ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೊಡ್ಡ ಜನ ನಾವು

ದೊಡ್ಡವರು ನಾವು
ದಡ್ಡ ಜನರಲ್ಲ

ಚುನಾವಣೆಯು ಮತ್ತೆ ಬಂದಾಗ
ಮಾಡುವೆವು ಯಾತ್ರಗಳನು
ಮತಗಳ ಪಡೆಯಲು, ನಾವು
ನೀಡುವೆವು ಸುಳ್ಳು ಮಾತುಗಳನು.

ನೀರಿಲ್ಲವೇ? ಎನಾಯ್ತು?
ಸಾರಾಯಿ ಹರಿಸುವೆವು
ಮಳೆ ಇಲ್ಲವೆ? ಎನಾಯ್ತು?
ನೆಡುತೋಪು ನೆಡಿಸುವೆವು.

ಜಾಡಿಲ್ಲದೂರುಗಳಿಗೆ
ಗಾಡಿಗಳ ಬಿಡಿಸುವೆವು
ಕಂಬಿ ಇಲ್ಲದಿದ್ದರೇನಂತೆ
ಉಗಿ ಬಂಡಿ ಓಡಿಸುವೆವು

ಹೊಳೆ ಹರಿಯದೂರಿನಲಿ

ಆಸ್ವದಿಸು

ಆಸ್ವದಿಸು - ಇದಕ್ಕೊ೦ದು ಕನ್ನಡದ ಒರೇನ ಹುಡುಕ್ಕೊಡಿ. ಬಳಕೆಯಲ್ಲಿರುವುದು 'ಆಸ್ವಾದಿಸು' ಆದ್ರೂನೂನೂನೂ 'ಆಸ್ವದಿಸು' ಸರಿ ಅನ್ಸುತ್ತೆ.
ಅಥವಾ ಕನ್ನಡದಲ್ಲಿ ಆಸ್ವದಿಸು ಅ೦ತಾನೇನೇನೇ ಬಳಸ್ಕೊ೦ಡ್ರೆ ಹೆ೦ಗೆ? ತಮಿಳಿನಲ್ಲಿ 'ರಸಿಕ್ಕಿರದು' ಇದುಕ್ಕೆ ಸ೦ವಾದಿಯಾದ ಒರೆಯು.

'ದೊಗಳೆ' ಕನ್ನಡದ ಒರೆಯೇ/ಪದವೇ?

'ದೊಗಳೆ' ಯನ್ನು ಬರೊ, ಕೊಳಂಬೆಯವರ ಗಂಟುಗಳಲ್ಲಿ ಹುಡುಕಿದೆ. ಸಿಕ್ಕಲಿಲ್ಲ

ಇದು ಕನ್ನಡದ ಒರೆಯಲ್ಲವೆ ಎಂಬ ದಿಗಿಲು ನನ್ನನ್ನು ಕಾಡುತ್ತಿದೆ .. :(

ದೊಗಳೆ = loose
ಮಾದರಿ:
ದೊಗಳೆ ಚಡ್ಡಿ, ದೊಗಳೆ ಪ್ಯಾಂಟ್

ಸಾಮಾಜಿಕ ಕ್ರಾಂತಿಯ ಹೊಸ ಮಾರ್ಗಾನ್ವೇಷಣೆ - ಉಧೋ ಉಧೋ

ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ ಉಧೋ ಉಧೋ ಕುರಿತು ಹೇಳುವುದಾದರೆ ಉಧೋ ಉಧೋ ಎಂಬ ಹೆಸರೇ ಸೂಚಿಸುವಂತೆ ಇದು ಒಂದು ಊರಿಗೆ ಊರೇ ಒಂದಾಗಿ ಎಬ್ಬಿಸುವ ಅತ್ಯುತ್ಸಾಹದ ಜಯಕಾರ, ಅಥವಾ ಅರ್ಥಹೀನ ಸಮೂಹ ಸನ್ನಿಯ ಒಂದು ಗೊಂದಲದ ಗುಲ್ಲು, ಅಥವಾ ಎಲ್ಲ ಬಗೆಯ ಅತಿಯನ್ನು ಕೊಂಕುವ ಒಂದು ವ್ಯಂಗ್ಯದ ಸೊಲ್ಲು ಇತ್ಯಾದಿಗಳಲ್ಲಿ ಯಾವುದೂ ಆಗಬಹುದಾದ್ದು. ಬಾಳಾಸಾಹೇಬ ಲೋಕಾಪುರ ಸೃಷ್ಟಿಸುವ ನಂದೋವಾಡಿಯ ಮಟ್ಟಿಗೆ ಈ ಉಧೋ ಉಧೋ ಎಂಬ ಜೈಕಾರ ಇದೆಲ್ಲವನ್ನೂ ಸೂಚಿಸುತ್ತದೆ ಎನ್ನಬೇಕು. ಅದನ್ನು ಅದರ ವಿಭಿನ್ನ ಪಾತಳಿಗಳಲ್ಲೇ ಅರ್ಥೈಸಿಕೊಳ್ಳಲು ಮಾತ್ರ ಈ ಕಾದಂಬರಿಯ ಪ್ರತಿಯೊಂದು ಪಾತ್ರದ ಪ್ರಜ್ಞೆ ಹರಿಯುವ ಬಗೆಯನ್ನು ಮತ್ತು ಆ ಪ್ರಜ್ಞೆ ಒಟ್ಟಾರೆಯಾಗಿ ಊರಿನ ಸಮಷ್ಟಿಪ್ರಜ್ಞೆಯೊಂದಿಗೆ ಚಲಿಸುವ ಬಗೆಯನ್ನು ಒಟ್ಟಾಗಿಯೇ ಗ್ರಹಿಸಬೇಕಾಗುತ್ತದೆ. ಅಷ್ಟರಮಟ್ಟಿಗೆ ವ್ಯಕ್ತಿಯೊಬ್ಬ ತನ್ನೊಳಗೆ ತನ್ನ ಸುತ್ತಲಿನ ಸಮಾಜವನ್ನು ಅನುಭವಿಸುತ್ತಿರುತ್ತಾನೆ ಮತ್ತು ಸಮಾಜ ಎಂದು ನಾವು ಸರಳಗೊಳಿಸುವ ಸಂಗತಿ ವ್ಯಕ್ತಿ ನಿರ್ಮಿತ ಸಮಷ್ಟಿಯೇ ಆಗಿರುತ್ತದೆ ಎನ್ನುವುದು ಇಲ್ಲಿ ಸಾಕಾರಗೊಂಡಿರುವ ಬಗೆ ಅನನ್ಯವಾಗಿದೆ.

ಊರಿಗಿರುವ ಒಂದೇ ಬಾವಿಯ ನೀರಿಗಾಗಿ ಹೊಲೆಯರ ಮತ್ತು ಮೇಲ್ಜಾತಿಯವರ ನಡುವೆ ನಡೆಯುವ ಒಂದು ಪ್ರಹಸನದಂಥ ಸಂಘರ್ಷ ಮತ್ತು ಅದಕ್ಕೆ ಕಾರಣವಾದ ಕೆಲವು ಕ್ಷುಲ್ಲಕ ಘಟನೆಗಳು, ಅದರ ಫಲಶ್ರುತಿ ಎನ್ನಬಹುದಾದ ಇನ್ನು ಕೆಲವು ಘಟನೆಗಳು ಹಲವಾರು ಗಹನವಾದ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತವೆ.

ಸಾಮಾಜಿಕ ಕ್ರಾಂತಿಯ ಹೊಸ ಮಾರ್ಗಾನ್ವೇಷಣೆ - ಉಧೋ ಉಧೋ

ಪುಸ್ತಕದ ಲೇಖಕ/ಕವಿಯ ಹೆಸರು
ಬಾಳಾಸಾಹೇಬ ಲೋಕಾಪುರ
ಪ್ರಕಾಶಕರು
ಮನೋಹರ ಗ್ರಂಥ ಮಾಲಾ
ಪುಸ್ತಕದ ಬೆಲೆ
೯೦

ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ ಉಧೋ ಉಧೋ ಕುರಿತು ಹೇಳುವುದಾದರೆ ಉಧೋ ಉಧೋ ಎಂಬ ಹೆಸರೇ ಸೂಚಿಸುವಂತೆ ಇದು ಒಂದು ಊರಿಗೆ ಊರೇ ಒಂದಾಗಿ ಎಬ್ಬಿಸುವ ಅತ್ಯುತ್ಸಾಹದ ಜಯಕಾರ, ಅಥವಾ ಅರ್ಥಹೀನ ಸಮೂಹ ಸನ್ನಿಯ ಒಂದು ಗೊಂದಲದ ಗುಲ್ಲು, ಅಥವಾ ಎಲ್ಲ ಬಗೆಯ ಅತಿಯನ್ನು ಕೊಂಕುವ ಒಂದು ವ್ಯಂಗ್ಯದ ಸೊಲ್ಲು ಇತ್ಯಾದಿಗಳಲ್ಲಿ ಯಾವುದೂ ಆಗಬಹುದಾದ್ದು. ಬಾಳಾಸಾಹೇಬ ಲೋಕಾಪುರ ಸೃಷ್ಟಿಸುವ ನಂದೋವಾಡಿಯ ಮಟ್ಟಿಗೆ ಈ ಉಧೋ ಉಧೋ ಎಂಬ ಜೈಕಾರ ಇದೆಲ್ಲವನ್ನೂ ಸೂಚಿಸುತ್ತದೆ ಎನ್ನಬೇಕು. ಅದನ್ನು ಅದರ ವಿಭಿನ್ನ ಪಾತಳಿಗಳಲ್ಲೇ ಅರ್ಥೈಸಿಕೊಳ್ಳಲು ಮಾತ್ರ ಈ ಕಾದಂಬರಿಯ ಪ್ರತಿಯೊಂದು ಪಾತ್ರದ ಪ್ರಜ್ಞೆ ಹರಿಯುವ ಬಗೆಯನ್ನು ಮತ್ತು ಆ ಪ್ರಜ್ಞೆ ಒಟ್ಟಾರೆಯಾಗಿ ಊರಿನ ಸಮಷ್ಟಿಪ್ರಜ್ಞೆಯೊಂದಿಗೆ ಚಲಿಸುವ ಬಗೆಯನ್ನು ಒಟ್ಟಾಗಿಯೇ ಗ್ರಹಿಸಬೇಕಾಗುತ್ತದೆ. ಅಷ್ಟರಮಟ್ಟಿಗೆ ವ್ಯಕ್ತಿಯೊಬ್ಬ ತನ್ನೊಳಗೆ ತನ್ನ ಸುತ್ತಲಿನ ಸಮಾಜವನ್ನು ಅನುಭವಿಸುತ್ತಿರುತ್ತಾನೆ ಮತ್ತು ಸಮಾಜ ಎಂದು ನಾವು ಸರಳಗೊಳಿಸುವ ಸಂಗತಿ ವ್ಯಕ್ತಿ ನಿರ್ಮಿತ ಸಮಷ್ಟಿಯೇ ಆಗಿರುತ್ತದೆ ಎನ್ನುವುದು ಇಲ್ಲಿ ಸಾಕಾರಗೊಂಡಿರುವ ಬಗೆ ಅನನ್ಯವಾಗಿದೆ.

ಊರಿಗಿರುವ ಒಂದೇ ಬಾವಿಯ ನೀರಿಗಾಗಿ ಹೊಲೆಯರ ಮತ್ತು ಮೇಲ್ಜಾತಿಯವರ ನಡುವೆ ನಡೆಯುವ ಒಂದು ಪ್ರಹಸನದಂಥ ಸಂಘರ್ಷ ಮತ್ತು ಅದಕ್ಕೆ ಕಾರಣವಾದ ಕೆಲವು ಕ್ಷುಲ್ಲಕ ಘಟನೆಗಳು, ಅದರ ಫಲಶ್ರುತಿ ಎನ್ನಬಹುದಾದ ಇನ್ನು ಕೆಲವು ಘಟನೆಗಳು ಹಲವಾರು ಗಹನವಾದ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತವೆ.

ಪ್ರೀತಿಯಿಲ್ಲದ ಮೇಲೆ...

ಕಾರಂತರು ಎಲ್ಲೋ ಹೇಳಿದ ಮಾತಿದು. ಅವರಿಗೆ ಕಿರಿಯ ಸಾಹಿತಿಗಳು, ಇನ್ನೂ `ಬರೆಯುವುದೋ ಬೇಡವೋ' ಅಂತ ಯೋಚಿಸುತ್ತಿರುವವರು ಪತ್ರ ಬರೆಯುವುದಿತ್ತಂತೆ. ಹೀಗೀಗೆ, ನಾನೊಂದು ಕತೆ ಬರೆಯಬೇಕಂತ ಇದ್ದೇನೆ, ತಮ್ಮ ಸಲಹೆ ಬೇಕು ಅಂತಲೋ, ನಾನೊಂದು ಕಾದಂಬರಿ ಬರೆಯಬೇಕಂತ ಇದ್ದೇನೆ ತಮ್ಮ ಆಶೀರ್ವಾದ ಬೇಕು ಅಂತಲೋ ಬರೆದ ಪತ್ರಗಳು. ಕಾರಂತರು ಅವರಿಗೆಲ್ಲ ಸಾಮಾನ್ಯವಾಗಿ ಬರೆಯುತ್ತಿದ್ದ ಮಾತೊಂದಿತ್ತಂತೆ. ಬೇರೆಯವರಿಗೆ ಹೇಳಬೇಕಾದಂಥ ವಿಚಾರ ನಿಮ್ಮಲ್ಲಿ ಇದೆಯೋ. ಅದನ್ನು ನೀವು ಯಾಕೆ ಬರೆಯಬೇಕು ಅಂತ ನಿಮಗೆ ಗೊತ್ತಿದೆಯೋ. ನೀವು ಬರೆದಿದ್ದನ್ನು ನಾನು ಯಾಕೆ ಓದಬೇಕು ಅಂತ ಯೋಚಿಸಿದ್ದೀರೋ.

ನಮ್ಮ ಅನೇಕ ಸಾಹಿತಿಗಳು ನಾನೇಕೆ ಬರೆಯುತ್ತೇನೆ ಎಂಬ ಬಗ್ಗೆ ಬರೆದಿದ್ದಾರೆ. ಬರೆಯುವ ಬಯಕೆ ಅದಮ್ಯವೂ, ಅದು ಅತ್ಯಂತ ಸೂಕ್ಷ್ಮವೂ, ಅದು ಆಯಾ ಭಾಷೆಯ ಅಮ್ಮನ ಸೇವೆಯೂ ಎಂದೆಲ್ಲ ಓದಿದ್ದೇವೆ. ಇರಬಹುದು ಅಂತ ಸುಮ್ಮನಿರುತ್ತೇವೆ. ಹಾಗೆಯೇ ನಾವೂ ನಾವೇಕೆ ಓದುತ್ತೇವೆ ಎಂಬ ಪ್ರಶ್ನೆಯನ್ನೂ ಹಾಕಿಕೊಂಡು ಇಂಥದ್ದೇ ಉತ್ತರಗಳನ್ನು ಕೊಟ್ಟುಕೊಂಡು ಬೇಕಿದ್ದರೆ ಇದೆಲ್ಲ ಕನ್ನಡಮ್ಮನ ಸೇವೆ ಎಂದುಕೊಂಡು ಖುಶಿಪಡಬಹುದು!

ನಾಡೋಜ ಎಂದರೆ.....

ನಾನು ಬಹಳಷ್ಟು ಬಾರಿ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಕೇಳಿ ಬಂದಿರುವ ಪದ ನಾಡೋಜ.

ಈ ಪದವನ್ನು ಯಾವುದಾದರೂ ಹಿರಿಯ ಸಾಹಿತಿಯ ಹೆಸರಿನ ಹಿಂದೆ ಜೋಡಿಸಿರುತ್ತಾರೆ. ನಾಡೋಜ ಎಂಬ ಪದದ ಅರ್ಥವೇನು, ಇದೊಂದು ಪ್ರಶಸ್ತಿಯ ಹೆಸರೆ, ಹಾಗಿದ್ದರೆ ಇದನ್ನು ಯಾವ ಸಂದರ್ಭದಲ್ಲಿ ಯಾರೆಲ್ಲರಿಗೆ ಕೊಡಬಹದು, ದಯವಿಟ್ಟು ಗೊತ್ತಿದ್ದವರು ಯಾರಾದರೂ ತಿಳಿಸುವಿರಾ.

ರಾಮನಿಲ್ಲವೇ?? ಇಲ್ಲ ಬಿಡಿ...

ರಾಮನಿಲ್ಲವೇ?? ಇಲ್ಲ ಬಿಡಿ...

ರಾಮನಿಲ್ಲವೇ??
ಇಲ್ಲ, ಬಿಡಿ...

ದೇವರೇ ಇಲ್ಲವೇ??
ಇಲ್ಲ, ಬಿಡಿ...

ಆದರೆ...

ಜಲ ಪ್ರಳಯಕೆ
ಎಡೆ ಮಾಡಬೇಡಿ...

ಮೀನುಗಾರರ
ಹೊಟ್ಟೆಯನು ಹೊಡಿಬೇಡಿ...

ಜನರ ಹಣವನು
ಪೋಲು ಮಾಡಬೇಡಿ...

ದೇಶದ ಭದ್ರತೆಗೆ
ಧಕ್ಕೆ ತರಬೇಡಿ...

ಹವಳಗಳ, ಮೃದ್ವಂಗಿಗಳ
ಮರಣ ಮೃದಂಗ ಬಾರಿಸಬೇಡಿ...

ಥೋರಿಯಂ ನಿಕ್ಷೇಪವನು
ನಾಶ ಮಾಡಬೇಡಿ...

ನೀಚ ರಾಜಕಾರಣಕೆ

’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

ಆ ಎಂದು ಬಾಯಿ ತೆರೆಯದೆ ’ಅ’ ಅನ್ನೇ ದೀರ್ಘಕಾಲ ಉಚ್ಚರಿಸುವ ಪದ್ದತಿ ನಮ್ಮಲ್ಲಿದೆ .
(ಇದನ್ನು ಹಿಂದೆ ’S' ಸಂಕೇತದಿಂದ ಸೂಚಿಸುತ್ತಿದ್ದರು . ಈಗ ಅದನ್ನು ನೀವು ನೋಡಲಿಕ್ಕಿಲ್ಲ . ಈ ಚಿಹ್ನೆ ಇಲ್ಲದಿರುವಾಗ ಮಾತಿನಲ್ಲಿ ಕೊಡುವ ಒತ್ತು ಬರಹದಲ್ಲಿ ಇಲ್ಲವಾಗುತ್ತದೆ .)

ಉದಾಹರಣೆ ಗೆ

ನಾನೇ (ಪ್ರ) - ನಾನS(ಧಾ)
ಅವನೇ (ಪ್ರ) - ಅವನS(ಧಾ)
ಹಾಗೆಯೇ(ಪ್ರ),ಹಾಗೇ - ಹಾಂಗS(ಧಾ)

ಕನ್ನಡ ಮಾಧ್ಯಮ ಇಂಗ್ಲಿಷ್ ಮೀಡಿಯಂ

ಕನ್ನಡ ಮಾಧ್ಯಮ ಇಂಗ್ಲಿಷ್ ಮೀಡಿಯಂ
ಒಂದೆ ರಾಜ್ಯ, ಒಂದೆ ಜನ ಎರಡೇರಡು ಸಿಸ್ಟಂ.

ನೇರ ಪಾಯಿಂಟಿಗೆ ಬರ್ತಿನಿ.

ಕನ್ನಡ, ಸಮಾಜ - ಕನ್ನಡ ಮಾಧ್ಯಮ
ಇಂಗ್ಲಿಷ್, ಮ್ಯಾಥ್ಸ್, ಸಯೆನ್ಸ್ - ಇಂಗ್ಲಿಷ್ ಮೀಡಿಯಂ
೧ ರಿಂದ ೧೨, ಎಲ್ಲಾರ್ಗೂ ಒಂದೆ ಸಿಸ್ಟಂ.

ಹಿಂಗಾದರೆ ಹೆಂಗೆ?