ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೆಸರು ಬೇಕು?

ಹೆಸರು ಬೇಕು ನಮಗೆ
ಕೂಗಿ ಕರೆಯುವುದಕೆ
ನಮ್ಮ ಇರುವನು
ದೃಢೀಕರಿಸುವುದಕೆ

ಗುರುತಿಸಬೇಕೆಂಬ
ನಮ್ಮ ಹಂಬಲಕ್ಕೆ
ಬೆನ್ನು ತಟ್ಟಿ ಪ್ರೋತ್ಸಾಹಿಸ
ಬೇಕೆಂಬ ಛಪಲಕ್ಕೆ

ದಾರಿ ತೋರುವವಂಗೆ
ತಪ್ಪುಗಳ ತಿದ್ದುವವಂಗೆ
ವಿಧ್ಯೆ ಕಲಿಸುವವಂಗೆ
ಹೆಸರು ಬೇಕೆ ಬೇಕು

ದಿಟ್ಟ ಪರಿಶ್ರಮವಿಟ್ಟು
ಸಂದ ಪ್ರತಿಫಲವನ್ನು
ಸಾಧನೆಯ ಮುಖವೆಂದು
ಜಗಕೆ ತಿಲಿಸುವುದಕೆ

ಅಡಿಗೆಯವರ ಪುರಾಣ - ಭಾಗ -೩

ಇದರ ಹಿಂದಿನ ಭಾಗ http://www.sampada.net/blog/roopablrao/04/01/2008/6936
ಹೌದು ಬಂದಾಕೆ ಮೀನಾಕ್ಶಿ ನಯ ವಿನಯವೇ ಮೂರ್ತವೆತ್ತಂತೆ. ಇಬ್ಬರು ಮಕ್ಕಳನ್ನು ಹಾಸ್ಟೆಲ್‌ನಲ್ಲಿ ಬಿಟ್ಟಿದ್ದಳು. ಗಂಡ ಇರಲಿಲ್ಲ. ನಮಗದು ಬೇಕಾಗೂ ಇರಲಿಲ್ಲ
ರುಚಿ ರುಚಿ ಅಡಿಗೆ . ಹೊಸ ಹೊಸ ಖಾದ್ಯ .

ವಯಸು ಮತ್ತು ಮನಸು

ಯಶವಂತ ಚಿತ್ತಾಲರ 'ಕತೆಯಾದಳು ಹುಡುಗಿ’ ಯನ್ನು ಒಂದೇ ರಾತ್ರಿ (ರಾತ್ರಿ ೯ ರಿಂದ ೩ ರ
ವರೆಗೆ) ಒಂದೇ ಗುಕ್ಕಿನಲ್ಲಿ ಓದಿದಾಗ ನನಗೆ ಹದಿನೇಳೋ ಹದಿನೆಂಟೋ ವರ್ಷ. ಈಗದೆಲ್ಲ
ನೆನಪಾಗುತ್ತಿರುವುದು ಹದಿನೇಳೋ ಹದಿನೆಂಟೋ ವರ್ಷದ ನಂತರ ಮತ್ತೆ ಅವರ ’ಐವತ್ತೊಂದು
ಕತೆಗಳು’ ಓದಿದಾಗ.

ಅವಮಾನಕ್ಕೆ ಅಂಜಬೇಡಿ...

’ಕಲಿಯೋದರಲ್ಲಿ ಈತ ತುಂಬ ನಿಧಾನ’ ಅಂತ ಆ ಪುಟ್ಟ ಹುಡುಗನ ಟೀಚರ್‍ ಒಬ್ಬಳು ಆ ಹುಡುಗನೆದುರೇ ಪಾಲಕರಿಗೆ ಹೇಳಿಬಿಡುತ್ತಾಳೆ. ಆ ಬಾಲಕನಿಗೆ ತುಂಬ ಅವಮಾನವಾಗಿಬಿಡುತ್ತದೆ. ಆತ ಆದ ಅವಮಾನವನ್ನು ಸಹಿಸಿಕೊಂಡು ಸುಮ್ಮನೆ ಕೂರುವುದಿಲ್ಲ. ’ಅವಮಾನ’ ಅನ್ನೋದು ಬಹುಶಃ ಹಾಗೆ ಸುಮ್ಮನೆ ಕೂರಿಸುವುದೂ ಇಲ್ಲ. ಆ ಅವಮಾನವನ್ನಾತ ಛಲವನ್ನಾಗಿ ಸ್ವೀಕರಿಸುತ್ತಾನೆ.

ಸಂಪದ ಸದಸ್ಯರ ಮೀಟಿಂಗ್

ಸ್ಥಳ: ಸುಚಿತ್ರ ಫಿಲ್ಮ್ ಸೊಸೈಟಿ, ಬನಶಂಕರಿ, ಬೆಂಗಳೂರು.

ಚರ್ಚೆಯ ವಿಷಯಗಳು:
* [:http://dev.sampada.net/Project_Akshara_Siri|ಪ್ರಾಜೆಕ್ಟ್ ಅಕ್ಷರಸಿರಿ],
* [:http://sampadafoundation.org|ಸಂಪದ ಫೌಂಡೇಶನ್] - ಟೆಕ್ನಿಕಲ್ ಕಮಿಟಿಗೆ ಸಂಬಂಧಪಟ್ಟ ನಿರ್ಧಾರಗಳು.

ಭಾಗವಹಿಸಲು ಆಸಕ್ತಿಯಿರುವ ಸಂಪದ ಸದಸ್ಯರು ಇನ್ನಷ್ಟು ಮಾಹಿತಿಗಾಗಿ ದಯವಿಟ್ಟು events@sampada.net ಗೆ ಒಂದು ಇ-ಮೇಯ್ಲ್ ಕಳುಹಿಸಿ.

ಚಿನ್ನದ ನಾಡಿದು, ಗಂಧದ ಗುಡಿಯಿದು, ಎಲ್ಲಾ ಹೊರಟುಹೋಗಿ, ನಾಟಕದ ಬೀಡಿದು ಕರ್ ನಾಟಕ ವಾಗಿದೆ !

ಎಲ್ಲಾ ರಾಜ್ಯಗಳೂ ತಮ್ಮ ತಮ್ಮ ರಾಜ್ಯಗಳ ಯೋಜನೆಗಳ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಳ್ಳುವ ಸಡಗರ, ದಲ್ಲಿರುವಾಗ, ನಮ್ಮ ಕರ್ ನಾಟಕ ರಾಜ್ಯ, ಅನಿಶ್ಚಿತ ರಾಜಕೀಯು ಬೆಳವಣಿಗೆಗಳ ಸುಳಿಯಲ್ಲಿ ಸಿಲುಕಿ, ನಲುಗಿಹಣ್ಣಾಗಿದೆ.

ಹೊಸ ವರ್ಷ

ಹೊಸವರುಷ ಬಂದಾಯ್ತು ಹೊಸ್ತಿಲಲಿ ನಿಂದು
ಹಳೆಯ ಪಳಿಯುಳಿಕೆಗಳ ಹಳೆಗಾಲ ಸಂದು
ಸಡಗರೋಲ್ಲಾಸಗಳ ಜಡರುಗಳ ಕಳೆದು
ಹೊಸಹೊಳಹು ಮೂಡಿರಲಿ ನಿನಗೆನ್ನ ಬಂಧು

ನೈರುತ್ಯ ರೈಲ್ವೇ ವಲಯದ ಕನ್ನಡ ವಿರೋಧಿ ನಿಲುವಿನ ವಿರುದ್ಧ ಕ.ರ.ವೇ ಪ್ರತಿಭಟನೆ

೨೦೦೮ ನೇ ಇಸ್ವಿ, ರೈಲ್ವೇ ಗ್ರೂಪ್ ಡಿ ಪರೀಕ್ಷೆ ಬೆಂಗಳೂರು, ಮೈಸೂರು ಹಾಗು ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ.
ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಬಂದವರಲ್ಲಿ ಬಹುತೇಕರು ಪರರಾಜ್ಯದವರು. ಶೇ ೧೦ ಮಾತ್ರ ಕನ್ನಡಿಗರು.

೧. ಕೆಳ ದರ್ಜೆಯ ಕೆಲಸಕ್ಕೆ ಏಕೆ ಬೇಕು ಪರ ರಾಜ್ಯದವರು?
೨. ಕನ್ನಡ ಪತ್ರಿಕೆಗಳಲ್ಲಿ, ರೈಲ್ವೇ ಗ್ರೂಪ್ ಡಿ ಅರ್ಗಿಗಳ ಜಾಹಿರಾತುಗಳು ಏಕೆ ಬರಲಿಲ್ಲ?

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಐದನೆಯ ಕಂತು

ಅಹ್ಮದ್ನೊಂದಿಗೆ ಗೆಲುವಾಗಿದ್ದಷ್ಟು ನಾನು ನನ್ನ ಬದುಕಿನಲ್ಲೇ ಯಾರ ಜೊತೆಗೂ ಗೆಲುವಾಗಿರಲಿಲ್ಲ. ಅಂದರೆ ಮನೆಯಲ್ಲಿ ನನಗೆ ಸುಖದ ಗಳಿಗೆಗಳೇ ಇರಲಿಲ್ಲವೆಂದಲ್ಲ. ಇದ್ದವು. ಹೆನ್ರಿಯನ್ನು ಮದುವೆಯಾಗುವ ಮೊದಲು ನನಗೆ ತುಂಬಾ ಸ್ನೇಹಿತರಿದ್ದರು. ಪಾರ್ಟಿಗಳು, ನರ್ತನ, ಕುಡಿತ ಅಂತ ತುಂಬಾ ಸುಖಪಟ್ಟಿದ್ದೆ. ಆದರೆ ಅವೆಲ್ಲ ಅಹ್ಮ್ದದ್ನೊಂದಿಗಿನ ಸುಖದ ಕ್ಷಣಗಳಿಗೆ ಸಾಟಿಯಲ್ಲ.

ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ

ಇಂದು ಜನವರಿ ಆರು. ಸರಿಯಾಗಿ ನೂರರವತ್ತೊಂದು ವರ್ಷದ ಹಿಂದೆ, ನಾವು ಒಬ್ಬ ರಾಜನನ್ನು ಕಳೆದುಕೊಂಡೆವು. ಅಥವಾ ನಿಜ ಹೇಳಬೇಕೆಂದರೆ, ಅವತ್ತಿನಿಂದ ಆತ ಚಿರಂಜೀವಿಯಾಗಿಹೋದರು. ಈ ರಾಜ ಯಾವ ಯುದ್ಧವನ್ನೂ ಮಾಡಿ ಜಯಿಸಿಲಿಲ್ಲ. ಯಾವ ರಾಜ್ಯಕ್ಕೂ ರಾಜನಾಗಲಿಲ್ಲ. ಎಲ್ಲವನ್ನೂ ’ತ್ಯಾಗ’ ಮಾಡಿದರೂ, ಸಂಗೀತ ಪ್ರಪಂಚಕ್ಕೇ ರಾಜರಾಗಿ ಮೆರೆದರು.

ಹೌದು. ತ್ಯಾಗರಾಜರ ದೇಹಾಂತ್ಯ ಆದದ್ದು ೧೮೪೭ರ ಜನವರಿ ಆರರಂದು. ಆ ದಿನ ಪುಷ್ಯ ಬಹುಳ ಪಂಚಮಿ. ಪುರಂದರ ದಾಸರನ್ನು ಮನಸಲ್ಲೇ ಗುರುವಾಗಿ ನಿಲಿಸಿಕೊಂಡ ತ್ಯಾಗರಾಜರು ದಾಸರ ಆರಾಧನೆಯ ತಿಂಗಳಾದ ಪುಷ್ಯ ಮಾಸದಲ್ಲೇ ದೇಹತ್ಯಾಗ ಮಾಡಿದ್ದು ಕಾಕತಾಳೀಯವಿರಬಹುದು. ಆದರೆ, ಪುರಂದರ ದಾಸರ ರಚನೆಗಳಿಗೂ, ತ್ಯಾಗರಾಜರ ರಚನೆಗಳಲ್ಲೂ ಇರುವ ಹೋಲಿಕೆ ಕಾಕತಾಳೀಯವೇ? ಅಥವಾ, ದಾಸರ ಸಾಹಿತ್ಯ ತ್ಯಾಗರಾಜರ ಮೇಲೆ ಮಾಡಿದ ಪ್ರಭಾವದ ಪರಿಣಾಮವೇ? ಅಥವಾ ಮಹಾತ್ಮರ ಮನಗಳು ಒಂದೇ ತೆರದಲ್ಲಿ ಯೋಚಿಸುವುವೇ?

(ಚಿತ್ರ: http://www.karnatik.com/ ಕೃಪೆ)