ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡತನ

೧೯೪೬ ರ ಅ.ನ.ಕೃ. ಅವರ ಲೇಖನದ ಬಗ್ಗೆ ಓದುತ್ತಾ ನಾವು ಕನ್ನಡಿಗರು ಎಲ್ಲಿ ಎಡವುತ್ತಿದ್ದೇವೆ ಎಂದು ವಿಮರ್ಶೆ ಮಾಡಿಕೊಳ್ಳಬೇಕಾದ ಸಮಯ ವಿದು ಎನಿಸುತ್ತದೆ. ಎರಡುಜನ ತಮಿಳರು ಅಥವಾ ಅನ್ಯ ಬಾಷೆಯಜನ ಮೂರನೆಯವರು ಕನ್ನಡಿಗನಾಗಿದ್ದರೂ ನಿರ್ದಾಕ್ಷಣ್ಯವಾಗಿ ಅವರ ಬಾಷೆಯಲ್ಲಿ ಮಾತಾಡಿ ಕೊಳ್ಳುತ್ತಾರೆ. ಆದರೆ ಇಬ್ಬರು ಕನ್ನಡಿಗರು ಮೂರನೆಯವ ಅನ್ಯಬಾಷಿಕ ನಾದರೆ ಒಂದೆ ಅವನ ಬಾಷೆಯಲ್ಲಿ ಮಾತಾಡುತ್ತಾರೆ ಅಥವಾ ಬರದಿದ್ದರೆ ಇಂಗ್ಲೀಷಿನಲ್ಲಿ ಮಾತಾಡಿ ತಮ್ಮ ಉದಾರತೆ ಮೆರೆದಿದ್ದೇವೆ ಎಂದು ಹೆಮ್ಮೆ ಪಡುತ್ತಾರೆ. ಇದಕ್ಕೆ ನಮ್ಮ ವಿಚಾರವಾದಿ ಗಳೆನಿಸಿ ಕೊಂಡವರು ಆಗಾಗ ಸಾರ್ವಜನಿಕ ವಾಗಿ ಉದರಿಸುವ ಅಣಿಮುತ್ತುಗಳು ಕಾರಣ ಎಂದು ನನಗನಿಸುತ್ತದೆ. ಯಾಕಂದರೆ ಇನ್ನೂ ವಿದ್ಯಾರ್ಥಿದೆಸೆಯಲ್ಲಿರುವವರಿಗೆ ಅದು ವಿಶಾಲಮನೋಭಾವದ ಸತ್ಯವಾಗಿ ಗೋಚರಿಸುತ್ತದೆ.

ನನ್ನ ಜೀವನಪ್ರವಾಹವು ಉತ್ತರಮುಖಿಯಾಯಿತು(೧೯೦೫-೦೯೦೬)

'ನನ್ನ' ಅಂದ್ರ ನಂದಲ್ರೀ!! , ಕರ್ಣಾಟಕ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರದು. ಹಿಂದೆ ಅವರ ಆತ್ಮ ಚರಿತ್ರೆಯಿಂದಾಯ್ದ ಭಾಗಗಳನ್ನು ಬರೆಯಲಾರಂಭಿಸಿದ್ದೆ. (ಮೊದಲ ಭಾಗಕ್ಕೆ ಇಲ್ಲಿ ನೋಡಿ)

ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧

ಆತ್ಮೀಯ ಸಂಪದಿಗರೇ,

ಪದಬಂಧವನ್ನು ಬಿಡಿಸುವುದು ಈಗೀಗ ಕೊಂಚ ಕಡಿಮೆಯಾಗುತ್ತಿರುವ ಹವ್ಯಾಸ. ನಾನು ಚಿಕ್ಕವನಿದ್ದಾಗ ಭಾನುವಾರದ ದಿನ ಬೆಳ್ಳಂಬೆಳಗ್ಗೆ ಪ್ರಜಾವಾಣಿಯನ್ನು ಅಂಗಳದ ತುಂಬ ಹರಡಿಕೊಂಡು, ಅಪ್ಪ, ಅಮ್ಮ, ಅತ್ತೆ, ಅಜ್ಜ, ಅಜ್ಜಿ ಹೀಗೆ ಮನೆಮಂದಿಗೆಲ್ಲ ತಲೆಕೆಡಿಸಿ ಪದಬಂಧಗಳನ್ನು ತುಂಬುತ್ತಿದ್ದೆ. ನಿಮ್ಮಲ್ಲೂ ಸಾಕಷ್ಟು ಜನರು ಸುಧಾ, ಪ್ರಜಾವಾಣಿಗಳ ಪದಬಂಧಗಳಲ್ಲಿ ಹುದುಗಿ ಭಾನುವಾರದ ಅರ್ಧ ದಿನವನ್ನೇ ಕಳೆದಿರಬಹುದು ಅಲ್ಲವೇ?

ಅದನ್ನೇ ನೆನೆಯುತ್ತಾ ಪದಬಂಧವೊಂದನ್ನು ರಚಿಸಲು ಪ್ರಯತ್ನಿಸಿದ್ದೀನಿ. ಬಿಡಿಸಿ, ಹೇಗಿತ್ತು ಅಂತ ಹೇಳುತ್ತೀರಾ? ಇದು ಕೇವಲ "ಪದಗಳ ಬಂಧ" ಆಗದಿರಲಿ ಎಂದು ಅಲ್ಲಲ್ಲಿ ನಮ್ಮ ಕನ್ನಡನಾಡು-ನುಡಿಯ ಬಗ್ಗೆ ಕೆಲವು ರಸಪ್ರಶ್ನೆಗಳನ್ನೂ ಸೇರಿಸಿದೆ. ಇಷ್ಟವಾಯಿತೋ ಇಲ್ಲವೋ ಹೇಳಿ.

ಈ ಪದಬಂಧಕ್ಕೆ ಉತ್ತರ ಶುಕ್ರವಾರ (ಮಾರ್ಚಿ ೨) ಪ್ರಕಟಗೊಳ್ಳುತ್ತದೆ.

1 2 3 4
5 6 7
8 9
10 11
12 13 14
15
16 17 18 19
20
21 22 23

ಮೇಲಿನಿಂದ ಕೆಳಕ್ಕೆ
1. ನಮ್ಮ ಹೃದಯ ಸುಮಾರು ಇಷ್ಟು ಗಾತ್ರದ್ದಾಗಿರುತ್ತದೆ ಎಂದು ತಜ್ಞರ ಅಭಿಪ್ರಾಯ (2)
2. ಒಂದು ಬಗೆಯ ಅಂಟು; ಜಿಗುಟಾದ ದ್ರವ (2)
3. ಇಂದಿನ ಕಾಲದಲ್ಲಿ ಜಿಮ್ ಇರುವಂತೆ, ಹಿಂದಿನ ಕಾಲದಲ್ಲಿ ಅಂಗ ಸಾಧನೆಗೆ ಇವುಗಳಿದ್ದವು (3)
4. ಕರ್ನಾಟಕದ ಅತಿ ಎತ್ತರದ ಬೆಟ್ಟ (6)
5. ಭೂಮಿಯಿಂದ ಹೊರತೆಗೆದ ಲೋಹವೊಂದರ ಕಚ್ಚಾ ರೂಪ (3)
7. ರಾಗವಾಗಿ ಪದ್ಯಗಳನ್ನು ಹಾಡುವ ಕಲೆ. ಈಗೀಗ ನಶಿಸಿ ಹೋಗುತ್ತಿದೆ (3)
12. ಕರ್ನಾಟಕದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆ (3)
13. ಹತ್ತಿಯನ್ನು ಹೀಗೂ ಕರೆಯುತ್ತಾರೆ ಗೊತ್ತಾ, ಮರುಳೆ? (3)
14. "ಹಾರ ಮತ್ತು ---"ಗಳನ್ನು ಹಾಕಿ ಸ್ವಾಗತ ಕೋರುವುದು (ಅಥವಾ ಸನ್ಮಾನಿಸುವುದು) ನಮ್ಮ ಸಂಪ್ರದಾಯ ಅಲ್ಲವೇ? (3)
15. ಕುದುರೆಯ ಕಾಲಿಗೆ ಹಾಕುವುದು; ಅದೃಷ್ಟದ ಸಂಕೇತವೂ ಹೌದು (2)
17. ಎಣಿಸುವುದು (3)
18. ಫರ್ಮಂಟೇಶನ್ ಎನ್ನುವುದಕ್ಕೆ ಕನ್ನಡದಲ್ಲಿ ಹೀಗೆ ಹೇಳಬಹುದು (3)
19. ಜಗತ್ತಿನ ಅತಿ ಎತ್ತರದ ಏಕಶಿಲಾ ವಿಗ್ರಹ; ಇದು ಕರ್ನಾಟಕದಲ್ಲಿದೆ ಅನ್ನುವುದು ನಮಗೆ ಹೆಮ್ಮೆ ಅಲ್ಲವೇ? (3)
20. ಅಂತರ್ಜಾಲದಲ್ಲಿ ನಮಗೆ ದಕ್ಕಿರುವ ಡೈರಿ! (2)

ಎಡದಿಂದ ಬಲಕ್ಕೆ
1. ಎತ್ತಲೋ ಮಾಯವಾದ ಮುತ್ತಿನ ಮೂಗುತಿ ತಂದ ಈತ ಯಾರು ಹೇಳಿ ನೋಡೋಣ? (5)
3. ಎಲ್ಲದರಲ್ಲೂ ಈತನಿಗೇ ಮೊದಲ ಪೂಜೆಯಂತೆ (4)
6. ನಾಡಪ್ರಭು ಕೆಂಪೇಗೌಡರ ಊರು (3)
8. ಪತಿವ್ರತೆ ಎನ್ನುವುದಕ್ಕೆ ಕನ್ನಡದ ಪದ. ಇದರಿಂದ ಪ್ರಾರಂಭವಾಗುವ ಪ್ರಸಿದ್ಧ ಕಾವ್ಯವೂ ಇದೆ. (3)
9. "ಕಾಗಿನೆಲೆ ಆದಿಕೇಶವ" ಈ ದಾಸರ ಕಾವ್ಯನಾಮ (3)
10. ಮೂರಕ್ಷರದ ನರಕವನ್ನು ಬಲು ಬೇಗ ಸ್ವರ್ಗ ಮಾಡುವುದು ಹೀಗೆ! (2)
11. ಹಸು ಕರು ಹಾಕಿದಾಗ, ಅದರ ಹಾಲನ್ನು ಬಳಸಿ ಮಾಡುವ ಒಂದು ರುಚಿಕರ ತಿನಿಸು (2)
13. ಇವರಿಗಿಂತ ದೊಡ್ಡ ಬಂಧುವಿಲ್ಲ ಎಂದು ಗಾದೆಮಾತು ಹೇಳುತ್ತದೆ (2)
14. ಕಸ್ತೂರಿ ಕಾಸಿಗೆ ಕೊಂಡದ್ದು ಏನನ್ನು ಎಂದು ನಿಮಗೇನಾದರೂ ಗೊತ್ತೇ? (3)
16. ಇದು ಗೋಳಾಟ/ಪಿರಿಪಿರಿ ಅಲ್ಲ ಮಾರಾಯ್ರೇ, ಹಳೆಗನ್ನಡದ ಕವಿಯೊಬ್ಬನ ನೆಚ್ಚಿನ ಕಾವ್ಯ ಪ್ರಕಾರ (3)
18. ನಮ್ಮ ಚೆಲುವ ಕನ್ನಡನಾಡು ಉದಯವಾಗಲಿ ಎಂದು ಹಾಡಿದ ಕವಿಯ ಊರು ಹೇಳಿ ನೋಡೋಣ? (5)
21. ಪತಿ ಅಲ್ಲ ಸ್ವಾಮಿ. ಗಿಡಗಳಿಗೆ ನೀರು ಹಾಯಿಸಲು ಮಾಡಿದ "--" (2)
22. ನಮ್ಮಷ್ಟಕ್ಕೆ ನಾವೇ ಹಾಡಿಕೊಳ್ಳುವುದಕ್ಕೆ ಹೀಗೆಂದು ಹೇಳಬಹುದು (3)
23. ಕಿಟಕಿ ಅಲ್ಲ, ಚುಚ್ಚು ಮಾತಿದು (3)

ಬುದ್ಧ ಮತ್ತು ಬೇಡ

ಬಹಳ ಹಿಂದೆ ಓದಿದ ಈ ಬರಹ, ಬಹುಶಃ ’ಕಸ್ತೂರಿ’ ಪತ್ರಿಕೆಯಲ್ಲಿ ಬಂದಿತ್ತು ಅನ್ಸುತ್ತೆ. ಸುಮಾರು ೨೦-೨೫ ವರ್ಷಗಳ ಕೆಳಗೆ ಓದಿದ್ದು. Exact ಆಗಿ ಜ್ನಾಪಕ ಇಲ್ಲ. ಆದರೆ, ಹೆಚ್ಚುಕಮ್ಮಿ ಈ ರೀತಿ ಇತ್ತು.

ಕಾರಂಜಿ

ಗೆಳೆಯರೇ, ಬಹುಶಃ ಬ್ಲಾಗ್ ಅನ್ನೊದು ಒಂದು ಇಲ್ಲದೇ ಇದ್ದಿದ್ದರೆ, ನಾನು ನನ್ನ ಅನಿಸಿಕೆಗಳನ್ನು (ಕನ್ನಡದಲ್ಲಿ) ಬರೆಯುವ ಪ್ರಯತ್ನವನ್ನು ಮಾಡ್ತನೇ ಇರ್ಲಿಲ್ಲ ಅನ್ಸುತ್ತೆ. ಮೊದಲೇ ನನ್ನ ಪರಿಚಯ ಹೇಳಿ ಬಿಡ್ತೇನೆ. ನಾನೊಬ್ಬ ಮೆಕಾನಿಕಲ್ ಇಂಜಿನಿಯರ್. ಅದು ಓದಿದ್ದು. ಆದರೆ ಆದದ್ದು ಸಾಪ್ಟ್ ವೇರ್ ಕಂಸಲ್ಟೆಂಟ್. ನಾ ಹುಟ್ಟಿದ್ದು ಶಿಕಾರಿಪುರದಲ್ಲಿ. ಶಿವಮೊಗ್ಗ ಜಿಲ್ಲೆ. ಬೆಳೆದಿದ್ದು, ಓದಿದ್ದು ಎಲ್ಲ ತುಮಕೂರಿನಲ್ಲಿ. ಬೆಳವಾಡಿ ಅನ್ನೋದು ನಮ್ಮ ತಂದೆಯವರು ಹುಟ್ಟಿ ಬೆಳೆದ ಹಳ್ಳಿ. ಚಿಕ್ಕಮಗಳೂರು ಜಿಲ್ಲೆಗೆ ಸೇರಿದ್ದು. ಜಾವಗಲ್ ಮತ್ತ್ತು ಕಳಸಾಪುರದ ನಡುವೆ ಇದೆ.

ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು

ಗುನ್ನಾರ್ ಮಿರ್ಡಾಲ್ ಎನ್ನುವ ನೋಬೆಲ್ ಪ್ರಶಸ್ತಿ ವಿಜೇತರು 'Objectivity in Social Research' ಎನ್ನುವ ಭಾಷಣದಲ್ಲಿ ಹೇಳುತ್ತಾರೆ, ಸಮಾಜಕ್ಕೆ ಸಂಭಂದಪಡುವ ಯಾವುದೇ ನೀತಿಸಂಹಿತೆಯನ್ನು ನಾವು ಪರಿಶೀಲಿಸಬೇಕಾದರೆ, ಮೊದಲು ವಿಷಯದಲ್ಲಿ ನಮ್ಮ ಪೂರ್ವಾಗ್ರಹಗಳನ್ನು ಗೊತ್ತುಮಾಡಿಕೊಂಡು ಮುಂದುವರಿಯಬೇಕು ಅಂತ. ಈ ಕ್ರಮ ಇಂದು ಕಾವೇರಿ ನೀರಿನ ಹಂಚಿಕೆಯ ಸಮಸ್ಯೆಯನ್ನು ವಿಶ್ಲೇಷಿಸಬೇಕಾದರೆ ಬಹಳ ಪ್ರಸ್ತುತವಾಗಿದೆ. ಹಾಗಾಗಿ ನನ್ನ ಪೂರ್ವಾಗ್ರಹಗಳನ್ನು ಮೊದಲೇ ಹೇಳಿಕೊಂಡು ಮುಂದುವರೆಯುತ್ತೇನೆ.
೧. ಕಾವೇರಿ ನದಿಯು ದೇಶದ ಆಸ್ತಿಯೆಂದು ಒಪ್ಪಬಹುದಾದರೂ ತಮಿಳರ ಮುಂದೆ ತಲೆಬಾಗುವುದು (ಅದು ಯಾವುದೇ ವಿಷಯವಿರಲಿ) ಕಷ್ಟದ ಕೆಲಸವೆ.
೨. ಸ್ವತಃ ಚಳುವಳಿಯಲ್ಲಿ ಭಾಗವಹಿಸದೇ ಇರುವುದರಿಂದ ಇವನ್ನು ಹೇಳಲು ಒಂದು ಬಗೆಯ ಮುಜುಗರವಿದೆ. ಜೊತೆಗೆ, ಈ ವಿಷಯದಲ್ಲಿ ಇತರರು ಬರೆದುದ್ದನ್ನು ಕೂಲಂಕುಷವಾಗಿ ಓದದೇ ನನ್ನ ಆಲೋಚನೆಗಳನ್ನು ಪ್ರಕಟಿಸುತ್ತಿದ್ದೇನೆ. ಇದೂ ಮುಜುಗರದ ವಿಷಯವೇ.
೩. ಸುಸ್ಥಿರ ಕೃಷಿ, ಸ್ವಲ್ಪ ದೇಸಿ, ಸಮಾಜವಾದ, ಹೀಗೆ ನನ್ನ ಹಲವು ಒಲವುಗಳು ಕೆಲವೊಮ್ಮೆ objectivityಗೆ ಕಲ್ಲುಹಾಕಬಹುದು ಎನ್ನುವ ದಿಗಿಲೂ ಇದೆ.

ಅನಾದಿಕಾಲದಿಂದಿದ್ದ ನಮ್ಮ ದೇಶದ ಅಗಾಧ ವೈವಿಧ್ಯತೆಯು ರಾಷ್ಟ್ರಮಟ್ಟದ ರಾಜಕೀಯದಲ್ಲಿ ಪ್ರಕಟಗೊಳ್ಳುತ್ತಿರುವುದು ಇತ್ತೀಚಿಗಷ್ಟೆ. ಭಾರತವೆಂಬ ರಾಜ್ಯಗಳ ಒಕ್ಕೂಟದಲ್ಲಿ ಅಭಿವೃದ್ಧಿ ಎನ್ನುವುದು ಏನು, ಯಾರಿಗೆ ಮತ್ತು ಹೇಗೆ ಎನ್ನುವ ಪ್ರಶ್ನೆಗಳಿಗೆ ಪೂರ್ವನಿರ್ಧಾರಿತ, ಸಮಾನ ಉತ್ತರಗಳಿಲ್ಲ. ಆದರೆ ಅಧಿಕಾರದ ತೆಕ್ಕೆಯಲ್ಲಿ ಕೆಲವೇ ಸ್ಥಳಗಳ ಕೆಲವೇ ಜನ ಇದ್ದುದರಿಂದ ಕಳೆದ ೫೦ ವರ್ಷಗಳಲ್ಲಿ (ಬ್ರಿಟೀಷರಿದ್ದಾಗಲೂ) ಸುಮಾರಿಗೆ ಈ ಪ್ರಶ್ನೆಗಳಿಗೆ ಒಬ್ಬರೇ ಉತ್ತರಿಸುತ್ತಿದ್ದುದರಿಂದ ಅಂತಹ ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ ಅಂತ ನನ್ನ ಭಾವನೆ. ಅಂದರೆ, ಹಿಂದೆ ನಾವೆಲ್ಲ ಒಮ್ಮತ ಹೊಂದಿದ್ದೆವು ಅಂತಲ್ಲ, ನಮ್ಮ ಧ್ವನಿಗಳನ್ನು ಅಷ್ಟೇನು ಕಷ್ಟವಿಲ್ಲದೇ ಮುಚ್ಚಿಸಬಹುದಾಗಿತ್ತು. ಅಭಿವೃದ್ಧಿಯ ದೃಷ್ಟಿಕೋನ ನಿಯಮಿತವಾಗಿತ್ತು ಅಂತ. ಆದರೆ ಪ್ರಾಂತೀಯ ರಾಜಕೀಯ, ಪ್ರಾಂತೀಯ ರಾಜಕಾರಣಿಗಳು ಕ್ರಮೇಣ ರಾಷ್ಟ್ರಮಟ್ಟದಲ್ಲಿಯೂ ಸಬಲರಾದ ಹಾಗೆ, ಅವರವರ ಆಸೆ ಆಕಾಂಕ್ಷೆಗಳೂ ದೇಶದ ಪ್ರಮುಖ ವಿಷಯಗಳಾಗುತ್ತಿವೆ. ಈ ಬದಲಾದ ಪರಿಸ್ಥಿತಿಯಿಂದ ಇಂದು ಕಾಣುತ್ತಿರುವ ಬಿಕ್ಕಟ್ಟುಗಳು ಹೆಚ್ಚು ಹೆಚ್ಚು ಕಳವಳಕಾರಿಯಾಗುತ್ತಿವೆ. ಆದರೆ ಕರ್ನಾಟಕದ ಒಳಗೆ, ಹಾಗು ಅದರ ಮಟ್ಟಿಗೆ ಇದು ಪ್ರಾಯಶಃ ಸುಳ್ಳೇನೋ.. ಮೊದಲಿಂದಲೂ ಒಂದಲ್ಲ ಒಂದು ವಿಷಯದಲ್ಲಿ ಹೋರಾಟ, ಚಳುವಳಿ ಇದ್ದಿದ್ದೇ, ಕರ್ನಾಟಕದ ಏಕೀಕರಣದಿಂದ ಹಿಡಿದು, ಇಂದಿನವರೆಗೂ. ಹಾಗೆಯೇ ತಮಿಳರ ಹೋರಾಟ, ಅವರದ್ದೇ ವಿಷಯಗಳಲ್ಲಿ. ಆದರೆ, ಬ್ರಿಟಿಷರ ಕಾಲದಲ್ಲಿ ಅದೃಷ್ಟದಿಂದ ತಮಿಳರಿಗೆ ನಮ್ಮವರಿಗೆ ವಿರುದ್ಧವಾಗಿ ಮೇಲುಗೈ ಸಿಕ್ಕಿತು. ಇದು ಇತರರಿಗೆ ಪ್ರತಿಕೂಲವೆಂದು ಅರಿತಿದ್ದೂ ತಮಗೆ ಅನುಕೂಲವೆಂದು ಸುಮ್ಮನಿದ್ದದು ತಮಿಳರ ನೈತಿಕ ತಪ್ಪು (ಇದನ್ನಿಂದು ಜಾಣ್ಮೆಯೆಂದೂ ಕರೆಯಬಹುದು)