ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಈಗಷ್ಟೆ ನೋಡಿದ್ದು!

ಏನೋ ಕೆಲಸದ ನಿಮಿತ್ತ ಆ ದಾರಿಯಲ್ಲಿ ನಡೆದು ಸಾಗುತ್ತಿದ್ದೆ. ದೂರದಲ್ಲಿ ಜನರಗುಂಪೊಂದು ಸೇರಿರುವುದು ನನ್ನ ಕಣ್ಣಿಗೆ ಬಿತ್ತು. ಅದರ ಹತ್ತಿರ ಸಾಗುತ್ತಿದ್ದಂತೆ "ಕನ್ನಡ ವಿರೋಧಿಗಳಿಗೆ ಧಿಕ್ಕಾರ,ಕನ್ನಡ ವಿರೋಧಿ ವರ್ತಕರಿಗೆ ಧಿಕ್ಕಾರ,ಕನ್ನಡ ವಿರೊಧಿ ಕಂಪನಿಗಳಿಗೆ ಧಿಕ್ಕಾರ" ಎನ್ನುತ್ತಿರುವುದು ಸ್ಪಷ್ಟವಾಗಿ ಕೇಳುತ್ತಿತ್ತು. ಆ ಗುಂಪು ಸೇರಿರುವುದು hutch ಆಫಿಸ್ ನ ಎದಿರು, ಅದರ ಬಾಗಿಲು ಮುಚ್ಹಿತ್ತು ಅನ್ನುವುದಕ್ಕಿಂತ ಮುಚ್ಹಿಸಿದ್ದರು ಎನ್ನಬಹುದು.

ಪತಂಜಲಿಯ ಯೋಗ ಭಾಗ ೪

ಪತಂಜಲಿಯ ಯೋಗ

ನಾಲ್ಕನೆಯ ಲೇಖನ

ಮನಸ್ಸಿನಲ್ಲಿ ವೃತ್ತಿಗಳು ಏಳುವದನ್ನು ಕಡಿಮೆ ಮಾಡಲು ಅಭ್ಯಾಸ ಮಾಡುತ್ತಿದ್ದಾಗ ಅನೇಕ ತಡೆ-ಅಡಚಣೆಗಳು ಬರುತ್ತವೆ. ಅವು ಯಾವುವೆಂದರೆ
ವ್ಯಾಧಿ(ಕಾಹಿಲೆ), ಸ್ತ್ಯಾನ (ಸೋಮಾರಿತನ), ಸಂಶಯ (ನಂಬಿಕೆ ಇಲ್ಲದಿರುವುದು), ಪ್ರಮಾದ (ತಪ್ಪು), ಅವಿರತಿ (ದೇಹದ ಕಾಮನೆಗಳು), ಭ್ರಾಂತಿದ‍ರ್ಶನ (ಆಗದಿದ್ದನ್ನು ಆಯಿತೆಂದು ತಿಳಿಯುವುದು), ಅಲಭ್ದಭೂಮಿಕತ್ವ (ಮನಸ್ಸನ್ನು ಹರಿಬಿಡುವುದು;ಅನುಪಸ್ಥಿತಿ), ಅನವಸ್ಥಿತತ್ವ (ಒಂದು ಸ್ಥಿತಿ ಏರಿದ್ದನ್ನು ಉಳಿಸಿಕೊಳ್ಳದಿರುವುದು), ದುಃಖ , ದೌ‍ರ್ಮನಸ್ಯ (ಮನಸ್ಸಿನ ಪರಿತಾಪ), ಅಂಗಮೇಜಯತ್ವ (ದೇಹದ ಚಲನೆ),ಶ್ವಾಸಪ್ರಶ್ವಾಸ (ಅಸಮವಾದ ಉಸಿರಾಟ).

ನಾಯಿಗೇನಾಯಿತು?

ರಾಮು: ಯಾಕೋ ಇವತ್ತು ಆಫೀಸಿಗೆ ತಡವಾಗಿ ಬಂದೆ? ಶಾಮು: ಬರುವಾಗ ಬೀದಿ ನಾಯಿ ಕಚ್ಚಿತು ಕಣೊ. ಡಾಕ್ತರ್ ಹತ್ತಿರ ಹೋಗಿ ರೇಬಿಸ್ ಇಂಜೆಕ್ಷನ್ ಮಾಡಿಸಿಕೊಂಡು ಬರಲು ತಡವಾಯಿತು. ರಾಮು: ಅಯ್ಯೋ ಪಾಪ! ನಾಯಿಗೇನಾಯಿತು? ಶಾಮು: .....

ಯಾರಿಗೂ ಹೇಳಬೇಡಿ

ನನ್ನ ಚಿಕ್ಕಪ್ಪನಿಗೆ ಮೊದಲ ಮಗು ಜನಸಿತ್ತು. ಆಗ ಅವರು ಮಗುವನ್ನು ನೋಡಲು ಬಾಣಂತಿ ಕೋಣೆಗೆ ಹೋಗಿ ಬಂದರು. ಹೊರಗೆ ಕೂತಿದ್ದ ನೆಂಟರು ತಮಾಷೆಗೆ 'ಏನು ಹೇಳಿದಳಪ್ಪಾ ಮಗಳು?' ಎಂದು ಪ್ರಶ್ನಿಸಿದರು. ಆಗ ತಾನೆ ಹುಟ್ಟಿದ ಮಗು ಮಾತನಾಡಲು ಸಾಧ್ಯವೆ! ಚಿಕ್ಕಪ್ಪ ಕೂಡ ಸೋಲೊಪ್ಪದ ವ್ಯಕ್ತಿ. ಚಿಕ್ಕಪ್ಪ ಕೂಡ ಅದೇ ವರಸೆಯಿಂದ 'ನಿಮಗೆಲ್ಲಾ ಹೀಳಬೇಡಿ ಎಂದಿದ್ದಾಳೆ' ಎನ್ನಬೇಕೆ. ಅಲ್ಲಿದ್

7 ಮದುವೆ ಅನುಭವ

ಈ ಘಟನೆ ನಡೆದಾಗ ನಾನಿನ್ನು 10 ವರುಷದ ಹುಡುಗ. ನನ್ನ ಚಿಕ್ಕಪ್ಪನ ನಿಶ್ಚಿತಾರ್ಥ ನಡೆದಿತ್ತು. ಗಂಡು, ಹೆಣ್ಣಿನ ಕಡೆಯವರೆಲ್ಲರೂ ಸೇರಿದ್ದರು. ನಮ್ಮ ಅತ್ತೆಗಳೆಲ್ಲರೂ ಸೇರಿ (ಅಂದರೆ ನಮ್ಮೆ ತಂದೆಯ ತಂಗಿಯಂದಿರು) ನನ್ನ ಚಿಕ್ಕಪ್ಪನ ಕಾಲೆಳೆಯುತ್ತಿದ್ದರು. ಅವರಿಗೆಲ್ಲರಿಗೂ ಆಗಲೆ ಮದುವೆಯಾಗಿತ್ತು. ನಮ್ಮ ಅತ್ತೆಯಂದಿರು ಚಿಕ್ಕಪ್ಪನಿಗೆ 'ನೀನು ಮದುವೆಯಗುತ್ತಿರುವ ಹುಡುಗ. ಸ್ವಲ್ಪ ಗೊಭೀರತೆಯಿಂದಿರಲು ಕಲಿತುಕೊ.' ಎಂದು ಹಾಗೆ ಹೀಗೆ ಎಂದೆಲ್ಲಾ ಬೋಧಿಸುತ್ತಿದ್ದರು. ಇದು ತುಂಬಾ ಹೊತ್ತಿನ ವರೆಗೆ ನಡೆಯಿತು. ಚಿಕ್ಕಪ್ಪನೋ ತುಂಬಾ ತಮಾಷೆಯ ವ್ಯಕ್ತಿ. ಅವನು 'ನೀವೇನೂ ಚಿಂತೆ ಮಾಡಬೇಡಿ. ನನಗೆ 7 ಮದುವೆ ಹಾಗೂ ಸಂಸಾರದ ಅನಭವವಿದೆ' ಎಂದ. ಇದನ್ನು ಕೇಳಿಸಿಕೊಂಡ ಅಲ್ಲಿದ್ದ ಹೆಣ್ಣಿನ ಕಡೆಯವರು ಸ್ವಲ್ಪ ಚಿಂತೆಗೀಡಾದರೆಂದು ಅನ್ನಿಸಿತು. ಹುಡುಗನಿಗೆ ಈ ಮೊದಲೆ ಮದುವೆ ಅಗಿದೆಯೊ ಎಂದನ್ನಿಸಿರಬೇಕು. ವಧುವಿನ ತಾಯಿ 'ಅಂದರೆ ಏನಪ್ಪ ನನೀನು ಹೇಳುತ್ತಿರುವುದು?' ಎಂದು ಪ್ರಶ್ನಿಸಿದರು. ಆಗ ಚಿಕ್ಕಪ್ಪ 'ನಾನು ಈಗಾಗಲೆ ಅಕ್ಕಂದಿರ, ಅಣ್ಣಂದಿರ ಮದುವೆ ಹಾಗೂ ಸಂಸಾರ ನೋಡಿದ್ದೇನೆ. ಅದೇ ನನ್ನ 7 ಮದುವೆ ಹಾಗೂ ಸಂಸಾರದ ಅನಭವ.' ಎಂದು ವಾತಾವರಣ ತಿಳಿಗೊಳಿಸಿದನು. ಆಗ ಎಲ್ಲರೂ 'ಓ ಹಾಗೋ!' ಎಂದು ನಕ್ಕು ಬಿಟ್ಟರು.

ಇದೂ ಒಂದು ಟೂ-ಇನ್-ಒನ್ ಮಂದಿರ

ಮುಂಬಯಿಯೂ ಒಂದು ಹಳ್ಳಿಯಿದ್ದಂತೆ. ಇಲ್ಲೂ ಜನರು ದೇವರು ಎಂದರೆ ಎಲ್ಲೆಂದರಲ್ಲಿ ನೆಲಕ್ಕೆ ಬೀಳುವರು. ಮಾಧ್ಯಾಹ್ನಿಕ ಪತ್ರಿಕೆಯೊಂದರಲ್ಲಿ [:http://web.mid-day…|ಇವತ್ತಿನ ಅಂಕಣ ನೋಡಿ], ಹೀಗಿದೆ: "ಸಿನೆಮಾ ಮಂದಿರವೋ ದೇವತಾ ಮಂದಿರವೋ?" ಮುಂಬಯಿ ಎಂದರೆ ಬರಿಯ ಪಾಶ್ಚಾತ್ಯ ಸಂಸ್ಕೃತಿ ಅಂತ ತಿಳಿಯಬೇಡಿ. ;)

ತೇಜೋಮಯ ಚಿಂತನೆಯೊಂದರ ತುಣುಕು

1999 ಮುಗಿಯುತ್ತಾ ಬಂದಾಗ ‘ಜನವಾಹಿನಿ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ವರ್ಗಾವಣೆಯ ಆದೇಶವೂ ತಲುಪಿತ್ತು. ನನಗೆ ಅರ್ಥವಾಗದ ಕಾರಣಗಳಿಗಾಗಿ ನನ್ನನ್ನು ಚಿಕ್ಕಮಗಳೂರಿಗೆ ವರ್ಗಾಯಿಸಲಾಗಿತ್ತು. 1999ಕ್ಕೆ ವಿದಾಯ ಹೇಳಿದ ಮರುದಿನ ಅರ್ಥಾತ್ 2000ದ ಜನವರಿ ಒಂದನೇ ತಾರೀಕಿನಂದು ನಾನು ‘ಜನವಾಹಿನಿ’ ಪತ್ರಿಕೆಯ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಸೇರಿಕೊಂಡೆ. ನಾನು ಮೊದಲು ಕೆಲಸ ಮಾಡುತ್ತಿದ್ದ ಮಂಗಳೂರಿಗೆ ಹೋಲಿಸಿದರೆ ಚಿಕ್ಕಮಗಳೂರಿನಲ್ಲಿ ಅಕ್ಷರಶಃ ಕೆಲಸವಿರಲಿಲ್ಲ. ಇಲ್ಲಿ ನನಗೊಬ್ಬ ಸಹಾಯಕ ವರದಿಗಾರರೂ ಇದ್ದುದರಿಂದ ಇಲ್ಲದ ಕೆಲಸ ಇಲ್ಲವೇ ಇಲ್ಲ ಎಂಬಂತಾಗಿತ್ತು. ಇಂಥಾ ಹೊತ್ತಿನಲ್ಲಿ ಎಲ್ಲಾ ಪತ್ರಕರ್ತರೂ ಮಾಡುವಂತೆ ನಾನೂ Special storyಗಳ ಹುಡುಕಾಟದಲ್ಲಿ ಮುಳುಗಿದೆ.

ನಾವು ಬಿಟ್ಟರೂ ನಮ್ಮನ್ನು ಬಿಡದ ಜಾತಿ

ತೇಜಸ್ವಿಯವರನ್ನು ಸ್ಮರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಅವರ ಚಿಂತನೆಗೆ ಕನ್ನಡಿ ಹಿಡಿಯುವಂತಹ ಅವರ ಈ ಬರಹ ಸದಸ್ಯರ ಮುಂದಿಡಲು ಬಯಸುತ್ತೇವೆ. ಈ ಬರಹ 'ಸಂಪದ'ದಲ್ಲಿ ಆಗಸ್ಟ್ ೨೦೦೫ರಂದು ಮೊದಲು ಪ್ರಕಟವಾಗಿತ್ತು.

ನಾವು ಬಿಟ್ಟರೂ ನಮ್ಮನ್ನು ಬಿಡದ ಜಾತಿ

ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ವಿಷಯವನ್ನು ಪ್ರಸ್ತಾಪಿಸುವುದಕ್ಕೆ ಮೊದಲು ಚಾರಿತ್ರಿಕವಾಗಿ ಮೀಸಲಾತಿ ಎದುರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯನ್ನು ಅದು ಹುಟ್ಟು ಹಾಕಿರುವ ವಿರೋಧಾಭಾಸಗಳನ್ನು ಮಂಡಿಸಬಯಸುತ್ತೇನೆ.

ಮೊಟ್ಟ ಮೊದಲನೆಯನದಾಗಿ ಮೀಸಲಾತಿಯ ಮೂಲ ಉದ್ದೇಶದ ಬಗ್ಗೆಯೇ ಗೊಂದಲಗಳು ಆರಂಭವಾಗಿರುವುದನ್ನು ಗಮನಿಸಬೇಕು. ಮೀಸಲಾತಿ ಜಾತಿಗಳನ್ನು ಸಮರ್ಥಿಸುವ ಜಾತೀಯತೆಯನ್ನು ಪ್ರೋತ್ಸಾಹಿಸುವ ಆಂದೋಳನವೇ? ಭಾರತದ ಸೆಕ್ಯುಲರ್ ಆಂದೋಲದ ಭಾಗವೇ? ಎಂಬುದನ್ನು ಈಗ ಸ್ಪಷ್ಟ ಪಡಿಸಬೇಕಾಗಿದೆ.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಶ್ರೀ ಎಲ್.ಜಿ. ಹಾವನೂರ್ ಅವರು ಸಾರ್ವಜನಿಕ ಭಾಷಣವೊಂದರಲ್ಲಿ ಜಾತಿಗಳು ಶಾಶ್ವತ, ಇವು ಸೂರ್ಯ ಚಂದ್ರರಿರುವವರೆಗೂ ಇರುತ್ತವೆ ಎಂದಿದ್ದರು. ಜಾತಿಗಳು ಭವಿಷ್ಯದಲ್ಲೂ ಶಾಶ್ವತವಾಗಿ ಉಳಿಯುತ್ತವೆಯೋ ಇಲ್ಲವೋ ಭವಿಷ್ಯವನ್ನು ಬಲ್ಲವರಾರು? ಅದನ್ನು ಹಾವನೂರರೂ ಹೇಳಲಾರರು. ಆದರೆ ಈ ಹೇಳಿಕೆಯ ಮೂಲಕ ಹಾವನೂರರು ಪ್ರತಿನಿಧಿಸಿದ ಧೋರಣೆ ಮಾತ್ರ ಕಳವಳಕಾರಿಯಾದುದು. ಮೀಸಲಾತಿಯ ಮೂಲ ಆಶಯಗಳಲ್ಲೇ ಗೊಂದಲ ಪ್ರಾರಂಭವಾಗಿರುವುದರ ಮುನ್ಸೂಚನೆ ಇದೆಂದು ನನಗನ್ನಿಸುತ್ತದೆ.

ದೊರಕಿದ ಐನ್ಸ್ಟನ್ ರ ಮೂಲ ಹಸ್ತಪ್ರತಿ

೧೯೨೫ರಲ್ಲಿ ಪ್ರಕಟವಾದ ಆಲ್ಬರ್ಟ್ ಐನ್ಸ್ಟನ್ ರ ಸಂಶೋಧನೆಯ ಮೂಲ ಹಸ್ತಪ್ರತಿ ಲೀಡನ್ ವಿಶ್ವವಿದ್ಯಾಲಯದ ಲಾರೆಂಟ್ಸ್ ಇನ್ಸ್ಟಿಟ್ಯೂಟ್ ಫಾರ್ ಥಿಯರಿಟಿಕಲ್ ಫಿಸಿಕ್ಸ್ ನಲ್ಲಿ ದೊರೆತಿದೆಯೆಂದು [:http://www.timesdai…|ಟೈಮ್ಸ್ ಡೈಲಿ ವರದಿ ಮಾಡಿದೆ]. ಆ ಹಸ್ತಪ್ರತಿಯ ವಿಷಯ "ಕ್ವಾಂಟಮ್ ಥಿಯರಿ ಆಫ್ ದ ಮೊನೊ ಅಟೊಮಿಕ್ ಐಡೀಲ್ ಗ್ಯಾಸ್" ಎಂಬುದಾಗಿತ್ತೆಂದೂ, ಡಿಸೆಂಬರ್ ೧೯೨೪ರಲ್ಲಿ ಬರೆಯಲಾಗಿತ್ತೆಂದೂ ಹೇಳಲಾಗಿದೆ.

'be yourself' ಮತ್ತು 'ಸ್ವಂತಿಕೆ ಉಳಿಸಿಕೊಳ್ಳುವುದು'

ಉಪದೇಶ ಹೇಳುವಾಗ ಜನ ಕೆಲವೊಮ್ಮೆ ಇಂಗ್ಲೀಷ್ ನಲ್ಲಿ be yourself ಅಂತ ಹೇಳುತ್ತಾರೆ. ಪಶ್ಚಿಮದಲ್ಲಿ ಈ phraseನ ಬಹಳವಾಗಿ ಉಪಯೋಗಿಸುತ್ತಾರೆ. ಒಮ್ಮೆ ವಾಕಿಂಗ್ ಗಿಗೆ ಹೋಗುವಾಗ ಈ phraseಗೆ ಕನ್ನಡ ಅನುವಾದ ಹುಡುಕುತ್ತಿದ್ದೆ. ಕನ್ನಡಕ್ಕೆ literally ಅನುವಾದಿಸುವುದಾದರೆ 'ಸ್ವೇಚ್ಛಾಹಾರಿಯಾಗಿರು' ಎನ್ನಬಹುದು. ಆದರೆ ಈ ಪದವನ್ನು ನಾವು derogatory ಆಗಿ ಬಳಸುತ್ತೇವೆ. ಭಾವಾಂತರಕ್ಕೆ ಪ್ರಯತ್ನಿಸಿದರೆ, ನಿನ್ನತನ ಬೆಳೆಸಿಕೊ ಅಥವ ಸ್ವಂತಿಕೆ ಕಾಪಾಡಿಕೋ ಅಥವ ಸ್ವಂತಿಕೆ ಉಳಿಸಿಕೊ ಎನ್ನಬಹುದು. ಆದರೆ ಈ phraseಗಳ ಅರ್ಥಗಳೂ ಕೂಡ be yourself ಗೆ ಸರಿಯಾಗಿರುವಂತಹ ಅರ್ಥವನ್ನು ಕೊಡುವುದಿಲ್ಲ. be yourself ಗೆ ಹಾಗಾದರೆ ಅರ್ಥ ಏನು? ೧. ನೀನು ಏನಾಗಬೇಕೆಂದು ಕೊಂಡಿರುವೆಯೋ ಅದನ್ನು ಸಾಧಿಸು ಅಂತಲೇ ಇದರರ್ಥ?