ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ. ನಾಗ ದೋಷನಿವಾರಣೆಯ ಇನ್ನೊಂದು ತಾಣ

ಇದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ. ನಾಗ ದೋಷನಿವಾರಣೆಯ ಇನ್ನೊಂದು ತಾಣ

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಈ ದೇವಸ್ಥಾನವಿದೆ. ಸುಳ್ಯ-ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ವಳಲಂಬೆ ಎಂಬ ಪ್ರದೇಶದಲ್ಲಿ ರಸ್ತೆ ಬದಿಯಲ್ಲೇ ಸಿಗುತ್ತದೆ.ಸುಬ್ರಹ್ಮಣ್ಯದಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ.

ದುಡ್ಡಿನಿಂದ................

"ದುಡ್ಡು" ಜೀವನದ ಸಾಧನವಾಗಿದೆ....ಉದ್ಧೇಶವಲ್ಲ..."

ದುಡ್ಡಿನಿಂದ................
ಮೂರ್ತಿ ಕೊಂಡುಕೊಳ್ಳಬಹುದು...
-----ದೇವರನ್ನು...ಕೊಂಡುಕೊಳ್ಳಲಾಗದು...

ಹಾಸಿಗೆ ಕೊಂಡುಕೊಳ್ಳಬಹುದು...
-----ನಿದ್ರೆಯನ್ನು...ಕೊಂಡುಕೊಳ್ಳಲಾಗದು...

ಊಟವನ್ನು ಕೊಂಡುಕೊಳ್ಳಬಹುದು...
-----ಹಸಿವು...ಕೊಂಡುಕೊಳ್ಳಲಾಗದು...

ಕನ್ನಡಕ ಕೊಂಡುಕೊಳ್ಳಬಹುದು...
-----ಕಣ್ಣುಗಳನ್ನು...ಕೊಂಡುಕೊಳ್ಳಲಾಗದು...

ಮುಖಸ್ತುತಿ

ಹೊಗಳಿಕೆಯ ಮಾತಿಗೆ ಮರುಳಾಗದವರು ಕಡಿಮೆಯೇ. ಮನುಷ್ಯರು, ಪ್ರಾಣಿಗಳಷ್ಟೇ ಅಲ್ಲ, ನಿರ್ಜೀವ ವಸ್ತುಗಳಿಗೂ ಇದು ತಕ್ಕುದಾದ ಮಾತು ಎನ್ನುವಂತಹ ಈ ಪದ್ಯವನ್ನು ನೋಡಿ ಇಲ್ಲಿ:

ಮೂತಿಗೆ ಗಿಡಿದರೆ ಓಗರವ
ಹಿತದಲೆ ಅಳವಿಗೆ ಸಿಗುವರೆಲ್ಲ!
ಮೆತ್ತಿದರೆ ಬದಿಗೆ ತುಸುವೇ ಸಜ್ಜಿಗೆ
ಇನಿದನಿಯಲಿ ಮೃದಂಗ ನುಡಿವುದಲ್ಲ!

(ಅನುವಾದ ನನ್ನದು)

ಮಿಸ್ ಮಾಚೆನ್ಹಳ್ಳಿ

ನನ್ನವ್ಲೇ ನೀ ನನ್ನವಳೇ
ನೀನೆಂದು ನನ್ನವ್ಲೇ
ಪ್ರತಿ ಮಾತಿನಲು, ಸಿಹಿ ಕಣಸಿನಲು
ನಾ ಕಂಡ ಪ್ರೀತಿ ಮಳೆ
ನನ್ನವ್ಲೇ ನೀ ನನ್ನವಳೇ
ನೀನೆಂದು ನನ್ನವ್ಲೇ
ಕಾಗುಣಿತ ನೀ, ನಿನ್ನ ನುಡಿವುದೇ ಸಪ್ತಪದಿ
ಹೊಂಗಣಸು ನೀ, ಚಿರ ನಿದ್ಧೆಯ ಪ್ರೀತಿ ನದಿ
ನನ್ನವ್ಲೇ ನೀ ನನ್ನವಳೇ
ನೀನೆಂದು ನನ್ನವ್ಲೇ
ಮಾಚೆನ್ಹಳ್ಳಿ ಹೆಸರವಳೇ
ನೀನೆಂದು ನನ್ನವಳೇ

ವ್ಯಾಸರಾಯಬಲ್ಲಾಳ್, ನಮ್ಮನ್ನಗಲಿದರು- ಮುಂಬೈ ಕನ್ನಡಿಗರ ಆತ್ಮೀಯ ಹಿರಿಯ ಚೇತನಕ್ಕೆ, ಶತ-ಶತನಮನಗಳು !

ಮುಂಬೈ ಕನ್ನಡಿಗರ ಕಣ್ಮಣಿ, ವ್ಯಾಸರಾಯ ಬಲ್ಲಾಳರನ್ನು ಎಲ್ಲ ಕನ್ನಡಿಗರೂ ಬಲ್ಲರು. ಮಿತಭಾಷಿ, ಸರಳ ಸಜ್ಜನಿಕೆಯ ಪ್ರತಿರೂಪವಾದ ಅವರ ಸ್ನೇಹಾಭಿಲಾಷಿಗಳು ಹಲವರು ! ಮುಂಬೈ ನ ಕರ್ನಾಟಕಸಂಘದ ಸಂಸ್ಥಾಪಕರಾದ, ಶ್ರೀ. ವರದರಾಜಆದ್ಯರ ಜೊತೆ-ಜೊತೆಗೆ ದುಡಿದು ಅದನ್ನು ಕಟ್ಟಿ-ಬೆಳೆಸಲು ದುಡಿದ ಕೆಲವಾರು ಗಣ್ಯರಲ್ಲಿ ಅವರು ಪ್ರಮುಖರು. ಶ್ರೀ. ಸನದಿ, ಅರ್ವಿಂದ ನಾಡಕರ್ಣಿ, ಶ್ರೀಪತಿಬಲ್ಲಾಳ, ಕಿಶೋರಿಬಲ್ಲಾಳ್, ಡಾ. ಸುನಿತಾಶೆಟ್ಟಿ, ಡಾ ಸಂಜೀವಶೆಟ್ಟಿ, ಶ್ರೀ ಸದಾನಂದಶೆಟ್ಟಿ, ಎ. ಎಸ್. ಕೆ. ರಾವ್, ಸದಾನಂದ ಸುವರ್ಣ, ಜಿ. ಡಿ. ಜೋಷಿ, ಯಶವಂತ ಚಿತ್ತಾಲ್, ಮತ್ತು ಹಲವಾರು ಮಂದಿ ಅವರ ಜೊತೆಗಾರರು.

ಕರ್ನಾಟಕಸಂಘ, ಮಾಹಿಮ್, ಮುಂಬೈ ನ ಪ್ರತಿಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ, ಅದರ ಯಶಸ್ಸಿಗೆ ಕಾರಣರಾಗಿರುವ, ಬಲ್ಲಾಳರವರನ್ನು ಮುಂಬೈ ಕನ್ನಡ ಅಭಿಮಾನಿಗಳು, ಅತ್ಯಂತ ಭಾರವಾದ ಮನಸಿನಿಂದ ನೆನೆಯುತ್ತಿದ್ದಾರೆ. ಅವರ ನೆನಪುಗಳು ನಮ್ಮ ಮನಸ್ಸಿನಲ್ಲಿ ಎಂದೆಂದಿಗೂ ಹಸಿರಾಗಿರುತ್ತವೆ. ಮತ್ತೊಮ್ಮೆ ಅವರಿಗೆ ನಮನವನ್ನು ಸಲ್ಲಿಸಿ, ಅವರ ಕುಟುಂಬದ ಎಲ್ಲ ಸದಸ್ಯರಿಗೂ ಈ ಅಪಾರದುಖವನ್ನು ಸೈರಿಸುವ ಶಕ್ತಿಯನ್ನು ಭಗವಂತನು ಅನುಗ್ರಹಿಸಿಲೆಂದು ಪ್ರಾರ್ಥಿಸುತ್ತೇವೆ.

ಜೀವನದಲ್ಲಿ ನಮ್ಮದೇ ದಾರಿ ಕಂಡುಕೊಳ್ಳಬೇಕೇ ?

"ಜೀವನದಲ್ಲಿ ನಮ್ಮದೇ ದಾರಿಯನ್ನು ಹುಡುಕಿಕೊಂಡು ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳುವವವರ ಮಾತಿಗೆ ನಾನು ಸೊಪ್ಪು ಹಾಕುವದಿಲ್ಲ. ಏಕೆಂದರೆ ನಶ್ವರವಾದ ಈ ಮನುಷ್ಯ ದೇಹದ ಆಯಸ್ಸು ಬಹಳ ಎಂದರೆ ೬೦-೭೦ ವರ್ಷ. ಅದರಲ್ಲಿ ನಾವು ಸುಖಪಡಲು ಸಿಗುವ ವರ್ಷ ಬಹಳ ಎಂದರೆ ಇಪ್ಪತ್ತು.

ಇವನೇ..ಅವನು!!

“ಏನು ಡಯಲಾಗ್ ಹೇಳುತ್ತಾನೋ? ಫುಲ್‌ಸ್ಟಾಫ್ ಇಲ್ಲ,ಕೊಮಾ ಇಲ್ಲ,..” ಫೌಜಿ ಟಿ.ವಿ ಸೀರಿಯಲ್‌ನ ಹುಡುಗನ ಬಗ್ಗೆ ಹೇಳಿದ್ದೆ.ಅಲ್ಲಿಂದ ಅದೇ ರೀತಿ ಡಯಲಾಗ ಡೆಲಿವರಿ ಮಾಡುತ್ತಾ ಫುಲ್‌ಸ್ಟಾಫ್ ಇಲ್ಲದೇ ಬೆಳೆದ-ಗುಳಿ ಬೀಳುವ ಗಲ್ಲದ ಹುಡುಗ-ಶಾರುಕ್ ಖಾನ್ (ಈಗ ಸಿಕ್ಸ್ ಪ್ಯಾಕ್ ಯುವಕ).

ವ್ಯಾಸರಾಯ ಬಲ್ಲಾಳರು ನಮ್ಮನಗಲಿದರು!

ವ್ಯಾಸರಾಯ ಬಲ್ಲ್ಲಾಳರು ಮುಂದಿನ ವರ್ಷದವರೆಗೆ ಕಾಯಲಿಲ್ಲ. ನಾವು ಮುಂದಿನ ವರ್ಷ ಅವರಿಗೆ ಸಾಹಿತ್ಯ ಸಮ್ಮೆಳನದ ಅಧ್ಯಕ್ಷಗಿರಿಯನ್ನು ನೀಡುವ ಮೊದಲೇ ಅವರು ನಮ್ಮನ್ನು ಬಿಟ್ಟು ಕಾಣದ ದೂರದೂರಿಗೆ ಹೊರಟು ಹೋದರು.

ವ್ಯಾಸರಾಯರು ಹುಟ್ಟಿದ್ದು ೧.೧೨.೧೯೨೩. ಸ್ಠಳ ಉಡುಪಿಯ ಬಳಿಯ ಒಂದು ಸಣ್ಣ ಊರು. ತಂದೆ ನಿಡಂಬೂರು ರಾಮದಾಸ ಬಲ್ಲಾಳ. ತಾಯಿ ಕಲ್ಯಾಣಿ. ಇವರ ಹಿರಿಯ ಮಗ. ಮೆಟ್ರಿಕ್‍ವರೆಗೆ ಶಿಕ್ಷಣ. ಜಿಲ್ಲಾ ಬೋರ್ದ್ ಕಚೇರಿಯಲ್ಲಿ ಸ್ವಲ್ಪಕಾಲ ಕೆಲಸ. ನಂತರ ಮುಂಬಯಿಗೆ ಪಯಣ.

೧೯೪೪. ಕಾಲ್ಟೆಕ್ಸ್ ಸಂಸ್ಥೆಯಲ್ಲಿ ಕೆಲಸ. ೪೦ ವರ್ಷಗಳ ಸೇವೆ. ೧೯೮೪ರಲ್ಲಿ ನಿವೃತ್ತಿ.

ಮುಂಬಯಿಯಲ್ಲಿ ಯುವಕರು ‘ನುಡಿ‘ ಎಂಬ ಪ್ರತ್ರಿಕೆಯನ್ನು ನಡೆಸುತ್ತಿದ್ದರು. ೧೯೪೭. ಮೌಂಟ್ ಬ್ಯಾಟನ್ ಅವರ ಯೋಜನೆಯನ್ನು ವಿರೋಧಿಸಿ ಲೇಖನ. ಇದರಿಂದ ವ್ಯಾಸರಾಯರು ಜನಸಾಮಾನ್ಯರಗ ಮನದೊಡನೆ ಮುಂಬಯಿ ಸರ್ಕಾರದ ಗಮನವನ್ನೂ ಸೆಳೆದರು. ಮುಂದೆ ಇದರ ಸಂಪಾದಕತ್ವ. ಅಲ್ಲಿಂದ ಅವರ ಬರಹ ನಿರಂತರವಾಗಿ ಹರಿದು ಬಂದಿತು.

ಕಾದಂಬರಿಗಳು: ಅನುರಕ್ತೆ, ಆಕಾಶಕ್ಕೊಂದು ಕಂದೀಲು, ವಾತ್ಸಲ್ಯಪಥ, ಹೇಮಂತಗಾನ, ಬಂಡಾಯ, ಉತ್ತರಾಯಣ, ಹೆಜ್ಜೆ ಹಾಗೂ ಹೆಜ್ಜೆಗುರುತು. ಇವುಗಳಲ್ಲಿ ಅನುರಕ್ತೆ ಹಾಗೂ ವಾತ್ಸಲ್ಯಪಥ ಚಲನಚಿತ್ರಗಳಾದವು. ಬಂಡಾಯ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಿತು.

ನಮ್ಮವರನ್ನ ಹ್ಯಾಗೆ ನಂಬೋದು?

ಈ ಕೆಳಗೆ ತಿಳಿಸಿರುವ ಪ್ರಸಂಗ ನಾನು ಬ್ಯಾಂಕಿನ ಕಾರ್ಯ ನಿಮಿತ್ತ ಉತ್ತರ ಗುಜರಾತಿನ ಪಾಲನಪುರ ಎಂಬಲ್ಲಿ ಇದ್ದಾಗ ನಡೆದದ್ದು.

ಪಾಲನಪುರ ಒಂದು ಚಿಕ್ಕ ಜಿಲ್ಲಾ ಕೇಂದ್ರ. ಅಹ್ಮದಾಬಾದಿನಿಂದ ಸುಮಾರು ೧೪೦ ಕಿ.ಮಿ. ದೂರದಲ್ಲಿದೆ. ಅಲ್ಲಿಗೆ ತಲಪಬೇಕಾದರೆ ಅಹ್ಮದಾಬಾದ್ > ಮೆಹಸಾಣ > ಸಿದ್ದಪುರ (ಮಾತ್ಟ್ರುಗಯಾ) > ಪಾಲನಪುರ ಹೀಗೆ ಅಹ್ಮದಾಬಾದ್ > ದೆಹಲಿ ಮಾರ್ಗವಾಗಿ ಹೋಗಬೇಕು.

ಪ್ರೊ.ಕೆ. ರಾಮದಾಸ್ ಬಾಲ್ಯದ ಪುಟತೆರೆದ ವಿಲಿಯಂ

ಪ್ರೊ.ಕೆ.ರಾಮದಾಸ್ ಬಗ್ಗೆ ಅಥವಾ ಸ್ವತಃ ರಾಮದಾಸರೇ ಬರೆದ ಒಂದೂ ಪುಸ್ತಕವಿಲ್ಲ ಎನ್ನುವ ಕೊರತೆಯನ್ನು ತಮ್ಮದೇ ರೀತಿಯಲ್ಲಿ ನೀಗಿಸಿದ್ದಾರೆ ರಾಮದಾಸ್‌ರವರ ಬಾಲ್ಯ ಸಖ ಶ್ರೀ ವಿಲಿಯಂ.