ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ"

ಇತ್ತೀಚೆಗೆ ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ ಮೆರವಣಿಗೆ ಪುಸ್ತಕವನ್ನು ಓದಿದೆ. ತು೦ಬಾ ಚೆನ್ನಾಗಿದೆ. ಸುಮಾರು ೬೦೦+ ಪುಟಗಳ ಪುಸ್ತಕದಲ್ಲಿ ಅರ್ಧ ಮಲ್ಲಿಗೆ ಹಳ್ಳಿಗೆ ಮತ್ತು ಇನ್ನರ್ಧ ಸ್ವಾತ೦ತ್ರ್ಯ ಹೋರಾಟಕ್ಕೆ ಮೀಸಲಿಟ್ಟಿದ್ದಾರೆ.

ಪ್ರೀತಿಯ ನಗು

ಆದಿನ ಕಾಣದೆ ಹೋದೆ ಈ ಪ್ರೀತಿಯ, ಬೆಳದಿಂಗಳ ರಾತ್ರಿಯಲಿ.
ಆದರೂ ಹುಡುಕಿದೆ ನಾ ನಿನ್ನ ಮನದಂಗಳದಲಿ.

ಎಂದಾದರೂ ನಿ ಬಂದು ನನ್ನ ಸೇರುವೆ ಎಂಬ ಆಸೆಯಲಿ
ಕಾದಿದ್ದೆ ನಾ ಹಗಲಿರುಳು,
ಆದರೆ ನೀ ಬರಲಿಲ್ಲ, ಆಸೆ ಕೈಗೂಡಲಿಲ್ಲ.
ಪ್ರೀತಿಯಲಿ ನಾ ತೇಲಲಿಲ್ಲ, ದು:ಖದಲಿ ನಾ ಅತ್ತೇನಲ್ಲ.

ಮರುದಿನ ಆ ಬೆಳಗಿನ ಹೊಸ ಕಿರಣ ಬಂದು
ನನ್ನ ಮನದ ಕದವ ತಟ್ಟಿದಾಗ ,

ಸಂಪದಕ್ಕೊಂದು ಸರ್ಚ್ ಎಂಜಿನ್

ನಾನು ಹಿಂದೆ ಎಂದೋ ಓದಿದ ಬ್ಲಾಗ್ ಅನ್ನು ಮತ್ತೊಮ್ಮೆ ಓದಬೇಕು ಎಂದು ಹುಡುಕುತ್ತಿದ್ದೇನು, ಆದರೆ ಸಿಗುತ್ತಿಲ್ಲ, ಸುಮಿತ್ರಾ ಹಲವಾಯಿ ಎಂಬ ಲೇಖಕಿಯ ಬಗ್ಗೆ ಓದಿದ ನೆನಪು. ಆದರೆ ಈಗ ಸಿಗುತ್ತಿಲ್ಲ. ಆಗ ನನಗನ್ನಿಸಿತು, ಸಂಪದಕ್ಕೊಂದು ಗೂಗಲ್ ತರಹದ ಸರ್ಚ್ ಎಂಜಿನ್ ಇದ್ದರೆ ಎಷ್ಟು ಚೆನ್ನಾಗಿತ್ತು ಅಂತ.

ದೇವರುಗಳು

******************************************
ದೇವರುಗಳು.

ಹಲ್ಲಿಲ್ಲದ ಮುಕೋಟಿ ಹಿ೦ದು ದೇವರುಗಳು ಬರೀ ಕಲ್ಲು.
ಶಿಲುಬೆಗೇರಿದ ಅಳು ಮುಖದ ಕ್ರ್ರೈಸ್ತ ದೇವರುಗಳ ಮೈಯೆಲ್ಲಾ ರಕ್ತ ಮುಳ್ಳು.
ಮುಸ್ಲಿ೦ ದೇವರುಗಳೋ,ಬಾಯ್ ತೆಗೆದರನ್ನುವರು ಸಾಯಿ ಇಲ್ಲಾ ಕೊಲ್ಲು.
ಲ೦ಗೋಟಿ ತೊಟ್ಟ ಜೈನ ದೇವರುಗಳನ್ನುವರು ಬೆತ್ತಲೆಯಲ್ಲಿ ನೀ ಸದಾ ನಿಲ್ಲು.

ಕೇಶವನ್ ಕಾರ್ಟೂನ್

ಬೋಫೋರ್ಸ್ ಪ್ರಕರಣದಲ್ಲಿ ಕ್ವಟ್ರೋಚಿಯನ್ನು ಭಾರತಕ್ಕೆ ತರುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.ಗಾಯದ ಮೇಲೆ ಬರೆಯಂತೆ ಸಿಬಿಐ ದಂಡ ತೆರಬೇಕಾಗಿ ಬಂದಿದೆ. ಗುಡ್ಡ ಕಡಿದು ಇಲಿ ಹಿಡಿದ ಇಂತಹ ಪ್ರಕರಣಗಳು ನಮಗೆ ಪಾಠವಾಗಲಿ.
ಈ ವಿಷಯದ ಮೇಲೆ ಕಾರ್ಟೂನ್:
http://www.hindu.com/2007/06/13/stories/2007061399991000.htm

ಛಾಪು

ಸಮಯವೆಂಬ ಮರಳಿನ ಮೇಲೆ ನಿಮ್ಮ ಛಾಪು ಮೂಡಿಸಬೇಕಿದ್ದರೆ ನಿಮ್ಮ ಹೆಜ್ಜೆಗಳು ದೃಢವಾಗಿರಲಿ... (Wings of fire ನಿಂದ ಭಾವಾನುವಾದ)

ವಸಂತ್ ಕಜೆ.

ಪಿ ಬಿ ಶ್ರೀನಿವಾಸ್

ಶ್ರೀವತ್ಸ ಜೋಷಿಯವರು ತಮ್ಮ ಮೆಚ್ಚಿನ ಗಾಯಕ ಪಿ.ಬಿ. ಶ್ರೀನಿವಾಸ್ ಅವರನ್ನು ಭೇಟಿಯಾಗಿ ತಮ್ಮ ಬಹುದಿನದ ಕನಸನ್ನು ನನಸಾಗಿಸಿಕೊಂಡ ಘಟನೆಯನ್ನು ತಮ್ಮ ಅಂಕಣ ಬರಹ "ವಿಚಿತ್ರಾನ್ನ"ದಲ್ಲಿ ವಿವರಿಸಿದ್ದಾರೆ.
http://thatskannada.oneindia.in/column/vichitranna/120607PB_srinivas_meet.html
ಪಿಬಿಎಸ್ ಅವರ ಮಧುರ ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ:
http://www.geocities.com/srivathsajoshi/daaneponne.ram

ಮುಂಗಾರು ಮಳೆ ನೋಡಿದ ಮೇಲೆ

-೧-
ಮುಂಗಾರು ಮಳೆಯನ್ನು ಯಾಕೆ ಅಷ್ಟೊಂದು ಜನ ನೋಡಿದ್ದಾರೆ ಮತ್ತು ನೋಡುತ್ತಿದ್ದಾರೆ? ಈ ಪ್ರಶ್ನೆ ನನ್ನನ್ನು ಕಾಡಿದ್ದು ಮುಂಗಾರು ಮಳೆಯನ್ನು ಮೊನ್ನೆ ಸಿಡ್ನಿಯಲ್ಲಿ ನೋಡಿದಾಗ. ಸಾಧಾರಣವಾಗಿ ಎರಡು ಶೋಗಳು ನಡೆಯುವ ಇಲ್ಲೂ ಮೂರು ಶೋಗಳಿದ್ದು ಮೂರಕ್ಕೂ ಜನ ತುಂಬಿದ್ದರು.
ಪ್ರೀತಂನ ಮಾತುಗಳಿಗೆ ಮೊದಮೊದಲು ಜನ ನಗುತ್ತಲೇ ಚಿತ್ರ ಮೊದಲುಗೊಂಡಿತು. ಪ್ರೀತಂನ ಮಾತುಕತೆ ಎಲ್ಲಾ, ಬೆಂಗಳೂರಿನ ಶ್ರೀಮಂತ ಹುಡುಗನ ಉಡಾಫೆ, ಸಲೀಸಾಗಿ ಹರಿಯುವ ಇಂಗ್ಲೀಷ್ ಮಿಶ್ರಿತ ಕನ್ನಡ, ಮನಸ್ಸಿಗೆ ಹಿಡಿದ ಹುಡುಗಿ ಬೇಕೇ ಬೇಕು ಎಂಬಂತೆ ಹಿಂಬಾಲಿಸುವ ಮನೋಧರ್ಮ, ಇದರ ಸುತ್ತಲೇ ಸುತ್ತುತ್ತ ಢಾಳಾಗಿ ನಮ್ಮ ಮುಂದೆ ನಿಲ್ಲುತ್ತದೆ. ಒಳಗೇನೂ ಇಟ್ಟುಕೊಳ್ಳದೆ ಬೇಕಾದ್ದನ್ನು ಆಡುವ, ಆಡಿದಂತೆ ನಡೆಯುವ ಹುಡುಗ. ಇವೆಲ್ಲಾ ಹೊಸದೇನಲ್ಲ. ಆದರೆ, ಹೊಸ ಬಗೆಯ ಸ್ವಾವಹೇಳನ (self-depricating) ಹಾಸ್ಯ ಕನ್ನಡ ಚಿತ್ರದ ಹೀರೋಗೆ ಹೊಸದಿರಬಹುದು. ಆ ಅಂಶ ಅಲ್ಲಲ್ಲಿ ಕನ್ನಡದ ಚಿತ್ರಗಳಲ್ಲಿ ಈ ಹಿಂದೆ ಬಂದಿದ್ದರೂ, ಇಲ್ಲಿ ಅದು ಪ್ರೀತಂನ ಸ್ವಭಾವದ ಒಂದು ದೊಡ್ಡ ಭಾಗವೇ ಆಗಿರುವುದು ಹೊಸದೇನೋ ಅನಿಸಿತು. ಆಗಾಗ ಸಂದರ್ಭದ ಹೊರಗೆ ನಿಂತು ಚಟಾಕಿ ಹಾರಿಸುವ ಕ್ಷಣಗಳು ಮುದಕೊಡುವಂಥವು. ಎಲ್ಲಕ್ಕಿಂತ ಮುಖ್ಯವಾಗಿ ಪ್ರೀತಂ ಬಳಸುವ ಬೆಂಗಳೂರಿನಂಥ ನಗರದ ಭಾಷೆಯಿಂದಾಗಿ ಅದು ಹೊಸದಾಗಿ ಕಾಣುತ್ತವೆ ಕೂಡ. ಆದರೆ ಚಿತ್ರದ ಉತ್ತರಾರ್ಧದ ಹೊತ್ತಿಗೆ ಅವನ ಮಾತು ಕತೆ ಹಾಗೇ ಮುಂದುವರೆಯುವುದು ಪಿಚ್‌ ಎನಿಸುತ್ತದೆ.

ಸುಭಾಷಿತ

ಹತ್ತೆಡೆಯೊಳು ತೋಡಿ ಒಂದಡಿಯಷ್ಟನು ಬರಲಿಲ್ಲ ನೀರೆನ್ನಬೇಡ ಒಂದೆಡೆಯೊಳು ತೋಡು ಹತ್ತಡಿಯಷ್ಟನು ಚಿಮ್ಮುವುದುದಕವು ನೋಡಾ

ಹನಿಗವನ

ಕನ್ನಡದಲ್ಲಿ ಹನಿಗವನ ಎ೦ದರೆ ದು೦ಡಿರಾಜರು, ದು೦ಡಿರಾಜರೆ೦ದರೆ ಹನಿಗವನವೆ೦ಬುವಷ್ಟು ಮನೆಮಾತಗಿದೆ.  ಇ೦ದಿನ ವಿ.ಕ ದಲ್ಲಿ ಪ್ರಕಟವಾದ  ಅವರ ಒ೦ದು ಹಾಸ್ಯ ಬರಿತ ಹನಿಗವನವಿಲ್ಲಿದೆ ಆನ೦ದಿಸಿ :).
 
ಕಣ್ಣಾ ಮುಚ್ಚೆ ಲವರ್ಸ್ ಡೇ
ಕಾಡೇಗೂಡೇ ಡೇಟಿ೦ಗ್ ಡೇ
ಉದ್ದಿನ ಮೂಟೇ ಪ್ರೆಗ್ನೆ೦ಟ್ಸ್ ಡೇ
ಉರುಳೇ ಹೋಯ್ತು ಡೆಲಿವರಿ ಡೇ

:)