ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ ಖಾಲಿ ಮೂರ್ತ ರೂಪ
ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
ನಿಸರ್ಗ - ಇದು ಕನ್ನಡದ ಮೊದಲ ಪ್ರಾದೇಶಿಕ ಕಾದಂಬರಿ ಎಂಬ ಹೆಗ್ಗಳಿಕೆ ಹೊಂದಿದೆ . ಇದನ್ನು ೧೯೪೫ ರಲ್ಲಿ ಬರೆದವರು ಮಿರ್ಜಿ ಅಣ್ಣಾರಾಯರು . ಅನೇಕ ಮುದ್ರಣಗಳನ್ನು ಕಂಡಿದೆ . ಬೆಳಗಾಂವಿಯ ಈ ಭಾಗದ ಕನ್ನಡ ಪರಿಚಯ ನಿಮಗೆ ಇರಲೆಂದು ಆ ಕಾದಂಬರಿಯ ಮುನ್ನುಡಿಯ ಭಾಗವೊಂದನ್ನು ಇಲ್ಲಿ ಕೊ(ಕು)ಟ್ಟಿದ್ದೇನೆ .
- Read more about ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
- 1 comment
- Log in or register to post comments
ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
ಎಲ್ಲರಿಗೂ ಫೋಟೋ ತಗೀಬೇಕು, ಅದನ್ನ ಎಡಿಟ್ ಮಾಡಿ ಎಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಬೇಕು ಅಂತ ಆಸೆ ಅಲ್ವಾ?
ನಿಮ್ಮ ಕೆಲಸ ಸುಲಭ ಮಾಡ್ಲಿಕ್ಕೆ ಇಲ್ಲಿದೆ ನೋಡಿ GIMP (Gnu Image Manipulation Program) . ವಿಂಡೋಸ್ ನಲ್ಲಿ ಫೋಟೋ ಶಾಫ್ ನಲ್ಲಿ ಇದೆಯಲ್ಲಾ ಅಂದ್ರ? ಇದೆ ನಿಜ, ಆದ್ರೆ ಅದನ್ನ ಉಪಯೋಗಿಸ್ಲಿಕ್ಕೆ ನಿಮಗೆ ಲೈಸೆನ್ಸ್ ಇರಬೇಕು, ಅದನ್ನ ಕೊಳ್ಳಲಿಕ್ಕೆ ಬಾರಿ ಹಣ ಬೇಕು. GIMP ಮುಕ್ತ ತಂತ್ರಾಂಶ, ನಿಮ್ಮ ಲಿನಕ್ಸ್ ನಲ್ಲಾಗಲೇ ಇನ್ಸ್ಟಾಲ್ ಆಗಿದೆ ನೋಡಿ. ಉಬುಂಟು ಇನ್ಸ್ತಾಲ್ ಮಾಡಿ ಕೊಂಡವರು, Applications - > Graphics -> GIMP Image Editor ಈ ಮೆನು ಆಫ್ಚನ್ ಉಪಯೋಗಿಸುವುದರಿಂದ GIMP ಉಪಯೋಗ ಪ್ರಾರಂಭಿಸ ಬಹುದು.
ರವಿವರ್ಮನ ನಾಡಿನಲ್ಲೊ೦ದು ವಾರ
ಕೆಲವು ದಿನಗಳ ಹಿ೦ದೆ ಕೆಲಸದ ಮೇಲೆ ಕೇರಳಾಗೆ ಹೋಗಿದ್ದೆ. ಅಲ್ಲಿಯ ಅನುಭವವನ್ನು ಮತ್ತು ಕೆಲ ದಿನಗಳ ವಾಸ ನನ್ನಲ್ಲಿ ಮೂಡಿಸಿದ ಚಿ೦ತನೆಗಳನ್ನು ನಿಮ್ಮೊಡನೆ ಹ೦ಚಿ ಕೊಳ್ಳುತ್ತಿದ್ದೇನೆ.ಇದರಲ್ಲಿ ಲೋಪಗಳಿದ್ದರೆ ತಿಳಿಸುವುದು - ದೋಷಗಳಿದ್ದರೆ ತಿದ್ದುವುದು.
ಆಟೋದವನು ನಿಧಾನವಾಗಿ ಕೇರಳದ ಪರಿಸರವನ್ನು ತೋರಿಸುತ್ತಾ ಆಟೋ ನಡೆಸಿದ.ತನ್ನ ಸ೦ಸಾರದ ಕತೆಯನ್ನು ಮತ್ತು ತನ್ನ್ ಜೀವನದ ಕತೆಯನ್ನು ಇ೦ಗ್ಲೀಷ್ ಮತ್ತು ಹಿ೦ದೀ ಮಿಶ್ರಿತ ಭಾಷೆಯಲ್ಲಿ ಹೇಳಿ ಪಯಣದ ಸು:ಖವನ್ನು ಹೆಚ್ಚಿಸಿದ. ನನ್ನ ದೂರದ ನೆ೦ಟರವನ೦ತೆ ಮಾತಾಡಿ ಆತ್ಮೀಯ ಭಾವವನ್ನು ಎದೆಯಲ್ಲಿ ನಾಟಿ ನಾನು ಹೋಗಬೇಕಾದ ಸ್ಥಳಕ್ಕೆ ಮುಟ್ಟಿಸಿ ಬೈ ಎ೦ದ.
ಅವನಿ೦ದಾ ತಿಳಿದ ಅ೦ಶ ಅ೦ದರೆ , ಕೇರಳದಲ್ಲಿ ಹೆಚ್ಚಾಗಿ ಬರೋ ಹಣ ದುಬಾಯ್ , ಸೌದಿ ಮತ್ತು ಗಲ್ಫ್ ದೇಶಕ್ಕೆ ವಲಸೇ ಹೋದ ಮಳಯಾಳಿಗಳಿ೦ದ.ಕೇರಳಾದಲ್ಲಿ ಮುಸ್ಲಿ೦ ಜನ ಸ೦ಖ್ಯೆ ಹೆಚ್ಚಾಗಿರುವುದು ಗಮನಿಸ ಬೇಕಾದ ಅ೦ಶ.ಮುಸ್ಲಿಮ್ಮರು ಹೆಚ್ಚಾಗಿ ಗಲ್ಫ್ ದೇಶಗಳಿಗೆ ಹೋಗಿ ಹಣ ಸ೦ಪಾದನೆ ಮಾಡುತ್ತಾರೆ. ಕೇರಳದ ಮುಸ್ಲಿ೦ ಜನ ದೇಶದ ಬೇರೆ ಮುಸ್ಲಿ೦ ಮ೦ದಿಗಿ೦ತಾ ಭಿನ್ನ . ಅದು ಹೇಗೆ ಅ೦ತೀರೋ ? ಸೈಯದ್ ಅನ್ನೋ ಮತ್ತೊಬ್ಬ ಆಟೋದವನು "ನ೦ಗೆ ಉರ್ದು ಬರೋದಿಲ್ಲಾ ಬರೋದ್ ಬರೀ ಮಳಯಾಳ೦" ಅ೦ದಾ. ಅವನು ನಿಜವಾಗಿಯೂ ಮಳಯಾಳಿಯಾಗಿ ನ೦ತರ ಮುಸ್ಲಿ೦ ಆಗಿರುವುದು ಸ್ವಯ೦ ಗೋಚರ. ಮಳಯಾಳಿ ಭಾಷೆ ಅವರನ್ನು ಸಮಾಜದೊಡನೆ ಒ೦ದು ಗೂಡಿಸಿದೆ. ಅದು ಎಷ್ಟರ ಮಟ್ಟಿಗ೦ದರೆ - ಅಲ್ಲಿನ ಚಲನ ಚಿತ್ರದಲ್ಲಿ ಮೋಹನ್ ಲಾಲ್ ಮುಸ್ಲಿ೦ ನಾಯಕನಾಗಿ ಹಾಡುತ್ತಿರುವ ಪೋಶ್ಟರ್ ಊರಿನಲ್ಲೇಲ್ಲಾ ಮೆತ್ತಿತ್ತು.ಹೀಗೆ ನಮ್ಮ ಕರ್ನಾಟಕದಲ್ಲಿ ಆಗದಿರುವುದು ದು:ಖದ ಸ೦ಗತಿ.
- Read more about ರವಿವರ್ಮನ ನಾಡಿನಲ್ಲೊ೦ದು ವಾರ
- 11 comments
- Log in or register to post comments
ಸೃಷ್ಟಿ(ಒಂದು)-ಮುಂಜಾವು
ಎಲೆ ಎಲೆಯಲ್ಲೂ ಹೂವಿನ ಪಕಳೆಗಳಲ್ಲೂ
ಮೂಡಿದೆ ಪ್ರೀತಿಯ ಇಬ್ಬನಿಯು
ಸವಿಯುತ ದಿನವೂ ಮೇಲೇರಿ ಬರುವ
ಸೂರ್ಯ ನಮ್ಮನ್ನೆಬ್ಬಿಸಲು
ಪ್ರಕೃತಿ ಸೊಬಗನು ಹೊಸ ಮುಂಜಾವನ್ನು
ಬಿಡದೆ ಸವಿಯೊ ಪ್ರತಿ ದಿನವೂ
ಬದುಕಿದು ಕೇವಲ ನಾಲ್ಕು ದಿನಗಳದು
ಮುಗಿದ ಮೇಲೇನಿದೆ ಬಲ್ಲವರಾರು?
- Read more about ಸೃಷ್ಟಿ(ಒಂದು)-ಮುಂಜಾವು
- 2 comments
- Log in or register to post comments
ಕಟಪಯಾದಿ ಸೂತ್ರ
ಕೆಲವು ದಿನಗಳ ಹಿಂದೆ ರಮೇಶಬಳಗಂಚಿಯವರು ಒಂದು ಸಬ್ಸ್ಟಿಟ್ಯೂಷನ್ ಸೈಫರ್ ಅಮ್ಮಜಿಖಷೆಸ್ಸ ಖನಮ ಒಜಿ ಎಂಬ ಬರಹವನ್ನು ಬರೆದಿದ್ದರು. ಆಗ, ಕಟಪಯಾದಿ ಸೂತ್ರದ ಬಗ್ಗೆ ಬರೆಯಬಹುದಲ್ಲ ಅನ್ನೋ ಯೋಚನೆ ಬಂತು.
- Read more about ಕಟಪಯಾದಿ ಸೂತ್ರ
- 8 comments
- Log in or register to post comments
ಮಧ್ಯ ರಾತ್ರಿಯಲ್ಲಿ ರಸ್ತೆಯ ಮೌನ ಮಾತಾದಾಗ..
ಉಪ್ ..... ಸಾಕಾಗಿಹೋಯಿತು ಈಗ ಎಷ್ಟು ಹಾಯಾಗಿ ಇದೆ. ಬೆಳಗಿನಿಂದ ಇಲ್ಲಿಯತನಕ ಒಂದೇ ಸಮನೆ ಕೆಲಸ ಮಾಡಿ ಈಗ ರೆಸ್ಟು ತೆಗೆದುಕೊಳ್ತಾ ಇದೀನಿ. ಈ ಜನರಿಗೆ ಬೆಳೆಗ್ಗೆ ಕಾಪಿ ಇಲ್ದೆ ಇದ್ರು ನಡೆಯುತ್ತೆ, ತಿಂಡಿ ತಿನ್ನದೆ ಹೋದ್ರು ನಡೆಯುತ್ತೆ. ಆದ್ರೆ ದಿನಕ್ಕೆ ಒಂದು ಸಲ ಆದ್ರೂ ನನ್ ಮೆಲೆ ಹಾದು ಹೋಗ್ದೆ ಇದ್ರೆ ಇವ್ರಿಗೆ ನಿದ್ದೆನೆ ಬರಲ್ಲ.
- Read more about ಮಧ್ಯ ರಾತ್ರಿಯಲ್ಲಿ ರಸ್ತೆಯ ಮೌನ ಮಾತಾದಾಗ..
- Log in or register to post comments
ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ
ನನಗೆ ಬಿಡುವಿಲ್ಲದಿರುವುದರಿಂದ ನನಗೆ ಬಿಡಿಸಲಾಗುತ್ತಿಲ್ಲ. ದಯವಿಟ್ಟು ಮನ್ನಿಸಿ
- Read more about ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
- 16 comments
- Log in or register to post comments