ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮುಂಬೈಯಲ್ಲಿ ಮತ್ತೆ ಮಹಾಮಳೆ? ಶಿವಪಾರ್ವತಿಯರ ಸೋಲು !

ಟೀವಿಯಲ್ಲಿ ಮಹಾಭಾರತ ಧಾರಾವಾಹಿಯೊಂದಿಗೆ 'ಮಹಾ' ಶಬ್ದ ಹೆಚ್ಚು ಚಲಾವಣೆಗೆ ಬಂದಿತು . ಮಹಾಚುನಾವಣೆ ....ಇತ್ಯಾದಿ. ಹೋದ ವರುಷದ ಮುಂಬೈ ಮತ್ತು ಬೆಂಗಳೂರಿನ ಮಳೆಯ ಹಾವಳಿ ನಂತರ 'ಮಹಾಮಳೆ' ಶಬ್ದವೂ ಸೃಷ್ಟಿಯಾಯಿತು.

ಮೀಸಲಾತಿ ಕಕ್ಕುಲಾತಿ - ಬೇಡ ಈ ದುರ್ಗತಿ

ಹೊತ್ತಿ ಉರಿಯುತ್ತಿರುವ ಮೀಸಲಾತಿಯು ಭಾರತದ ಪ್ರಜಾತಾಂತ್ರಿಕತೆಯ ಕಣ್ಣರೆಪ್ಪೆ ಮುಚ್ಚದಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕೋಮುಗಲಭೆ, ಜಾತಿಕಲಹ, ಭಾಷೆಕಲಹ ಇವಿಷ್ಟೇ ಕೆಲ ಮಹದ್ವಿಷಯಗಳು ನಮ್ಮ ದೇಶವನ್ನು ಜಾಗೃತಗೊಳಿಸಲು ಸಮರ್ಥವಾಗಿರುವುವು. ಶಿಕ್ಷಣದ ಬಗ್ಗೆ ಕಾಳಜಿ, ಭ್ರಷ್ಟಾಚಾರದ ವಿರುದ್ಧ ಹೋರಾಟ, ಆರ್ಥಿಕ ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ಇತ್ಯಾದಿ ವಿಷಯಗಳಿಗೆ ಮನಸು, ತಲೆ ಕೆಡಿಸಿಕೊಳ್ಳುವಷ್ಟು ನಮಗೆ ವ್ಯವಧಾನವಿಲ್ಲ. ಜಾತಿ, ಭಾಷೆ, ಧರ್ಮಗಳ ಸತ್ವಗಳನೇ ಉಂಡು ಬೆಳೆದಿರುವ ನಮಗೆ ಆ ವಿಷಯಗಳಲ್ಲಿ ಮಾತ್ರ ಸ್ವಾಭಿಮಾನ ಕೆರಳುತ್ತದೆ. ಭ್ರಷ್ಟಾಚಾರಗಳಲ್ಲಿ ಒಂದಿಲ್ಲೊಂದು ರೀತಿ ನಾವೂ ಪಾಲುದಾರರಾಗಿರುವುದರಿಂದಲೋ ಏನೋ ನಮಗೆ ಅದರ ವಿರುದ್ಧ ಹೋರಾಡಲು ನೈತಿಕತೆ ಅಡ್ಡಬರುತ್ತದೆ.

ಓಂಕಾರ

ಓಂಕಾರ,

ವೇದದ ಮಾತಿದು
ಗಾದೆಯ ಹಾಗಿದೆ,
ವಿಶ್ವದ ಉಗಮದ
ವರ್ಣನೆ ಹೀಗಿದೆ,
ಸುಲಭದಿ ಅರಿಯಲು
ಶ್ರಮಿಸೋಣ.
ಹಿಂದೆಯ ಹಿಂದಿಗು,
ಮೊಟ್ಟೆಗು ಮೊದಲು,
ಅಣುವಿನ ಕಣದ
ಹುಟ್ಟಿಗು ಮುಂಚೆ,
ಕಿರಣದ ತಾಯಿ
ಕತ್ತಲ ಬಾಯಿ[ ಬ್ಲಾಕ್ ಹೋಲ್],
ಜನಿಸಿದ ಜಾಗಕೆ
ನಿರ್ಗುಣ
ನಿರಾಕಾರನೆನ್ನೋಣ.

ಏಡ್ಸ್ "ವಿಕಾಸ" ವಾದ: ಮಂಗನಿಂದ ಮಾನವನಿಗೆ!

(ಬೊಗಳೂರು ಆರೋಗ್ಯ ಬ್ಯುರೋದಿಂದ)
(http://bogaleragale.blogspot.com)
ಬೊಗಳೂರು, ಮೇ 31- ವಿಶ್ವಾದ್ಯಂತ 40 ಮಿಲಿಯ ಮಂದಿಯನ್ನು ಪ್ರೀತಿಯಿಂದ ಸೋಕಿ, 25 ಮಿಲಿಯ ಮಂದಿಗೆ ಪರಲೋಕ ಯಾನ ಸೌಲಭ್ಯ ಕಲ್ಪಿಸಿರುವ ಏಡ್ಸ್ ರೋಗ ಕೂಡ ಡಾರ್ವಿನ್ನನ ವಿಕಾಸವಾದದಿಂದ ಪ್ರೇರಣೆಗೊಂಡು ಮಾನವನಿಗೆ ತಗುಲಿದೆ ಎಂಬ ಅಂಶ ಇಲ್ಲಿ ಬಯಲಾಗಿದೆ.

ಚೈನ್ ಮೈಲ್‍ಗಳು

ಚೈನ್ ಮೈಲ್‍ಗಳು ಬರುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ಅಡ್ವರ್ಟೈಸ್‍ಮೆಂಟ್‍ಗಳ ಹಾವಳಿಯಂತೂ ಬಹಳ. ಮೊದಲು ಒಬ್ಬರಿಗೆ ಅಂಚೆ ಕಳುಹಿಸಿ, ಇದನ್ನು ಇನ್ನಿತರ ಹತ್ತು ಜನಗಳಿಗೆ ಕಳುಹಿಸಿದರೆ ನಿಮಗೆ ಇಂತಹ ವಸ್ತು ಪುಕ್ಕಟೆ ಎಂದು ತಿಳಿಸುತ್ತಾರೆ. ಕೆಲವರು ಇವುಗಳನ್ನು ಸ್ಪ್ಯಾಮ್ ಮೈಲ್‍ಗಳು ಎಂದೂ ಪರಿಗಣಿಸುವರು. ಇವರ ಚಟುವಟಿಕೆಗಳು ಹೇಗಿರುತ್ತದೆ ಎಂಬುದು ಬಹಳ ಕೌತುಕವಾದ ವಿಷಯ.

ನಿರಾಕಾರ

ನಿರಾಕಾರ.

ನಿರಾಕಾರನು ಸಾಕಾರನಾದದ್ದು
ಚಮತ್ಕಾರ,
ಸಾಕಾರನಿಗೆ ಕಂಡ ನಿರಾಕಾರವೇ
ಸಾಕ್ಷಾತ್ಕಾರ,
ವಿಕಾರನಿಗೆ ಸಾಕಾರನು ತೋರುವ ನಿರಾಕಾರವೇ
ಪರೋಪಕಾರ,
ವಿಕಾರನನ್ನು ನಿರ್ವಿಕಾರಗೊಳಿಸಿ ಸಾಕಾರನನ್ನಾಗಿಸುವ ಕ್ರಿಯೆಯೇ
ಸಂಸ್ಕಾರ.
ನಿರಾಕಾರನ
ಅಸಮಾನತೆಯೇ 'ಅ' ಕಾರ,
ಉತ್ತುಂಗವೇ 'ಉ' ಕಾರ,
ಮಮಕಾರವೇ 'ಮ' ಕಾರ.
ಈ ಮೂರರ
ಗುಣಾಕಾರವೇ
'ಓಂ'
ಕಾರ.
ಪ್ರಣವನಾದ
ಓಂಕಾರದ
ಭಾಗಾಕಾರವೇ
ಚತುರ್ವೇದದ ಜಗದಾಕಾರ.
{ಅಹೋರಾತ್ರ}

ಪ್ರವಾಸ

“ಶ್ರೀಮತ್ವೆಕಟನಾಥಾರ್ಯ ಕವಿತಾಲಯಃ ಕೇಸರಿ” ಎಂದು ಧ್ಯಾನ ಶ್ಲೋಕವನ್ನು ಹೇಳಿ , ಉಪಾಕರ್ಮದ ಮಾರನೇ ದಿನ ಗಾಯತ್ರಿ ಜಪವನ್ನು ಮಾಡಲು ಕುಳಿತಾಗ, ಅಷ್ಟೋತ್ತರ ಸಹಸ್ರ ಬಾರಿ ಮಂತ್ರವನ್ನು ಜಪಿಸಬೇಕಿದ್ದರೂ, ಸಮಯದ ಅಭಾವದಿಂದ, ಜೊತೆಗೆ ಸೋಮಾರಿತನದಿಂದ ಅಷ್ಟೋತ್ತರ ಶತಕ್ಕೆ ಇಳಿಸಿದೆ.ಸಂಕಲ್ಪದಲ್ಲಿ ಆ ದಿನ ನಾನಿದ್ದ ಸ್ಥಳ ಹಾಗು ಸಮಯದ ಸಂಪೂರ್ಣ ಪರಿಚಯಕೊಟ್ಟು (ಅಂದ್ರೆ ಶ್ವೇತವರಾಹಕಲ್ಪದ, ಕಲಿಯುಗದ,ಪಾರ್ಥಿವ ಸಂವತ್ಸರದ, ದಕ್ಷಿಣಾಯನದ, ವರ್ಷಋತುವಿನ, ಸಿಂಹಮಾಸದ, ಪೌರ್ಣಮಿಯಂದು, ಭರತಖಂಡದ ಬೆಂಗಳೂರಿನಲ್ಲಿ…..) ಜಪ ಮಾಡಲು ಪ್ರಾರಂಭಿಸಿದೆ.