ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

*ಒನ್ ಬೈಟು*

ಹುಡುಗಿ ನೀ ನನ್ನ ಬಾಳ ತಕ್ಕಡಿಗೆ ಬಟ್ಟು
ತರಬೇಡ ಜೊತೆಯಲ್ಲಿ ಯಡವಟ್ಟು
ತಪ್ಪಾಗಿ ನಡೆದಾಗ ನೀ ಹಿಡಿ ನನ್ನ ಜುಟ್ಟು

ಮಲ್ಲಿಕಾ ಮೇಲೆ ಬಾರ್‌ಬಾರಿಕ್ ಕೇಸ್

ಬೊಗಳೂರು, ಜ.27- ಇತ್ತೀಚೆಗೆ ನ್ಯಾಯವಾದಿಗಳೇ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿರುವಂತೆಯೇ, ಅವರು ಕಾನೂನು ರಕ್ಷಕರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಪ್ರಕರಣವೂ ವರದಿಯಾಗುತ್ತಿದೆ. (http://bogaleragale.blogspot.com/)

ಶೇಖರ್ಪೂರ್ಣರಿಗೆ ನಿಮ್ಮ ಹಾರೈಕೆಗಳನ್ನು ಕಳುಹಿಸಿ

ಕನ್ನಡ ಸಾಹಿತ್ಯ ಡಾಟ್ ಕಾಂ ನ ಹಿಂದಿರುವ ಶೇಖರ್ಪೂರ್ಣರವರಿಗೆ ಲಘು ಹೃದಯಾಘಾತವಾಗಿದೆಯೆಂದು ಅವರ ಸ್ನೇಹಿತರಾದ ಆರೆಹಳ್ಳಿ ರವಿ ಇವತ್ತು ಫೋನ್ ಮಾಡಿ ತಿಳಿಸಿದರು. ಅವರು ಜಯದೇವದ ICUನಲ್ಲಿದ್ದಾರಂತೆ - ಈಗ ಆರೋಗ್ಯ ಸುಧಾರಿಸಿದೆಯಂತೆ.

ಯಾರಿಗಾಗಿ ಬರೆಯಬೇಕು?

ನಮಗಾಗಿ ನಾವು ಬರೆದುಕೊಳ್ಳಬೇಕಲ್ವೆ? ಎಷ್ಟೋ ಸಾರಿ ನಾವು ಆಲೋಚಿಸಿದ ವಿಷಯಗಳು, ನಾವು ಕಂಡುಕೊಂಡ ವಿಷಯಗಳು, ನಮ್ಮ ತಲೆಯಲ್ಲಿ ಸುಳಿದ ಜ್ಞಾಪಕವಿಟ್ಟುಕೊಳ್ಳಬೇಕಾದಂತ ವಿಷಯಗಳು - ಇವೆಲ್ಲವುಗಳನ್ನು ಬರವಣಿಗೆ ರೂಪದಲ್ಲಿ ಸಂರಕ್ಷಿಸಿಡಬೇಕಾಗಿ ಬರುತ್ತದಲ್ಲವೆ?

ನಾಲ್ಕನೆಯ ದೀಪಾವಳಿ

ಮಾವನ ಮನೆಯಲ್ಲಿ ಅಳಿಯನ ಮೊದಲ ದೀಪಾವಳಿ ಬಗ್ಗೆ ನೀವೆಲ್ಲ ಕೇಳಿರುವುದು ಸಾಮಾನ್ಯ. ಇಲ್ಲವೇ ನೀರು ತುಂಬುವ ಹಬ್ಬದ ದಿನ ಹಂಡೆ ಕದೆಯಲು ಹೋಗಿ 'ಮಾವನ' ಮನೆಯಲ್ಲಿ ದೀಪಾವಳಿ ಕಳೆಯುವವರ ಬಗ್ಗೆಯೂ ಪತ್ರಿಕೆಯಲ್ಲಿ ಓದಿರಬಹುದು. ಆದರೆ ನಾಲ್ಕನೆಯ ದೀಪಾವಳಿ ! ಹೌದು ಸ್ವಾಮಿ ನಾನು ಬರೆಯುತ್ತಿರುವುದು ಅಳಿಯನಾದ ಮೇಲಿನ ನನ್ನ ನಾಲ್ಕನೆಯ ದೀಪಾವಳಿಯ ಬಗ್ಗೆ.

ಪತ್ರಿಕೆಯೊಂದರಲ್ಲಿ ಪ್ರಸಿದ್ಧ ದಂಪತಿಗಳ ಮೊದಲ ದೀಪಾವಳಿಯ ಅನುಭವಗಳನ್ನು ಓದುತ್ತಾ, ನಮ್ಮ ಮೊದಲನೆಯ ದೀಪಾವಳಿಯ ಮೆಲುಕು ಹಾಕುತ್ತಿರುವಾಗ, ಮುಕ್ತ ನೋಡುವಾಗ, ಕ್ರೈಮ್ ಡೈರಿ ಜಾಹೀರಾತು ಬಂದಹಾಗೆ, ನನ್ನ ಉತ್ತಮಾರ್ಧ 'ರೀ' ಎಂದಳು. ಬಂದಿತಲ್ಲಪ್ಪಾ ಹಬ್ಬದ ಡಿಮ್ಯಾಂಡು ಎಂದು ವಿಚಲಿತನಾಗಿ ನಾನು ಅನಾಸಕ್ತಿಯಿಂದ ಹೂಗುಟ್ಟಿದೆ. 'ರೀ, ಈ ದೀಪಾವಳಿಗೆ ಮಧು ಮಾವನ ಮನೆಗೆ ಕರೆದಿದ್ದಾರೆ' ಎಂದಳು. ಹಾ! ಎಂದು ಕಿವಿ ನಿಮಿರಿಸಿದೆ.ಮಧು ನನ್ನವಳ ಅಣ್ಣ. ಈ ವರ್ಷವೇ ಮಹಿಮಾಳೊಂದಿಗೆ ಅವನ ಮದುವೆಯಾಗಿತ್ತು. ಮದುವೆಯಾದ ತಕ್ಷಣವೇ ಅವರಿಬ್ಬರೂ ಅಮೇರಿಕಾಕ್ಕೆ ಹಾರಿದ್ದರು.

'ಹೌದೂರಿ, ನಾವೂ ಅಲ್ಲಿಗೆ ಹೋಗಬೇಕಂತೆ' ಎಂದಳು. ಹೊಡೆದೆಯಲ್ಲೋ ಛಾನ್ಸು ಎಂದು ಮನಸ್ಸಿನಲ್ಲೇ ಅಂದುಕೊಂಡು, ಅದನ್ನು ಹೊರಗೆ ತೋರಿಸಿಕೊಳ್ಳದೆ, 'ನಿಮ್ಮ ಅಪ್ಪ, ಅಮ್ಮ ಹೋಗುವುದೇನೊ ಸರಿ, ನಾವ್ಯಾಕೆ ಹೋಗಬೇಕಂತೆ?' ಎಂದೆ. 'ಇಲ್ಲಾರೀ ಮಧು ಮಹಿಮಾ ಬೇರೆ ಇಲ್ಲಿ ಇಲ್ಲ. ಅದಕ್ಕೆ ನಾವು ಖಂಡಿತ ಬರಬೇಕು ಎನ್ನುತ್ತಿದ್ದಾರೆ. ನಾಳೆ ಅವರು ನಮ್ಮನ್ನು ಕರೆಯುವುದಕ್ಕೆ ಇಲ್ಲಿಗೇ ಬರ್ತಿದ್ದಾರೆ' ಎಂದಳು. ಪ್ರಾಕ್ಸಿ ಅಳಿಯನಾಗಲು ಮನದಲ್ಲೇ ತಯಾರಿ ನಡೆಸಿದೆ.