ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಐಶ್ ಮದುವೆಯ multi effects!!!!!

2010ರಲ್ಲಿ ವಿಶ್ವದಾದ್ಯಂತ ದೂರ ಸಂಪರ್ಕ ಸ್ಥಗಿತಗೊಳ್ಳುತ್ತದೆಯಂತೆ. ಸೂರ್ಯನ ಉಜ್ವಲ ಕಿರಣದಿಂದಾಗಿ ಹೀಗಾಗುತ್ತದೆಯೆಂದು ಹೇಳಲಾಗಿದೆ. ಆದರೆ ಈ ಫೆಬ್ರವರಿ 27 ರಂದು ನಮ್ಮ ಸುದ್ದಿ ಮಾಧ್ಯಮಗಳ ಮೇಲೆ ಪ್ರಭಾವ ಬೀರಬಲ್ಲ ಘಟನೆಯ ಬಗ್ಗೆ ಎಲ್ಲೂ ವರದಿಯಾಗಿಲ್ಲ.

ಅಂದು 'ಐಶ್ ಮದುವೆ' ಎಂಬ ಘಟನೆಯ ತೀಕ್ಷಣ ಪ್ರಭಾವದಿಂದಾಗಿ ಇತರೆ ಎಲ್ಲಾ ಸುದ್ದಿಗಳು ಪತ್ರಿಕೆಗಳಲ್ಲಿ, ಟಿ ವಿ ಚಾನೆಲ್ ಗಳಲ್ಲಿ ಮೂಲೆಗುಂಪಾಗಲಿವೆ. ರಾಜಕಾರಣಿಗಳು,ನೇತಾರರು ಅಂದು ಯಾವುದೇ ಹೇಳಿಕೆಗಳಾಗಲಿ, ವಿರೋಧಿಗಳ ವಿರುದ್ದ ಆರೋಪ ಮಾಡುವುದಾಗಲಿ, ಹೊಸ ಯೋಜನೆ,ಯೋಚನೆಗಳನ್ನು ಪ್ರಕಟಿಸುವುದಾಗಲಿ ಮಾಡುವುದಿಲ್ಲವಂತೆ. 'ಐಶ್ ಮದುವೆ'ಯ ಮಂಗಳ ವಾದ್ಯದ ಅಬ್ಬರದಲ್ಲಿ ಇವರ ಕಿರುಚಾಟ ಕೇಳಿಸುವುದಿಲ್ಲವಾದ್ದರಿಂದ ಎಲ್ಲರೂ ಸರ್ವಸಮ್ಮತದಿಂದ ಈ ನಿರ್ಣಯ ಕೈಗೊಂಡಿದ್ದಾರೆ.

ಈ ಮಧ್ಯೆ, 'ಅಖಿಲ ಭಾರತ ವಿರಹಿಗಳ ಪಕ್ಷ' ಅಸ್ತಿತ್ತ್ವಕ್ಕೆ ಬಂದಿದ್ದು ಹಾಲಿ ನಟ ಹಾಗು ಮಾಜಿ 'ಐಶ್ ಪ್ರೇಮಿ' ಸಲ್ಮಾನ್ ಖಾನ್ ಈ ಪಕ್ಷದ ಅಧ್ಯಕ್ಷರಾಗಿ ಹಾಗು ಇನ್ನೊಬ ನಟ ವಿವೇಕ್ ಒಬೆರಾಯ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಈ ಪಕ್ಷದ ಕರ್ನಾಟಕ ರಾಜ್ಯ ಘಟಕಕ್ಕೆ ರವಿ ಬೆಳಗೆರೆ ಸಾರಥ್ಯ ವಹಿಸಿಕೊಂಡಿದ್ದಾರೆ.

ನಿನ್ನೆ ಮುಂಬಯಿ ಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಟಿಯಲ್ಲಿ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮಾತಾಡುತ್ತ ರಾಷ್ಟ್ರಧ್ಯಕ್ಷರು, ಫೆಬ್ರವರಿ 14(ಪ್ರೇಮಿಗಳ ದಿನ)ನ್ನು ಕರಾಳದಿನವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ. ಅಂದು ಬೆಂಗಳೂರಿನಲ್ಲಿ ವಿರಹಿಗಳಿಗೆ ಸಾಂತ್ವನದ ಮಾತುಗಳಿರುವ ಸಿ ಡಿಯನ್ನು ರವಿ ಬೆಳಗೆರೆ ಬಿಡುಗಡೆ ಮಾಡಲಿದ್ದಾರೆ ಎಂದೂ ತಿಳಿಸಿದರು.

ಈ ಬಾರಿಯ ಪ್ರೇಮಿಗಳ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲು ಕರೆ ನೀಡಿರುವುದರಿಂದ ಅಂದು ಆಗಲಿದ್ದ ಭರ್ಜರಿ ವಹಿವಾಟಿಗೆ ಕೊಡಲಿ ಪೆಟ್ಟು ಬಿದ್ದಿದೆ. ಪ್ರೇಮಿಗಳ ದಿನವನ್ನು ಬಂಡವಾಳವಾಗಿಸಿಕೊಂಡಿದ್ದ ವಾಣಿಜ್ಯ ಸಂಸ್ಥೆಗಳು ಅಪಾರ ನಷ್ಟ ಅನುಭವಿಸುವ ಸೂಚನೆ ಕಂಡು ಬಂದಿದೆ.

ಹೊಸದಾಗಿ ಪ್ರಾರಂಭ ಆಗಿರುವ 'ಅಖಿಲ ಭಾರತ ವಿರಹಿಗಳ ಪಕ್ಷ' ದೇಶದ ರಾಜಕಾರಣದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದೆ. ಇದರಿಂದ ರಾಜಕೀಯ ಕ್ಷೇತ್ರದಲ್ಲಿ ಯಾವ ತರಹ ಬದಲಾವಣೆಗಳಾಗಬಹುದೆಂದು ಕಾದು ನೋಡಬೇಕಾಗಿದೆ ಎಂದು ರಾಜಕೀಯ ವಿಮರ್ಶಕರು, ಚಿಂತಕರು,ಚಿಂತಿತರು ಅಭಿಪ್ರಾಯ ಪಟ್ಟಿದ್ದಾರೆ.

ನಾನು ಬೆಂಗಳೂರಲ್ಲೇ ಇದ್ದೇನಾ??????

ಇದನ್ನು ನನ್ನ ಅಮಾಯಕತನವೋ ಇಲ್ಲಾ ನನಗಾದ ಸಾಂಸ್ಕೃತಿಕ ಆಘಾತ ಅಂತಾದರೂ ಅಂದ್ಕೋಬಹುದು.ಅಥವಾ ನನ್ನನ್ನು ತೀವ್ರ ಕ್ಶುಲ್ಲಕ ಬುದ್ಧಿಯ ಮನುಷ್ಯ ಅಂತಾದರೂ ಅನ್ನಿ ಆದರೆ ನನಗಾದ ಅನುಭವವನ್ನ ಹಂಚಿಕೋತಾ ಇದ್ದೇನೆ. ನಾನು ಬೆಂಗಳೂರಿಗೆ ಬಂದು ಸುಮಾರು ೫ ವರ್ಷ ಆಯ್ತು. ಇಲ್ಲಿಗೆ ಬರುವ ಮುಂಚೆ ಬೆಂಗಳೂರು ಹೀಗೆ ಬೆಂಗಳೂರು ಹಾಗೆ ಅಂತ ನಾನಾ ತರಹದ ರಂಗು ರಂಗಿನ ಕಥೆಗಳನ್ನ ಕೇಳಿದ್ದೆ, ಆದರೆ ಯಾವದೇ ರೀತಿಯ ಘಟನೆಗಳನ್ನು ಕಣ್ಣಾರೆ ನೋಡಿರಲಿಲ್ಲ.ಇಲ್ಲಿ ಬಂದ ಮೇಲೂ ನಾನಿದ್ದದ್ದು ಪಕ್ಕಾ ಕನ್ನಡಿಗರ ಪ್ರದೇಶಗವಾದ ಮಲ್ಲೇಶ್ವರಂ. ಓದಿದ್ದು ವಿಶ್ವೇಶ್ವರಯ್ಯ ಮಹಾವಿದ್ಯಾಲಯದಲ್ಲಿ.ಹಾಗಾಗಿ  ಸಭ್ಯತೆಯನ್ನು ಮೀರದಿರುವ ಹುಡುಗಿಯರನ್ನೇ ನೋಡಿದ್ದು.

ಶ್ರಿ. ಕಮಲೇಶ್ವರ್ - ಒಬ್ಬ ಶ್ರೇಷ್ಟ ಸಾಹಿತಿ, ಅಂದಿನ, ದೂರದರ್ಶನದ ಪಾದಾರ್ಪಣೆಯ ಸಮಯದ, ಶ್ರೇಷ್ಟ ಮಾತುಗಾರ, ಇನ್ನಿಲ್ಲ !

(೧೯೩೨-೨೦೦೭) ಶ್ರಿ. ಕಮಲೇಶ್ವರ್- ಒಬ್ಬ ಶ್ರೇಷ್ಟ ಸಾಹಿತಿ, ಮಾತುಗಾರ, ದೂರದರ್ಶನ ಆಂಕರ್, ಶ್ರೇಷ್ಟ ಚಿತ್ರಪಟ ಲೇಖಕ. ಹೃದಯಾಘಾತದಿಂದ ಸ್ವಲ್ಪ ಸಮಯದಿಂದ ನರಳುತ್ತಿದ್ದ ೭೫ ವರ್ಷ ವಯಸ್ಸಿನ ಕಮಲೇಶ್ವರ್, ಶನಿವಾರದಂದು ತಮ್ಮ ಕೊನೆಯುಸಿರೆಳೆದರು. ಇತ್ತೀಚಿನ ದಿನಗಳಲ್ಲಿ ಅವರು ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ೧೯೭೩-೭೫ ರಲ್ಲಿ ದೂರದರ್ಶನದ ಕಾರ್ಯಕ್ರಮಗಳು ಆಗ ತಾನೇ ಪ್ರಾರಂಭವಾಗಿ ಗರಿಕೆದರುತ್ತಿದ್ದ ಕಾಲ. ನಾನು ದೂರದರ್ಶನದಲ್ಲಿ ಕಂಡ ಕಮಲೇಶ್ವರ್, ಒಬ್ಬ ಪ್ರಭಾವಿ, ಪ್ರತಿಭಾನ್ವಿತ ಮತುಗಾರ ; 'ಪರಿಕ್ರಮ' ಕಾರ್ಯಕ್ರಮದಲ್ಲಿ ಪ್ರೇಕ್ಷಕರಮೇಲೆ ಜಾದುಮಾಡಿದ್ದರು.

ಮಂಕುತಿಮ್ಮನ ಕಗ್ಗ-ಆಂಗ್ಲ ವಿವರಣೆಯೊಂದಿಗೆ

ಈ ಕೆಳಗಿನ ಕೊಂಡಿಯಲ್ಲಿ ಮಂಕುತಿಮ್ಮನ ಕಗ್ಗದ ಪದ್ಯಗಳು ಆಂಗ್ಲ ರೂಪಾಂತರದೊಂದಿಗೆ ಲಭ್ಯವಿವೆ.ಶ್ಯಾ ಮ್‍ರವರ ಬ್ಲಾಗ್‍ನಲ್ಲಿ ಕಗ್ಗದ ಪದ್ಯವೊಂದನ್ನು ನೋಡಿದಾಗ ನೆನಪಾಯಿತು. ಹೇಗಿದೆ ನೋಡಿ. ಹೆಚ್ಚಿನವರಿಗೆ ಆಂಗ್ಲ ಅನುವಾದ ನೋಡಿದ ಬಳಿಕ ಕಗ್ಗ ಹೆಚ್ಚು ಸ್ಪಷ್ಟವಾದರೆ ಅಚ್ಚರಿಯಿಲ್ಲ!Laughing

ಅನುವಾದದಲ್ಲಿ ಪಾಲ್ಗೊಳ್ಳುತ್ತಿರುವವರಿಗೊಂದಷ್ಟು ಸಲಹೆಗಳು

ಸಂಪದದ [:http://translate.sampada.net|ಮುಕ್ತ ತಂತ್ರಾಂಶ ಅನುವಾದ ಮಾಡುವ ಪ್ರಾಜೆಕ್ಟಿನಲ್ಲಿ] ಪಾಲ್ಗೊಳ್ಳುತ್ತಿರುವವರಿಗೊಂದಷ್ಟು ಸಲಹೆಗಳು:

ಬೆತ್ತಲೆ ಪ್ರತಿಭಟನೆಯಲ್ಲ, Dog-Walk ಅಭ್ಯಾಸ !

ಬೊಗಳೂರು, ಜ.30- ಶಾಲಾ ಮಕ್ಕಳನ್ನು ಬೆತ್ತಲೆಗೊಳಿಸಲಾಗಿದೆ ಎಂಬ ಸುದ್ದಿ ಕೇಳಿ ಬೊಗಳೆ ರಗಳೆ ಬ್ಯುರೋ ಭೋಪಾಲಕ್ಕೆ ತೆರಳಿ ವರದಿಯ ಅನೈಜತೆಯೇನು ಎಂಬುದನ್ನು ಪರೀಕ್ಷಿಸಿ ಓದುಗರಿಗೆ ಅಸತ್ಯಾಂಶ ತಿಳಿಯಪಡಿಸಲು ನಿರ್ಧರಿಸಿತು.

ಫೈರ್ ಫಾಕ್ಸ್ ಬ್ರೌಸರ್ ಅನ್ನು WYSIWYG editor ಆಗಿ ಬಳಸುವುದು ಹೇಗೆ?

WYSIWYG ಎಂದರೆ What You See Is What You Get ಎಂದರ್ಥ.

ಅಂತರ್ಜಾಲ ಪುಟ ಮಾಡಲು ಅಥವಾ ಎಡಿಟ್ ಮಾಡಲು ಕೆಲವೊಂದು ಎಡಿಟರ್ ಗಳನ್ನ ಬಳಸುತ್ತೇವೆ.(ಉದಾ NVU), Editor ಬದಲಿಗೆ ಬ್ರೌಸರ್ ಅನ್ನೇ ಎಡಿಟರ್ ಆಗಿ ಬಳಸಬಹುದು. ಇದರ ಉಪಯೋಗ ಏನೆಂದರೆ on the fly ಅಂತರ್ಜಾಲ ಪುಟ ಮಾಡಬಹುದು.

ಕೋಮುಗಲಭೆಗಳಲ್ಲಿ ಸಾಯುವುದು ಮನುಷ್ಯರು

ವರ್ತಮಾನದ ಸೋಷಿಯೋಪೊಲಿಟಿಕಲ್ (ಸಮಾಜೋರಾಜಕೀಯ?) ಸಂದರ್ಭದ ಅತಿದೊಡ್ಡ ಸಮಸ್ಯೆ ಎಂದರೆ ನಮಗರಿವಿಲ್ಲದಂತೆಯೇ ನಾವು ಜಾತೀವಾದಿಗಳೋ, ಮತೀಯವಾದಿಗಳೋ, ಕೋಮುವಾದಿಗಳೋ ಆಗಿಬಿಡುವುದು. ಅಂದರೆ ನಿರ್ದಿಷ್ಟ ವಾದವೊಂದನ್ನು ಸಮರ್ಥಿಸಲು ಹೊರಡು ಅದರ ಕುರುಡು ಸಮರ್ಥಕರಾಗಿಬಿಡುವ ಇಲ್ಲವೇ ಯಾವುದೋ ಒಂದು ವಾದವನ್ನು ಟೀಕಿಸಲು ಹೊರಟು ಅದರ ಕುರುಡು ವಿಮರ್ಶಕರಾಗಿಬಿಡುವುದು. ಕರ್ನಾಟಕದಲ್ಲಿ ಕೋಮುವಾದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಎಲ್ಲಾ ಚರ್ಚೆಗಳಲ್ಲಿಯೂ ಈ ಅತಿಯನ್ನು ಕಾಣಬಹುದು.

ಗೈಮ್ ಕನ್ನಡದಲ್ಲಿ ಲಭ್ಯ

gaim in Kannada

ಮುಕ್ತ ತಂತ್ರಾಂಶವಾದ - [:http://gaim.sourceforge.net/|ಗೈಮ್ multi protocol instant messaging client] ಈಗ [:http://dev.sampada.net/wiki/Gaim_Kannada_Translation|ಕನ್ನಡದಲ್ಲಿ ಲಭ್ಯ]. ಹಿಂದಿನ ವಾಕ್ಯದಲ್ಲಿ ಬರೆದ ಟೆಕ್ನಿಕಲ್ ಪದವನ್ನೋದಿ ಯಾರೂ ಮೂರ್ಛೆ ಹೋಗಿರಲಿಕ್ಕಿಲ್ಲ ಎಂದು ಭಾವಿಸಿ ಅದರರ್ಥ ವಿವರಿಸಲು ಪ್ರಯತ್ನಿಸುತ್ತೇನೆ:

ನಿಮ್ಮ ಕಂಪ್ಯೂಟರಿನಲ್ಲಿ ಯಾಹೂ ಮೆಸೆಂಜರ್ ಬಳಸೇ ಇರುತ್ತೀರ. ಇಲ್ಲದಿದ್ದರೆ ಗೂಗಲ್ ಟಾಲ್ಕ್ ಅಂತೂ ಬಳಸಿರುತ್ತೀರ. ಇವಕ್ಕೆ instant messaging ಎನ್ನುತ್ತಾರೆ. ಇಂತಹ ಹಲವು ಇನ್ಸ್ಟಂಟ್ ಮೆಸ್ಸೇಜಿಂಗ್ ಪ್ರೋಗ್ರಾಮುಗಳಾಗಿಬಿಟ್ಟರೆ ಪ್ರತಿಯೊಂದು ಪ್ರೋಟೋಕಾಲ್ ಗೂ (ಅಂದ್ರೆ ಯಾಹೂ, ಗೂಗಲ್, MSN, AOL, ICQ ಮುಂತಾದವಕ್ಕೆ) ನೀವು ತಲಾ ಒಂದೊಂದು ಪ್ರೋಗ್ರಾಮು install ಮಾಡಿಕೊಂಡು ಅವುಗಳೊಂದಿಗೆ ಗುದ್ದಾಡಬೇಕಾಗುತ್ತದೆ.
ನಿಮ್ಮ ಕೆಲವು ಸ್ನೇಹಿತರು ಯಾಹೂ ಬಳಸಿದರೆ ಮತ್ತು ಹಲವರು ಗೂಗಲ್ ಟಾಲ್ಕ್ ಬಳಸುತ್ತಿರುತ್ತಾರೆ.

ಗೈಮ್ ಈ ಪರಿಸ್ಥಿತಿಯನ್ನು ತಿಳಿಯಾಗಿಸುತ್ತದೆ. ಹೇಗೆ? ನಿಮಗೆ ಎಲ್ಲ ಪ್ರೋಟೋಕಾಲ್ ಗಳಿಗೂ ಒಂದೇ ಮೆಸ್ಸೆಂಜರನ್ನು ಒದಗಿಸಿ! ಉದಾಹರಣೆಗೆ, ಯಾಹೂ, ಎಮ್ ಎಸ್ ಎನ್, ಗೂಗಲ್ ಟಾಲ್ಕ್ ಎಲ್ಲಕ್ಕೂ ಒಂದೇ ಪ್ರೋಗ್ರಾಮು ಬಳಸಿ ನೀವು ನಿಮ್ಮ ಸ್ನೇಹಿತರೊಂದಿಗೆ ಚ್ಯಾಟ್ ಮಾಡಬಹುದು! "ನಿಜವೇ? ಹೀಗೂ ಇದೆಯೇ?" ಎಂದು ಹಲವರು ನನಗೆ ಕೇಳಿದ್ದುಂಟು. :-)
ಕಳೆದ ಹಲವು ವರ್ಷಗಳಿಂದ ನಾನು ಮತ್ತು ನನ್ನ ಕೆಲವು ಲಿನಕ್ಸ್ ತಿಳಿದ ಸ್ನೇಹಿತರು ಇದನ್ನೇ ಬಳಸುತ್ತಾ ಬಂದಿದ್ದೇವೆ. ನಮಗಿದು ದಿನನಿತ್ಯದ ಸಂಗತಿ - ಹಾಗಾಗಿ ಇದರ ಬಗ್ಗೆ ಹೇಳುವಾಗ excitement usually ಕಡಿಮೇನೆ :-)

ಅದೇನೆ ಇರಲಿ - ಗೈಮ್ ಲಿನಕ್ಸ್ ಮತ್ತು ವಿಂಡೋಸ್ ಎರಡರಲ್ಲೂ ಬಳಸಬಹುದಾದಂತ ತಂತ್ರಾಂಶ. ಉಪಯೋಗಿಸಿ ನೋಡಿ.

ಕನ್ನಡದಲ್ಲಿ ಗೈಮ್ ಕುರಿತು ಹೆಚ್ಚಿನ ಮಾಹಿತಿಗೆೆ ಕೆಳಗಿನ ಪುಟ ನೋಡಿ:
[:http://dev.sampada.net/wiki/Gaim_Kannada_Translation]

ಅನುವಾದಗಳ Credits - [:http://translate.sampada.net] ನಲ್ಲಿ ಅನುವಾದಗಳಲ್ಲಿ ತೊಡಗಿಕೊಂಡಿರುವ ಎಲ್ಲ ಉತ್ಸಾಹಿ ಕನ್ನಡಿಗರದ್ದು.

ಓದುಗರ ಗಮನಕ್ಕೆ: ಚಿತ್ರದಲ್ಲಿ ಸ್ನೇಹಿತರ ಪಟ್ಟಿಯಲ್ಲಿರುವ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಬ್ಲರ್ ಮಾಡಲಾಗಿದೆ. ಹಾಗೆಯೇ ಇರುತ್ತದೆ ಅಂದುಕೊಂಡುಬಿಡಬೇಡಿ ಮತ್ತೆ :P