ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಈ-ಮೈಲ್ ನಿಂದ ಬ್ಲಾಗ್ ಪ್ರಕಟಣೆ!!!

ಈ ಪ್ರಶ್ನೆಯನ್ನು feedback section ನಲ್ಲಿ ಕೇಳಬೇಕೆಂದುಕೊಂಡೆ. ಆದರೆ, ಅದೇ ಪ್ರಶ್ನೆಯನ್ನು ಇಲ್ಲಿ ಕೇಳಿದರೆ ಎಲ್ಲ ಸದಸ್ಯರೂ ಭಾಗವಹಿಸುತ್ತಾರೇನೋ ಎಂದುಕೊಂಡು ಇಲ್ಲಿಡುತ್ತಿದ್ದೇನೆ.

ಕಂದಮ್ಮ.

ಕಂದಮ್ಮ

ಅಳಬೇಡ ಕಂದಮ್ಮ
ನಗುನಗುತಾ ಮಲಗಮ್ಮ
ಕಣ್ಣ ಮುಚ್ಚು ಕಣ್ಣಮ್ಮ
ಸುಖದ ಸ್ವಪ್ನ ಕಾಣಮ್ಮ
ಚಂದಮಾಮ ಬರುವನು
ತಾರೆಗಳ ತೋರುವನು
ತಾರೆಗಳ ತೋಟದಲಿ
ಬಾಲಕೃಷ್ಣನಿರುವನು
ನಿನ್ನೊಡನೆ ಆಡುವನು
ನಿನ್ನ ಹಾಡ ಕೇಳುವನು
ಮಾಧವನು ಹತ್ತಿರ
ಮುರಳಿಗಾನ ಸುಮಧುರ
ಆಡಿನಲಿದ ನಂತರ
ಆಗುವುದು ಎಚ್ಚರ.

ಸಂಪದ *ಏನಲ್ಲ* - What Sampada is *not*

ಶೇಖರ್ ಪೂರ್ಣರವರು ತಮ್ಮ ಸಂಪಾದಕೀಯದಲ್ಲಿ ಸಂಪದವನ್ನು blogspotಗೆ ಹೋಲಿಸಿ 'ಸಂಪದದ ದೌರ್ಬಲ್ಯಗಳ' ಬಗ್ಗೆ ಬರೆದಿರುವುದು ನನಗೆ ಅಚ್ಚರಿ ತಂದಿತು.

ಕೆಲವು ವಿಚಾರಗಳು:
೧) ಸಂಪದವನ್ನು blogspotಗೆ ಹೋಲಿಸುವುದು ತೀರ ತಮಾಷೆಯ ಸಂಗತಿ, ಅಜ-ಗಜ ಹೋಲಿಕೆಯಂತೆ! ನೂರಾರು [w:Data center|Data center]ಗಳನ್ನಿಟ್ಟುಕೊಂಡು ನಡೆಸಲಾಗುವ blogspot ಎಲ್ಲಿ, ಇನ್ನೂ [w:Shared web hosting service|shared hostingನ] ಕೆಲವೇ ಕೆಲವು MB ಜಾಗದಲ್ಲಿ ಕೊಳೆಯುತ್ತಿರುವ ಸಂಪದ ಎಲ್ಲಿ!

೨) ಸಂಪದದಲ್ಲಿ Individualistic ಬ್ಲಾಗುಗಳಿಗೆ ಹೆಚ್ಚು ಒತ್ತು ನೀಡದೇ ಇರುವುದಕ್ಕೆ, ಭಿನ್ನವಾದ ಟೆಂಪ್ಲೇಟುಗಳನ್ನು ಹಾಕುವ ಸೌಲಭ್ಯ ಇಲ್ಲದೇ ಇರುವುದಕ್ಕೆ ಕಾರಣಗಳಿವೆ - ನಮಗೆ ಸದ್ಯದ ಪರಿಸ್ಥಿತಿಯಲ್ಲಿ blogspotನಷ್ಟು ಬ್ಲಾಗುಗಳನ್ನು ನೀಡುವುದು ಸಾಧ್ಯವೇ ಇಲ್ಲ. ಅದನ್ನು ಸಾಧ್ಯವಾಗಿಸಬೇಕೆಂದಲ್ಲಿ ನಮ್ಮದೇ ಆದ ಒಂದಷ್ಟು infrastructure ಆದರೂ ಇರಬೇಕು! ಕನಿಷ್ಠ ಪಕ್ಷ ಒಬ್ಬರು ಇಬ್ಬರಾದರೂ 'full-time' ಇದರ ಮೇಲೆ ಕೆಲಸ ನಿರ್ವಹಿಸುವಂತವರು ಇರಬೇಕು.

೩) ಕನ್ನಡದಲ್ಲಿ blogspotನಂತಹ ಒಂದು ಪ್ರಯತ್ನ 'ಸಾಧ್ಯವಾಗದು' ಎಂಬುದಿಲ್ಲ. ಆದರೆ ಸಂಪದ ಖಂಡಿತವಾಗಿ ಅಂತಹ ಒಂದು ಪ್ರಯತ್ನವಲ್ಲ!

ಸಂಪದ ಪ್ರಾರಂಭಿಸಿದ್ದಾಗ ಹೆಚ್ಚು ಕನ್ನಡ ಕಂಟೆಂಟ್ ಅಂತರ್ಜಾಲದಲ್ಲಿರಲಿಲ್ಲ. ಕನ್ನಡ ವಿಕಿಪೀಡಿಯ ಬಿಟ್ಟರೆ ಈಗಲೂ ಯೂನಿಕೋಡ್ ನಲ್ಲಿ ಹೆಚ್ಚು ಕಂಟೆಂಟ್ ಇರುವುದು ಸಂಪದದಲ್ಲೇ.
ಸಂಪದ ಪ್ರಾರಂಭವಾದ ನಂತರ ಕನ್ನಡದಲ್ಲಿ ಯೂನಿಕೋಡ್ ಬಳಸಿ ಮಾಹಿತಿ ಪೇರಿಸುವ ಹಲವು ಬ್ಲಾಗುಗಳು ಪ್ರಾರಂಭವಾದವು. ಈ ರೀತಿಯ ಬಳಕೆ ಹೆಚ್ಚಬೇಕೆಂದೇ ಪ್ರಾರಂಭವಾದದ್ದು ಸಂಪದ. ಸಂಪದ ಪ್ರಾರಂಭವಾಗಿ ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲಿ ಇದು ಬಡಿದೆಬ್ಬಿಸಿದ ಚಟುವಟಿಕೆ ಸಂಪದದ ಸದಸ್ಯರೆಲ್ಲರಿಗೂ ಹೆಮ್ಮೆ ಮೂಡಿಸುವಂತ ವಿಷಯವೇ.

ತಾಂತ್ರಿಕತೆಯ ಬಗ್ಗೆ ನಾವು ನೋಡಿಕೊಳ್ಳುವೆವು... ಸಂಪದಕ್ಕೆ [:Donate|ನಿಮ್ಮೆಲ್ಲರ ಪ್ರೋತ್ಸಾಹ ನೀಡಿ]... ನಿಮ್ಮ ಸಹಾಯ, ಪ್ರೋತ್ಸಾಹದಿಂದ ಖಂಡಿತವಾಗಿ ಸಂಪದವನ್ನು ಇನ್ನಷ್ಟು ಚೆಂದಗೊಳಿಸಬಹುದು, ಬೃಹತ್ ಸಮುದಾಯವನ್ನಾಗಿ ಮಾಡಬಹುದು. ಸದ್ಯದ ಪರಿಸ್ಥಿತಿಯಲ್ಲಿ ಹೊಸ ಡೆಡಿಕೇಟೆಡ್ ಸರ್ವರ್ ಗೆ ಸಂಪದವನ್ನು ಸ್ಥಳಾಂತರಿಸುವವರೆಗೂ ಸಂಪದದಲ್ಲಿ ಏನೊಂದೂ ಹೊಸ ಫೀಚರ್ ಸೇರಿಸುವುದು ಸಾಧ್ಯವಿಲ್ಲ - ತಾನಿರುವ shared serverನಲ್ಲಿ ಈಗಾಗಲೇ ಸಾಕಷ್ಟು ಸಂಪನ್ಮೂಲಗಳನ್ನು ಸಂಪದವೇ ಬಳಸಿಕೊಂಡು ಅದರೊಂದಿಗುರುವ ಇತರ ತಾಣಗಳಿಗೂ ತೊಂದರೆಯಾಗುತ್ತಿದೆ.

ವಿ. ಸೂ: ಈ‌ ಬಾರಿ ಡೆಡಿಕೇಟೆಡ್ ಸರ್ವರ್ ಕೊಳ್ಳಲು [:Donate|ನಿಮ್ಮೆಲ್ಲರ ಸಹಾಯ ಬೇಕೇಬೇಕಾಗಿದೆ]. ಎಲ್ಲರೂ ಸಾಧ್ಯವಾದಷ್ಟು ಸಹಾಯ ಮಾಡಬೇಕೆಂದು ಕೋರುತ್ತೇನೆ. ಗಮನಿಸಿ:
೧) ದೇಣಿಗೆ ನೀಡಿದ ಪ್ರತಿಯೊಬ್ಬರಿಗೂ ಸಂಪದದಲ್ಲಿ ಒಂದೊಂದು e-mail id ನೀಡಲಾಗುವುದು. ಉದಾ: yourname@sampada.net.
೨) $20 ಕ್ಕೂ ಹೆಚ್ಚು ದೇಣಿಗೆ ನೀಡುವ ಸದಸ್ಯರಿಗೆ ತಮ್ಮದೇ ಆದ ಹೊಸ ಬ್ಲಾಗು ([:http://rujuvathu.sampada.net|ಅನಂತಮೂರ್ತಿಯವರ] ಹಾಗೂ [:http://ismail.sampada.net|ಇಸ್ಮಾಯಿಲ್ ರವರ] ಬ್ಲಾಗಿರುವಂತೆ) ನೀಡಲಾಾಗುವುದು* - ತಮಗೆ ಬೇಕಾದ ಥೀಮ್ ಬಳಸುವಂತಹ, ಸಂಪದದ ಎಲ್ಲ ಓದುಗರು ಸಂಪದದ ಐಡಿ ಬಳಸಿಯೇ ಪ್ರತಿಕ್ರಿಯೆ ಸೇರಿಸಲು ಸಾಧ್ಯವಾಗುವಂತಹ ಸವಲತ್ತು ಆ ಬ್ಲಾಗಿನಲ್ಲಿ ನಿಮಗೆ ಲಭ್ಯವಾಗುವುದು.

ಲೆಂಕನೆಂತಾಗುವೆನು ಕನ್ನಡಕೆ ನಾನು

( ದಾಸನೆಂತಾಗುವೆನು ಧರೆಯೊಳಗೆ ನಾನು ಎಂಬಂತೆ)

ಲೆಂಕನೆಂತಾಗುವೆನು ಕನ್ನಡಕೆ ನಾನು
ಮಂಕುಮತಿ ನಾನು ಲೇಶ ಯೋಗ್ಯತೆ ಕಾಣೆ

ದಾರಿ ತಪ್ಪಿದ ಮಕ್ಕಳು!

ನಿಮಗೆ ನೆನಪಿರಬಹುದು, 1997ರಲ್ಲಿ ಕರ್ನಾಟಕದಲ್ಲಿ ಅಂದಿನ ಜೆ.ಎಚ್. ಪಟೇಲ್ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿದ್ದ ಬಿ.ಟಿ ಲಲಿತಾನಾಯಕ್ ಅವರ ಪುತ್ರ ವಿಶ್ವಜಿತ್, ಮದ್ಯದ ಅಮಲಿನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮದ್ಯಾಭಿಷೇಕ ಮಾಡಿದ್ದು. ಈ ಘಟನೆ ಇಡೀ ರಾಜ್ಯಾದ್ಯಂತ ಭಾರಿ ಕೋಲಾಹಲವನ್ನೇ ಎಬ್ಬಿಸಿತ್ತು. ತಾಯಿ ಲಲಿತಾ ನಾಯಕ್ ರಾಜೀನಾಮೆ ಕೊಡುವುದರೊಂದಿಗೆ ಈ ಪ್ರಕರಣ ಅಂತ್ಯ ಕಂಡಿತ್ತು.

ಬಡವರ ನಿರ್ಮೂಲನೆಯೇ UPA ಗುರಿ: ನಿಧಾನಿ

(ಬೊಗಳೂರು ಜನಪರ ಬ್ಯುರೋದಿಂದ)
ಬೊಗಳೂರು, ಜೂ.6- ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಬಗ್ಗೆ ಕೇಂದ್ರದಲ್ಲಿರುವ Unprecedented Price Agenda ಸರಕಾರ ಸ್ಪಷ್ಟನೆ ನೀಡಿದ್ದು, ಕೃಷಿ ಆಧಾರಿತ ರಾಷ್ಟ್ರವಾದ ಭಾರತದಲ್ಲಿ ಕೃಷಿ ಸಂಪನ್ಮೂಲ ರಕ್ಷಣೆಗೆ ಇದು ಪೂರಕ ಎಂದು ಸ್ಪಷ್ಟಪಡಿಸಿದೆಯಲ್ಲದೆ ಬಡವರ ನಿರ್ಮೂಲನೆಯೇ ಸರಕಾರದ ಗುರಿ ಎಂದು (ಜನಸಾಮಾನ್ಯರನ್ನು ಕಾಲಿನಿಂದ) ಒತ್ತಿ ಒತ್ತಿ ಹೇಳಿದೆ.

ನಿಮಗಿದು ಗೊತ್ತೆ?

* ಜನಪ್ರಿಯ ಮೊಬೈಲ್ ಫೋನು ಕಂಪೆನಿ ನೋಕಿಯ ಪ್ರಾರಂಭದಲ್ಲಿ ಪೇಪರ್ ತಯಾರಿಕೆಯಲ್ಲಿ ತೊಡಗಿದ್ದ ಕಂಪೆನಿಯಾಗಿತ್ತಂತೆ. ಮಹಾಯುದ್ಧದ ಸಮಯದಲ್ಲಿ ಮಿಲಿಟರಿಗೆ ಬೂಟುಗಳನ್ನೂ ತಯಾರಿಸುತ್ತಿತ್ತಂತೆ! [:http://www.zfone.com/articles/a_id/54/history-of-nokia|(೧)]

ಆಷ್ಟ್ರೇಲಿಯನ್ನರು: ಭಾರತದ ಜನಸಂಖ್ಯೆ ಹೆಚ್ಚಳಕ್ಕೆ ಕಾರಣರು

ತಲೆಹರಟೆ ಹೆಸರಿನ ಈ ಲದ್ದಿಗಾರನಿಗೆ ಬಹಳ ಸಂತೋಷವಾಗಿದೆ. ತನ್ನ ಗಂಭೀರ ಮಾತುಗಳನ್ನು ತಮಾಷೆಯಾಗಿ, ತಮಾಷೆ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದು ಸಿಕ್ಕಸಿಕ್ಕವರೆಲ್ಲಾ ಬಳಿ ಗೊಣಗುತ್ತಿದ್ದವನಿಗೆ ಇತ್ತಿಚಿಗೆ ಸಿಕ್ಕ ಪುಟ್ಟ ಸುದ್ಧಿಯೊಂದು ಈ ಸಂತೋಷಕ್ಕೆ ಕಾರಣ.

ಪೀಟರ್ ಕಾಸ್ಟಿಲ್ಲೊ ಎಂಬ ಆಸ್ಟ್ರೇಲಿಯದ ಪ್ರಮುಖ ವ್ಯಕ್ತಿ ಒಬ್ಬ ೧೯೯೨ ರಲ್ಲಿ ಆಸ್ಟ್ರೆಲಿಯನ್ ಜನತೆಯನ್ನು ಕುರಿತು "ದಂಪತಿಗಳು ಹೆಚ್ಚು ಹೆಚ್ಚು ಮಕ್ಕಳನ್ನು ಪಡೆಯಬೇಕು. ಒಂದು ಮಗು ಪಪ್ಪನಿಗೆ, ಒಂದು ಮಮ್ಮಿಗೆ ಇನ್ನೊಂದು ದೇಶಕ್ಕೆ.." ಎಂದು ತಮಾಶೆಗೆ ಹೇಳಿದ ಮಾತು ಈಗ ಗಂಭೀರ ಸಮಸ್ಯೆ ಉಂಟುಮಾಡಿದೆ!!

೧೯೯೨ ರಿಂದ ಈಚೆಗೆ ೨೦೦೫ರಲ್ಲಿ ಮೊದಲಬಾರಿಗೆ ೨೬೧೪೦೦ ಮಕ್ಕಳು ಇಲ್ಲಿ ಜನಿಸಿದ್ದಾರೆ. ಇದು ಅಲ್ಲಿಯ ಸರಕಾರಕ್ಕೆ ತಲೆನೊವಾಗಿ ಪರಿಣಮಿಸಿದೆ. ಹೀಗಾಗಿ ಅಲ್ಲಿಯ ಸರ್ಕಾರ "ರಾಷ್ಟ್ರದ ಹಿತದೃಷ್ಟಿಯಿಂದ ಹಾಗು ರಾಷ್ಟ್ರ ಪ್ರೇಮದ ಸಲುವಾಗಿ ಒಂದೇ ಮಗು ಪಡೆಯಿರಿ" ಎಂದು ತನ್ನ ಜನತೆಯಲ್ಲಿ ವಿನಂತಿಸಿಕೊಂಡಿದೆ.

ಈ ಮಧ್ಯೆ,ಆಷ್ತ್ರೇಲಿಯನ್ ಜನತೆ ತನ್ನ ತಮಾಷೆ ಮಾತನ್ನು ಇಷ್ಟು ಗಂಭೀರವಾಗಿ ತೆಗೆದುಕೊಡಿರುವುದು ತನಗೆ ಆಶ್ಚರ್ಯವಾಗಿದೆ ಎಂದು ಪೀಟರ್ ಕಾಸ್ಟಿಲ್ಲೊ ಹೇಳಿಕೊಂಡಿದ್ದಾನೆ. ಆಶ್ಟ್ರೇಲಿಯನ್ ಸರ್ಕಾರದ 'ಒಂದೇ ಮಗು ಸಾಕು' ಎಂಬ ಗಂಭೀರ ಕರೆಯನ್ನು ಅಲ್ಲಿಯ ಜನ ತಮಾಷೆ ಎಂದು ಭಾವಿಸದಿರಲಿ ಎಂಬುದು ತಲೆಹರಟೆಯ ಆಶಯ.

(೨೦೦೫ ರಲ್ಲಿ ಭರತದ ಜನಸಂಖ್ಯೆ ಎಂದಿಗಿಂತ 'ಅತಿ' ಹೆಚ್ಚಾಗಿದ್ದರೆ ಅದಕ್ಕೆ ಭಾರತಿಯರಾದ ನಾವು ಕಾರಣರಲ್ಲ! ಏಕೆಂದರೆ  ಜನಸಂಖ್ಯಾ ತಜ್ಞರ ಪ್ರಕಾರ ಭಾರತದ ಜನಸಂಖ್ಯೆಗೆ ಪ್ರತಿವರ್ಷ ಒಂದು ಆಸ್ಟ್ರೇಲಿಯ ಸೇರ್ಪಡೆಯಾಗುತ್ತಿದೆಯಂತೆ. ಹಾಗಾಗಿ ಆಶ್ತ್ರೇಲಿಯದ ಜನಸಂಖ್ಯೆ ಹೆಚ್ಚಾದರೆ ಸಹಜವಾಗಿ ಭಾರತದ ಜನಸಂಖ್ಯೆಯೂ ಅಷ್ಟೇ ಹೆಚ್ಚಬೆಕಲ್ಲವೇ?)

ಪಟಾಕಿ ಸಿಡಿಸಿದ್ದಕ್ಕೆ ಪಾತಕಿ ಪಟ್ಟವೇ?!

(ಬೊಗಳೂರು ಪರದೇಸಿ ಬ್ಯುರೋದಿಂದ)
ಬೊಗಳೂರು, ಜೂ.6- ಭಾರತದಲ್ಲಿ ಸಣ್ಣ ಪುಟ್ಟ ಅಪರಾಧಗಳನ್ನು ಮಾಡುತ್ತಾ, ಒಂದೆರಡು ಇರುವೆ, ನಾಯಿಮರಿ, ಬೆಕ್ಕಿನ ಮರಿಗಳನ್ನಷ್ಟೇ ಕೊಂದಿದ್ದ ದಾವೂದ್ ಇಬ್ರಾಹಿಂನನ್ನು ಅಮೆರಿಕವು ಪಾತಕಿ ಎಂದು ಘೋಷಿಸಿರುವುದು ವಿಶೇಷವಾಗಿ ಪಾತಕಿಸ್ತಾನದ ಹುಬ್ಬೇರಿಸಿದೆ.