ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಶವ

ಎಂದಿಗೂ ನಗುತ ನಗಿಸುತಿಹ ನಗೆ ಬುಗ್ಗೆ ಹಿರಿಯ ಕಿರಿಯರೆಲ್ಲರ ಮನ ತಣಿಸುವ ಕಣ್ಮಣಿ ಕಪ್ಪಾದರೂ ಕಡೆದಿಟ್ಟ ಕರಿಬಂಡೆಯಂತಿಹ ತರುಣ ಸಹೃದಯರಿಗೆ ತೋರಿಸುವ ತನ್ನಲಿರುವ ಕರುಣ ಕೆಟ್ಟವರಿಗೆ ಕೆಟ್ಟವನಾಗಿ ದುಷ್ಟರ ಸದೆಬಡಿಯುವ ವೀರ ದಾಂಡಿಗರೂ ಇವನ ಹತ್ತಿರ ಬರಲು ಹೆದರಿಯಾರು ಒಳ್ಳೆಯವರಿಗೆ ಒಳ್ಳೆಯವನಾಗಿ ಸಹಾಯ ಹಸ್ತ ಚಾಚುವ ಧೀರ ಓಣಿಯ ಮಕ್ಕಳಿಗೆಲ್ಲ ಅಚ್ಚು ಮೆಚ್ಚಿನ ಅಣ್ಣ

ಕನ್ನಡ ಸಿನಿಮಾ ನೋಡಬೇಕೆ?

ಕನ್ನಡದಲ್ಲಿ ಕತೆಗಳೇ ಇಲ್ಲ. ಕನ್ನಡದಲ್ಲಿ ಒಳ್ಳೆಯ ಚಿತ್ರಕತೆ ಬರೆಯುವವರಿಲ್ಲ. ಹೀಗೆ ಕನ್ನಡ ಚಿತ್ರ ನಿರ್ಮಾಪಕರು ಹೇಳುತ್ತಾ ಹೋಗುತ್ತಾರೆ. ನಿಜಕ್ಕೂ ಕನ್ನಡದಲ್ಲಿ ಸಿನಿಮಾಗಳಿಗೆ ಅಗತ್ಯವಿರುವ ಕತೆಗಳ ಕೊರತೆ ಇದೆಯೇ? ಗಾಂಧಿನಗರದ ದೊಡ್ಡ ಸಮಸ್ಯೆ ಎಂದರೆ ಯಶಸ್ಸಿನ ಹಿಂದೆ ಸಾಗುವುದು. ಪ್ರತೀ ಯಶಸ್ಸೂ ತನ್ನಷ್ಟಕ್ಕೇ ವಿಶಿಷ್ಟ ಎನ್ನುವುದನ್ನು ಗಾಂಧಿನಗರ ಒಪ್ಪುವುದಿಲ್ಲ. ತೆಲುಗು ರಿಮೇಕ್ ಸಿನಿಮಾ ಒಂದು ಯಶಸ್ವಿಯಾದರೆ ಕನ್ನಡದ ನಿರ್ಮಾಪಕರೆಲ್ಲಾ ದಂಡು ದಂಡಾಗಿ ಆಂಧ್ರಪ್ರದೇಶ ಯಾತ್ರೆ ಆರಂಭಿಸುತ್ತಾರೆ. ಕೊನೆಗೊಮ್ಮೆ ಅವೆಲ್ಲಾ ಸೋಲುತ್ತವೆ. ಆಗ ಜ್ಞಾನೋದಯವಾದಂತೆ ವರ್ತಿಸುವ ಈ ನಿರ್ಮಾಪಕರು ಕನ್ನಡದಲ್ಲಿ ಕತೆಗಳನ್ನು ಹುಡುಕುವುದಿಲ್ಲ ಬದಲಿಗೆ ಸೀದಾ ತಮಿಳು ಸಿನಿಮಾಗಳನ್ನು ನೋಡತೊಡಗುತ್ತಾರೆ. ಹೀಗೆ ಮಲೆಯಾಳಂ, ಹಿಂದಿ ಎಲ್ಲಾ ಮುಗಿಯುವ ವೇಳೆಗೆ ಕೆಲವು ನಿರ್ಮಾಪಕರು ಚಿತ್ರ ನಿರ್ಮಿಸಲಾರದ ಮಟ್ಟಕ್ಕೆ ತಲುಪಿರುತ್ತಾರೆ. ಈ ಹಂತದಲ್ಲಿ ಕೆಲವರು 'ಸ್ಟ್ರೇಟ್ ಸಬ್ಜೆಕ್ಟ್' ಮಹಾನುಭಾವರು ಪ್ರವೇಶಿಸುತ್ತಾರೆ. ಇವರು ತಮಿಳು, ಮಲೇಯಾಳಂ ಇಲ್ಲವೇ ತೆಲುಗು ಸಿನಿಮಾಗಳ ಸಿ.ಡಿ. ನೋಡಿ ಒಂದು ಚಿತ್ರಕತೆ ರಚಿಸುತ್ತಾರೆ. ಇದಕ್ಕೆ ಪ್ರಶಸ್ತಿ ಬರಬೇಕೆಂದು ಆಶಿಸುತ್ತಾರೆ.

ಪ್ರಜಾವಾಣಿಯಲ್ಲಿ ತ ಸು ಶಾಮರಾಯರ ಬಗ್ಗೆ ಲೇಖನ

ಪ್ರಜಾವಾಣಿಯ ಇಂದಿನ ಸಾಪ್ತಾಹಿಕ ಪುರವಣಿಯಲ್ಲಿ ತ ಸು ಶಾಮರಾಯರ ಬಗ್ಗೆ ಜಿ ಎಸ್ ಶಿವರುದ್ರಪ್ಪರವರ ಲೇಖನ ಪ್ರಕಟವಾಗಿದೆ. ಓದಿ: [:http://www.prajavan…|ಲಿಂಕ್]

ಶಾಲೆಗಳಲ್ಲಿನ ಟ್ರೈಮಿಸ್ಟರ್ ಪದ್ಧತಿ

ಮಕ್ಕಳ ಮೇಲಿನ ಅನಗತ್ಯ ಭಾರವನ್ನು ತಗ್ಗಿಸುವದಕ್ಕಾಗಿ ಸರಕಾರ ಪ್ರಾಥಮಿಕ ಶಾಲೆಗಳಿಗಾಗಿ ಟ್ರೈಮಿಸ್ಟರ್ ಪಧ್ಧತಿಯನ್ನ ಜಾರಿಗೆ ತ೦ದಿದೆ. ಇದರಿ೦ದ ಒ೦ದು ದೃಷ್ಟಿಯಲ್ಲಿ ಮಕ್ಕಳ ಭಾರ ತಗ್ಗಿದೆ. ಆದರೆ ಯೋಜನೆಯನ್ನು ಕಾರ್ಯರೂಪಕ್ಕಿಳಿಸುವಲ್ಲಿ ಕೊ೦ಚ ಎಡವಟ್ಟಾದ ಕಾರಣದಿ೦ದಲೋ ಅಥವಾ "ಪ್ರತಿ ಪಾಠದ ನ೦ತರ ಪರೀಕ್ಷೆ ನಡೆಸಿ ದಾಖಲಿಸಿ" ಎನ್ನುವ ಸೂಚನೆಯಲ್ಲಿ ಪರೀಕ್ಷೆ ಎ೦ಬ ಪದವನ್ನು ಲಿಖಿತ ಪರೀಕ್ಷೆ ಎ೦ಬ ಸುಲಭ ಅರ್ಥದಲ್ಲಿ ಗ್ರಹಿಸಿದ್ದುದರಿ೦ದಲೋ ಏನೋ ಮಕ್ಕಳು ಪ್ರತಿ ದಿನ ಎರಡು ಮೂರು ಪರೀಕ್ಷೆ ಬರೆಯುತ್ತ ಹೈರಾಣಾಗುತ್ತಿದ್ದಾರೆ.ಪಠ್ಯೇತರ ಚಟುವಟಿಕೆಗಳು ಬದಿಗೆ ಸರಿದಿವೆ.ಕಲಿಕೆ ನಲಿಕೆಯಾಗುವ ಸೂಚನೆ ಹತ್ತಿರದಲ್ಲೆಲ್ಲೂ ಕಾಣುತ್ತಿಲ್ಲ

ಹಿತನುಡಿ

ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

'Joel on Software' ಕನ್ನಡದಲ್ಲಿ

([:http://msanjay.weblogs.us|ಸಂಜಯ್] ಇಂದು ಕನ್ನಡ ಕಂಪ್ಯೂಟಿಂಗ್ ಲಿಸ್ಟಿಗೆ [:http://www.sharma-home.net/pipermail/kannada/2005-September/000443.html|ಕಳುಹಿಸಿದ ಪತ್ರ]ದಿಂದ)

ಸಾಫ್ಟ್ವೇರ್ ಜಗತ್ತಿನಲ್ಲಿ ಪ್ರಸಿದ್ಧಿಯನ್ನು ಪಡೆದ 'Joel on Software' (ಜೋಎಲ್ ಎಂಬ ತಂತ್ರಜ್ಞರ ಸಾಫ್ಟ್ವೇರ್ ಬಗ್ಗೆ ಉಪನ್ಯಾಸಗಳು) ಕನ್ನಡದಲ್ಲಿ ಲಭ್ಯವಿದೆ.

ಕನ್ನಡದಲ್ಲಿ ಓದಿ ಆನಂದ ಪಡೆಯಬೇಕೆಂದು ಆಶಿಸಿದವರು [:http://kannada.joelonsoftware.com/index.html|ಈ ಲಿಂಕ್ ನೋಡಬಹುದು].

kannaDa sinema haDugaLalli AMgla pada

ಕನ್ನಡ ಚಿತ್ರಗಳಲ್ಲಿ ಎನ್ಗ್ಲಿಶ್ ಪದಗಳು ಹೊಸದೆನಲ್ಲ. ಬಹಳ ವರ್ಷದ ಹಿಂದೆ ಡಾ.ರ್‍ಆಜ್ ಅವರೆ ಕನ್ನಡದಲ್ಲಿ ಹಡಿದ್ದರೆ, ಒಂದಲ್ಲ ೨ ಹಡುಗಳು "ಇಫ಼್ ಯು ಕಮ್ ಟುಡೇ","ಲವ್ ಮಿ ಅರೆ ಹೇಟ್ ಮಿ". ಡಾ. ರ್‍ಅಜ್ ರಿಂದ ಹಿಡಿದು ಪುನಿತ್ ರವರ ವರೆಗೆ ಬಹಳ ಹಡು ಆಂಗ್ಲ ಪದಗಳನ್ನು ಹೊಂದಿದೆ. ಕನ್ನಡ ಚಿತ್ರಗಳಲ್ಲಿ ಇದರ ಅವಶ್ಯಕತೆ ಎಷಟರ ಮಟ್ಟಿಗೆ ಇದೆ?

ಬೀಸಣಿಗೆ

ಕನ್ನಡ ಆಡಿಯೋ ವೇದಿಕೆ ಮತ್ತು ಓರ್ಕುಟ್ಟಿನಲ್ಲಿ ನನಗೆ ಕೆಲವರು ಫ್ಯಾನುಗಳು ಇದ್ದಾರೆ. ಅವರುಗಳ ವಿಶ್ವಾಸಕ್ಕೆ ನನ್ನದೊಂದು ಕಾಣಿಕೆ ತಯಾರು ಮಾಡಿದ್ದೆ. ಅದು ಹೀಗಿದೆ. ನನ್ನೂರಿನಲಿ ಸೆಖೆ, ಬಲು ಸೆಖೆ ಮೈ ಅಂಟು ಅಂಟಾಗಿಸುವ ಬೆವರಿನ ಸೆಖೆ ಎಂದೂ ಎಲ್ಲೂ ಚಾಲ್ತಿಯಲ್ಲಿರಬೇಕು ಫ್ಯಾನು ಲೋಕಲ್ಲಿನಲಿ ಬೆವರು ಒರೆಸಿಕೊಳ್ಳದಿರುವುದೇ ಫ್ಯಾಷನ್ನು ೯ ರಿಂದ ೫ ರವರೆಗೆ ಇರುವುದು ಏರ್ ಕಂಡೀಷನ್ನು

ಹಿತನುಡಿ

ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.