ಬಂಜಗೆರೆ ಜಯಪ್ರಕಾಶ್ ಕೃತಿ ಬಗ್ಗೆ
ಬಸವಣ್ಣನನ್ನು ದಯವಿಟ್ಟು ಅವನ ಪಾಡಿಗೆ ಬಿಟ್ಟುಬಿಡಿ - ಗಣೇಶ್.ಕೆ
- Read more about ಬಂಜಗೆರೆ ಜಯಪ್ರಕಾಶ್ ಕೃತಿ ಬಗ್ಗೆ
- 2 comments
- Log in or register to post comments
ಬಸವಣ್ಣನನ್ನು ದಯವಿಟ್ಟು ಅವನ ಪಾಡಿಗೆ ಬಿಟ್ಟುಬಿಡಿ - ಗಣೇಶ್.ಕೆ
'ಆನು ದೇವಾ ...': ಜಾತಿ ವ್ಯವಸ್ಥೆ ಕುರಿತ ಹೊಸ ನೋಟದತ್ತ
ಇನ್ನೆಲ್ಲಿ ಆ ತಾಪ... ಆ ಬೆಳಕು!
ಅವನತಿಗೊಳ್ಳುತ್ತಿರುವ ಸಂವಾದ ಸಂಸ್ಕೃತಿ...
ನದೀತೀರದಲ್ಲಿ [ಕವಿತಾ ಸಂಕಲನ]
ಲೇಖಕರು : ಡಾ. ಎಚ್. ಎಸ್. ವೆಂಕಟೇಶಮೂರ್ತಿ.
*ಮರದೊಂದಿಗೆ. (ಪು. ೮೯.)
ಯತ್ಕಿಂಚಿತ್ ಕಷ್ಟವಲ್ಲ ಮರದೊಂದಿಗೆ ಮಾತುಕತೆ !
ನಿಲ್ಲಬೇಕು ಅಷ್ಟೆ, ಅದರ ಮುಂದೆ ನೀವು ಮರದಂತೆ.
ತೋಳುಗಳೇ ಹರೆಗಳಾಗಿ ತೂಗಲಿ ಅವು ತಂಗಾಳಿಗೆ ;
ಕಾಲೆ ಕಾಂಡವಾಗಿ, ಬೆರಳು ಬೇರಾಗಲಿ ಅರೆಗಳಿಗೆ.
ಮುಖದ ತುಂಬ ನಗೆಯ ಹೂವು ಅರಳಲಿ ಬಲು ಮೆಲ್ಲಗೆ
ತಾಯಿ ಮಂಜಮ್ಮನ ಮುದ್ದಿನ ಮಗನಾಗಿ, ತಂಗಿ ಕಮಲಮ್ಮನ ಪ್ರೀತಿಯ ಅಣ್ಣನಾಗಿ, ಹೆಂಡತಿ ನಿರ್ಮಲಳ ನಲ್ಮೆಯ ಪತಿಯಾಗಿ, ಮಗಳು ಸಮತಾಳ (ಸ್ನೇಹ) ಮೆಚ್ಚಿನ ತಂದೆಯಾಗಿ, ಅಳಿಯ ಓಂಕಾರ್ ನ ನೆಚ್ಚಿನ ಮಾವನಾಗಿ, ಎಲ್ಲಕ್ಕಿಂತ ಮಿಗಿಲಾಗಿ ಬಡ, ದೀನ ದಲಿತರಿಗೆ ಮಾರ್ಗದರ್ಶಿಯಾಗಿದ್ದ, ಎಲ್ಲರಿಗೂ ಬೇಕಾದವರಾಗಿದ್ದ ಮೇಸ್ಟ್ರು ಇನ್ನಿಲ್ಲ.
ಅವರ ವೈಯಕ್ತಿಕ ಜೀವನದ ಬಗ್ಗೆ ನನಗೆ ತಿಳಿದ ಕೆಲವು ವಿಷಯಗಳನ್ನು ಇಲ್ಲಿ ಹೇಳಬಯಸುತ್ತೇನೆ.
ಸರಳ ವಿವಾಹಕ್ಕೆ ಒತ್ತು ನೀಡುತ್ತಿದ್ದ ಅವರು, ಯಾವುದೇ ಅದ್ದೂರಿ ಸಮಾರಂಭಗಳಿಗೆ ಭೇಟಿ ನೀಡುತ್ತಿರಲಿಲ್ಲವೆನಿಸುತ್ತದೆ. ನಮ್ಮ ಮದುವೆಗೂ ಸಮತಾಳನ್ನು ಮಾತ್ರ ಕಳುಹಿಸಿದ್ದು ಇದೇ ಕಾರಣಕ್ಕೆ ಎಂಬುದು ನನಗೆ ತಡವಾಗಿ ಅರ್ಥವಾಯಿತು. ನನ್ನ ಅತ್ತೆ (ರಾಮದಾಸ್ ರ ತಂಗಿ) ಅಣ್ಣನ ಒಂದೊಂದು ನೆನಪಿನ ಬುತ್ತಿಯನ್ನು ಬಿಚ್ಚಿದಂತೆ, ನನಗೂ ಆ ಅದಮ್ಯ ಚೇತನದ ಅಂತ್ಯ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ. ಅವರ ಆತಿಥ್ಯ ನಿಜಕ್ಕೂ ಅವಿಸ್ಮರಣೀಯ. ಮನೆಗೆ ಯಾರೇ ಭೇಟಿ ನೀಡಿದರೂ, ಒಂದು ಕಪ್ ಕಾಫಿ ಕುಡಿಯದೇ ಹಿಂದಿರುಗುವಂತಿರಲಿಲ್ಲ. ಇನ್ನು ತಾಯಿ ಮಂಜಮ್ಮನ ಕೈ ರುಚಿ ಸವಿದವೆರೆಷ್ಟೊ.
ಬೆಚ್ಚಗಿರಲೊಂದು ಗೂಡು,
ನಚ್ಚಗಿರಲೊಂದು ಹಾಡು,
ಕಣ್ತೆರೆದಾಗೊಂದು ಗಾನ,
ಕಣ್ಮುಚ್ಚುವಾಗಿನ್ನೊಂದೇ ತಾನ,
ನಡುವೆ ಅರಿವಿನ ಸೀಮೆಯಾಚೆಗಿನ
ಯಾವುದೋ ತನನ;
ನನ್ನ ತಲೆಯಾನಿಸಲೆಂದೇ
ಹರವಿ ನಿಂತ ನಿನ್ನೆದೆ,
ನನ್ನ ಹಿಡಿದಿಡಲೆಂದೇ
ಬಳಸಿ ನಿಂದ ನಿನ್ನ ಭದ್ರಬಾಹು .....
ರೈತರ ಆತ್ಮಹತ್ಯೆ : ತುಕ್ಕು ಹಿಡಿದ ಚರ್ಚೆ
ರೈತರ ಆತ್ಮಹತ್ಯೆ ತಡೆಯಲು ರಾಜ್ಯ ಸರ್ಕಾರ ಅಧ್ಯಯನ ಸಮಿತಿಯೊಂದನ್ನು ರಚಿಸಿದೆ. ಅದು, ಹೋದ ವಾರ ಮುಖ್ಯಮಂತ್ರಿಗಳು ಕರೆದಿದ್ದ ರೈತರೊಡನೆಯ ಸಂವಾದ ಕಾರ್ಯಕ್ರಮದಲ್ಲಿ ವ್ಕಕ್ತವಾದ ಸಲಹೆ-ಸೂಚನೆಗಳ ಆಧಾರದ ಮೇಲೆ ಅದು ಪರಿಹಾರ ಸಾಧ್ಯತೆಗಳನ್ನು ಪರಿಶೀಲಿಸುವುದಂತೆ. ಆದರೆ, ಈ ಕಾರ್ಯಕ್ರಮದಲ್ಲಿ ವ್ಯಕ್ತವಾದ ಸಲಹೆ-ಸೂಚನೆಗಳು ಎಷ್ಟರ ಮಟ್ಟಿಗೆ ಹೊಸವು ಮತ್ತು ಈವರೆಗೆ ಪರಿಶೀಲನೆಗೆ ಒಳಗಾಗಿಲ್ಲದಂತಹವೇ ಎಂಬ ಪ್ರಶ್ನೆ ಇದ್ದೇ ಇದೆ. ಈ ದೃಷ್ಟಿಯಿಂದ ನೋಡಿದಾಗ ಮತ್ತು ಸಂವಾದ ಕಾರ್ಯಕ್ರಮದ ಕೊನೆಯಲ್ಲಿ ಮುಖ್ಯಮಂತ್ರಿಗಳು ಆಡಿದ ಮಾತುಗಳು ವಿದಾಯ ಭಾಷಣದ ಶೈಲಿಯಲ್ಲಿದ್ದುದನ್ನು ಗಮನಿಸಿದಾಗ, ಇಡೀ ಕಾರ್ಯಕ್ರಮ ಯಾವುದೋ ತತ್ಕಾಲೀನ ರಾಜಕೀಯ ಬಿಕ್ಕಟ್ಟಿನಿಂದ ಬಚಾವಾಗುವ ಪ್ತಯತ್ನವೆಂಬಂತೆಯೂ ಕೆಲವರಿಗೆ ಕಂಡಿದ್ದರೆ ಆಶ್ಚರ್ಯವಿಲ್ಲ.
ರಾಷ್ಟ್ರದಲ್ಲಿ ಈವರೆಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಆರೇಳು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಮುವ್ವತ್ತು ಸಾವಿರವನ್ನು ಮೀರಿದೆ. ಈ ಸರ್ಕಾರ ಬಂದ ಮೇಲೆ ಈ ಆತ್ಮಹತ್ಯೆ ಪ್ರವೃತ್ತಿ ಇನ್ನಷ್ಟು ತೀವ್ರಗೊಂಡಿರುವುದು ಇನ್ನೊಂದು ವಿಶೇಷ. ಅಲ್ಲದೆ, ಈವರೆಗೆ ಕೇಂದ್ರ ಹಾಗೂ ವಿವಿಧ ರಾಜ್ಯ ಸಕರ್ಾರಗಳು ಈ ಸಂಬಂಧ ಕೈಗೊಂಡ ಅಧ್ಯಯನಗಳು ಮಾಡಿದ ಶಿಫಾಸರ್ುಗಳ ಆಧಾರದ ಮೇಲೆ ಸಾಲ ಮನ್ನಾ, ಸುಲಭ ಬಡ್ಡಿ ದರದ ಸಾಲ ಸೌಲಭ್ಯ, ಬೀಜ ಪೂರೈಕೆ ಹಾಗೂ ಸಂಗ್ರಹ ಸಾಮಥ್ರ್ಯದ ಸುಧಾರಣೆ, ಕನಿಷ್ಠ ಮತ್ತು ಬೆಂಬಲ ಬೆಲೆ ಘೋಷಣೆ ಮುಂತಾದ ಪರಿಹಾರ ಕ್ರಮಗಳನ್ನು ಪ್ರಕಟಿಸುತ್ತಾ ಹೋದಂತೆ, ರೈತರ ಆತ್ಮಹತ್ಯೆ ಪ್ರಕರಣಗಳೂ ಹೆಚ್ಚುತ್ತಿರುವುದನ್ನೂ ಗಮನಿಸಬೇಕಿದೆ. ನಮ್ಮ ಮುಖ್ಯಮಂತ್ರಿಗಳ ಸಂವಾದ ಕಾರ್ಯಕ್ರಮ ನಡೆಯುತ್ತಿದ್ದ ಸಮಯದಲ್ಲೇ ಮತ್ತು ಆನಂತರವೂ ರಾಜ್ಯದ ಹಲವಾರು ಕಡೆಯಿಂದ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಇದೆಲ್ಲ ಏನನ್ನು ಸೂಚಿಸುತ್ತದೆ?
ಕಾರ್ಡಿಫ್ ನಲ್ಲಿ ಒಂದು ದೊಡ್ಡ ಅಲಂಕಾರಿಕ ಗೋಪುರವಿದೆ. ಅದರ ಮೇಲಿನಿಂದ ಒಂದು ತೆಳುವಾದ ಪರದೆಯಂತೆ ನೀರು ಕೆಳಕ್ಕೆ ಹರಿಯುತ್ತಾ ಇರುತ್ತದೆ. ತುಂಬಾ ಸುಂದರವಾದ ವಿನ್ಯಾಸವನ್ನು ಇದು ಸೃಷ್ಟಿ ಮಾಡುತ್ತದೆ. ಅದರ ಎದುರು ನಿಂತುಕೊಂಡಷ್ಟೆ ಫೊಟೊ ತೆಗೆದರೆ ಮಬ್ಬಿಗೂ, ಸ್ಪಷ್ಟತೆಗೂ ವ್ಯತ್ಯಾಸವೇ ತಿಳಿಯದೆಂದು ನನ್ನ ಕೈಯಿಂದ ಗೋಪುರವನ್ನು ಮುಟ್ಟಿ ಚಿತ್ರ ತೆಗೆದೆ.
ಕಾರವಾರದ ಸಮೀಪ ಗೋವದ ಗಡಿಯ ಹಳ್ಳಿಗೆ ವರ್ಗವಾಗಿ ಬಂದ ಮೇಷ್ಟ್ರು ಅಲ್ಲಿನ ಜನರ ಕೊಂಕಣಿ ಮತನಾಡುವುದು ಕೇಳಿ ಸುಸ್ತಾಗುತ್ತಾರೆ. ಹೇಳಿ ಕೇಳಿ ಅವರದ್ದು ಬಯಲುಸೀಮೆ.
"ದುಂಡಗೆ ಬರೀರಿ" ಅಂತ ಮಕ್ಕಳಿಗೆ ಹೇಳಿದಾಗ ಮುಸಿಮುಸಿ ನಗು.