ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗಣೇಶ ಪಂಚರತ್ನ

ಸಂಸ್ಕೃತ-ಕನ್ನಡ ಉಭಯಭಾಷಾ ಕೋವಿದರಾದ ನನ್ನ ಅಜ್ಜ ಬೀರೂರು ಚಿದಂಬರ ಜೋಯಿಸರು ವನಸುಮದಂತೆ ಬಾಳಿ-ಬದುಕಿದವರು. ಕಾಶೀಪಂಡಿತಸಭಾದಿಂದ "ಸಂಸ್ಕೃತಕವಿಕಂಠೀರವ" ಎಂಬ ಬಿರುದನ್ನೂ, ಕರ್ನಾಟಕ ಸರ್ಕಾರ-ಗಾಂಧೀ ಸ್ಮಾರಕ ನಿಧಿಯ ವತಿಯಿಂದ ಸುವರ್ಣ ಪದಕವನ್ನೂ ಗಳಿಸಿದ್ದ ಅಜ್ಜನ ಲೇಖನಿಯಿಂದ ಹಲವಾರು ಅತ್ಯುತ್ತಮ ಕೀರ್ತನೆ,ಭಜನೆ,ಕಾವ್ಯಗಳು ಹೊರಹೊಮ್ಮಿವೆ. ಇವರ ಆಯ್ದ ಭಜನೆ-ಕೀರ್ತನೆಗಳ ಸಂಕಲನವಾದ "ಭಜನಮಣಿಮಾಲಾ" ಈಗಾಗಲೇ ನಾಲ್ಕು ಮುದ್ರಣಗಳನ್ನು ಕಂಡಿದೆ. ಇದರಿಂದ ಆಯ್ದ ಗಣಪತಿಯನ್ನು ಸ್ತುತಿಸುವ ಕೀರ್ತನೆ "ಗಣೇಶ ಪಂಚರತ್ನ"ವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಸಂಪೂರ್ಣ "ಗಣೇಶ ಅಥರ್ವಶೀರ್ಷ"ದ ಸಾರವನ್ನು ಈ ಭಜನೆಯ ಐದು ಚರಣಗಳಲ್ಲಿ ಕಾಣಬಹುದಾಗಿದೆ.

ಕನ್ನಡ ದೇಸಿ ಸಂಸ್ಕೃತಿ

 

 ಕನ್ನಡ ದೇಸಿ ಸಂಸ್ಕೃತಿ ಮತ್ತು ಅಧುನಿಕತೆಯನ್ನು ಸಮನ್ವಯ ಮಾದಿಕೊಂಡರೆ ಮಾತ್ರ ಇಂದು ನಾವು ಪ್ರಸ್ತುತ ಆಗುತ್ತೇವೆ. ಇಲ್ಲವಾದರೆ ಬೇರಿಲ್ಲದ ಗಿಡದಂತಾಗುತ್ತೇವೆ. ನಮ್ಮ ಪರಂಪರೆಯಲ್ಲಿ ಅಮೂಲ್ಯ ವಿಷಯಗಳಿವೆ. ಆದರೆ ನಾವು ಅವನ್ನು ಅಸಡ್ಯೆಯಿಂದ ನೋಡುತ್ತೇವೆ.

ಇ-ಲೋಕ (ಸಂಚಿಕೆ ೨)

ಎಲ್ಲಾ ಮೊಬೈಲಿಗೂ ಒಂದೇ ಚಾರ್ಜರ್‍ ಯಾಕಿಲ್ಲ?
ಮೊಬೈಲ್ ಹ್ಯಾಂಡ್‌ಸೆಟ್‌ಗಳ ಚಾರ್ಜರ್‍ ಒಂದು ಕಂಪೆನಿಯದಕ್ಕೆ ಇನ್ನೊಂದು ಹೋದಿಕೆಯಾಗುವುದನ್ನು ನೋಡಿದ್ದೀರಾ? ಒಂದೇ ಕಂಪೆನಿಯ ಒಂದು ಹ್ಯಾಂಡ್‌ಸೆಟ್‌ಗೆ ಇನ್ನೊಂದರ ಚಾರ್ಜರ್‍ ಹೊಂದಿಕೆಯಾಗದೇ ಇರುವುದೂ ಇದೆ.ವಸ್ತುಗಳನ್ನು ತಯಾರಿಸುವಾಗ ಒಂದು ನಿಗದಿತ ಮಾನಕಕ್ಕೆ ಸರಿಯಾಗಿ ಪ್ರತಿಯೋರ್ವ ತಯಾರಕನೂ ತಯಾರಿಸಬೇಕೆಂಬ ಅಲಿಖಿತ ಒಪ್ಪಂದ ಇರುವಾಗ ಈ ತರಹೇವಾರೀ ಚಾರ್ಜರ್‌ಗಳನ್ನು ಯಾಕಾದರೂ ತಯಾರಿಸುತ್ತಾರೊ?ಮಾರುಕಟ್ಟೆಯಲ್ಲಿ ಸಿಗುವ ವಿದ್ಯುತ್ ಪ್ಲಗ್, ಸಾಕೆಟುಗಳು ಒಂದು ಕಂಪೆನಿಯದಕ್ಕೆ ಇನ್ನೊಂದು ಹೊಂದಿಕೆಯಾಗುವುದು ಸಾಮಾನ್ಯ. ಚಾರ್ಜರ್‌ಗಳನ್ನು ಯಾವುದೇ ಹ್ಯಾಂಡ್‌ಸೆಟ್ಟಿನೊಂದಿಗೆ ಬಳಸಬಹುದಾದರೆ ಅವುಗಳ ಬೆಲೆ ತಗ್ಗುವುದೇ ಅಲ್ಲದೆ,ಜನರು ಚಾರ್ಜರ್‌ಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲೂ ಬರುತ್ತದೆ.ಅನುಕೂಲತೆಯಂತೂ ಬಹಳವಾಗಿ ಹೆಚ್ಚುತ್ತದೆ. ದಕ್ಷಿಣ ಕೊರಿಯಾ ಸರಕಾರ ಚಾರ್ಜರ್‌ಗಳಲ್ಲಿ ಏಕರೂಪತೆ ಸಾಧಿಸಲು ಮೊಬೈಲ್ ಹ್ಯಾಂಡ್‌ಸೆಟ್ ತಯಾರಕರಿಗೆ ಶರತ್ತು ಹಾಕಿದೆ. ಈಗ ಚೀನಾದ ಸರದಿ. ಅಲ್ಲಿನ ಸರಕಾರವೂ ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ನಮ್ಮಲ್ಲಿ ಸರಕಾರ ಎಚ್ಚೆತ್ತುಕೊಳ್ಳಲು ತಡವಾಗದೇನೋ?
ವರ್ಷಪೂರ್ತಿ ದಿನಕ್ಕೊಂದು ಸಿನೆಮಾ
ಜೋನ್ ಮೆಕಾಸ್‌ಗೆ ಈಗ ಎಂಭತ್ತೈದು ವರ್ಷ. ಆತ ಮೂವತ್ತೈದು ವರ್ಷದವನಾಗಿದ್ದಾಗಿನಿಂದಲೂ ತನ್ನ ಮತ್ತು ತನ್ನ ಬಳಗದವರ ಜೀವನ ವಿಧಾನ,ಶೈಲಿಯನ್ನು ಚಿತ್ರೀಕರಿಸಿಕೊಂಡಿದ್ದಾನೆ. ಆತ ಜಗತ್ತನ್ನು ಬರಿಗಣ್ಣಿನಿಂದ ನೋಡಿದ್ದಕ್ಕಿಂತ ಹೆಚ್ಚು ಕ್ಯಾಮರಾ ಕಣ್ಣಿನಿಂದ ನೋಡಿದ್ದಾನೆ ಎಂದರೆ ತಪ್ಪಿಲ್ಲ.ಹೀಗೆ ಗಂಟೆಗಟ್ಟಲೆ ಹೊತ್ತಿನ ದೃಶ್ಯಗಳು ಆತನ ಬಳಿ ರಾಶಿ ಬಿದ್ದಿವೆ.ಬರುವ 2007ನ್ನು ಸರ್ವರೂ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಲು ತನ್ನ ಚಿತ್ರೀಕಕರಣವನ್ನು ಬಳಸಬೇಕೆನ್ನುವುದು ಆತನ ಯೋಜನೆ. ಚಿತ್ರೀಕರಣದ ದೃಶ್ಯಗಳನ್ನು ಬಳಸಿ ದಿನಕ್ಕೊಂದು ಚಿತ್ರವನ್ನು ಬಿಡುಗಡೆ ಮಾಡುವುದು ಆತನ ಕನಸು. ಚಿತ್ರವನ್ನು ನೋಡಲು ನೀವು ಚಿತ್ರಮಂದಿರಕ್ಕೆ ಹೋಗಬೇಕಿಲ್ಲ. ಅದನ್ನು ಆತನ ವೆಬ್‌ಸೈಟಿನಲ್ಲಿ ಆತ ಪ್ರದರ್ಶಿಸಲಿದ್ದಾನೆ.http://jonasmekas.comನಲ್ಲಿ ಆತನ ಚಿತ್ರಗಳು ವೀಕ್ಷಣೆಗೆ ಲಭ್ಯ.
ಚಿತ್ರಗಳನ್ನು ಕಿರುಪರದೆ ಮೇಲೆ ವೀಕ್ಷಿಸಿದರೂ ರಂಜನೆಗೆ ಏನೂ ಅಡ್ಡಿಯಿಲ್ಲ. ಚಿತ್ರದಲ್ಲಿ ತಲ್ಲೀನರಾದಾಗ ಗಾತ್ರ ಪ್ರಮುಖವಾಗದು ಎಂದವನ ಅಭಿಪ್ರಾಯ.ಆತನು ಹದಿನಾರು ಎಮ್‌ಎಮ್ ಫಿಲ್ಮಿನಿಂದ ಹಿಡಿದು ಆಧುನಿಕ ಕ್ಯಾಮರಾಗಳೆಲ್ಲವನ್ನೂ ಬಳಸಿದ್ದಾನೆ.ಹಳೆಯ ಚಿತ್ರಗಳೊಂದಿಗೆ ಹೊಸದಾಗಿ ಚಿತ್ರೀಕರಿಸಿದ ಭಾಗಗಳನ್ನೂ ಸೇರಿಸುವ ಯೋಜನೆ ಮೆಕಾಸ್ ಹಾಕಿದ್ದಾನೆ.ಚಿತ್ರ ನಿರ್ಮಾಣದಲ್ಲಿಯೇ ಮುಳುಗಿರುವ ಈತ ಸ್ವತಃ ಚಿತ್ರಗಳನ್ನು ನೋಡಲು ಸಮಯವಿಲ್ಲ ಎಂದು ಸಮಜಾಯಿಷಿಕೆ ಕೊಡುತ್ತಾನೆ.ನೀವೂ ಹಾಗೆಯೇ ಹೇಳಿ ಆತನ ಕಿರು ಸಿನೆಮಾಗಳನ್ನು ನೋಡದಿರಬೇಡಿ ಮತ್ತೆ!
ಮುಖದ ಅನ್ವೇಷಣೆ ಸಾಧ್ಯ
ಗೂಗಲ್ ಶೋಧ ಪುಟದಲ್ಲಿ ಚಿತ್ರಗಳನ್ನು ಹುಡುಕುವ ಸೇವೆ ಲಭ್ಯ.

ಕ್ರಿಸ್ತನಿಗೆ ಸ್ವಾಗತವಿದೆ- ಕ್ರಿಶ್ಚಿಯಾನಿಟಿಗಲ್ಲ!!!

- ಹೆಚ್. ಬಾಲಕೃಷ್ಣ ಮಲ್ಯ

(ಇದು 'ಹೊಸ ದಿಗಂತ' ಪತ್ರಿಕೆಯಲ್ಲಿ 2003ರ ಡಿಸೆಂಬರ್ ನಲ್ಲಿ ಪ್ರಕಟಗೊಂಡ ಲೇಖನ)

ಮತ್ತೆ ಕ್ರಿಸ್‌ಮಸ್ ಬ೦ದಿದೆ. ಭಾರತದಲ್ಲೂ ಕ್ರೈಸ್ತ ಮತೀಯರು ಯೇಸು ಕ್ರಿಸ್ತನ ಹುಟ್ಟು ಹಬ್ಬವನ್ನು ಸಡಗರದಿ೦ದ ಆಚರಿಸುತ್ತಾರೆ. ಯೇಸು ಕ್ರಿಸ್ತ ಓರ್ವ ಮಹಾಪುರುಷ ಎನ್ನುವುದರ ಬಗ್ಗೆ ಹಿ೦ದೂಗಳಿಗೆ ಯಾವುದೇ ತಕರಾರಿಲ್ಲ. ಜನ ಕಲ್ಯಾಣದಲ್ಲಿ ತೊಡಗಿಸಿಕೊ೦ಡ ಮಹಾಪುರುಷರು ಯಾವುದೇ ದೇಶದಲ್ಲಿ ಹುಟ್ಟಿದರೂ ಅವರನ್ನು ಗೌರವಿಸುವ ವಿಶಾಲ ಹೃದಯ ಹಿ೦ದೂಗಳಲ್ಲಿದೆ. ಯಾವುದೇ ಒಳ್ಳೆಯ ವಿಚಾರ ಯಾರಿ೦ದಲೇ ಬರಲಿ, ಯಾವ ದಿಕ್ಕಿನಿ೦ದ, ದೇಶದಿ೦ದಲೇ ಬರಲಿ ಅದನ್ನು ಸ್ವಾಗತಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವ ಸಹಿಷ್ಣುತಾ ಭಾವನೆ ಹಿ೦ದೂಗಳಲ್ಲಿದೆ.

ಆದರೆ ಹಿ೦ದೂಗಳಿಗೆ ತಕರಾರು ಇರುವುದು, ತಾವು ಏಸು ಕ್ರಿಸ್ತನ ಸ೦ದೇಶವನ್ನು ಸಾರುವ ಅಧಿಕೃತ ಗುತ್ತೇದಾರಿಕೆಯನ್ನು ಹೊ೦ದಿದ್ದೇವೆ೦ದು ಹೇಳುತ್ತಾ ಭಾರತದಲ್ಲಿ ಸೇವೆ, ಶಿಕ್ಷಣಗಳಲ್ಲಿ ಮುಖವಾಡದ ಅಡಿಯಲ್ಲಿ ನಿರ೦ತರವಾಗಿ ಮತಾ೦ತರ ಚಟುವಟಿಕೆಗಳಲ್ಲಿ ತೊಡಗಿರುವ ಕ್ರೈಸ್ತ ಚರ್ಚ್ ಹಾಗೂ ಅದರ ಮಿಷನರಿಗಳ ಬಗ್ಗೆ.

(ಓದಿ - oarjuna.blogspot.com)

ಅನುಭವ - ಆಲೋಚನ-ಭಾಷೆ

ಆಲೋಚನೆ ಮತ್ತು ಭಾವನೆ ಇವೆರಡೂ ಒಟ್ಟಿಗೆ ಇರಲು ಸಾಧ್ಯವೇ ಎನ್ನುವುದು ನನ್ನನ್ನು ಬಹು ದಿನಗಳಿಂದ ಕಾಡುತ್ತಿರುವ ಪ್ರಶ್ನೆ. ಆಲೋಚನೆಯ ಬದಲು ಅನುಭವ ಎಂಬ ಪದವನ್ನೂ ಸೇರಿಸಬಹುದು. ಆಲೋಚನೆಯಲ್ಲಿ ನಿರತವಾದಾಗ ಉಳಿದ ಎರಡೂ ಆಗದೆ ಇರಬಹುದೇ? ಇದು ಕೇವಲ ಸಾಹಿತ್ಯವನ್ನು ರಚಿಸುವವರ ಸಮಸ್ಯೆಯಲ್ಲ. ನಮ್ಮ ಸ್ವಂತ ಬದುಕಿನಲ್ಲೂ ಈ ಸವಾಲು ಹುಟ್ಟುತ್ತದೆ. ಕೇವಲ ಇಂದ್ರಿಯಗಳ ನೆಲೆಯಲ್ಲಿ ಭಾಷೆಯ ಹಂಗೂ ಇಲ್ಲದೆ ಅನುಭವಿಸುತ್ತೇವಲ್ಲ ಅದು ಮಾತ್ರ ನಿಜವೇ? ಸರಿಯಾದ ಉತ್ತರ ನನಗೂ ತಿಳಿಯದು. ಸಾಹಿತ್ಯವಿರಲಿ, ಮಾತಿರಲಿ ಎಲ್ಲವೂ ವಾಸ್ತವದ ಪ್ರತಿಬಿಂಬವೋ ಮರುಸೃಷ್ಟಿಯೋ? ಓದುಗರ ಪ್ರತಿಕ್ರಿಯೆಗಳು ಈ ಚಚೆಯನ್ನು ಬೆಳೆಸಬಹುದು.

ಕೆ.ಎಸ್‌. ನಿಸಾರ್‌ ಅಹಮದ್‌ ಸಂದರ್ಶನ

ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ನಿಮಗೆ ದೊರಕಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

-ನನ್ನ ಬದುಕಿನ ಅತ್ಯಂತ ಸಾರ್ಥಕ ಕ್ಷಣಗಳಲ್ಲಿ ಇದೂ ಒಂದು. ಇದಕ್ಕೆ ಮೂರ್ನಾಲ್ಕು ಕಾರಣಗಳಿವೆ. ನಾಲ್ಕು ವರ್ಷಗಳ ಹಿಂದೆಯೇ ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಅಂತ ವದಂತಿಯಾಗಿತ್ತು. ತುಂಬಾ ಜನ ದೂರವಾಣಿ ಮೂಲಕ ಶುಭ ಕೋರಿದ್ದರು ಕೂಡ. ಸಹಜವಾಗಿ ತುಂಬಾ ಖುಷಿಯಾಗಿತ್ತು. ಆದರೆ, ಅದಾದ ಕೆಲವೇ ಗಂಟೆಗಳಲ್ಲಿ ನಾನು ಆಯ್ಕೆಯಾಗಿಲ್ಲ ಅಂತ ಗೊತ್ತಾಗಿ ನಿರಾಸೆ ಆಯ್ತು. ಆಸೆ ಹುಟ್ಟಿಸಿ ಆಮೇಲೆ ಹೀಗಾದರೆ ಎಲ್ಲೋ ಎಂಥಾ ಮನುಷ್ಯನಿಗಾದ್ರೂ, ಎಂಥಾ ಸ್ಥಿತಪ್ರಜ್ಞನಿಗಾದ್ರೂ ಸ್ವಲ್ಪ ಬೇಸರ ಆಗುತ್ತೆ. ಆದ್ರೂ ಸಾವರಿಸಿಕೊಂಡೆ. ಹಾಗೆ ನೋಡಿದ್ರೆ ಇಷ್ಟರವರೆಗೆ ನನಗೆ ಬಂದಿರುವಂಥ ಪ್ರಶಸ್ತಿಗಳೆಲ್ಲ ಆಯಾಚಿತವಾಗಿ ಬಂದಂಥವು. ಯಾರ ಕೈಕಾಲು ಹಿಡಿದು ಪಡೆದುಕೊಂಡದ್ದೇನಲ್ಲ. ಹಾಗಾಗಿ ಬರಬೇಕಾಗಿದ್ದು ಬಂದೇ ಬರುತ್ತೆ ಅನ್ನೋ ನಂಬಿಕೆ ಇತ್ತು. ದೈವ ಕೃಪೆಯಿಂದ ಎಂಥಾ ಹೊತ್ತಲ್ಲಿ ಬಂದಿದೆ ಅಂದರೆ, ಕರ್ನಾಟಕ ಸುವರ್ಣ ರಾಜ್ಯೋತ್ಸವದ ಹೊನ್ನಸಗೆ ಆಚರಿಸುತ್ತಿದೆ. ಶಿವಮೊಗ್ಗದಲ್ಲಿ- ನಾನು ಎಲ್ಲಿ ಅತ್ಯಂತ ಮಹತ್ವದ, ಪುಷ್ಕಳವಾದ, ಧಾರಾಳವಾದ ಕವಿತೆಗಳನ್ನು ಬರೆದನೋ ಅಲ್ಲಿ ಸಮ್ಮೇಳನ ನಡೆಯುತ್ತಿದೆ. ಶಿವಮೊಗ್ಗ ನನ್ನ ಎರಡನೇ ಸೃಜನಶೀಲತೆಯ ತವರು ಅಂತ ಹೇಳಿಕೊಂಡಿದ್ದೇನೆ. ಬೆಂಗಳೂರು ಬಿಟ್ಟರೆ ಶಿವಮೊಗ್ಗ ನನಗೆ ಅತ್ಯಂತ ಪ್ರಿಯವಾದ ಊರು. ಏಕೆಂದರೆ ನನಗೆ ಅಲ್ಲಿ ಏಕಾಂತ ಸಿಕ್ತು. 1967ರ ಹೊತ್ತಲ್ಲಿ ಆಟೋಗಳು ಇರ್ಲಿಲ್ಲ, ಬರೀ ಜಟಕಾ ಗಾಡಿಗಳಿದ್ವು. ಶಿವಮೊಗ್ಗ ತನ್ನ ಹಳ್ಳಿ ಸೊಗಡಿನ ಮುಗ್ಧತೆ ಕಾಪಾಡಿಕೊಂಡು ಬಂದಿತ್ತು. ಇವತ್ತು ಹಿರಿಯಕ್ಕನ ಚಾಳಿ ಅಂತ ಬೆಂಗಳೂರಿನ ಚಾಳಿ ಬಡಿದಿದೆ ಅದಕ್ಕೆ. ಆ ಕಾಲದಲ್ಲಿ ತುಂಬಾ ನಿರಾಳವಾಗಿತ್ತು. ಕೈಚಾಚಿದಲ್ಲಿ ಗದ್ದೆ, ತೋಟ, ಹೊಳೆ, ಕಾಲುವೆ, ಪಕ್ಷಿಗಳು.... ಅತ್ಯಂತ ಆನಂದ ನೀಡುವ, ಪ್ರಶಾಂತ ವಾತಾವರಣ. ಹಾಗಾಗಿ ಶಿವಮೊಗ್ಗದಲ್ಲಿ ಈ ಸ್ಥಾನ ಸಿಕ್ಕಿದ್ದಂತೂ ನನಗೆ ಉಡುಗೊರೆ ಕೊಟ್ಟ ಹಾಗಿದೆ. ಇನ್ನೊಂದು ವಿಚಾರವೆಂದರೆ, ಶಿವಮೊಗ್ಗದಲ್ಲಿ ನಾನು ಯಾವ ಕೋಣೆಯಲ್ಲಿ ಕುಳಿತು ಸಾಮಾನ್ಯ ಶಿಷ್ಟ ಜನ, ವಿಮರ್ಶಕರು ಇವತ್ತಿಗೂ ಒಳ್ಳೆಯ ಪದ್ಯಗಳು ಅಂತ ಮೆಚ್ಚಿಕೊಂಡಿರುವ ಕವಿತೆಗಳನ್ನು ಬರೆದೆನೋ ಆ ಕೋಣೆಗೂ ಈಗ ಸಮ್ಮೇಳನ ನಡೆಯುತ್ತಿರುವ ವೇದಿಕೆಗೂ ಒಂದೇ ರಸ್ತೆ ಅಡ್ಡ. ಇದು ಕಾಕತಾಳೀಯವೋ, ಯೋಗಾಯೋಗವೋ ಗೊತ್ತಿಲ್ಲ. ಯಾವುದೋ ಅಲೌಕಿಕ ಶಕ್ತಿಯ ಕೃಪೆ ಇರುವುದಂತೂ ನಿಜ. ಆ ಶಕ್ತಿಗೆ ನನ್ನ ನಮಸ್ಕಾರ.

ಸಂಕ್ಷಿಪ್ತ ಗುರುಚರಿತ್ರೆ...

ಸಂಕ್ಷಿಪ್ತ ಗುರುಚರಿತ್ರೆ. ಇದು ಚಿತ್ರದುರ್ಗ ಮತ್ತು ಸುತ್ತಮುತ್ತ ಪ್ರಚಲಿತದಲ್ಲಿರುವ ಪ್ರಾರ್ಥನಾ ಪ್ರಾಕಾರ. ನೀವು ಭಕ್ತಿಯಿಂದ ಭಜಿಸಿದರೆ ನಿಮಗೆ ಸನ್ಮಂಗಳಗಳು ಉಂಟಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಹರಿ ಓಂ. ಪ್ರತಿದಿನವೂ ಪ್ರಾತಃಕಾಲ ಮತ್ತು ಸಾಯಂಕಾಲ ಇದನ್ನುಭಕ್ತಿಯಿಂದ ಪಠಿಸುವುದರಿಂದ ಎಲ್ಲಾ ಇಷ್ಠಾರ್ಥಗಳೂ ನೆರವೇರುತ್ತವೆ.

 

ಆರು ವರ್ಣಿಪರಯ್ಯ ಗುರು ನಿನ್ನ ಮಹಿಮೆಯಾ ಪಾರವಿಲ್ಲದ ನಿನ್ನ ಗುಣ ಚರಿತವನ್ನಾ

ವರ ವೇದಗಳು ತಾವು ನಿರುತ ವರ್ಣಿಸಿ ದಣಿದು ಕರ ಮುಗಿದು ನಿಂತವೈ ನೀರಜಾಕ್ಷ

ಸರಸಿ ಜಾಸನನಾಗಿ ವಿರಚಿಸಿದೆ ಜಗವನ್ನು ಹರಿಯ ರೂಪದಿ ಬಂದು ನಿರುತದೀ ಪೊರೆದೇ

ಹರನ ರೂಪವ ತಾಳ್ದು ಹರಣ ಕಾರ್ಯವ ಗೈದೆ ಮೂರು ರೂಪದಿ ಬಂದು ಗುರುದತ್ತನಾದೆ

ಕುವೆಂಪು ಹುಟ್ಟಿದ ಊರಿಗೆ, ಮೂವತ್ತು ವರ್ಷಗಳಾದ ಮೇಲೆ ಮತ್ತೆ ಹೋದಾಗ

ಕುವೆಂಪು - ಚಿತ್ರ ಕೃಪೆ: ಕುವೆಂಪು ಡಾಟ್ ಕಾಂ ಕುವೆಂಪು ಹುಟ್ಟಿದ ಊರಿಗೆ ಮೂವತ್ತು ವರ್ಷವಾದ ಮೇಲೆ ಹೋಗಿದ್ದು. ಕುವೆಂಪು ತೀರಿಕೊಂಡರು ಅನ್ನುವ ಸುದ್ದಿ ತಿಳಿದ ದಿನ ಮತ್ತೆ ಆಮೇಲೆ ಹಲವು ದಿನ ನಿಷ್ಕಾರಣವಾಗಿಯೋ ಅನ್ನುವ ಹಾಗೆ ಮನಸ್ಸು ಮಂಕಾಗಿತ್ತು. ನನಗೇನು ಕುವೆಂಪು ಗೊತ್ತಿರಲಿಲ್ಲ. ಅವರ ಜೊತೆ ಮಾತಾಡಿದವನೂ ಅಲ್ಲ. ಆದರೂ ಅವರ ಕಾದಂಬರಿ ಓದಿ ನನ್ನದೇ ಆ ಲೋಕ ಅನ್ನುವ ಹಾಗೆ ಆ ಜನರನ್ನೂ, ಕಾಡನ್ನೂ, ಒಂಟಿ ಮನೆಗಳನ್ನೂ, ಕತ್ತಲು, ಸೂರ್ಯೋದಯ, ಸಂಜೆ, ಎಲ್ಲವನ್ನೂ ಒಳಗೇ ನಿರ್ಮಿಸಿಕೊಂಡಿದ್ದೆ. ಬೇರೆ ಯಾವ ಲೇಖಕರೂ ಹೀಗೆ ಒಂದು ಜಗತ್ತನ್ನೇ ನನಗೆ ಉಡುಗೊರೆಯಾಗಿ ಕೊಟ್ಟಿರಲಿಲ್ಲ. ಅಂಥ ಒಂದು ಜೀವ ಇಲ್ಲವಾಯಿತೇ ಎಂದು ಆಗ ಮಂಕಾಗಿದ್ದೆ ಅನ್ನಿಸುತ್ತದೆ.
ಇರಲಿ. ಇಪ್ಪತ್ತೈದು ವರ್ಷಗಳ ಹಿಂದೆ ಶಿವಮೊಗ್ಗದ ಸುತ್ತಮುತ್ತಲ ಕಾಡುಗಳಲ್ಲಿ ಅಲೆದಾಡಿದ್ದೆಲ್ಲ ಈಗ ಮತ್ತೆ ನೆನಪಿಗೆ ಬಂದಿತ್ತು. ಕುಪ್ಪಳಿಯಲ್ಲಿ ಐದು ದಿನ ಕಳೆಯುತ್ತೇನೆ, ನನ್ನೊಡನೆ ಎಳೆಯ ಮನಸ್ಸುಗಳೂ ಇರುತ್ತವೆ. ಕುವೆಂಪು ಓಡಾಡಿದ ಜಾಗಗಳಲ್ಲಿ ಇವತ್ತಿನ ಕಿರಿಯರೊಡನೆ ಓಡಾಡುತ್ತೇನೆ ಅನ್ನುವ ಹುಮ್ಮಸ್ಸಿನಲ್ಲಿಯೇ ಕುಪ್ಪಳಿಗೆ ಹೋದೆ.
ಹಿಂದೆ ಇದ್ದದ್ದು ಈಗ ಇಲ್ಲ ಎಂದು ಹಲುಬುವುದರಲ್ಲಿ ಅರ್ಥವಿಲ್ಲ. ಇವತ್ತಿನ ಜನಕ್ಕೆ ಇವತ್ತು ಸಿಕ್ಕದ್ದೇ ನಿಜ ಅಂತಲೂ ಗೊತ್ತಿದೆ. ತೀರ್ಥಹಳ್ಳಿಯಲ್ಲಿ ನದಿಯ ದಂಡೆಯ ಮೇಲೇ ಇರುವ ಪ್ರವಾಸಿ ಬಂಗಲೆಗೆ ಹೋದಾಗ ಬೆಳಕು ಹರಿಯುತ್ತಿತ್ತು. ಎಳೆ ಬಿಸಿಲಲ್ಲಿ ತುಂಗೆ ಹರಿಯುವುದು ಕಾಣುತ್ತಿತ್ತು. ಕೇಳುತ್ತಿರಲಿಲ್ಲ. ನದಿಗೆ ಅಡ್ಡಲಾಗಿ ಕಟ್ಟಿದ್ದ ದೊಡ್ಡ ಸೇತುವೆ ಬಿಳಿಯ ಬಣ್ಣ ಬಳಿದುಕೊಂಡು ನದಿಗಿಂತ ತಾನೇ ಗಮನಸೆಳೆಯುವಂತೆ ನಿಂತಿತ್ತು. ಬಿಳಿಯ ಕಮಾನು ಸೇತುವೆ ಕಾಮನಬಿಲ್ಲು ಅಲ್ಲ. ಕಾನೂರು ಹೆಗ್ಗಡತಿಯಲ್ಲಿ ಓದಿದ್ದ ಕಲ್ಲು ಸಾರ ನೆನಪಿಗೆ ಬಂತು. ಹಾಗೆಯೇ ತುಂಗೆಯ ಒಡಲಲ್ಲಿ ನದಿಗೆ ಬಿದ್ದ ಕನಸಿನಂತೆ ಇದ್ದ ಕಲ್ಲುಬಂಡೆಗಳು, ಶತಮಾನಗಳ ಕಾಲ ನೀರಿನ ವಾಹಕ್ಕೆ ಸಿಕ್ಕು ಕಲ್ಪಿಸಿಕೊಳ್ಳಲೂ ಆಗದ, ಆದರೆ ನೋಡಿದ ಕೂಡಲೆ ಇವು ಇರಬೇಕಾದ್ದೇ ಹೀಗೆ ಎಂಬಂಥ ಆಕಾರ ಪಡೆದುಕೊಂಡಿದ್ದ ಕಲ್ಲುಗಳ ಸಂತೆಯನ್ನೂ ನೋಡಲಿಲ್ಲ. ನೆನಪಿನಂದಲೇ ಪುಳಕಿತನಾಗಿ ಕುಪ್ಪಳಿಗೆ ಕಾರಿನಲ್ಲಿ ಆರಾಮವಾಗಿ ಹೋದೆ.
ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ ದಾರಿಯ ಎರಡು ಬದಿಯೂ ಹಸಿರೇನೋ ಧಾರಾಳವಾಗಿ ಕಾಣುತ್ತದೆ. ಪರವಾಗಿಲ್ಲ. ಕಾಡು ಇನ್ನೂ ಇದೆ ಮೂವತ್ತು ವರ್ಷವಾದರೂ ಅಂತ ಅಂದುಕೊಂಡೆ. ಸಿಕ್ಕಿತು. ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಗೆ ದಾರಿ ಅನ್ನುವ ಬೋರ್ಡು. ಅದೇ ಮಲೆನಾಡಿನ ಮನೆಯಂಥ ಹೊಸ ಕಟ್ಟಡ. ಮೂವತ್ತು ವರ್ಷದ ಹಿಂದಿನ ನೆನಪು ಕೈ ಕೊಟ್ಟಿತ್ತು. ಅದೇ ಕುವೆಂಪು ಮನೆ ಅಂದುಕೊಂಡೆ. ಅಲ್ಲ, ಅದು ಬೇರೆ ಇದೆ, ಇದು ಪ್ರತಿಷ್ಠಾನದ ಕಟ್ಟಡ. ಅಲ್ಲಿ ನಾನು ಮತ್ತು ಗೆಳೆಯ ಕಲಾವಿದ ಚಂದ್ರಶೇಖರ್ ಸಿಗರೇಟು ಸೇದಲು ಕಾಂಪೌಂಡಿನ ಆಚೆಗೆ ಬಂದೆವು. ಕುವೆಂಪು ಮನೆಯ ಆವರಣದಲ್ಲಿ ಸಿಗರೇಟು ಸೇದಲು ಮನಸ್ಸಾಗಲಿಲ್ಲ. ವಾಚ್ ಮನ್ ಒಬ್ಬಾತ ಇದ್ದ. ಒಮ್ಮೆಗೇ ಒಂದು ನೂರೈವತ್ತು ಹುಡುಗಿಯರು, ಮೂವತ್ತು ನಲವತ್ತು ಗಂಡಸರನ್ನು ಆ ಜಾಗದಲ್ಲಿ ಕಂಡು ಆಶ್ಚರ್ಯವಾಗಿತ್ತೊ? ತೀರ್ಥಹಳ್ಳಿಯ ಬಸ್‌ಸ್ಟ್ಯಾಂಡಿನಲ್ಲೂ ಎಲ್ಲ ಆಟೋದವರೂ ಕುಪ್ಪಳಿಗಾ ಅಂತ ಅವತ್ತು ಬಸ್ಸಿಳಿದವರನ್ನು ವಿಚಾರಿಸುತ್ತಿದ್ದರಲ್ಲ! ಯಾವ ಊರು ಅಂತ ವಿಚಾರಿಸಿಕೊಂಡ. ಮೈಸೂರು ಅಂದೆ. ಚಂದ್ರಶೇಖರ ನನ್ನದು ಬೆಂಗಳೂರು ಅಂದರು. ನೀಟಾಗಿ ಶೇವ್ ಮಾಡಿದ್ದ ಮುಖ. ಮೂವತ್ತರ ಸಮೀಪದ ವಯಸ್ಸು. ಅಚ್ಚುಕಟ್ಟಾಗಿ ಕ್ರಾಪ್ ಮಾಡಿಕೊಂಡಿದ್ದ ತಲೆ. ಪಕ್ಕಾ ಮಲೆನಾಡಿನ ಕೊಂಚ ವಿದ್ಯಾವಂತ ಅನ್ನಿಸುವಂಥ ಮುಖ. ದೊಡ್ಡ ಮನುಷ್ಯರು ಸಾರ್ ಕುವೆಂಪು. ಅವರಿದ್ದ ಜಾಗ ಎಲ್ಲ ಹೋಗಿ ಬನ್ನಿ ಅಂದ. ಆಮೇಲೆ ಇದ್ದಕ್ಕಿದ್ದ ಹಾಗೇ ಕುವೆಂಪು ಪದ್ಯಗಳನ್ನು ಒಂದಾದಮೇಲೆ ಒಂದರಂತೆ ಅದೇ ಆಗ ಓದಿಕೊಂಡವನಂತೆ ಹೇಳ ತೊಡಗಿದ. ಎಪ್ಪತ್ತು ವರ್ಷಗಳ ಹಿಂದಿನ ಪದ್ಯಗಳು ಈ ವಾಚ್‌ಮನ್‌ ಮಾನಪ್ಪನ ಬಾಯಲ್ಲಿ ಕೇಳುತ್ತ ಕಾಡಿಗೆಲ್ಲ ಜೀವ ಬಂದಂತೆ ಅನಿಸಿತು.