ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅವನಿಲ್ಲ

ಅವನಿಲ್ಲದೇ ಎಂಟು ವರ್ಷ ಕಳೆದು ಹೋಯಿತು. ಎಂಟು ವರ್ಷ ಹೇಗೆ ಕಳೆಯಿತೆಂದು ತಿಳಿಯಲೇ ಇಲ್ಲ ಎಂದು ಸುಳ್ಳು ಹೇಳಲಾರೆ. ಅವನನ್ನು ಈ ಎಂಟು ವರ್ಷಗಳಲ್ಲಿ ಎಷ್ಟು ಬಾರಿ ನೆನೆದಿರಬಹುದು ಎಂಬ ಲೆಕ್ಕವನ್ನೂ ನಾನು ಇಡಲಾರೆ. ಹಾಗೇ, ನಾನು ಎಂಟು ವರ್ಷ ಹಿಂದೆ, ಇದೇ ದಿನ, ಮುಂಜಾನೆ ಬಂದ ಆ ಘೋರ ದೂರವಾಣಿ ಕರೆಯನ್ನೂ ಎಂದೆಂದಿಗೂ ಮರೆಯಲಾರೆ.

ಅವನು ಇದ್ದಿದ್ದು ಒಂದು ಚಿಕ್ಕ ಊರಿನಲ್ಲಿ. ಚಿಕ್ಕ ಊರೆಂದರೆ, ಸಣ್ಣ ಹಳ್ಳಿಯೂ ಅಲ್ಲ, ಭಾರೀ ನಗರವೂ ಅಲ್ಲ - ಆ ರೀತಿಯ ನಡುವಿನ ಮಟ್ಟದ ಒಂದು ಪಟ್ಟಣ. ಅಲ್ಲಿಗೊಂದು ಒಳ್ಳೇ ಶಾಲೆ. ಆ ಊರಿಗೆ ಬಂದಾಗ ಅವನು ಮೂರನೆಯದೋ-ನಾಕನೆಯದೋ ತರಗತಿಯರಲ್ಲಿ ಇದ್ದಿರಬೇಕು. ಶಾಲೆಯ ಎಲ್ಲ ಕಲಿಸುವವರಿಗೂ ಅಚ್ಚುಮೆಚ್ಚಾಗಲು ಅವನಿಗೆ ಹೆಚ್ಚೇನೂ ವೇಳೆ ಬೇಕಾಗಲಿಲ್ಲ. ತನ್ನ ಹೆಸರಿಗೆ ತಕ್ಕಂತೆ, ಎಲ್ಲರ ಮನಸ್ಸನ್ನೂ ಕದ್ದುಬಿಟ್ಟ ಅವನು. ಯಾವ ಪ್ರಬಂಧ ಸ್ಪರ್ಧೆಯಾಗಲಿ, ಚರ್ಚಾಕೂಟವಾಗಲಿ, ಅವನಿಗೆ ಬಹುಮಾನ ಅನ್ನುವುದು ಕಟ್ಟಿಟ್ಟ ಬುತ್ತಿಯೇ. ಪರೀಕ್ಷೆಗಳಲ್ಲಿ, ಬರೇ ಶಾಲೆಗೇಕೆ, ಜಿಲ್ಲೆಗೇ ಮೊದಲಿದ್ದವನು ಅವನು.

ಅವನು ನನಗಿಂತ ಎಂಟು ವರ್ಷ ದೊಡ್ಡವನು. ಚಿಕ್ಕ ವಯಸ್ಸಿಗೇ ಬಹಳ ವಿಷಯಗಳನ್ನು ಅರಿತಿದ್ದ ಅವನು, ಅದೇ ರೀತಿ ನಾನೂ ಆಗಬೇಕೆಂಬ ಬಯಕೆಯನ್ನು ನನಗೆ ಗೊತ್ತೊಲ್ಲದೇ ಮೂಡಿಸಿದ್ದ. ಲೈಬ್ರರಿಗೆ ತಾನು ಹೋಗುವಾಗ ನನ್ನನ್ನೂ ಕರೆದೊಯ್ದು, ನನ್ನ ಮುಂದೆ ಪುಸ್ತಕಗಳನ್ನು ಹಾಕಿ ಓದಲು ಹೇಳುತ್ತಿದ್ದ. ನನಗೆ ಓದುವ ಹುಚ್ಚು ಹತ್ತಿಸಿದ್ದೇ ಅವನು ಅನ್ನೋದು ನನ್ನ ನೆನಪು. ಅವನ ಜೊತೆ ನಾನು ಹೋಗುತ್ತಿದ್ದರೆ, ನನಗೆ ಎಲ್ಲರೂ ನನ್ನನ್ನೇ ನೋಡ್ತಾ ಇದ್ದಾರೆ, ಅನ್ನೋ ಅನಿಸಿಕೆ. ನಾನು ಆ ಶಾಲೆಯೆ ಸೇರಿದ ವರ್ಷ ಅವನು ಆ ಶಾಲೆಯಿಂದ ಹೊರಬಿದ್ದ. ಅದೂ ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೇ ಮೂರನೇ ಸ್ಥಾನ ಪಡೆದು. ಹಾಗಾಗಿ, ನಾನು, ಅವನು ಒಂದು ಶಾಲೆಯಲ್ಲಿ ಯಾವತ್ತೂ ಹೋಗಿದ್ದೇ ಇಲ್ಲ. ಹಾಗಿದ್ದ್ರೂ, ಎಷ್ಟೋ ಜನ ಕಲಿಸುವವರು ಅವನ ಬಗ್ಗೆ ನನ್ನಲ್ಲಿ ವಿಚಾರಿಸಿಕೊಳ್ಳುವವರೇ. ಶಾಲೆಯಲ್ಲಿ ನನಗೆ ಅಂತ ಒಂದು ವ್ಯಕ್ತಿತ್ವ, ಬರುವ ವೇಳೆಗೆ, ಅವನು ಮೊದಲ, ಎರಡನೆ ಪ್ರಿಯೂನಿವರ್ಸಿಟಿ ಪರೀಕ್ಷೆಗಳೆರಡರಲ್ಲೂ ರಾಜ್ಯಕ್ಕೇ ಹತ್ತರೊಳಗೇ ಬಂದು ಹೆತ್ತವರಿಗೆ ಹೆಮ್ಮೆ ತಂದ. ಎಲ್ಲ ಪತ್ರಿಕೆಗಳಲ್ಲೂ ಅವನ ಚಿತ್ರ. ಆದರೂ, ಹಮ್ಮು -ಬಿಮ್ಮಿಲ್ಲದ ಸ್ವಭಾವ ಅವನದು. ತನಗೇನು ಗೊತ್ತು ಅನ್ನುವುದನ್ನು ವಾಚ್ಯವಾಗಿ ತೋರಿಸಿಕೊಳ್ಳದೆಯೇ, ಅದರ ಅನುಭವ ಮಾತ್ರ ಮಾಡಿಸುವ ಅವನ ಗುಣ ಹಲವರಲ್ಲಿ ಕಾಣಸಿಗದು.

ಗೆಳೆಯ

ತುಂಬ ದಿನದ ಮೇಲೆ
ಎಲ್ಲೋ ಸಿಕ್ಕ ನನ್ನ ನಲ್ಲನ ಕ್ಷೌರಿಕ-
ನಲ್ಲನ ಉದ್ದಗೂದಲಿನ ಸೊಗಸುಗಾರಿಕೆ
ನೋಡಿಯೂ ನೋಡದವನಂತೆ
ಹೇಗಿದ್ದೀರೆಂದು ಮಾತ್ರ ವಿಚಾರಿಸಿ
ಬೀಳ್ಕೊಟ್ಟ
ದೊಡ್ಡ ಮನಸ್ಸಿನ ವಿಶಾಲತೆಯಲ್ಲಿ.

ಜಾಲಿ ಬಾರಿನಲ್ಲಿ ...

ಬಿ.ಆರ್.ಲಕ್ಷಣ್ ರಾವ್ ಅವರ ಕವನ, ಮೈಸೂರು ಅನಂತ ಸ್ವಾಮಿ, ಸಿ.ಅಶ್ವಥ್ ಅವರ ಕಂಠಸಿರಿಯಲ್ಲಿ ಕೇಳಿ ಆನಂದಿಸಿ....

ಜಾಲಿ ಬಾರಿನಲ್ಲಿ
ಕೂತು ಪೋಲಿ ಗೆಳೆಯರು
ಗೋಪಿಯನ್ನು ಪಾಪ
ಗೇಲಿ ಮಾಡುತ್ತಿದ್ದರು

ಗುಂಡು ಹಾಕೊ ಗೋಪಿ
...
ಚಿಕನ್ ಬಿರಿಯಾನಿ
ಏಕ್ ಲೋಟ ತಂಡಾಪಾನಿ

....

ಅನಿಸುತಿದೆ ಯಾಕೋ ಇಂದು...

ಬೆಂಗಳೂರಿನಿಂದ ರಜೆ ಮುಗಿಸಿ ಹಿಂತಿರುಗಿ ಸುಮಾರು ವಾರವಾಯ್ತು. ಮನೆಯಲ್ಲಿ ತೆರೆದಿರುವ ಸೂಟುಕೇಸು ನೋಡುತ್ತಾ ಏನೋ ಒಂಥರ ಡಿಪ್ರೆಶನ್. ಅಯ್ಯೋ, ಹೋಗಿಬಂದಿದ್ದು ಆಗೇ ಹೋಯ್ತೇ ಎಂಬ ವ್ಯಥೆ. ಅಲ್ಲಿಯವರೊಡನೆ ಬೆರೆತು ಕಳೆದ ಕ್ಷಣಗಳ ನೆನಪು. ಹೀಗೆ ಬಾಧೆ ಪಡುವ ಬದಲು ಯಾಕೆ ಸುಮ್ಮನೆ ವಾಪಸ್ಸು ಹೋಗಿಬಿಡಬಾರದು? ಏನಿದೆ ಈ ಸುಡುಗಾಡು ನೆಲದಲ್ಲಿ ಅಂತಹ ಮೋಡಿ?

ಕನ್ನಡದ ಅಳಿವು-ಉಳಿವು

ಇದು ಒಟ್ಟಾರೆ ನನ್ನ ಮೊದಲ ಬ್ಲಾಗ್, ಇ೦ಗ್ಲೀಷಿನಲ್ಲೂ ನಾನಿನ್ನು ಯವುದೇ ಬ್ಲಾಗ್ ಬರೆದಿಲ್ಲ.

ನು ಚೀನಾಕ್ಕೆ ಬ೦ದು ಸುಮಾರು ೨ ತಿ೦ಗಳು ಆಗಿವೆ.ಇಲ್ಲಿನ ಜನ ತಮ್ಮ ಭಾಷೆಗೆ ಕೊಡುವ ಮಹತ್ವ ಅಸಾಧಾರಣ. ನಾನು ಒಬ್ಬ software engineer.
ನನ್ನ ಓದಿನ ಬಹುಪಾಲು ಮಾಧ್ಯಮ ಇ೦ಗ್ಲೀಷಿನಲ್ಲಿ,ಉದ್ಯೊಗದಲ್ಲ೦ತೂ ಕನ್ನಡದ ಬಳಕೆ ಇಲ್ಲವೇ ಇಲ್ಲ.

ಚೋಲಿಕೇ ಪೀಛೆ ಕ್ಯಾ ಹೈ? ಜಯಲಲಿತಾ ಶಾಲಿನ ಹಿಂದೇನಿದೆ?

ರೇಷ್ಮೆ ಶಾಲು ನಿಮ್ಮ ಬಳಿಯಿದ್ದರೆ, ಬಂದೂಕಿನ ಗುಂಡಿಗೆ ಗೇರ್ ಮಾಡಬೇಕಾದ ಅಗತ್ಯವಿಲ್ಲ! ರೇಷ್ಮೆ ಬಟ್ಟೆ ಗುಂಡು ನಿರೋಧಕದಂತೆ ಹೇಗೆ ಕೆಲಸ ಮಾಡುತ್ತದೆ ಎಂಬ ಕುತುಹೂಲಕ್ಕೆ ಇಲ್ಲಿದೆ ಸಮಾಧಾನ ಎಂದಿನ ಇನ್ಫೋಟೈನ್ ಮೆಂಟ್ ಸ್ಟೈಲ್ ನಲ್ಲಿ..

ಅಂಕಣ ‘ವಿಚಿತ್ರಾನ್ನ ! ’ ಇದು ಶ್ರೀವತ್ಸ ಜೋಶಿ ಅವರ ನಳಪಾಕ !

ಕನ್ನಡದ entrepreneur

ಕರ್ನಾಟಕದಲ್ಲಿ ಉದ್ಯಮಶೀಲತೆ ಮೆರೆದ ಕನ್ನಡಿಗ ಯಾರು ಎಂದಾಗ ಸಾಮಾನ್ಯ ಕೇಳಿ ಬರುವ ಹೆಸರು ನಾರಾಯಣ ಮೂರ್ತಿ. ಆದರೆ ಕನ್ನಡ ನಾಡಿನಲ್ಲೇ ಬದಲಾವಣೆಗೆ ಕಾರಣವಾದ ಕನ್ನಡ ಉದ್ಯಮಿ ಯಾರು ಎಂಬುದಕ್ಕೆ ಬಹುಶಃ ವಿಜಯ ಸಂಕೇಶ್ವರರನ್ನು ಹೆಸರಿಸಬಹುದೇನೊ. ಇವರ ಉದ್ಯಮಗಳು NYSEವರೆಗೆ ಹೋಗದಿದ್ದರೂ ಕರ್ನಾಟಕದಲ್ಲಿ ಒಂದು ರೀತಿಯ ಕ್ರಾಂತಿಯನ್ನೇ ಮಾಡಿತು ಎಂಬ ವಿಷಯವನ್ನು ಕರ್ನಾಟಕದಲ್ಲಿ ಈ ಬದಲಾವಣೆಗಳನ್ನು ಕಂಡವರು ಒಪ್ಪಿಕೊಳ್ಳದೆ ಇರುವುದಿಲ್ಲ.

ವಿಜಯ ಕರ್ನಾಟಕದ ಇಂದಿನ ಸಂಚಿಕೆಯ ಅತಿಥಿ ಸಂಪಾದಕ (guest editor) ಸಂಸ್ಥೆಯ ಸಂಸ್ಥಾಪಕರೇ ಆದ ವಿಜಯ ಸಂಕೇಶ್ವರರು ಎಂಬುದನ್ನ ಕೇಳಿ "ಅವರೇನು ಬರೆದಿರಬಹುದು?" ಎಂಬ ಕುತೂಹಲದಿಂದ ಬೆಳಗಿನ ಪೇಪರ್ ಎಂದಿಗಿಂತ ಹೆಚ್ಚಿನ ಉತ್ಸಾಹದಲ್ಲಿ ಕೈಗೆತ್ತಿಕೊಂಡಿದ್ದೆ. ಮುಖಪುಟದಲ್ಲೇ ಅವರು ಬರೆದಿರುವ ಈ ನುಡಿಮುತ್ತು ಕಣ್ಣಿಗೆ ಬಿತ್ತು:

ಈ ಸ್ಥಿತಿ (ಸ್ಪರ್ಧಾಶೂನ್ಯ ಮನೋಭಾವ) ಬದಲಾಗಬೇಕೆಂದರೆ ನಾವು ಹಾಗೂ ನಮ್ಮ ವ್ಯವಸ್ಥೆ ಎರಡೂ ಬದಲಾಗಬೇಕು. ವಿಶ್ವದ ಎಲ್ಲೆಡೆಯಿಂದ ಎಲ್ಲ ಕ್ಷೇತ್ರಗಳ ದೊಡ್ಡ ದೊಡ್ಡ ಕಂಪೆನಿಗಳು, ಸಂಸ್ಥೆಗಳು ಭಾರತಕ್ಕೆ ದೊಡ್ಡದಾಗಿಯೇ ಕಾಲಿಟ್ಟಿವೆ, ಕಾಲಿಡುತ್ತಿವೆ. ಭಾರತ ಅತಿದೊಡ್ಡ ಮಾರುಕಟ್ಟೆ ಎಂಬುದು ಅವುಗಳಿಗೆ ಚೆನ್ನಾಗಿ ಗೊತ್ತು. ಆದರೆ ದುರದೃಷ್ಟವಶಾತ್ ನಾವೇನೆಂಬುದು ನಮಗೇ ಗೊತ್ತಿಲ್ಲ. ನಮ್ಮಲ್ಲಿ ಶಕ್ತಿ, ಸಾಮರ್ಥ್ಯ ಇದೆ. ಆದರೆ ಉದ್ಯಮಶೀಲತೆ, ಸಾಹಸ ಪ್ರವೃತ್ತಿ ಅಷ್ಟಾಗಿ ಇಲ್ಲ.

ಈ ಮಾತು ಕರ್ನಾಟಕ ಹಾಗೂ ಒಟ್ಟಾರೆ ಭಾರತದ ಸದ್ಯದ ಸ್ಥಿತಿಯನ್ನು ಕೆಲವೇ ವಾಕ್ಯಗಳಲ್ಲಿ ತಿಳಿಸಿದಂತಿದೆ.

ಧಾರವಾಡದ ಮಂದಿ!

"ಇವರು ಧಾರವಾಡದವರು, ಸಾಹಿತಿ ....ಹೆಸರು ....."
"ಗೊತ್ತಾತು ಬುಡು .. ಬೇಂದ್ರೇನೇ ಇರ್ಬೇಕು "
"ನಿನ್ನ ಮಡ್ಡ ತಲೆಗಿಷ್ಟು ... ಬೇಂದ್ರೆ ಸತ್ತು ಯಾ ಮಾತಾತು.... ಧಾರವಾಡದವರಂದ್ರ ಎಲ್ಲಾರೂ ಬೇಂದ್ರೆ ಅಂದ್ಕೊಂಡ್ಯಾ ?"
"ನಾ ಅಲ್ಲ .. ಅವರs ಹಂಗ ತಿಳದಿರತಾರ "
:)

( ಶ್ರೀನಿವಾಸ ವೈದ್ಯ ಅವರ "ರುಚಿ ಹುಳಿಯೊಗರು" ಹಾಸ್ಯಲೇಖನ ಪುಸ್ತಕದಿಂದ"