ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೀಗೊಂದು ಬಿಟ್ಟಿ ಕೂಳಿನ ಪ್ರಸಂಗ

ಎರಡು ವರುಷಗಳಿಂದ, ನಾವು ಬಾಡಿಗೆಗಿರುವ ಮನೆಯ ಮಾಲಿಕನ 6 ವರುಷದ ಮಗಳು ಸತತವಾಗಿ ಮನೆಯ ಪಕ್ಕದಲ್ಲೇ ಇರುವ ಮದುವೆ ಛತ್ರಕ್ಕೆ ಸರಿಯಾಗಿ ಊಟದ ವೇಳೆಗೆ ಭೇಟಿ ನೀಡುತ್ತಿದ್ದುದು, ಅವಳು ಸುಂದರವಾಗಿ ಅಲಂಕರಿಸಿಕೊಂಡು ನಮಗೆ ತಿಳಿಯದಂತೆ ಕಳ್ಳ ಬೆಕ್ಕಿನ ಹಾಗೆ ಮೆಲ್ಲಗೆ ಹೆಜ್ಜೆ ಹಾಕುತಿದ್ದುದು ನಿಜಕ್ಕೂ ಸಖತ್ ಮಜ ನೀಡುತ್ತಿತ್ತು.

`ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!

`ಥಟ್ ಅಂತ ಹೇಳಿ` ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕ್ವಿಜ್ ಕಾರ್ಯಕ್ರಮ. ಇದರ ೭೫೦ ನೆಯ ಕಂತು ಇದೇ ಸೋಮವಾರ, ಜೂನ್ ೪ ರ ರಾತ್ರಿ ೯.೩೦ ನಿಮಿಷಗಳಿಗೆ ಪ್ರಸಾರವಾಗುತ್ತಿದೆ. ಮರುಪ್ರಸಾರ ಮರುದಿನ, ಅಂದರೆ ೫.೦೬.೦೭ ರ ಬೆಳಿಗ್ಗೆ ೧೧.೦೦ ಕ್ಕೆ ನಡೆಯಲಿದೆ.

ನಮ್ಮ ನಡುವೆ ಇರುವ ಸಭ್ಯ ಸಾಹಿತಿಗಳಲ್ಲಿ ನಿಸಾರರು ಅಗ್ರಗಣ್ಯರು. ೭೧ ಹರಯದ ನಿಸಾರರು ಊರು ದೇವನಹಳ್ಳಿ. ಓದಿದ್ದು ಭೂಗರ್ಭಶಾಸ್ತ್ರ. ಅಧ್ಯಾಪನದ ಎಲ್ಲ ಮಜಲುಗಳನ್ನು ಏರಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ನಿಸಾರರನ್ನು ಕನ್ನಡಕ್ಕೆ ದಕ್ಕಿಸಿಕೊಟ್ಟವರು ಕುವೆಂಪು ಅವರು. ಜಿ.ಪಿ.ರಾಜರತ್ನಂ, ವಿ.ಸೀತಾರಾಮಯ್ಯ ಮುಂತಾದವರ ಪ್ರೀತಿಯಲ್ಲಿ ತಮ್ಮ ಸಾಹಿತ್ಯ ಬದುಕನ್ನು ಅರಳಿಸಿಕೊಂಡ ನಿಸಾರ್, ತಮ್ಮ ವಿಡಂಬನಾತ್ಮಕ ಕವನ `ಕುರಿಗಳು ಸಾರ್....`ನಿಂದ ಕನ್ನಡಿಗರಿಗೆ ಹತ್ತಿರವಾದರು.

ನಿಸಾರ್ ಅವರು ನವ್ಯಕಾಲದ ಕವಿಗಳಾದರೂ, ಅವರನ್ನು ಹಾಗೆ `ಬ್ರಾಂಡ್` ಮಾಡುವುದು ಸರಿಯಾಗಲಾರದೇನೋ! `ನಿತ್ಯೋತ್ಸವ`ದಂತಹ ಅರ್ಥವತ್ತಾದ ಹಾಗೂ ಸುಶ್ರಾವ್ಯವಾದ ಗೀತೆಯ ಮೂಲಕ ಕನ್ನಡ ಸುಗಮ ಸಂಗೀತಕ್ಕೆ ಒಂದು ದಾರಿಯನ್ನು ಹಾಕಿಕೊಟ್ಟವರು. ನಿಸಾರರನ್ನು ಪಂಥಗಳಲ್ಲಿ ಕಟ್ಟಿಹಾಕುವುದನ್ನು ಬಿಟ್ಟು ಅವರನ್ನೊಬ್ಬ ಸಹೃದಯ ಕವಿ ಎಂದು ಕರೆದರೆ ಸಾಕಾಗುತ್ತದೆ.

ಹಳೆ ಮರದಲ್ಲಿ ...? ಕಸಿ ಮಾಡಿ ನೋಡುವ..!

ಹಳೆ ಮರದಲ್ಲಿ ...! ಕಸಿ ಮಾಡಿ ನೋಡುವ..!

ಇದು ನಿವೇನಾದರು ಕೃಷಿ ಕ್ಷೇತ್ರದಲ್ಲಿ ಕೆಲ್ಸ ಮಾಡ್ತಿದೀರಿ, ಅಂತ ತಿಳಿದ್ ಕೂಡ್ಲೆ ಶ್ರೀ ಶ್ಯಾಮಸುಂದರ ಭಟ್ಟರು, ತಕ್ಷಣ ಕೇಳುವ ಮೊದಲ ಪ್ರಶ್ನೆ !

ಈ ಜೂನ್ ೭, ೨೦೦೭ ರ 'ತುಷಾರ' ಸಂಚಿಕೆಯಲ್ಲಿ, ಕೃಷಿಗಾಗಿಯೇ ಮೀಸಲಾದ, ನೀವು ತಪ್ಪದೆ ಓದಲೇ ಬೇಕಾದ ಲೇಖನವಿದು :

ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?

ಅನಂತಮೂರ್ತಿಯವರ "ಋಜುವಾತು" ಐನೂರು ಪ್ರತಿ ಕೂಡಾ ಖರ್ಚಾಗಿಲ್ಲ. ಭೈರಪ್ಪನವರ "ಆವರಣ" ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಪ್ರತಿ ಖರ್ಚಾಗಿದೆ. ಅನಂತಮೂರ್ತಿ ಭೈರಪ್ಪನವರಲ್ಲಿ ಯಾರು ದೊಡ್ದವರು ಎನ್ನುವ ದಾಟಿಯ ಚರ್ಚೆಗೆ ವಿದಾಯ ಹೇಳೋಣ. ಮೌಲಿಕ ವಿಚಾರ ವಿನಿಮಯ ನಡೆಯಬೇಕು ಎನ್ನುವ "ನೂರೆಂಟು ಮಾತು" ಅಂಕಣ ಬರಹ ಇಲ್ಲಿದೆ. ಓದಿ:

೪ ಹಂತಗಳು

೪ ಹಂತಗಳು

ಮನುಜ ೪ ಹಂತಗಳಲ್ಲಿ ಬೆಳಿತಾನಂತೆ.

೧. ನಾನು ಚನ್ನಾಗಿಲ್ಲ, ಜಗತ್ತು ಚನ್ನಾಗಿಲ್ಲ.
೨. ನಾನು ಚನ್ನಾಗಿಲ್ಲ, ಜಗತ್ತು ಚನ್ನಾಗಿದೆ
೩. ನಾನು ಚನ್ನಾಗಿದ್ದಿನಿ, ಜಗತ್ತು ಚನ್ನಾಗಿಲ್ಲ,
೪. ನಾನು ಚನ್ನಾಗಿದ್ದಿನಿ, ಜಗತ್ತು ಚನ್ನಾಗಿದೆ...

ಬೆಳದಿಂಗಳ ಬಾಲೆ ಚಿತ್ರದಲ್ಲಿ ರೇವಂತ್ ಅಭಿಲಾಷ ಗೆ ಹೇಳುವ ಮಾತಿದು, ಜೇಮ್ಸ ಅನ್ನು ಉದ್ದೇಶಿಸಿ....

ಅನಂತಮೂರ್ತಿಯವರು ಮಾತನಾಡಬಾರದೆ?

ನಿನ್ನೆ ದಿನಾಂಕ ೨೯ರ ಸಂಜೆ ಕನ್ನಡದ ಒಬ್ಬ ಖ್ಯಾತ ಸಾಹಿತಿ, ವಿಮರ್ಶಕರೊಬ್ಬರಿಗೆ ಒಂದು ಪತ್ರಿಕೆಯವರು ಫೋನ್ ಮಾಡಿ, ಆವರಣ ಕುರಿತು ಅನಂತಮೂರ್ತಿಯವರು ಆಡಿದ ಮಾತುಗಳ ಬಗ್ಗೆ ತಮ್ಮ ಪ್ರತಿಕ್ರಿಯೆ ಏನು ಅಂತ ಕೇಳಿದರು. ಆ ವ್ಯಕ್ತಿ ತಕ್ಷಣವೇ "ನನಗೆ ನೀವು ಅವರ ಭಾಷಣದ ಪೂರ್ಣ ಪಠ್ಯ ಒದಗಿಸಿದರೆ ನಾನದನ್ನ ಓದಿ ನನ್ನ ಅಭಿಪ್ರಾಯ ತಿಳಿಸಬಹುದೇ ಹೊರತು ಪತ್ರಿಕಾ ವರದಿಯ ಆಧಾರದ ಮೇಲೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ" ಅಂತ ಹೇಳಿದರು.

ರಾತ್ರಿ ಸಂಪದದಲ್ಲಿ ಮುಖ್ಯವಾಗಿ ಎರಡು ಬ್ಲಾಗ್‌ಗಳಲ್ಲಿ "ಅನಂತಮೂರ್ತಿಯವರ ಉಪದ್ವ್ಯಾಪಿತನ ಅತಿಯಾಯಿತು" ಅಂತ ಒಬ್ಬರು, "ಆವರಣದ ಬಗ್ಗೆ ಅನಂತಮೂರ್ತಿಯ ಅಸಂಬದ್ಧ ಪ್ರಲಾಪಗಳು" ಅಂತ ಇನ್ನೊಬ್ಬರು ಚಿಕ್ಕದಾಗಿ ಬರೆದರು. ವಾಸ್ತವವಾಗಿ ಇವರ ಬ್ಲಾಗ್‌ನಲ್ಲಿ ಅನಂತಮೂರ್ತಿಯವರ ಭಾಷಣದ ಯಾವ ನಿರ್ದಿಷ್ಟ ಅಂಶಗಳ ಕುರಿತೂ ಉಲ್ಲೇಖವಿಲ್ಲ. ಅಲ್ಲದೆ ಬ್ಲಾಗ್ ಬರೆದವರಾದರೂ, ಇವರಿಗೆ ಪ್ರತಿಕ್ರಿಯೆ ಬರೆದವರಾದರೂ ಅನಂತಮೂರ್ತಿಯವರ ಭಾಷಣವನ್ನು ತಾವೇ ಖುದ್ದಾಗಿ ಮತ್ತು ಸರಿಯಾಗಿ ಕೇಳಿದ್ದರೆ, ಅಥವಾ ಅದರ ಪೂರ್ತಿ ಪಠ್ಯವನ್ನಾದರೂ ಓದಿದ್ದರೆ ಎಂಬುದು ಅನುಮಾನ.

"ಅನಂತನ ಅವಾಂತರ"

ನಮಸ್ತೆ ಗೆಳೆಯರೆ,ಕಳೆದ ೨ ದಿನಗಳಿಂದ ಸಾಹಿತ್ಯ ಜಗತ್ತಿನಲ್ಲಿ ಮತ್ತೊಂದು ವಿವಾದ!!! ಒನ್ಸ್ ಅಗೈನ್ ಅನಂತಮೂರ್ತಿಯವರ ‍ಕೃಪಾಪೋಷಿತ!! ಬಹುಶಃ ಬಹುದಿನಗಳಿಂದ ಯಾವುದೇ ಸುದ್ದಿಯನ್ನು ಮಾಡಲಾಗದೆ ಒದ್ದಾಡಿರಬಹುದಾದ ಮೂರ್ತಿಗಳು ಶೂನ್ಯದ ಮೂಲಕವೆ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಭೈರಪ್ಪನವರಿಗೆ ಕಾದಂಬರಿ ಬರೆಯಲು ಬರುವುದಿಲ್ಲವೇ?

"ಉದಯವಾಣಿ"ಯಲ್ಲಿ ಇಂದು ಈ ವಿಷಯದ ಬಗ್ಗೆ ಮತ್ತೂರು ಕೃಷ್ಣಮೂರ್ತಿ ಬರೆದಿದ್ದಾರೆ.ನಿಮ್ಮ ಅನಿಸಿಕೆಯನ್ನೂ ಬರೆಯುವಿರಾ?
http://68.178.224.54/udayavani/showstory.asp?news=1&contentid=420458&lang=2

ಹಿತನುಡಿ

ಭೂಮಿಯ ಮೇಲಿನ ಪ್ರತಿಯೊಂದು ವಸ್ತುವೂ ಸಕ್ಕರೆ ಮರಳುಗಳ ಮಿಶ್ರಣವೇ. ಬುದ್ದಿಶಾಲಿಯಾದ ಇರುವೆಯಂತೆ ಸಕ್ಕರೆಯನ್ನು ಮಾತ್ರ ಗ್ರಹಿಸಿ ಮರಳು ಕಣಗಳನ್ನು ಬಿಟ್ಟುಬಿಡಬೇಕು.