಿಸಿದೆ ಎಂಬುದು ಚಿಂತಿಸಬೇಕಾದ ವಿಷಯ.

ನಿನ್ನ ನೆನಪಿನಲಿ…..ಜಿ.ವಿಜಯ್ ಹೆಮ್ಮರಗಾಲ

ನಿನ್ನ ನೆನಪಿನಲಿ…..

ಪ್ರೀತಿ……..
ಪದಗಳು ತುಂಬಿದ ಕವನವಿದಲ್ಲ
ಹೃದಯವೇ ಅಡಗಿದೇ ಇದರಲ್ಲಿ........
ಕಂಗಳಲಿ ಕವನ ಬರೆದು ಕಳುಹಿಸಿದೆ ನೀ ಇಲ್ಲಿಗೆ
ಅಂಗಳದೀ ಅರಳಿತಾಗ ನನ್ನೊಲವ ಮಲ್ಲಿಗ
ಮಲ್ಲಿಗೆಯ ನೋಡುತ್ತಿರುವೆ.......
ಹೇಳುತಿದೆ ನೋಡಾ.....!
ನೀನಿದ್ದರೇನಂತೆ ಹತ್ತಿರ ...........
ನಡುವೆ ಇದೆ ಎಷ್ಟೊಂದು ಅಂತರ ........?
ಆದರೂ
ಮನದಲ್ಲಿ ನಿನಗಾಗಿ ಮಾಡಿ

ಆರ್ಥಿಕ ಅಸಮಾನತೆ ನಡುವಿನ ಮಹಿಳೆಯ ಬದುಕು....

ಮಹಿಳಾ ದಿನಾಚರಣೆಯ ನೂರನೇ ವರ್ಷವನ್ನು ಆಚರಿಸುವ ಈ ಸಂದರ್ಭನಲ್ಲಿ ಪ್ರಸ್ತುತ ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ "ಆರ್ಥಿಕ ಮತ್ತು ಲಿಂಗ ಸಮಾನತೆ"ಎಂಬ ಧ್ಯೇಯವಾಕ್ಯ ಘೋಷಿಸಿದೆ. ಆದರೆ ಶತಮಾನ ಕಳೆದರೂ ಇಂದಿಗೂ ಹಳ್ಳಿಗಳಲ್ಲಿ ಕನಿಷ್ಠ ಕೂಲಿಗಾಗಿ ದಿನವಿಡೀ ದುಡಿಯುವ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ ಎನ್ನುವುದು ನಮ್ಮ ಕಣ್ಣ ಮುಂದಿರುವ ಜ್ವಲಂತ ಸಾಕ್ಷಿಯ ನಡುವೆ ಮಹಿಳೆಯರ ವೇತನ ಸಮಾನತೆಯ ಘೋಷಣೆಯೊಂದಿಗಿನ ನೂರನೇ ವರ್ಷಾಚರಣೆ ವಿಪರ್ಯಾಸವಲ್ಲವೇ?

ಇತ್ತೀಚೆಗೆ ಅಮೆರಿಕವು ಪ್ರಕಟಿಸಿದ "2007 ಜಾಗತಿಕ ನಗರಾಭಿವೃದ್ಧಿ ಪರಿಷ್ಕರಣಾ ವರದಿ"ಯಲ್ಲಿ ಭಾರತದ ಅತೀ ಹೆಚ್ಚು ಜನರು ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿಯನ್ನು ನಾವೀಗಾಗಲೇ ಓದಿದ್ದೇವೆ. ಪ್ರಸ್ತುತ ವರದಿ ಪ್ರಕಾರ ಭಾರತದ ಜನಸಂಖ್ಯೆಯ 70 ಪ್ರತಿಶತ ಮಂದಿಯೂ ಹಳ್ಳಿಗಳಲ್ಲಿ ವಾಸವಾಗಿದ್ದಾರೆ ಇನ್ನುಳಿದ 30% ಮಂದಿ ಮಾತ್ರ ನಗರವಾಸಿಗಳಾಗಿದ್ದಾರೆ. ಅಂದರೆ ಇಲ್ಲಿನ ಬಹುತೇಕ ಮಂದಿಯೂ ಕೃಷಿಯನ್ನು ಅವಲಂಬಿಸಿಕೊಂಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಂಡುಕೊಳ್ಳಬೇಕಾದುದು ಅತೀ ಅಗತ್ಯ ಎಂದಾಯಿತು. ಇದರ ಜೊತೆಗೆ ಗ್ರಾಮೀಣ ಜನರಿಗೆ ಉದ್ಯೋಗವನ್ನು ಒದಗಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿ ಬೆಳವಣಿಗೆಯನ್ನು ಹೊಂದಬಹುದೆಂದು ತಜ್ಞರ ಅಭಿಪ್ರಾಯ. ಅದೇನೇ ಇರಲಿ ಗ್ರಾಮೀಣ ಜನರ ಅಥವಾ ಮಧ್ಯಮ ವರ್ಗದ ಜನರ ಆರ್ಥಿಕತೆಯ ಬಗ್ಗೆ ಚಿಂತನೆ ನಡೆಸಿದರೆ ಅವರ ಉದ್ಯೋಗ ಮತ್ತು ಅವರಿಗೆ ದೊರೆಯುವಂತಹ ವೇತನದ ಬಗ್ಗೆಯೂ ನಾವು ಮನನ ಮಾಡಬೇಕಾಗಿದೆ.

ಕನ್ನಡ ಕಸ್ತೂರಿ ...ನಮ್ಮದು ಚೆಲುವ ಕನ್ನಡ ನಾಡು..............ಜಿ.ವಿಜಯ್ ಹೆಮ್ಮರಗಾಲ

ಕನ್ನಡ ಕಸ್ತೂರಿ

* ........................ *
ನಮ್ಮದು ಚೆಲುವ ಕನ್ನಡ ನಾಡು
ಕಪ್ಪು ನೆಲದ ಈ ಬೀಡು ,
ಪಸಿರು ಪಚ್ಚೆಯ ನಾಡು,
ಗಂಗರು ಆಳಿದ ಈ ತಲಕಾಡು
ನಮ್ಮೂರು ಶ್ರೀಕಂಠನ ನೆಲೆ ನಂಜನಗೂಡು
ಒಮ್ಮೆ ಬಂದು ನೀ ದರ್ಶನ ಮಾಡು,
ಶ್ರುಂಗೇರಿ ಶಾರದೆಯ ಕಳೆ,
ಪಟ್ಟದ ಕಲ್ಲು ಐಹೋಳೆಯ ಚಿತ್ರಕಲೆ

ನಯಸೇನನ ಸಲೀಸಾದ ಸಾಲುಗಳು- ಬಿಡಿ ೪ - ಸಹಜಮಿಲ್ಲದಾತನ ಕಬ್ಬಂ

ನಯಸೇನ ಕಬ್ಬಕ್ಕೆ ಸಹಜತನ ಯಾಕಿರಬೇಕು ಎಂಬುದನ್ನ ಒತ್ತಿ ಹೇಳಲು  ಮಳೆ ನೀರು ಮತ್ತು ಪನ್ನೀರು(ಪೊಯ್ನೀರ್) ಎಂಬ ಉಪಮೆಗಳನ್ನು ಬಳಸಿಕೊಂಡು ಚೆನ್ನಾಗಿ ಬಣ್ಣಿಸಿದ್ದಾನೆ. ಸಕ್ಕತ್

ಮೞೆಯಿಲ್ಲದೆ ಪೊಯ್ನೀರಿಂ
ಬೆಳಗುಮೆ ಧರೆ ಮಱುಗಿ ಕುದಿದು ಶಾಸ್ತ್ರದ ಬಲದಿಂ
ದಳಿಪಿಂ ಪೇೞ್ವೊಡಮದು ಕೋ
ಮಳಮಕ್ಕುಮೆ ಸಹಜಮಿಲ್ಲದಾತನ ಕಬ್ಬಂ

ಮಹಾಶಿವರಾತ್ರಿ.....

ತ್ರಿಮೂರ್ತಿ, ತ್ರಿನೇತ್ರ, ತ್ರಿಕಾಲಮೂರ್ತಿ

ಮಹಾಶಿವರಾತ್ರಿ.....
ಶಿವರಾತ್ರಿಯ ಉತ್ಸಹವನ್ನು ಪ್ರತಿ ವರ್ಷ ದೇಶದಾದ್ಯಂತ ಆಚರಿಸಲಾಗುತ್ತದೆ. ಶಿವನ ದರ್ಶನವನ್ನು ಪಡೆದು ಬಿಲ್ವ ಪತ್ರವನ್ನು ಆರ್ಪಿಸಿ,ಉಪವಾಸವನ್ನು ಆಚರಿಸಿ ಇಡೀ ರಾತ್ರಿ ಜಾಗರಣೆಯನ್ನು ಮಾಡಿ ಶಿವರಾತ್ರಿಯನ್ನು ಆಚರಿಸಲಾಗುವುದು

ನಯಸೇನನ ಸಲೀಸಾದ ಸಾಲುಗಳು- ಬಿಡಿ ೩ - ಕೆಡುನುಡಿವ ಕಬ್ಬಿಗರು

ನಯಸೇನ ಒಂದು ಕ್ರುತಿಯ ಬಗ್ಗೆ ಕೆಡುನುಡಿವವರ ಬಗ್ಗೆ ಒಳೆ ಅಬಿಪ್ರಾಯ ಮೂಡಿಸಿದ್ದಾನೆ. ಕೆಡುನುಡಿವವರಿಂದಲೇ ಒಂದು ಕ್ರುತಿಯ ಓರೆ-ಕೋರೆಗಳು ಬೆಳಕಿಗೆ ಬರುತ್ತವೆ ಎಂಬುದು ಅವನ ನಂಬುಗೆಯಾಗಿರಬಹುದು.

ಅಡಕಿಲ ಮಡಕೆಗಳಂ ಸ
ಯ್ತಿಡಲಱಿವುವೆ ನಾಯ್ಗಳೊಡೆವುವಲ್ಲದೆ ಕ್ರುತಿಯಂ
ಕಿಡೆನುಡಿವರಲ್ಲದೇಂ ಜಡ
ರೊಡಂಬಡಲ್ತಿದ್ದಿನುಡಿಯಬಲ್ಲರೆ ಕವಿವೋಲ್

ಆಸ್ತಿಕ ವಾದ ಮತ್ತು ನಾಸ್ತಿಕ ವಾದ

ಇದೇ ಮಾರ್ಚ್ ೧೬ ರಂದು ಬೆಂಗಳೂರಿನ ಯಲಹಂಕದ ಶ್ರೀ ರಾಘವೇಂದ್ರ ಮಠದಲ್ಲಿ ’ಆಸ್ತಿಕ ವಾದ’ ಮತ್ತು ’ನಾಸ್ತಿಕ ವಾದ’ ದ ಬಗ್ಗೆ ಚರ್ಚೆ ಏರ್ಪಡಿಸಲಾಗಿದೆ. ಆ ಕಾರ್ಯಕ್ರಮ ಸಂಜೆ ೪.೩೦ ರಿಂದ ೬.೩೦ರ ವರೆಗೆ ನಡೆಯಲಿದೆ. ಮಂತ್ರಾಲಯದ ಶ್ರೀ ಸುಷಮೀಂದ್ರ ತೀರ್ಥರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.