ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ನಾಯಿಯೂ

ಕೊನೆಗೂ ಬೆಂಗಳೂರು ಮಹಾನಗರ ಪಾಲಿಕೆಯು ನಾಯಿಗಳ ಮಹಾ ಮಾರಣ ಹೋಮಕ್ಕೆ ಸಜ್ಜಾಗಿದೆ.. ದುಃಖದ ವಿಷಯವೆಂದರೆ ಮನೇಕಾ ಗಾಂಧಿಯವರು ನಾಯಿಗಳನ್ನು ಸಾಯಿಸ ಬಾರದೆಂದು ಹೇಳಿದ್ದಾರೆ. ಅಂದರೆ ಮಕ್ಕಳ ಜೀವಕ್ಕಿಂತ ನಾಯಿಗಳ ಜೀವ ಅಮೂಲ್ಯವಾದದ್ದು. ಇಲ್ಲಿ ಮುಖ್ಯವಾಗಿ ನಾವು ಚಿಂತಿಸಬೇಕಾದ ವಿಷಯ ನಾಯಿಗಳು ಯಾಕೆ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ? ಇಂದಿನ ನಗರ ಜೀವನದಲ್ಲಿ ಪ್ರಿಡ್ಜ ಸಂಕೃತಿಯಲ್ಲಿ ,ಕಸದ ತೊಟ್ಟಿ ಕಾಣೆಯಾಗುತ್ತಿರುವ ಈ ದಿನಗಳಲ್ಲಿ ಅವಕ್ಕೆ ಸಾಕಷ್ಟು ಆಹಾರ ಸಿಗುತ್ತಿಲ್ಲ. ಅಲ್ಲದೇ ನಗರ ಪಾಲಿಕೆಯವರೇ ಹೇಳುವಂತೆ ಮಾಂಸದ ಅಂಗಡಿಯವರು ಚುರು ಪಾರುಗಳನ್ನು ಬಿಸಾಡಿ ಅವನ್ನು ರಕ್ತಪಿಪಾಸುಗಳನ್ನಾಗಿ ಮಾಡಿರುವದು.

ನಮಸ್ತೆ

ನಮಸ್ಕಾರ,
ಸಂಪದವನ್ನು ತುಂಬಾ ಚೆನ್ನಾಗಿ ನಡೆಸುತ್ತಿರುವ ಆಡಳಿತ ವರ್ಗದವರಿಗೂ, ಪಾಲ್ಗೊಳ್ಳುತ್ತಿರುವ ಸಹೃದಯಿ ಮಿತ್ರರಿಗೂ ವಂದನೆಗಳು.

ವಿಶ್ವ ಗೋ ಸಮ್ಮೇಳನ -ಶ್ರೀ ರಾಮಚ೦ದ್ರಾಪುರ ಮಠ, ಹೊಸನಗರ,ಶಿವಮೊಗ್ಗ ಜಿಲ್ಲೆ

ಜಗದೊಳಿತಾಗಿ ಜಗನ್ಮಾತೆಯ ಜಾಗತಿಕ ಹಬ್ಬ "ವಿಶ್ವ ಗೋ ಸಮ್ಮೇಳನ" ಎಪ್ರೀಲ್  ತಿ೦ಗಳ 21 ರಿ೦ದ 29, 2007 ರವರೇಗೆ ಶ್ರೀ ರಾಮಚ೦ದ್ರಾಪುರ ಮಠ, ಶಿವಮೊಗ್ಗ ಜಿಲ್ಲೆ, ಕರ್ನಾಟಕ ಇಲ್ಲಿ  ಶ್ರೀಮಜ್ಜಗದ್ಗುರು ಶ೦ಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸ೦ಕಲ್ಪ ಮತ್ತು ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಪುಸ್ತಕನಿಧಿ(೩) - ಪ್ರಾಣ ಹೋಗುವಾಗ ಪ್ರಾಣಾಯಾಮವೇ?

ಇದೇನು ಗಾದೇ ಮಾತು ಅಂದ್ಕೊಂಡ್ರಾ? ಅಲ್ಲ.
ಡಿಜಿಟಲ್ ಲೈಬ್ರರಿ ತಿರುವಿ ಹಾಕುವಾಗ ಒಂದು ಪುಸ್ತಕ ಸಿಕ್ಕಿತು . ವಿಷಯ ಗಂಭೀರವಾದದ್ದೇ. ಆದರೆ ಮೊದಲ ಕೆಲವು ಸಾಲು ನೋಡಿ ನಗು ತಡೆಯಲಿಕ್ಕಾಗಲಿಲ್ಲ.

ಕೆಲವು ಸುಭಾಷಿತಗಳು

ನಾನು ರೂಪಾಂತರಿಸಿದ (ಭಾಷಾಂತರ ಎನ್ನುವುದಕ್ಕಿಂತ ಇದು ಉತ್ತಮ ಪದವೇನೋ ಎಂಬುದು ನನ್ನ ಭಾವನೆ) ಕೆಲವು ಸಂಸ್ಕೃತ ಸುಭಾಷಿತಗಳು ಇಲ್ಲಿವೆ. ಓದಿ ನೋಡಿ, ಏನೆನಿಸಿತೋ ತಿಳಿಸಿ; ಕೆಲವು ಮೂಲ ಶ್ಲೋಕಗಳನ್ನೂ, ಕನ್ನಡ ಲಿಪಿಯಲ್ಲೇ ಸೇರಿಸಿದ್ದೇನೆ. ಇದು ದೇವನಾಗರಿಯಲ್ಲಿದ್ದರೆ ಒಳಿತೇನು? ತಿಳಿಸಿ. ಮಿಕ್ಕ ಶ್ಲೋಕಗಳನ್ನೂ ಒಂದೊಂದಾಗಿ ಸೇರಿಸುತ್ತೇನೆ.

----------------------------------------------------------------------------------------- 

ಉದ್ಯಮೇ ನ್ ಹಿ ಸಿದ್ಧ್ಯಂತಿ ಕಾರ್ಯಾಣಿ ನ  ಮನೋರಥೈಃ|

ನ  ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಸಂತಿ ಮುಕೇ ಮೃಗಾಃ||                                              

ಮನಕೆ ಬಂದ ಮಾತ್ರಕೆ
ಕಾರ್ಯಗತವಾದೀತೇ ?
ಮಲಗಿದ ಸಿಂಹದ ಬಾಯಿಗೆ
ಜಿಂಕೆ ಬಂದು ಬಿದ್ದೀತೇ ?
------------------------------------------------------------
ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ |                                                          ಯೋ ನ ದದಾತಿ ನ ಭುಂಕ್ತ್ತೇ ತಸ್ಯ ತೃತೀಯಾ ಗತಿರ್ಭವತಿ||

ಅನುಭವಿಸು ಇಲ್ಲ ದಾನ ಕೊಡು ಅಥವ
ವಿನಾಶವೆಂದು ಹಣಕಿದೆ ಮೂರು ಗತಿ
ಒಂದನೆಯದು ಎರಡನೆಯದೂ ಮಾಡದೆ
ಹೋದರೆ ಮೂರನೆ ಗತಿಯೇ ಪ್ರಾಪ್ತಿ
------------------------------------------------------------
ಇರಲಿ ಆಸಕ್ತಿ ಸಾಹಿತ್ಯ ಸಂಗೀತ
ಅಥವಾ ಇನ್ನಾವುದೋ ಕಲೆಯ ಮೇಲೆ
ಇಲ್ಲದೆ ಹೋದರೆ ಅವ ಪಶುವೇ ಸರಿ
ಬಾಲ ಕೊಂಬು ಎರಡಿಲ್ಲದೆಲೆ!
ಹುಲ್ಲನು ತಿನ್ನದೇ ಜೀವಿಸಬಲ್ಲವ
-ನೆಂಬುದೆ ಪುಣ್ಯ ಪ್ರಾಣಿಗಳಿಗೆ!

------------------------------------------------------------
ನೀಚರಿಗೆ ಮಾಡಿದುಪಕಾರ
ಆಗೇ ಆಗುವುದು ಅಪಕಾರ
ಹಾವಿಗೆ ಕುಡಿಸಿದ ಹಾಲು ಸಹ
ಆಗುವುದಲ್ಲವೆ ಘೋರ ವಿಷ
---------------------------------------------------------------
ಗುಣಗಳ ಗುಂಪಲಿ ಒಂದೇ ಕೊರತೆ
ಚಂದ್ರನ ಬೆಳಕಲಿ ಕಲೆಯಂತೆ
ಮುಚ್ಚೀತೆಂದ ಕವಿ ತಾ ಕಾಣನು
ಲೋಕದ ನಿಜರೂಪದ ಮೋರೆ;
ಸಾವಿರ ಗುಣಗಳ ಮುಚ್ಚಿ ಹಾಕದೆ
ಬಡತನವೆಂಬೊಂದು ಕೊರೆ ?

----------------------------------------------------------------

ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನ ಚ ದೃಶ್ಯತೇ

ಬಾಲೇ ತವ ಮುಖಾಂಬೋಜೇ ದೃಶ್ಯಮಿಂದೀವರದ್ವಯಂ

ಕಮಲದಲಿ ಕಮಲ ಹುಟ್ಟಿದುದ
ಕಾಣೆನು ಕೇಳೆನು ಎನ್ನದಿರು
ಓ ಗೆಳತೀ ನಿನ್ನೀ ಮುಖಕಮಲದಲಿ
ಜನಿಸಿರಲು ಕಣ್ಣೆಂಬ ಕಮಲವೆರಡು

ಕೇಳಿರಿ ಚಿಂತೆಗೂ ಚಿತೆಗೂ
ವ್ಯತ್ಯಾಸವಂತೂ ಬರಿ ಸೊನ್ನೆ
ಸುಟ್ಟರೆ ಚಿತೆ ಹೋದವನನ್ನು
ಚಿಂತೆ ಸುಟ್ಟೀತು ಇದ್ದವನನ್ನೆ

ದುಷ್ಟರ ಜೊತೆಯಲಿ ದ್ವೇಷವು ಬೇಡ
ಮಾಡದಿರು ನೀ ಅತಿ ಪ್ರೀತಿ
ಕೆಂಡವು ಬಿಸಿಯಲಿ ಕೈಯನು ಸುಡುವುದು
ತಣಿದಿದ್ದರೆ ಆಗುವುದು ಮಸಿ

ಹಲ್ಲು ಉಗುರು ಕೂದಲು ಮನುಜರು
ಇರಬೇಕಾದಲ್ಲೆ ಶೋಭಿಪರು
ಅದಕೆಂದೇ ಉತ್ತಮ ಜನರು
ತಮ್ಮ ಸ್ಥಾನವ ಬಿಡದಿಹರು

ಚೇಳಿನ ವಿಷವದು ಬಾಲದ ಕೊಂಡಿಲಿ
ನೊಣಕ್ಕದು ಬಾಯಲ್ಲೆಲ್ಲಾ
ಹಾವಿನ ಹಲ್ಲಲಿ ತುಂಬಿದೆ ಆ ವಿಷ
ಕೆಟ್ಟವನಿಗೋ ಮೈಯಲ್ಲೆಲ್ಲಾ

ಲಕ್ಷ್ಮಿಯು ಬಳಿಯಿದ್ದವನರಿಯನು
ಪ?ರಿಗಾಗುವ ವೇದನೆ
ಭೂಮಿಯ ಭಾರವ ಹೊತ್ತಿರೆ ಶೇಷನು
ಮಲಗಿಹ ನಾರಾಯಣ ಸುಮ್ಮನೆ

ಸ್ವಯಂಪ್ರಜ್ಞೆ ಇಲ್ಲದವನಿಗೆ
ಕಲಿಕೆ ಏನು ಮಾಡೀತು ?
ಕಣ್ಣೇ ಇಲ್ಲದ ಹುಟ್ಟುಕುರುಡಗೆ
ಕನ್ನಡಿಯಿಂದೇನಾದೀತು ?

ಪ್ರಿಯವಾಕ್ಯ ಪ್ರದಾನೇನೆ ಸರ್ವೇ ತುಷ್ಯಂತಿ ಮಾನವಾಃ

ಏತದ್ ತದೈವ ವಕ್ತವ್ಯಮ್, ವಚನೇ ಕಿಮ್ ದರಿತ್ರತಾ?

ಒಳ್ಳೆಯ ಮಾತನು ಕೇಳಲು
ಎಲ್ಲರು ಸಂತಸ ಹೊಂದುವರು
ಅದಕೇ ಅಂಥಾ ಮಾತನೆ ನೀ ನುಡಿ
ಬರೀ ಮಾತಿಗೇನು ಬಡತನವು

ಕಟ್ಟಿಗೆಯಲ್ಲಿಲ್ಲ ಅವನು
ಕಲ್ಲಲಿ ಮಣ್ಣಲಿ ಅವನಿಲ್ಲ
ಮನದಲಿ ಇಹನು ಆ ಜಗದೊಡೆಯನು
ಭಾವವೆ ಎಲ್ಲಕು ಕಾರಣವು

ಕಾಕಃ ಕೃಷ್ಣಃ ಪಿಕ: ಕೃಷ್ಣಃ ಕೋ ಭೇದಃ ಪಿಕ ಕಾಕಯೋಃ?

ವಸಂತ ಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ 

ಕಾಗೆಯು ಕಪ್ಪು ಕೋಗಿಲೆ ಕಪ್ಪು
ಎಲ್ಲಿದೆ ಏನಿದೆ ವ್ಯತ್ಯಾಸ ?
ವಸಂತಕಾಲವು ಬಂದಿರೆ ತಾನು
ಆಗುವುದು ಖಂಡಿತ ಭಾಸ

-ಹಂಸಾನಂದಿ

ಇ-ಲೋಕ-12 (2/3/2007)

ಸಂಶೋಧನಾ ಪ್ರಬಂಧಗಳನ್ನು ಮುಕ್ತವಾಗಿ ಲಭ್ಯವಾಗಿಸಲು ಹೋರಾಟ
 ಸಂಶೋಧನಾ ಚಟುವಟಿಕೆಗಳು ಸಾಕಷ್ಟು ಬಾರಿ ಸರಕಾರದ ಅನುದಾನದೊಂದಿಗೆ ನಡೆಯುತ್ತವೆ. ಆದರೆ ಅವುಗಳ ಫಲಿತಾಂಶಗಳನ್ನೊಳಗೊಂಡ ಸಂಶೋಧನಾ ಪ್ರಬಂಧಗಳು ಪ್ರಕಾಶಕರ ಮೂಲಕ ಚಂದಾದಾರರಿಗೆ ಲಭ್ಯವಾಗುವುದೇ ಹೆಚ್ಚು. ಚಂದಾದಾರರು ದುಬಾರಿ ವಾರ್ಷಿಕ ಶುಲ್ಕ ಪಾವತಿಸಬೇಕಾಗುತ್ತದೆ. ಸರಕಾರ ಅನುದಾನ ಪಡೆದು ನಡೆಸಿದ ಸಂಶೋಧನಾ ಚಟುವಟಿಕೆಗಳನ್ನು ಸರ್ವರಿಗೆ ಲಭ್ಯವಾಗಿಬೇಕಾದ್ದು ನ್ಯಾಯ. ಇದನ್ನು ಮುಕ್ತವಾಗಿ ಒದಗಿಸಬೇಕು ಎಂದು ತಗಾದೆ ಹೂಡಿ,ಯುರೋಪಿಯನ್ ಒಕ್ಕೂಟದ ಆಯೋಗದ ಮುಂದೆ ದಾವೆ ಹೂಡಲಾಗಿದೆ.ಆಯೋಗವು ಸಂಶೋಧನಾ ಪ್ರಬಂಧಗಳ ಮುಕ್ತ ಲಭ್ಯತೆಗೆ ಅನುವು ಮಾಡುವ ದೃಷ್ಟಿಯಿಂದ ಈಗಾಗಲೇ ನೂರು ಮಿಲಿಯನ್ ಡಾಲರಿನ ಕೋಶವನ್ನು ಸ್ಥಾಪಿಸಿದೆ.        ವಿಶ್ವವಿದ್ಯಾಲಯದ ಸಂಶೋಧಕರು ತಮ್ಮ ಸಂಶೋಧನಾ ಪ್ರಬಂಧಗಳನ್ನು ಖಾಸಗಿಯವರು ನಡೆಸುವ ನಿಯತಕಾಲಿಕಗಳಲ್ಲಿ ಪ್ರಕಟಿಸುತ್ತಾರೆ. ನಂತರ ಈ ನಿಯತಕಾಲಿಕಗಳನ್ನು ವಿಶ್ವವಿದ್ಯಾಲಯದವರು ದುಡ್ಡು ತೆತ್ತು ಖರೀದಿಸಬೇಕಾಗುತ್ತದೆ.ಇದು ಬಹಳ ವರ್ಷಗಳಿಂದಲೂ ನಡೆದು ಬಂದಿರುವ ಸಂಪ್ರದಾಯ.ಹಾಗೆಂದು ಸ್ವೀಡನ್‌ನ ಸಂಸ್ಥೆಯೊಂದು ಈಗಾಗಲೇ ತನ್ನ ಪ್ರಬಂಧಗಳನ್ನು ಮುಕ್ತವಾಗಿ ಒದಗಿಸುತ್ತದೆ. ಕೆನಡಾದ ಸಂಸ್ಥೆಯೊಂದೂ ತನ್ನ ಸಂಶೋಧನಾ ಪ್ರಬಂಧಗಳನ್ನು ಉಚಿತವಾಗಿ ನೀಡುತ್ತಿದೆ. ಆದರೆ ಹೆಚ್ಚಿನ ಕಡೆ ಸಂಶೋಧನಾ ಪ್ರಬಂಧಗಳನ್ನು ಸಂಶೋಧಕರು ದುಬಾರಿ ಶುಲ್ಕ ಪಾವತಿಸಿಯೇ ಪಡೆಯಬೇಕಾದ್ದು ವಿಪರ್ಯಾಸ.
 

ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?

ಈ ಸುದ್ದಿ ಓದಿದಾಗಿನಿಂದ ಏನೊಂದನ್ನು ಮಾಡಲೂ ಮನಸ್ಸಾಗುತ್ತಿಲ್ಲ. ಮೊನ್ನೆ ಬೆಂಗಳೂರಿನ ಬಿಇಎಂಎಲ್ ಲೇಔಟಿನಲ್ಲಿ ನಾಲ್ಕೈದು ವರ್ಷದ ಪುಟ್ಟ ಬಾಲಕನನ್ನು ಸುಮಾರು ಹದಿನೈದು ಬೀದಿ ನಾಯಿಗಳು ಕಚ್ಚಿ ಕಚ್ಚಿ ಕೊಂದಿವೆಯಂತೆ! ದಟ್ಸ್ ಕನ್ನಡದಲ್ಲಿ ಈಗ ತಾನೇ ಓದಿದೆ. ನಾವು ಯಾವ ಕಾಲದಲ್ಲಿದ್ದೀವಿ ಎನಿಸುತ್ತಿದೆ. ಇನ್ನೂ ಕೇವಲ ಒಂದೂವರೆ ತಿಂಗಳ ಹಿಂದೆ ಚಂದ್ರಾ ಲೇಔಟಿನಲ್ಲಿ ಪುಟ್ಟ ಬಾಲಕಿಯೊಬ್ಬಳನ್ನು ಇದೇ ರೀತಿ, ಬೀದಿ ನಾಯಿಗಳು ಕಚ್ಚಿ ಸಾಯಿಸಿದ ಘಟನೆ ವರದಿಯಾಗಿತ್ತು. ನಮ್ಮ ಆಳರಸರನ್ನು ನಿದ್ದೆಯಿಂದ ಎಬ್ಬಿಸಲು ವಿಶ್ವೇಶ್ವರ ಭಟ್ ಅವರು ಬಹಳ ಒಳ್ಳೆಯ ಸಂಪಾದಕೀಯ ಸಹಾ ಬರೆದಿದ್ದರು.

ಬರಲಿದೆ ಫೋಟೋಶಾಪ್... ಅಂತರ್ಜಾಲದಲ್ಲಿ - ನೇರ ಬಳಸಲು!

ಇತ್ತೀಚೆಗೆ ಎತ್ತ ನೋಡಿದರೂ ಅಂತರ್ಜಾಲ, ಅಂತರ್ಜಾಲದಲ್ಲಿ ಸಿಗುವ ಸವಲತ್ತುಗಳು, ಅಂತರ್ಜಾಲದಲ್ಲಿ ಮಾಡಬಹುದಾದ ಕೆಲಸಗಳ ಬಗ್ಗೆಯೇ ಮಾತು. ಸದೃಡವಾಗಿ ಬೇರೂರಿದ್ದ ಜಗತ್ತಿನ ಅತಿ ಶ್ರೀಮಂತನಿರುವ ಮೈಕ್ರೊಸಾಫ್ಟಿನಂತಹ ಕಂಪೆನಿಗೆ ಭೀತಿ ಹುಟ್ಟಿಸಿದ್ದು ಕೂಡ ಅಂತರ್ಜಾಲವನ್ನೇ ನೆಲೆಯಾಗಿಟ್ಟುಕೊಂಡು ಬೆಳೆದ ಗೂಗಲ್ ಕಂಪೆನಿ. ಹೀಗೆ ಹೋಲಿಕೆಯಲ್ಲಿ ಅಲ್ಪ ಸಮಯದಲ್ಲೇ ದೈತ್ಯವಾಗಿ ಬೆಳೆದ ಕಂಪೆನಿಯೊಂದು ಮೈಕ್ರೊಸಾಫ್ಟಿನ ಪ್ರಬಲ ಹಿಡಿತವಾದ ಕಛೇರಿ ನಿರ್ವಹಣಾ ತಂತ್ರಾಂಶಗಳನ್ನು (Office software) ಅತಿ ಸುಲಭವಾಗಿ ಹಾಗೂ ಮುಫತ್ತಾಗಿ ಅಂತರ್ಜಾಲದಲ್ಲೇ ಸಿಗುವಂತೆ ಮಾಡಿದಾಗ ಎಲ್ಲರೂ ಎಚ್ಚೆತ್ತು ಕಣ್ತೆರೆದು ನೋಡುವಂತಾಯಿತು. ಹೆಚ್ಚಿನ ಆಘಾತವಾಗಿದ್ದು ಮೈಕ್ರೊಸಾಫ್ಟಿಗೇ ಎಂದು ಹಲವರ ಅಂಬೋಣ.

ಹಾಗೆಯೇ ಮುಂದುವರೆದು ಈಗ ಅಂತರ್ಜಾಲದಲ್ಲಿ ಮಾಡಲಾಗದು ಏನೂ ಇಲ್ಲ ಎಂಬಂತಹ ವಾತಾವರಣ. ಮೈಕ್ರೊಸಾಫ್ಟಿನವರು ಅವರಿಗಾದ ಆಘಾತದಿಂದ ಚೇತರಿಸಿಕೊಂಡರಷ್ಟೆ, ಅವರ ಆಫೀಸ್ ತಂತ್ರಾಂಶಗಳನ್ನು "ವಿಂಡೋಸ್ ಲೈವ್!" ಎಂಬ ಹೊಸತೊಂದು ಸವಲತ್ತನ್ನು ತಮ್ಮ ಆಫೀಸ್ ತಂತ್ರಾಂಶಗಳೊಂದಿಗೆ "ಪ್ಯಾಕೇಜ್ ಡೀಲ್" ಎಂಬಂತೆ ತಮ್ಮ ಗ್ರಾಹಕರ ಮುಂದೆ ತರುವಲ್ಲಿ ಯಶಸ್ವಿಯೂ ಆದರು. ಆದರೂ ಗೂಗಲ್ ಮಟ್ಟಕ್ಕೆ ಅದು ಬಂದಂತಿಲ್ಲ. ಈಗಲೂ ಮೈಕ್ರೊಸಾಫ್ಟಿನ ಈ ಸವಲತ್ತನ್ನು ಹೊಗಳುವವರು (ಅಥವ ಹೊಗಳಿಕೊಳ್ಳುವವರು) ಮೈಕ್ರೊಸಾಫ್ಟಿಗರೆ ಅಥವ ಮೈಕ್ರೊಸಾಫ್ಟಿನೊಂದಿಗೆ ಹಾಗೂ ಹೀಗೂ ಜೀವನದ ನಂಟುಳ್ಳವರೆ ಕೆಲವರು!
Google Spreadsheet

ಮೈಕ್ರೊಸಾಫ್ಟು ಮತ್ತು ಗೂಗಲ್ ಹೀಗಾದ್ರೆ ಬೇರೆಯವರೇನೂ ಹಿಂದೆ ಬಿದ್ದಿಲ್ಲ. ಗೂಗಲ್ ಹೊಸತೊಂದು ಇ-ಮೇಯ್ಲ್ ಸವಲತ್ತು ಹೊತ್ತು ತಂದ ಕೆಲವೇ ದಿನಗಳಲ್ಲಿ ಜಗತ್ತಿನ ಎಲ್ಲೆಡೆ ಈ ರೀತಿಯ ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತ ಹಲವು ಪ್ರಾಜೆಕ್ಟುಗಳು ಹುಟ್ಟಿಕೊಂಡವು, ಬೆಳೆದು ಬಂದವು. ಅಂತಹ ಒಂದು ಪ್ರಾಜೆಕ್ಟ್ [:http://roundcube.net/
|ರೌಂಡ್ ಕ್ಯೂಬ್ ]. ಇದು ಇಂತಹ ಒಂದು ಪ್ರಾಜೆಕ್ಟ್ ಅಷ್ಟೆ. ಈ ರೀತಿಯ ಪ್ರಾಜೆಕ್ಟುಗಳ ಮಹಾಪೂರವೇ ಹರಿದವು. ಸಾಕಷ್ಟು ಜನಪ್ರಿಯವಾಗಿದ್ದ ಯಾಹೂ ಮೇಯ್ಲ್ ಕೂಡ ಭೀತಿವಶವಾಗಿ ಹೊಸತೊಂದು ಜಿ-ಮೇಯ್ಲ್ ರೀತಿಯ ಸವಲತ್ತನ್ನು ತನ್ನ ಗ್ರಾಹಕರ ಮುಂದಿರಿಸಿತು. ಅದು ಹೇಗೆ ಸ್ವೀಕೃತವಾಯಿತು ಎಂಬುದು ಪ್ರತ್ಯೇಕ ಚರ್ಚೆಯೇ ಸರಿ.

ಈಗ ಪ್ರಕಟಣೆ, ಡಿಸೈನ್ ಹಾಗೂ ಇಮೇಜಿಂಗ್ ಮಾರುಕಟ್ಟೆಯಲ್ಲಿ ಮಂಚೂಣಿಯಲ್ಲಿರುವ ಅಡೋಬೆ (ಅಥವ ಅಡೋಬ್ - Adobe) ತನ್ನ ಅದ್ವಿತೀಯ ಪ್ರಾಡಕ್ಟ್ ಆಗಿರುವ ಫೋಟೋಶಾಪ್ ತಂತ್ರಾಂಶವನ್ನು [:http://news.com.com/Adobe+to+take+Photoshop+online/2100-7345-6163015.html|ಅಂತರ್ಜಾಲದಲ್ಲಿಯೇ ನೇರ ಬಳಸಲು ಲಭ್ಯವಾಗುವ ಹಾಗೆ] ಮಾಡಲಿದೆಯಂತೆ. ಅಂತರ್ಜಾಲದಲ್ಲೇ ಎಲ್ಲ ಅಫೀಶಿಯಲ್ ಕೆಲಸ ಮಾಡಿಕೊಳ್ಳುವಂತಹ ದಿನಗಳ ಕಾಲದಲ್ಲಿ ಯಾರೂ ಹಿಂದುಳಿದಿರಬಾರದು ನೋಡಿ... ಹಲವರು ಈಗಾಗಲೇ ತಮ್ಮ ಕಂಪ್ಯೂಟರಿನಲ್ಲಿ ಸ್ಥಾಪಿಸಿಕೊಳ್ಳಬೇಕಾದ ತಂತ್ರಾಂಶಕ್ಕಿಂತ ನೇರ ಆನ್ಲೈನ್ ಬಳಸಲು ಲಭ್ಯವಿರುವ, ಸುಲಭವಾಗಿರುವ ಸರ್ವೀಸುಗಳತ್ತ ಒಲವು ತೋರಿಸುತ್ತಿದ್ದಾರೆ. ಹಿಂದುಳಿದರೆ ಆಯಾ ಕಂಪೆನಿಯ ಮೂಲ ಪ್ರಾಡಕ್ಟು ಕೆಲಮಟ್ಟಿಗೆ ತೊಂದರೆಗೆ ಸಿಲುಕಿದಂತೆಯೇ!

[:http://picasaweb.google.com/|ಗೂಗಲ್ ನ ಪಿಕಾಸ] ಈಗಾಗಲೆ ಹಲವು ಇಮೇಜ್ ಎಡಿಟಿಂಗ್ ಸವಲತ್ತುಗಳನ್ನು ಆನ್ಲೈನ್ ಲಭ್ಯವಾಗಿಸಿದೆ. ಅಡೋಬೆಯವರು ಯಾವ ರೀತಿಯ ಸವಲತ್ತನ್ನು ತಮ್ಮ ಗ್ರಾಹಕರ ಮುಂದಿಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಟೀಮ್ ಮಂಗಳೂರಿನ ಗಾಳಿಪಟ ಗಾಥೆ - ೧

ಟೀಮ್ ಮಂಗಳೂರಿನ ಗಾಳಿಪಟ ಗಾಥೆ - ೧ಮಂಗಳೂರಿನಲ್ಲಿ ಒಂದು ಸ್ವಂತ ಸಣ್ಣ ವ್ಯವಹಾರ ಮಾಡಿಕೊಂಡಿದ್ದಾರೆ ಸರ್ವೇಶ್ ರಾವ್. ನೋಡಲಿಕ್ಕೆ ಸಣ್ಣದಾಗಿ, ಸಾಧಾರಣವಾಗಿರುವ ಸರ್ವೇಶ್ ಒಬ್ಬ ದೊಡ್ಡ ಕನಸುಗಾರ. ಆ ಕನಸು ನನಸಾದ ದಿನ ನೋಡಬೇಕಿತ್ತು ಅವರನ್ನು. ಹಿರಿ ಹಿರಿ ಹಿಗ್ಗುತ್ತಾ, ಏನು ಮಾಡಬೇಕೆಂದು ತೋಚದೆ, ಕಿವಿಯಿಂದ ಕಿವಿಯವರೆಗೆ ನಗುತ್ತಾ ಮಂಗಳೂರಿನ ಪಣಂಬೂರು ಸಮುದ್ರ ತೀರದಲ್ಲಿ ಪರಿಚಯದವರನ್ನು ಅಪ್ಪಿಕೊಂಡು ಸ್ವಾಗತಿಸುತ್ತಾ ಬಹಳ ಸಂಭ್ರಮದಿಂದ ಆಚೀಚೆ ಓಡಾಡುತ್ತ ಇದ್ದರು.

ಆ ದಿನ ಮಂಗಳೂರಿನ ಪ್ರಥಮ ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು 'ಟೀಮ್ ಮಂಗಳೂರು' ಆಯೋಜಿಸಿತ್ತು. ಜನ ಪ್ರವಾಹವೇ ಪಣಂಬೂರು ಸಮುದ್ರ ತೀರಕ್ಕೆ ಹರಿದು ಬರುತ್ತಿತ್ತು. ಇಡೀ ಮಂಗಳೂರೇ ಗಾಳಿಪಟ ಉತ್ಸವ ನೋಡಲು ಪಣಂಬೂರು ಕಡಲ ತೀರದಲ್ಲಿ ನೆರೆದಿತ್ತು.

ಜನವರಿ ೨೩,೨೦೦೫ರಂದು ನಡೆದ ಮಂಗಳೂರಿನ ಪ್ರಥಮ ಅಂತರಾಷ್ಟ್ರೀಯ ಗಾಳಿಪಟ ಉತ್ಸವ, ಟೀಮ್ ಮಂಗಳೂರಿನ ಸದಸ್ಯರ ಕನಸು ನನಸಾದ ದಿನ. ಇದು ಟೀಮ್ ಮಂಗಳೂರಿಗೆ ಒಂದು ದೊಡ್ಡ ಮಟ್ಟದ ಯಶಸ್ಸು ಕಂಡ ದಿನವಾಗಿತ್ತು. ಉತ್ಸವದ ಸಂಪೂರ್ಣ ಪ್ರಾಯೋಜಕತೆಯನ್ನು ಮಂಗಳೂರು ತೈಲಾಗಾರ(ಎಮ್.ಆರ್.ಪಿ.ಎಲ್)ದ ಪೋಷಕ ಸಂಸ್ಠೆಯಾಗಿರುವ ಓ.ಎನ್.ಜಿ.ಸಿ ವಹಿಸಿಕೊಂಡಿತ್ತು. ಮಿಡಿಯಾ ಪ್ರಾಯೋಜಕತೆಯ ಜವಾಬ್ದಾರಿಯನ್ನು ವಿಜಯ ಕರ್ನಾಟಕ ವಹಿಸಿಕೊಂಡಿದ್ದರಿಂದ ಉತ್ಸವದ ಪ್ರಚಾರಕ್ಕೆ ಯಾವುದೇ ಕೊರತೆ ಇರಲಿಲ್ಲ. ಗಾಳಿಪಟ ಉತ್ಸವ ವೀಕ್ಷಿಸಲು ಸುಮಾರು ಒಂದು ಲಕ್ಷದಷ್ಟು ಜನಸಮೂಹ ಸೇರಿತ್ತು. ಫ್ರಾನ್ಸ್, ಇಸ್ರೇಲ್, ಆಸ್ಟ್ರೇಲಿಯ, ಮಲೇಶ್ಯ, ಇಂಡೋನೇಶ್ಯ, ಇಂಗ್ಲಂಡ್, ಜಪಾನ್ ಮತ್ತು ಟರ್ಕಿ ದೇಶಗಳಿಂದ ಗಾಳಿಪಟಗಾರರು ಬಂದಿದ್ದರು.

ಟೀಮ್ ಮಂಗಳೂರಿನ ಗಾಳಿಪಟ ಗಾಥೆ - ೧
ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಿದ ನಂತರ ಟೀಮ್ ಮಂಗಳೂರಿನ ಅದೃಷ್ಟ ಬದಲಾಯಿತು. ಬೇರೆ ದೇಶಗಳಿಂದ ಗಾಳಿಪಟ ಉತ್ಸವಗಳಲ್ಲಿ ಪಾಲ್ಗೊಳ್ಳಲು ಆಹ್ವಾನಗಳು ಬರಲಾರಂಭಿಸಿದವು. ಎಪ್ರಿಲ್ ೨೦೦೫ರಲ್ಲಿ ಫ್ರಾನ್ಸ್ ನ ಬರ್ಕ್ ಸುರ್ ಮರ್ ಎಂಬಲ್ಲಿ ನಡೆದ ಗಾಳಿಪಟ ಉತ್ಸವದಿಂದ ಪ್ರಾರಂಭಗೊಂಡು ೩ ಬಾರಿ (೨ ಬಾರಿ ಫ್ರಾನ್ಸ್ ಮತ್ತು ೧ ಬಾರಿ ಇಂಗ್ಲಂಡ್) ಟೀಮ್ ಮಂಗಳೂರು ವಿದೇಶ ಪ್ರಯಾಣ ಮಾಡಿ ೪ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿದೆ. ಸೌದಿ ಅರೇಬಿಯ, ಟರ್ಕಿ, ಜಪಾನ್ ಮತ್ತು ಇಂಡೋನೇಶ್ಯಗಳಲ್ಲಿ ನಡೆಯುವ ಗಾಳಿಪಟ ಉತ್ಸವಗಳಿಗೆ ತೆರಳಲು ಟೀಮ್ ಮಂಗಳೂರಿಗೆ ನಾನಾ ಕಾರಣಗಳಿಂದ ಸಾಧ್ಯವಾಗಲಿಲ್ಲ.

ಭಾಗವಹಿಸಲು ತೆರಳಿದ ಎಲ್ಲಾ ಕಡೆಗಳಲ್ಲೂ ಭಾರತದ ಜನಪದ ಕಲೆಗಳಿಗೆ, ಪೌರಾಣಿಕ ಪಾತ್ರಗಳಿಗೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ದೈತ್ಯ ಗಾತ್ರದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿಸಿ ವಿದೇಶಿಯರನ್ನು ದಂಗುಬಡಿಸಿ, ಪ್ರಶಂಸೆ ಪಡೆದು ಹೆಮ್ಮೆಯಿಂದ ಬೀಗುತ್ತ ಮರಳಿ ಬಂದಿದೆ ಟೀಮ್ ಮಂಗಳೂರು.

೨೦೦೫ರಲ್ಲಿ ಇಂಗ್ಲಂಡ್ ನಲ್ಲಿ ನಡೆದ ೨ ಗಾಳಿಪಟ ಉತ್ಸವಗಳಲ್ಲಿ 'ಬೆಸ್ಟ್ ಟೀಮ್' ಪ್ರಶಸ್ತಿಯನ್ನು ಗಳಿಸಿದ್ದು ಟೀಮ್ ಮಂಗಳೂರಿನ ಸಾಧನೆ. ಭಾರತದಿಂದ ಅಹ್ವಾನಿಸಲ್ಪಟ್ಟ ಏಕೈಕ ತಂಡವೆಂಬ ಹೆಗ್ಗಳಿಕೆ ಬೇರೆ.
೨೦೦೨ರ ಗುಜರಾತ್ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ 'ಟೀಮ್ ಮಂಗಳೂರು' ತನ್ನ ೩೬ ಅಡಿ ಉದ್ದದ ಕಥಕ್ಕಳಿ ಗಾಳಿಪಟವನ್ನು ಹಾರಿಸಿ ರಾಷ್ಟ್ರೀಯ ದಾಖಲೆಯನ್ನು ಮಾಡಿತು. ಲಿಮ್ಕಾ ಸಾಧನೆಗಳ ಪುಸ್ತಕದಲ್ಲಿ ಈ ಬಗ್ಗೆ ದಾಖಲಿಸಲಾಗಿದೆ.
ಇಂಗ್ಲಂಡ್ ನ ಗಾಳಿಪಟ ಮಾಸ ಪತ್ರಿಕೆಯಾಗಿರುವ 'ದಿ ಕೈಟ್ ಫ್ಲೈಯರ್' ತನ್ನ ಜುಲೈ ೨೦೦೫ರ ಸಂಚಿಕೆಯ ಮುಖಪುಟದಲ್ಲಿ ಟೀಮ್ ಮಂಗಳೂರಿನ ಗಾಳಿಪಟಗಳನ್ನು ಮುದ್ರಿಸಿತ್ತು.
ಕನ್ನಡಿಗರಿಗೆ ಹೆಮ್ಮೆಪಡಲು ಇದಕ್ಕಿಂತ ಹೆಚ್ಚೇನು ಬೇಕು?