ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎಲ್ಲ ಟಿಪ್ಪಣಿಗಳು ಮೊದಲಿನಂತೆ ಮೂಲ ಲೇಖನದ ಜತೆಗೇ ಕಾಣಲಿ

ಮಾನ್ಯರೇ

ಸಂಪದದ ಸದ್ಯದ ಬದಲಾವಣೆಗಳಿಗೆ ಮೊದಲು ಟಿಪ್ಪಣಿಗಳು ಮೂಲ ಲೇಖನದ ಜತೆಗೆ ಕಾಣುತ್ತಿದವು . ಹೀಗಾಗಿ ಎಲ್ಲ ಟಿಪ್ಪಣಿಗಳನ್ನು ಒಟ್ಟಿಗೇ ಓದಬಹುದಿತ್ತು .

ಮನಸ್ಸು

... ಇದು ನನಗೆ ತಿಳಿಯದು.. ತಿಳಿಯುವ ಕುತೂಹಲವಿದೆ.. ನಮ್ಮ ದೇಹವನ್ನು ಸಂಪೂರ್ಣ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿ ಅದಕ್ಕಿದೆ... "ಹೇಗಿರುತ್ತದೆ ಮನಸ್ಸು?" ಇದು ನನ್ನ ಮನಸ್ಸಿನಂತರಾಳದಲ್ಲಿ ಉತ್ತರಕ್ಕಾಗಿ ಕಾಯುತ್ತಿರುವ ಒಂದು ಪ್ರಶ್ನೆ. ಅದಕ್ಕೆ ನನ್ನದೆ ರೀತಿಯಲ್ಲಿ ಉತ್ತರ ಹುಡುಕಿಕೊಂಡಿದ್ದೆನೆ.. ನನಗೆ ಮನಸ್ಸಿನ ಬಗ್ಗೆ ಇರುವ ಕಲ್ಪನೆಯನ್ನು ಈ ಲೇಖನದಲ್ಲಿ ವ್ಯಕ್ತಪಡಿಸುತ್ತಿದ್ದೇನೆ...

ಸಿರಿಗನ್ನಡಮ್ ಗೆಲ್ಗೆ !

ಮಾನ್ಯರೆ,
ಸಿರಿಗನ್ನಡಮ್ ಗೆಲ್ಗೆ !
ನಾನು ವ್ರುತ್ತಿಯಲ್ಲಿ ಟೆಕ್ಸ್ಟೈಲ್ ಇಂಜಿನಿಯರು. ಓದಲು ಬರೆಯಲು ನನಗೆ ಬಹಳ ಆಸಕ್ತಿ. ಬಹುಶಃ ನಮ್ಮ ಮನೆಯಲ್ಲಿದ್ದ ವಿಶಾಲ ಪುಸ್ತಕ ಭಂಡಾರ ಒಂದು ಕಾರಣವಾದರೆ, ಇನ್ನೊಂದು ನಮ್ಮ ತಂದೆ, ಅಣ್ಣತಮ್ಮಂದಿರ 'ಬೌಧ್ಧಿಕ ಹಿನ್ನೆಲೆ' ಎಂದರೆ ತಪ್ಪಾಗಲಾರದು. ಎಲ್ಲಾ ಸಾಂಸ್ಕ್ರುತಿಕ ಸಮಾರಂಭಗಳಲ್ಲೂ ಪ್ರೇಕ್ಷಕನಾಗಿ ಪಾಲ್ಗೊಂಡಿದ್ದೇನೆ. ಮುಂಬೈ ಒಂದು ವಿಶಾಲವಾದ ಮಂಚ. ಬೆಂಗಳೂರಿನಲ್ಲಿ ಕೇಳಿರದಿದ್ದ ಮಹಾ ವ್ಯಕ್ತಿಗಳ ಮಾತುಗಳನ್ನು ಇಲ್ಲಿ- ನನ್ನ 40 ವರ್ಷಗಳ ಜೀವನದಲ್ಲಿ ಕೇಳಿದ್ದೇನೆಂದು ಹೇಳಲು ಹೆಮ್ಮೆಯೆನ್ನಿಸುತ್ತಿದೆ ! ಇಂಗ್ಲೀಶಿನಲ್ಲಿ ಒಂದು ಪುಸ್ತಕ, ಬೇರೆ ಬೇರೆ ಲೇಖನಗಳು ನನ್ನ ಸರಿಕಿನಲ್ಲಿವೆ. ಸಂಪದ ಬಳಗಕ್ಕೆ ಬಂದಮೇಲೆ ನನ್ನ ಬರವಣಿಗೆ ಹೆಚ್ಚಾಯಿತೇನೋ. ನಿವ್ರುತ್ತ ನಾಗಿರುವುದೂ ಇದಕ್ಕೆ ಪೂರಕವಾಗಿರಬಹುದು !

ನಮ್ಮ ಪುಟ್ಟ ಪಾಪಚ್ಚಿ- ಸಂಪದೆ !

ನಮ್ಮ ಪುಟ್ಟ ಪಾಪಚ್ಚಿ- ಸಂಪದೆ !

ಪ್ರತಿ ಕಾಲಘಟ್ಟದಲ್ಲಿ ನಿಂತು ಈ ವಿಸ್ಮಯ ಜಗತ್ತನ್ನು ವೀಕ್ಷಿಸಿದಾಗ ಅದರ ವಿಸ್ತಾರದ ಅರಿವಾಗುತ್ತದೆ. ಕೆಲವೊಂದು ವಿದ್ಯಮಾನಗಳಲ್ಲಿ ಪ್ರಕೃತಿದತ್ತವಾದ ಹಲವು ಮಾರ್ಪಾಟುಗಳು ನಮ್ಮ ಗಮನವನ್ನು ಸೆಳೆಯುತ್ತವೆ. ನಮ್ಮ ಅರಿವಿಲ್ಲದೆಯೇ ಆಗುವ ನಿರಂತರ ಬದಲಾವಣೆಗಳೊಂದೆಡೆಯಾದರೆ, ಇನ್ನು ಕೆಲವು ಮಾರ್ಪಟುಗಳನ್ನು ನಾವೇ ಕಾಲಕಾಲಕ್ಕೆ ಮಾಡುವ ಅನಿವಾರ್ಯತೆಯನ್ನು ಮನಗಾಣುತ್ತೇವೆ. ಎಲ್ಲಾ ಬೆಳೆಯುತ್ತಿರುವ ಜೀವಕೋಟಿಗಳೆಲ್ಲಾ ಮಾಡಲೇಬೇಕಾದ ಪ್ರಕ್ರಿಯೆ ಇದು ! ಇವನ್ನೇ ನಾವು ಜೀವಂತಿಕೆಯ ಸಾಕ್ಷಿಯ ಪ್ರತೀಕಗಳೆಂದು ಕರೆಯುವುದು ಕೂಡ ! ಅಂತಹ ಚಿಕ್ಕ ಬದಲಾವಣೆ ನಮ್ಮ 'ಸಂಪದ' ದಲ್ಲೂ ಮೂಡಿಬಂದಿದೆ. ಶ್ರೀಯುತ. ನಾಡಿಗರು ಅದನ್ನು ಅತ್ಯಂತ ಪ್ರಭಾವಶಾಲಿಯಾಗಿ ನಿರ್ವಹಿಸಿರುವುದು ನಿಜಕ್ಕೂ ಶ್ಲಾಘನೀಯ ! ಸಂಪದದ ಬಳಗದ ಎಲ್ಲಾ ಸದಸ್ಯರಿಗೂ 'ಶುಭ'ಕೋರಿ ಈ ಹೊಸ ದಿಟ್ಟ ಹೆಜ್ಜೆಯನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತೇನೆ. ನನ್ನ ಪ್ರೀತಿಯ ಕಾಣಿಕೆಯಾಗಿ ಈ ಕವಿತೆಯನ್ನು ಈ ಸಂದರ್ಭದಲ್ಲಿ 'ಆಶೀರ್ವಾದಪೂರ್ವಕವಾಗಿ' ಸಮರ್ಪಿಸುತ್ತಿದ್ದೇನೆ. ಆಶೀರ್ವಾದವನ್ನು ಬೇಡವೆನ್ನುವ ಪರಿಪಾಟ ನಮ್ಮ ಭಾರತೀಯ ಸಂಸ್ಕೃತಿಯಲ್ಲಿಲ್ಲ !

ಚುರುಮುರಿ ಸವಿಯಲು ಇನ್ನು ಮೈಸೂರಿಗೆ ಹೋಗಬೇಕಿಲ್ಲ...

...ಈಗ [:http://churumuri.wordpress.com/|ಅಂತರಜಾಲದಲ್ಲೇ‌ ಅದು ಲಭ್ಯವಿದೆ] ;)

ಪ್ರತಿನಿತ್ಯ ಈ ಬ್ಲಾಗ್ನಲ್ಲಿ ಒಂದಷ್ಟು ಬಹಳ ಚೆನ್ನಾಗಿರುವ ಲೇಖನಗಳು ಮೂಡಿಬರುತ್ತಿವೆ. ಈ‌ ಬ್ಲಾಗು ಓದುವಾಗ ನಾನು ರೆಗ್ಯುಲರ್ ಆಗಿ ಓದುವ [:http://www.sepiamutiny.com/sepia/|sepia mutiny] ಜ್ಞಾಪಕಕ್ಕೆ ಬರುತ್ತದೆ. ಚುರುಮುರಿ ಬ್ಲಾಗ್ ಸಮೂಹವನ್ನು ಮೈಸೂರು ಮ್ಯುಟಿನಿ ಎನ್ನೋಣವೆ ಅಂತ ಅನ್ನಿಸಿದ್ದೂ ಉಂಟು ;)

'ಹರಿಣಿ'ಯವರ ವ್ಯಂಗಚಿತ್ರಗಳು ಈಗ ಅಂತರಜಾಲದಲ್ಲಿ...

[:http://harinigallery.blogspot.com/] ‌ನೋಡಿ :)

ಈಗ 'ಸುಧಾ 'ತರಂಗ'ಗಳಲ್ಲಿ ಇವರು ಬರೆಯುತ್ತಾರೋ ಇಲ್ಲವೋ ತಿಳಿಯದು, ಆದರೆ ೫-೬ ವರ್ಷಗಳ ಹಿಂದೆ ಈ ಪತ್ರಿಕೆಗಳಲ್ಲಿ ಬರುತ್ತಿದ್ದ ಇವರ ವ್ಯಂಗ್ಯಚಿತ್ರಗಳನ್ನು ತುಂಬಾ ಫಾಲೋ ಮಾಡ್ತಾ ಇದ್ದೆ.

ಬಿಡುವಿನ ವೇಳೆಯಲ್ಲಿ ಒಂದಿಷ್ಟು ಕನ್ನಡ ಸೇವೆ

ನಾನು ಕಳೆದ ೩೭ ವರ್ಷಗಳಲ್ಲಿ ಹೆಚ್ಚಿನ ಸಮಯವನ್ನು ಓದುತ್ತಲೇ ಕಳೆದಿದ್ದೇನೆ. ( ಬರೆಯಲು ಜಾಣತನ ಬೇಕೇ ಹೊರತು ಓದಲು ಬೇಕಿಲ್ಲವಷ್ಟೆ? ) ಈವರೆಗೆ ಓದಿ ತಲೆಯಲ್ಲಿ ತುಂಬಿಕೊಂಡ ವಿಚಾರಗಳನ್ನು 'ಸಂಪದ'ದಲ್ಲಿ ಈವರೆಗೆ ಬರೆದು ತಲೆಯನ್ನು ಕೊಡವಿಕೊಂಡದ್ದಾಯಿತು. ಈ ಸಮಯದಲ್ಲಿ ಶ್ರೀ ಟಿ. ವಿ. ಶ್ರೀನಿವಾಸ ಅವರು ( ' ಸಂಪದ'ದ ಮೂಲಕವೇ ಅವರ ಪರಿಚಯವಾದದ್ದು ) ಕನ್ನಡಸಾಹಿತ್ಯ.ಕಾಂ ನ ಕುರಿತು ತಿಳಿಸಿದರು . ಅವರಿಗೆ ಬರಹಗಳನ್ನು ತಿದ್ದುವ ವಾಲಂಟೀರ್- ಸ್ವಯಂಸೇವಕರ ಅಗತ್ಯ ಇದೆ. ಎಂದು ತಿಳಿಸಿದರು .

ಒಳ್ಳೆಯ ವ್ಯಂಗ್ಯಚಿತ್ರಗಳು

ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ , ಒಳ್ಳೆಯ ವ್ಯಂಗಚಿತ್ರಗಳ ಸಮೃದ್ಧಿಯಿತ್ತು. ಆಗ ಸುಧಾ , ಮಯೂರ , ತುಷಾರಗಳಲ್ಲಿ ಕೆ. ಆರ್. ಸ್ವಾಮಿ ,ನಾಡಿಗ್ , ಶ್ರೀಧರ್ , ರಾವ್ ಬೈಲ್ ಮುಂತಾದವರ ಶ್ರೇಷ್ಠ ವ್ಯಂಗ್ಯಚಿತ್ರಗಳು ಕಾಣಸಿಗುತ್ತಿದ್ದವು . ಪ್ರಜಾವಾಣಿಯಲ್ಲಿ ಆರ್‍.ಕೆ. ಮೂರ್ತಿಯವರ ರಾಜಕೀಯ ವ್ಯಂಗ್ಯಚಿತ್ರಗಳಿರುತ್ತಿದ್ದವು . ಈಗ ಅವರೆಲ್ಲ ಎಲ್ಲಿ ಹೋದರೋ ? ಹೊಸಬರು ಏಕೆ ಬರಲಿಲ್ಲವೋ ? ಈಗ ವ್ಯಂಗ್ಯಚಿತ್ರಗಳಲ್ಲಿ ಸಾಧಾರಣ ಎಂಬ ಮಟ್ಟದ್ದೂ ಕಾಣುವದಿಲ್ಲ.