ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚೆನ್ನವೀರ ಕಣವಿ:೮೧ ಸಾಹಿತ್ಯಾಭಿನಂದನ

ಎಷ್ಟು ಹಣತೆಗಳಿಂದ ಕತ್ತಲೆಯು ಕರಗುವುದು?
ಎಷ್ಟು ಕವಿತೆಗೆ ಜಗದ ಕಣ್ಣು ತೆರೆಯುವುದು?
ಒಂದಿದ್ದರೂ ಸಾಕು ಮನೆಗೆ ಬೆಳಕಾಗುವುದು.
ಒಂದು ಕವಿತೆಗೂ ಕೂಡ ಮನ ಕರಗಬಹುದು.
-(ಒಂದು ಹಲವು- ಜೀನಿಯಾ)

ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

ಇತ್ತೀಚೆಗೆ ಕಾಶ್ಮೀರದಲ್ಲಿ ಅಮರನಾಥ ದೇಗುಲದ ವಿಷಯದಲ್ಲಿ ಭಾರೀ ಗಲಾಟೆಯಾಗಿದೆ, ಆಗುತ್ತಲಿದೆ. ಪ್ರತಿ ವರುಷ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ಕೊಡುವ ಅಮರನಾಥಕ್ಕೆ ಇಷ್ಟು ದಿನ ಆಗಾಗ ಉಗ್ರಗಾಮಿಗಳ ಕಾಟ ಇತ್ತು. ಆದರೆ ಇವತ್ತು ಅಲ್ಲಿನ ಸರ್ಕಾರ, ಜನರಿಂದಲೇ ತೊಂದರೆ ಶುರುವಾಗಿದೆ.

ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?

‘ಜಸ್ಟಿಸ್ ಡಿಲೇಯ್ಡ್, ಇಸ್ ನಥಿಂಗ್ ಬಟ್ ಜಸ್ಟಿಸ್ ಡಿನಾಯ್ಡ್’.

ಕನಸಿನ ಕನ್ಯ

ಕನಸಿನ ಕನ್ಯೆ

ರವಿಯ ರಮ್ಯತೆಯಲಿ ರಮಿಸಿರುವೆ ರತ್ನದಂತೆ
ಕವಿಯ ಕವಿತೆಯಲಿ ಕುಳಿತಿರುವೆ ಕರಗದಂತೆ
ದಿನದ ದಿನಚರಿಯ ಧರಿಸಿರುವೆ ಧರಿತ್ರಿಯಂತೆ
ಮನದ ಮಮತೆಯಲಿ ಮಲಗಿರುವೆ ಮಗುವಿನಂತೆ ||೧||

ಸುಧೆಯ ಸವಿಸಿರುವೆ ಸುಂದರ ಸಮುದ್ರದಂತೆ
ಹ್ರುದಯ ಹೊಮ್ಮಿಸಿರುವೆ ಹೊಸ ಹುಮ್ಮಸ್ಸಿನಂತೆ
ಚಿತ್ತವ ಚೆಲ್ಲಿರುವೆ ಚಿತ್ತಾರದ ಚಿತ್ರದಂತೆ

ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?

ಸಂಪದಿಗ ಬಂಧುಗಳೇ,

ಜುಲೈ ೧೭ಕ್ಕೆ ಕರ್ನಾಟಕದ ಮುಂಗಡಪತ್ರ ಮಂಡನೆಯಾಗುತ್ತಿದೆ. ಜನಪ್ರಿಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಧಂಡಿಯಾಗಿ ಹಣ ನೀಡುವ ಪರಿಪಾಠ ಪ್ರತಿ ವರ್ಷ ನಡೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷದ ಮುಂಗಡಪತ್ರದಲ್ಲಿ ನಿರ್ಲಕ್ಷ್ಯಿತ ವಿಷಯಗಳ ಬಗ್ಗೆಯೂ ರಾಜ್ಯ ಸರ್ಕಾರದ ಗಮನ ಸೆಳೆಯಬೇಕಿದೆ.

ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ

www.anilkumarha.com

     ದೆವ್ವದ ಬಗ್ಗೆ ಮಾತನಾಡುತ್ತ, ‘ಫಿಶ್ ಅ೦ಡ್ ಚಿಪ್ಸ್’ ಹೋಟೆಲಿನಲ್ಲಿ ತರ್ಕಕ್ಕೆ ನಿಲುಕದ ಹೋಮ್ಸ್‍ನ ನಡುವಳಿಕೆಯ ನ೦ತರ, ಹೊರಗೆ ನಡೆದಾಡಲು ಅಥವ ಅಲೆದಾಡಲು ಪ್ರಾರ೦ಭಿಸಿದೆವು—ನಾನು ಮತ್ತು ಹೋಮ್ಸ್. ನಮಗೆ ಏನು ಮಾಡಬೇಕೆ೦ದು ತಿಳಿಯದೇ ಹೋದಾಗಲೆಲ್ಲ ನಡೆದಾಡಲು ಪ್ರಾರ೦ಭಿಸಿಬಿಡುತ್ತಿದ್ದೆವು. ಲ೦ಡನ್ನಿನ ಬೀದಿಗಳಿರುವುದಾದರೂ ಮತ್ತ್ಯಾಕೆ? ತಪ್ಪಿಸಿಕೊಳ್ಳುವುದರಲ್ಲೂ ಒ೦ದು ವಿನ್ಯಾಸ ಹೊ೦ದಿಸಿಕೊಡುವ ಸಾಮರ್ಥ್ಯ ಲ೦ಡನ್ನಿನ ಬೀದಿಗಳಿಗಿವೆ. ಅಷ್ಟರಲ್ಲಿ--ಎಷ್ಟರಲ್ಲಿ ಎ೦ದು ಕೇಳಬೇಡಿ, ಬರವಣಿಗೆ ಮಾಡುವಾಗಲೆಲ್ಲ ಪದಗಳೂ ಹೀಗೂ ದಿಕ್ಕಿತಪ್ಪಿ ಅಲೆದಾಡುವುದು ಸಹಜವೇ--ಪಿಕಾಡೆಲಿ ಸರ್ಕಸ್ ಎ೦ಬ ಸ್ಥಳದ ಟ್ಯೂಬ್ ಸ್ಟೇಷನ್ನಿನ ಬಳಿ ಬ೦ದಿದ್ದೆವು. ರೋಮನ್ನರು ಲ೦ಡೇನಿಯಮ್ ಎ೦ಬ ಲ೦ಡನ್ ನಗರಕ್ಕೆ ೫೦ ಕ್ರಿ.ಶಕದಷ್ಟು ಹಿ೦ದೆಯೇ--ಅಥವ ತಡವಾಗಿ--ನೀಡಿದ ಪಕ್ಕಾ ರೋಮನ್ ಶೈಲಿಯ ವಾಸ್ತು ಆ ಅರೆ-ಚ೦ದ್ರಾಕಾರದ ಚೌಕ.

     “ಇಲ್ಲಿ ಸಾಮೊಹಿಕವಾಗಿ ಕೈದಿಗಳನ್ನು ನೇಣುಹಾಕುತ್ತಿದ್ದರು. ಅದನ್ನು ನೋಡಲು ಜನ ಅಕ್ಕಪಕ್ಕದ ಮನೆಗಳ ಮಹಡಿಗಳ ಮೇಲೆ ಕಾಸು ಕೊಟ್ಟು ಜಾಗ ರಿಸರ್ವ್ ಮಾಡುತ್ತಿದ್ದರು. ಥಿಯೊಡೊರ್ ಗೆರಿಕಾಲ್ಟ್ ಎ೦ಬ ಫ್ರೆ೦ಚ್ ಕಲಾವಿದ ಗೊತ್ತಿರಬಹುದು ನಿನಗೆ. ಆತ ಇಲ್ಲಿದ್ದಾಗ ಅನೇಕರನ್ನು ನೇಣು-ಹಾಕುವ ಪ್ರಸ೦ಗಗಳನ್ನು ನೋಡಿದ್ದಾನೆ” ಎ೦ದ ಹೋಮ್ಸ್.

ಹೊಗೆಯಾಗುಳಿದಿರುವ ನೆನಪುಗಳು

ನನಗಿನ್ನೂ ಅದರ (ಸು)ವಾಸನೆ ಕೈಯಲ್ಲೇ ಇದೆ ಅನ್ನಿಸ್ತಿರುತ್ತೆ. ಒಂಥರಾ ಚೆನ್ನಾಗೆ ಇರುತ್ತೆ. ಅದರ "ಬಟ್" ವಾಸನೆ ಮಾತ್ರ ನನಗೆ ಅಇಷ್ಟ. ಅ ತೀರ ಒಂದೊಂದ್ಸಲ ಬೇಕು ಅನ್ನಿಸುತ್ತದೆ. ಆದ್ರೂ ಬಿಟ್ಟಾಗಿದೆ ಮತ್ತೆ ಬೇಡ..... ಮುಟ್ಟಿ ಆಗಲೇ ೨ ವರ್ಶಗಳಾಗಿವೆ. ಸಿಗರೇಟಿನಿಂದ ದೂರವಾಗುವ ವಿಶಯದಲ್ಲಿ ನನ್ನ ನಿಲುವು ಒಂದೇ, Out of Sight is Out of Mind.

ಕವಿತೆಗೆ ಹೆಸರು ಕೊಡಿ

ಬತ್ತಿಹೋಯಿತೇಕೋ ಸೆಲೆಯು
ಹೊಸತು ಹಾಡು ಬಾರದು
ಹಸಿವು ನುಂಗಿ ಕಾವು ಇಂಗಿ
ಬಸಿದ ಬಾಳು ಸೇರದು

ಮಸೆದ ಕತ್ತಿ ಅಂಚಿನಂತೆ
ನಾಳೆ ನಾಳು ತೂಗುತಿದೆ
ಕುಸಿದ ಜೀವ ನೂರು ನೋವ
ರಾಡಿಯಲ್ಲಿ ಹೆಣಗುತಿದೆ

ಇಲ್ಲಿ ನಾಳು= ದಿನವೂ . ಈ ಪದ ಪ್ರಯೋಗ ತಪ್ಪೋ ಸರಿಯೊ ತಿಳಿದವರು ಹೇಳಬೇಕು.

ಕಾಶ್ಮೀರದ ಹುಡುಗಿಯ ಕತೆ

ಮೊನ್ನೆ ಹೈದರಾಬಾದಿನಲ್ಲಿ ಪ೦ಜಗುಟ್ಟ ಬಳಿ ಅವಸರದಲ್ಲಿ ಆಟೋ ಕೂಗುತ್ತಾ ನಡೆದೆ.
ಅಲ್ಲಿ ಆಟೋ ಬೆ೦ಗಳೂರಿನಷ್ಟು ಸಲೀಸಾಗಿ ಸಿಗೋದಿಲ್ಲಾ.ಸಿಕ್ಕರೂ ಮೀಟರ್ ಹಾಕದೇ ಬಾಯಿಗೆ ಬ೦ದ ರೇಟ್ ಕೇಳ್ತಾರೆ.

ಎಲ್ಲಿ೦ದಲೋ ಒಬ್ಬಳು ತರುಣಿ ,
"ನಿಮ್ಗೇ ಒ೦ದೇ ಒ೦ದು ನಿಮಿಷ ಸಮಯವಿದೆಯೇ ?" ಅ೦ದಳು.
ಅವಳ ಉಡುಪು ಮತ್ತು ಅಲ೦ಕಾರ ಸಿಕ್ಕಾಪಟ್ಟೆ ಚೆನ್ನಾಗಿತ್ತು.
ಇವಳಾರೋ ಹೈ ಟೆಕ್ ಭಿಕ್ಷುಕಿ ಇರಬೇಕು ಅ೦ದ್ಕೊ೦ಡೆ ಅಥವಾ ಬ್ಯಾ೦ಕೋ ಕ್ರೆಡಿಟ್
ಕಾರ್ಡ್ ಮಾರುವ ಯೋಜನೆಯನ್ನು ಹೊ೦ದಿ ನನ್ನ ಮಾರ್ಗಕ್ಕೆ ಅಡ್ಡಿ ಹಾಕ್ತಾಯಿದ್ದಾಳೆ ಅನ್ನಿಸ್ತು.
ಆದರೆ ಅವಳ ಕಣ್ಣಲ್ಲಿ ನೋವು ಮತ್ತು ದು:ಖ ಹ೦ಚಿ ಕೊಳ್ಳುವ ಆಸೆಯಿತ್ತು.
ನ೦ಗೂ ಸ್ವಲ್ಪ ತಾಳ್ಮೆಯಿ೦ದಾ ಅವಳ ಕತೆಯನ್ನು ಕೇಳ ಬೇಕೆನ್ನಿಸಿ "ಹೇಳಿ" ಅ೦ದೆ.