ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರಾಮಸೇತು ರಕ್ಷಿಸುವುದೋ ಶ್ರೀರಾಮನನ್ನೇ ರಕ್ಷಿಸಿಕೊಳ್ಳವುದೋ..

ಇಂದಿನ ಸುದ್ದಿ ನೋಡಿ, ನಗಬೇಕೋ ಅಳಬೇಕೋ ರಾಮ ರಾಮಾ!. . ರಾಮಸೇತುವನ್ನು ರಕ್ಷಿಸಿ;ದೇಶ ಉಳಿಸಲು ಹೋಗಿ  ಇದೀಗ ನಾವು ಶ್ರೀರಾಮನನ್ನೇ ಉಳಿಸಿಕೊಳ್ಳಲು ಹೆಣಗಬೇಕಿದೆಯಲ್ಲ! ರಾಮನೇ ಇಲ್ಲಾಂದ್ಮೇಲೆ ಶ್ರೀಕೃಷ್ಣ ಇನ್ನೆಲ್ಲಿ?

ನಮ್ಮ ರತ್ನ Excellenಟು!

ಜೀವನ, ಭಾವನೆಗಳ ಒಂದು ಕೊನೆಯಿಲ್ಲದ ಸರಪಳಿ. ಮೊದಮೊದಲು ನಮ್ಮೆಲ್ಲರ ಭಾವನೆಗಳ ಮೂಲ ಯಾವುದು ಎಂಬುದರ ಪ್ರಶ್ನೆಯೊಂದನ್ನು ಮುಂದಿಟ್ಟುಕೊಂಡು "ಸ್ಪೂರ್ತಿ" ಎಂಬ ಲೇಖನವನ್ನು ಬರೆದಿದ್ದೆ [ಓದಲು ಇಲ್ಲಿ Click ಮಾಡಿ]. ಪ್ರತಿಯೊಂದು ಕ್ಷಣವೂ ನಾವು ಒಂದಿಲ್ಲ ಒಂದು ವಿಷಯದಲ್ಲಿ ನಮ್ಮನ್ನು ನಾವು ಮಗ್ನರನ್ನಾಗಿಸಿಕೊಳ್ಳುತ್ತೇವೆ, ಇಲ್ಲವಾದರೆ ನಮ್ಮ ಮನಸ್ಸು ಯಾವುದೋ ವಿಷಯವನ್ನು ಮೆಲುಕು ಹಾಕುತ್ತ ದೇಶದೇಶಾಂತರ ಸುತ್ತಾಡುತ್ತಿರುತ್ತದೆ. ಕಥೆ ಕಾದಂಬರಿಗಳನ್ನು ಅಥವ ಇನ್ಯಾವುದೇ ಪುಸ್ತಕಗಳನ್ನು ಓದುತ್ತ ಓದುತ್ತ ಹೋದಂತೆ ಹೊಸ ಹೊಸ ಕಲ್ಪನೆಗಳು ನಮ್ಮನ್ನಾವರಿಸಿ ಬಿಡುತ್ತವೆ. ಕೆಲವೊಂದು ಭಾಗಗಳು ನಮ್ಮನ್ನು ಆನಂದದ ಅತ್ಯುನ್ನತ ಸ್ಥಿತಿಗೊಯ್ದರೆ ಕೆಲವೊಂದು ಭಾಗಗಳು ತುಂಬಾ ದುಃಖಕ್ಕೆ ಗುರಿಮಾಡಬಹುದು. ಓದುತ್ತ ಓದುತ್ತ ಹೋದಂತೆ, ಯಾವುದೋ ಒಂದು ಶಕ್ತಿ ಥಟ್ಟನೆ ಬಂದು, ಒಂದೊಂದು ಬಗೆಯ ಭಾವನೆಗಳನ್ನು ಮೂಡಿಸಿ, ಆಶ್ಚರ್ಯಚಕಿತರನ್ನಾಗಿ ಮಾಡಿ, ಮರುಕ್ಷಣವೇ ಮಾಯವಾಗಬಹುದು. ಯಾವುದೋ ಒಂದು ಮಾನಸಿಕ ಸ್ಥಿತಿಯಲ್ಲಿದ್ದಾಗ, ಯಾವುದೋ ಒಂದು ವಿಷಯ ಥಟ್ಟನೆ ಹೊಳೆದು ನಮ್ಮನ್ನು ಅತೀವ ಸಂತೋಷಕ್ಕೆ ಗುರಿಮಾಡುತ್ತದೆ. ಆ ಅನುಭವವನ್ನು ನೆನೆದರೆ ಮತ್ತೆ ಅದೇ ಥರದ ರೋಮಾಂಚನ ಸಿಗುವುದಿಲ್ಲ. ಆ ಅನುಭವವನ್ನು ಬೇರೊಬ್ಬದ ಜೊತೆ ಹಂಚಿಕೊಂಡು, ಅವರೂ ಆ ರೋಮಾಂಚನವನ್ನ ಅನಭವವಿಸುವಂತೆ ಮಾಡುವುದು ಹೇಗೆ?

ಅಚ್ಚಗನ್ನಡ ಒರೆಗಳು

ಅಚ್ಚಗನ್ನಡ ಒರೆಗಳು:
ಈ ಕೆಳಗಿನ ಒರೆಗಳ ಅರಿತವೇನು?
೧.ಪುರ್ಬು(ದ.ಕ.ದ್ದಲ್ಲ)
೨.ಕರ್ಚು(ಕೞ್ಚು)
೩.ತೋೞ್(ಹೊಸಗನ್ನಡದ ತೋಳಲ್ಲ!) ಸೂ: ಮುದ್ದಣ ಪ್ರಯೋಗ
೪.ತೂಬು

ನಮ್ಮ ಯುವ ಜನಾಂಗದ ದ್ವಂದ್ವ - (ಸಾಹಿತಿ ಮನು ಅವರ "ಕಥೆಯೊಳಗಿನ ಕಥೆ”- ಒಂದು ಸಾಹಿತ್ಯಕ ಆತ್ಮಕಥನದಿಂದ)

ನಾನು ಇತ್ತೀಚೆಗೆ ಓದಿ ಮೆಚ್ಚಿಕೊಂಡ “ಮನು” ಅವರ “ಕಥೆಯೊಳಗಿನ ಕಥೆ”- ಒಂದು ಸಾಹಿತ್ಯಕ ಆತ್ಮ ಕಥನದಲ್ಲಿ ಸಾಹಿತಿ ಮನು(ಪಿ.ಎನ್.ರಂಗನ್ ಇವರು ಇಂಜಿನಿಯರ್ ಆಗಿದ್ದು  ಆ ಕ್ಷೇತ್ರದಲ್ಲಿಯೆ ಕೆಲಸ ಮಾಡುತ್ತ, ಉನ್ನತ ಹುದ್ದೆಯಲ್ಲಿದ್ದೂ, ಎಂ.ಎ.ಪದವಿಯನ್ನೂ ಗಳಿಸಿ, ಹಿಂದಿ, ಇಂಗ್ಷೀಷ್, ಸಂಸ್ಕೃತ ಮತ್ತು ಶಾಸನ ಶಾಸ್ತ್ರ ಇವುಗಳಲ್ಲಿ ಪ್ರಾವಿಣ್ಯತೆ ಪಡೆದ ಘನ ವಿದ್ವಾಂಸರು).

ಅಲ್ಲಿಂದ ಇಲ್ಲಿಗೆ

                                                ಅಲ್ಲಿಂದ ಇಲ್ಲಿಗೆ ಬಂದೆ

                                                 ನಲಿವ ಹುಡುಕುತ್ತಾ

                                          ಮುಸುಕಾದ ನುಲಿದುಕೊಂಡಿರುವ

                                             ದಾರಿಗಳಲ್ಲಿ ಓಡುವುದಿರಲಿ

ಅಮೇರಿಕವೆಂಬ ಹೆಣದ ಬಟ್ಟೆ

ಕಾಗಿನಿಲೆಯವರ 'ಬಿಳಿಯ ಚಾದರ' ಕಾದಂಬರಿ ಓದಿ ಅನಿಸಿದ್ದು: (ಕಾದಂಬರಿಯ shortcomings ಬಗ್ಗೆ, ನ್ಯೂನತೆಗಳ ಬಗ್ಗೆ ನಾನು ಬರೆಯುವುದಿಲ್ಲ, ಅದನ್ನು ಕನ್ನಡದ ವಿಮರ್ಶಕರು ಮಾಡಲಿ - ಅದು ಕಾಗಿನೆಲೆಯವರ ಬೆಳವಣಿಗೆಗೆ ಅಗತ್ಯ ಕೂಡ)

ಸೂರ್ಯ ಕಾಲು

ನಡೀವಾಗ ಯಾರಾದರೂ ಜತೆಗೆ ಬೇಕು.
ಬೇರೇ ಬೇರೇ ಸೂರ್ಯನ ಬೆಳಕಿಗೆ ಮೈಕಾಯಿಸಿಕೊಂಡಿದ್ದರೂ ಪರವಾಗಿಲ್ಲ. ಜತೆಗಿರಬೇಕು. ಜತೆಗಿರೋ ಮನಸ್ಸಿದ್ದರೂ ಸುಲಭ ಅಲ್ಲ. ಒಬ್ಬೊಬ್ಬರಿಗೆ ಒಂದೊಂದು ನಮೂನೆ ಕಾಲು. ಆನೆ ಕಾಲು, ಕುದುರೆ ಕಾಲು, ಇಲಿ ಕಾಲು. ಕೆಲವರಿಗೆ ಹಕ್ಕಿ ಕಾಲು. ಇನ್ನು ಕೆಲವರಿಗೆ ಕಾಲಿಲ್ಲದೇನೂ ಹೋಗತೀನಿ ಅನ್ನೋ ಹಾವಿನ ಛಲವೇ ಕಾಲು.
ತುಂಬಾ ದೂರದ ದಾರಿ;
ಏರು ಪೇರು;
ಹಳ್ಳ ಕೊಳ್ಳ;
ಬೆಟ್ಟ ಕಣಿವೆ;
ಟ್ರಾಫಿಕ್ಕು ಹೊಗೆ;
ತುಂಬಾ ಗೋಜಲಿನ ದಾರಿ;
ಸುಸ್ತಾದರೆ ಏನು ಮಾಡೋದು? ಕೇಳೋದು ಏನು ಬಂತು? ಜೇಬಿಂದ ಒಂದು ಮರ ತೆಗೆದು ನೆಟ್ಟುಕೊಂಡು, ಅದರ ನೆರಳಲ್ಲಿ ಕೂರೋದು. ಸೂರ್ಯನ ಝಳ ಜಾಸ್ತಿ ಆಯ್ತ? ಅವನನ್ನ ಸಮುದ್ರದಲ್ಲಿ ಮುಳುಗಿಸೋದು. ಜೋಳಿಗೆಯಿಂದ ಒಂದು ತುಂಡು ಚಂದ್ರನ್ನ ತೆಗೆದು ಮೋಡದ ಹಿಂದೆ ನೇತು ಹಾಕೋದು.
ರಸಿಕತೆ ಉಕ್ಕಿದರೆ ಇದ್ದೇ ಇದೆ;
ಹಾಡು ಪಾಡು;
ಜಗಳ ಪ್ರೀತಿ;
ಫೋಟೋ ಫಿಲ್ಮು;

ಬೆಳ್ಳನೆ ಬಟ್ಟೆಗೆ ಬೆಚ್ಚನೆ ರಕ್ತ ಮೆತ್ತಿ…. - ಸಣ್ಣಕತೆ

ಆತ ಕೂತಲ್ಲೇ ಕೂತಿದ್ದ. ಕದಲಲಿಲ್ಲ ಒಂದಿನಿತೂ ! ಬೆಳಗಾಗೆದ್ದಾಗ ಯಾರೋ ಹೇಳಿದರು – “ನೀನಿರುವುದು ಭಾರತದಲ್ಲಲ್ಲ, ಇದು ಪಾಕಿಸ್ತಾನ, ಹೊರಡು ಇಲ್ಲಿಂದ…” ಆ ವ್ಯಕ್ತಿ ಈ ಸಂದಿಗ್ಧತೆಯ ಉರುಳಿಗೆ ಸಿಕ್ಕಿದ್ದು, ಭಾರತ – ಪಾಕ್ ವಿಭಜನೆಗೊಂಡಾಗ. ಹೃದಯ ಡವಗುಟ್ಟತೊಡಗಿತು. ಮಂದಿ, ಸಾಮಾನು ಸರಂಜಾಮು ಹೊತ್ತು, ದೋಣಿ ಸೇರಿಕೊಳ್ಳುತ್ತಿದ್ದರು. ಎಲ್ಲರೂ ಮುಸ್ಲಿಂ ಪ್ರಜೆಗಳ ಹಾಗೆ ಬಟ್ಟೆ ಧರಿಸಿದ್ದರು. ತಾನು ಹೋದೇನು ಎಲ್ಲಿಗೆ? ಚಿಂತಿಸಿದ. ಇಲ್ಲೇ ತನ್ನ ಮನೆಯಿದೆ, ಹೆಂಡತಿ ಮಗುವಿದೆ, ಫಲವತ್ತಾದ ಭೂಮಿಯೂ ಇದೆ. ಇವೆಲ್ಲವನ್ನು ಬಿಟ್ಟು….. ? ಆದರೆ ವಿಧಿಯಿಲ್ಲ, ಹೋಗಲೇಬೇಕು. “ಹೋಗದಿದ್ದರೆ ಉಳಿಗಾಲವಿಲ್ಲ. ಉಳಿದಿರುವುದು ಶಿರಚ್ಛೇದನವಷ್ಟೆ! ಇಲ್ಲಿನವರಿಗೆ ಹಿಂದು – ಕ್ಕ್ರೈಸ್ತ ಎಂಬ ಭೇದಭಾವವಿಲ್ಲ, ಮುಸ್ಲಿಮೇತರನಾಗಿದ್ದರೆ ಸಾಕು, ಸಿಕ್ಕಲ್ಲೇ ರುಂಡ ಕತ್ತರಿಸಿ ಎಸೆಯುತ್ತಾರೆ” ಎಂದನೊಬ್ಬ. ನಿನ್ನೆಯ ಮನುಷ್ಯ ಇಂದು ನಿರ್ದಯಿ ಹೇಗಾದ ?