ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಚನ ಚಿಂತನೆ: ಅಲ್ಲಮ: ಕೊಟ್ಟ ಕುದುರೆ

ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ ಇದು ಕಾರಣ ನೆರೆ ಮೂರು ಲೋಕವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ ಬಹುಶಃ ಮನುಷ್ಯ ಮಾತ್ರವೇ ತಾನು ಏನೋ ಅಗಬೇಕೆಂದು ಬಯಸುತ್ತ, ಆಗಲಿಲ್ಲವೆಂದು ಕೊರಗುತ್ತ ಇರುವ ಪ್ರಾಣಿ. ನನಗೆ ಸಿಕ್ಕ ಕುದುರೆಗಿಂತ ಇನ್ನು ಬೇರೆ ಕುದುರೆ ಸಿಕ್ಕಿದ್ದರೆ ಎಂದು ಬಯಸುತ್ತ, ಅಂಥ ಬಯಕೆಯ ಕುದುರೆ ಸಿಕ್ಕರೆ ಎಂದು ಆಶಿಸಿ ಹಲ್ಲಣವನ್ನು ಬೆನ್ನಮೇಲೆ ಹೊತ್ತು ತಿರುಗುತ್ತ ಇರುತ್ತೇವೆ. ಇದು ವೀರರ ಲಕ್ಷಣವೂ ಅಲ್ಲ, ಧೀರರ ಲಕ್ಷಣವೂ ಅಲ್ಲ.

ಸಂಪದ ಏನು ಮಾಡಬಹುದು

ಗೆಳೆಯರೆ, ಸಂಪದ ಒಂದು ಕುತೂಹಲಕಾರಿ ಪ್ರಯತ್ನ. ಇದು ಕೇವಲ ಸಾಹಿತ್ಯಕ್ಕೆ ಎಂದು ಲಿಮಿಟ್ ಆಗುವ ಬದಲು ಕನ್ನಡ, ಕನ್ನಡದ ಬದುಕು, ಭಾಷೆ, ಅಷ್ಟೇ ಯಾಕೆ, ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ಕನ್ನಡದ ಮುಖಾಂತರ ತಿಳಿಯುವ ತಿಳಿಸುವ ತಾಣ ಆಗಬೇಕು. ಪ್ರಶ್ನೆ ಉತ್ತರದಂಥ ಒಂದು ಮೂಲೆ ಇಲ್ಲಿ ಆದರೆ ಎಷ್ಟು ಚೆನ್ನ. ಈ ಸೈಟಿನ ನೋಡುಗ/ಓದುಗರು ಕೇಳುವ ಪ್ರಶ್ನೆಗಳು ಮತ್ತು ಅವುಗಳಿಗೆ ಒಂದಲ್ಲ ಹಲವು ಉತ್ತರಗಳು ಸಿಗುವಂತಾದರೆ ದಿನವೂ ಹೊಸತು ಇರುವಂತಾಗುತ್ತದೆ. ಬರೆಯುವ ತೊಡಕು: ಇನ್ನೊಂದು ಉಪಯುಕ್ತ ಶೀರ್ಷಿಕೆ ಆಗಬಹುದು. ಬಹಳ ಜನ ಬರೆಯುವ ಬಗ್ಗೆ ಏನೇನೋ ತೊಂದರೆಗಳನ್ನು ಎದುರಿಸುತ್ತಾರೆ. ಅವುಗಳನ್ನು ಇಲ್ಲಿ ಹಂಚಿಕೊಂಡು ನಮ್ಮ ಸಂಪದ ಸಂಪದ್ಭರಿತವಾಗುವಂತೆ ಮಾಡಬಹುದು. ಈ ವಿಳಾಸ: ಕನ್ನದದ ಜನರ ಕುತೂಹಲ ತಣಿಸುವಂಥ, ಉಪಯುಕ್ತವಾದ ಈ ತಾಣಗಳ ವಿಳಾಸಗಳನ್ನು ಪೋಸ್ಟ ಮಾಡಬಹುದು. ಇದನ್ನು ಓದಿ: ಓದುಗ/ನೋಡುಗರು ಇತರ ಸಹ ಜಾಲಿಗರಿಗೆ ಸೂಚಿಸಬಯಸುವ ಓದು ಸಾಮಗ್ರಿಗಳು ಉಪಯುಕ್ತವಾಗುತ್ತವೆ ಏನು ಬೇಕು: ಸಂಪದದಲ್ಲಿರಬೇಕಾದ ಸಂಗತಿಗಳ ಬಗ್ಗೆ ಬಯಕೆ ಪಟ್ಟಿ, ವಿಷ್ ಲಿಸ್ಟ್, ಅನ್ನುತ್ತಾರಲ್ಲ ಅದು ಇದ್ದರೆ ಚೆನ್ನ.

sampada blogs?

namaskara,


  • matte nimma HELP vibhAga'dalli ellAdru unicode baLasi kannada type maDod hege aMta tiLstira dayviTTu?

  • tuMba oLLe kelsa neevu mADtirodu - nAne ee tarada oMdu aMtarjAla tANa shuru mADbeku aMta bahaLa AkAMkshe ittu, ashTral neeve maDidira. mattomme nanna tuMbu hrudaya abhinaMdanegaLu yaar-yaar idara hiMde idaro avrgella! 

ಭಾವನ ತ೦ಗಿ!

ಆ ದಿನ ಬಸ್ಸಿನಲ್ಲಿ ತು೦ಬಾ ಜನವಿದ್ದರೂ, ನನಗ೦ತೂ ಕೂರಲು ಜಾಗ ಸಿಕ್ಕಿತ್ತು. ಅದೂ ಒಬ್ಬ ಸು೦ದರ ಹುಡುಗಿಯ ಪಕ್ಕ. ನಾನು ಪಟ್ಟಣಕ್ಕೆ ಆಗಾಗ ಹೋಗುತ್ತಿದ್ದುದರಿ೦ದ,ಬಸ್ಸಿನಲ್ಲಿ ನನ್ನ ಪರಿಚಯದವರು ಮತ್ತು ಗೆಳೆಯರ ಭೇಟಿಯಾಗುತ್ತಿತ್ತು. ಆ ದಿನವೂ ಯಾವುದೋ ಬಸ್ ನಿಲ್ದಾಣದಲ್ಲಿ ಗೆಳೆಯನೊಬ್ಬ ಬಸ್ ಏರಿ, ನಾನು ಕುಳಿತುಕೊ೦ಡ ಸೀಟಿನ ಹತ್ತಿರವೇ ಬ೦ದು ಯೋಗಕ್ಷೇಮ, "ಎಲ್ಲಿಗೆ ಪ್ರಯಾಣ" ಎ೦ಬಿತ್ಯಾದಿ ಮಾತುಕತೆಯ ನ೦ತರ, "ಇದು ಯಾರೋ?" ಎ೦ದು ನನ್ನ ಹತ್ತಿರ ಕುಳಿತ ಹುಡುಗಿಯ ಬಗ್ಗೆ ಕೇಳಿದ.

ವಚನ ಚಿಂತನೆ: ಅಲ್ಲಮ: ನಾಲ್ಕು ದ್ವೀಪಗಳು

ವಚನಗಳು ಕೇವಲ ಧರ್ಮದ ಕಂತೆಗಳಲ್ಲ. ಚೆಲುವಾದ ಕವಿತೆಗಳೂ ಅಲ್ಲ. ನಮ್ಮ ಡೈಲಿ ಲೈಫಿಗೆ ಅಗತ್ಯವಾದ ಚಿಂತನೆಯ ಆಹಾರಗಳು. ವಚನಗಳನ್ನು ನಾನು ಅರ್ಥಮಾಡಿಕೊಂಡ ರೀತಿಯಲ್ಲಿ ನಿಮ್ಮೊಡನೆ ದಿನವೂ ಒಂದಿಷ್ಟು ಹಂಚಿಕೊಳ್ಳುವುದು ಈ ಮಾಲೆಯ ಉದ್ದೇಶ. ಇಂದು ಅಲ್ಲಮನ ವಚನ ಕುರಿತು ಬರೆದಿದ್ದೇನೆ. ಅಲ್ಲಮ ಹನ್ನೆರಡನೆಯ ಶತಮಾನದಲ್ಲಿ ಬದುಕಿದ್ದ ಅನುಭಾವಿ, ಚಿಂತಕ. ತನು ಒಂದು ದ್ವೀಪ ಮನ ಒಂದು ದ್ವೀಪ

ಶುದ್ಧ ಕನ್ನಡ?

ನ್ನಡದ ಆಡು ಮಾತು ಬೇರೆ ಭಾಷೆಯ ಅನೇಕ ಪದಗಳನ್ನು ಸಹಜವಾಗಿ ಒಳಗೊಳ್ಳುತ್ತದೆ. ಮಾತನಾಡುವಾಗ, ಕೇಳಿಸಿಕೊಳ್ಳುವಾಗ ಇದು ವಿಚಿತ್ರ ಅನ್ನಿಸುವುದಿಲ್ಲ. ಆದರೆ ಬರೆಯುವ ಕನ್ನಡ ಮಾತ್ರ ಅತ್ಯಂತ ಪ್ಯೂರ್ ಆಗಿರಬೇಕು ಅನ್ನುವ ಭ್ರಮೆ ನಮಗಿದೆ. ಹೌದೆ?

ಹೊಸ ಸದಸ್ಯರಿಗೆ ಸ್ವಾಗತ

ಹೊಸ ಸದಸ್ಯರಿಗೆ ಸ್ವಾಗತ!

ಈ ತಾಣವನ್ನು ಉಪಯೋಗಿಸುವ ಮುನ್ನ FAQ ಓದಿ. ಉಪಯೋಗಿಸುವಾಗ ಏನಾದರೂ ತೊಂದರೆ ಕಂಡು ಬಂದರೆ ಅಥವಾ ಉಪಯೋಗಿಸುವಲ್ಲಿ ಏನಾದರೂ ಕ್ಲಿಷ್ಟಕರವೆನಿಸಿದರೆ ತಪ್ಪದೇ ಗಮನಕ್ಕೆ ತನ್ನಿ. ನೀವಿಲ್ಲಿಗೆ ಬಂದಿರುವಿರಾದ್ದರಿಂದ ನಿಮಗಾಗಲೇ 'ಸಂಪದ'ದ ಬಗ್ಗೆ ತಿಳಿದಿರುವುದೆಂದು ಭಾವಿಸುತ್ತೇನೆ.

ಕರಾಳದಿನ

ಓದುಗರೇ, ನೋಡಿ ಒಂದು ಮಳೆ ಹೇಗೆ ಇಡೀ ನಗರವನ್ನು ಮತ್ತು ಅಲ್ಲಿರುವ ೧ ಕೋಟಿಗೂ ಮಿಕ್ಕ ಜನರನ್ನು ನಿರ್ವಿಣ್ಣರನ್ನಾಗಿ ಮಾಡಿ 'ಹುಲುಮಾನವ' ಎಂಬ ಮಾತನ್ನು ಹೇಗೆ ಸ್ಪಷ್ಟೀಕರಿಸಿತು ಅಂತ. ಒಂದೇ ಏಟಿಗೆ ನರಕದರ್ಶನ. ನಿಸರ್ಗ ತನ್ನ ವಿಶ್ವರೂಪವನ್ನು ತೋರಿಸಿದೆ. ನಾನು ನಿಮ್ಮ ಮುಂದೆ ಇಡುತ್ತಿರುವ ಸತ್ಯ - ನಾನು ಕಂಡದ್ದು, ಅನುಭವಿಸಿದ್ದು.

ಈ ಸಮಯಕ್ಕೆ ತಕ್ಕನಾದ ಒಂದು ಹಿಂದಿ ಹಾಡು - 'ರೋಜ್ ಶಾಮ್ ಆತೀ ಥಿ ಮಗರ್ ಓ ವೈಸಾ ನ ಥಿ'.

ಕರಾಳದಿನ

ಓದುಗರೇ, ನೋಡಿ ಒಂದು ಮಳೆ ಹೇಗೆ ಇಡೀ ನಗರವನ್ನು ಮತ್ತು ಅಲ್ಲಿರುವ ೧ ಕೋಟಿಗೂ ಮಿಕ್ಕ ಜನಗಳನ್ನು ನಿರ್ವಿಣ್ಣರನ್ನಾಗಿ ಮಾಡಿ ಹುಲುಮಾನವ ಎಂಬ ಮಾತನ್ನು ಹೇಗೆ ಸ್ಪಷ್ಟೀಕರಿಸಿತು ಅಂತ. ಒಂದೇ ಏಟಿಗೆ ನರಕದರ್ಶನ. ನಿಸರ್ಗ ತನ್ನ ವಿಶ್ವರೂಪವನ್ನು ತೋರಿಸಿದೆ. ನಾನು ನಿಮ್ಮ ಮುಂದೆ ಇಡುತ್ತಿರುವ ಸತ್ಯ - ನಾನು ಕಂಡದ್ದು, ಅನುಭವಿಸಿದ್ದು. ಈ ಸಮಯಕ್ಕೆ ತಕ್ಕನಾದ ಒಂದು ಹಿಂದಿ ಹಾಡು - ರೋಜ್ ಶಾಮ್ ಆತೀ ಥಿ ಮಗರ್ ಓ ವೈಸಾ ನ ಥಿ.

ಹಿಗಿಟ್ಟಾ

#ಮಲೆಯಾಳಂ ಮೂಲ : ಎನ್. ಎಸ್. ಮಾಧವನ್

ಕನ್ನಡ ಅನುವಾದ : ಎನ್. ಎ. ಎಂ. ಇಸ್ಮಾಯಿಲ್

e-mail: namismail @ rediffmail.com

***

ಮೂಲ ಕರ್ತೃ ಪರಿಚಯ

ಎನ್.ಎಸ್. ಮಾಧವನ್ ಮಲೆಯಾಳಂನ ಅತಿ ವಿಶಿಷ್ಟ ಕತೆಗಾರ. ಆಧುನಿಕ ಮಿಥಕಗಳನ್ನು ಸೃಷ್ಟಿಸುವ ಅವರ ಕಥನ ಶೈಲಿಗೆ ಮಾರು ಹೋಗದವರೇ ಇಲ್ಲ. ಪ್ರಸ್ತುತ ಕತೆ ಮಲಯಾಳ ಮನೋರಮಾ ಆರಿಸಿದ ಶತಮಾನದ ಹತ್ತು ಅತ್ಯುತ್ತಮ ಮಲೆಯಾಳಂ ಕತೆಗಳಲ್ಲಿ ಒಂದು. 1948ರಲ್ಲಿ ಹುಟ್ಟಿದ ಮಾಧವನ್ ವಿದ್ಯಾರ್ಥಿಯಾಗಿದ್ದಾಗಲೇ ಕತೆಗಳ ಮೂಲಕ ಹೆಸರು ಮಾಡಿದ್ದರು. 1970ರಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಮಾತೃಭೂಮಿ' ಪತ್ರಿಕೆ ನಡೆಸಿದ ಸ್ಪರ್ಧೆಯಲ್ಲಿ ಮಾಧವನ್ ಅವರ ಕತೆ 'ಶಿಶು' ಮೊದಲ ಬಹುಮಾನ ಪಡೆದಿತ್ತು.. 1981ರಲ್ಲಿ ಮೊದಲ ಕಥಾಸಂಕಲನ 'ಚೂಳೈಮೇಡಿಲೆ ಶವಂಙಳ್' ಪ್ರಕಟವಾಯಿತು . 1991ರಲ್ಲಿ 'ಹಿಗಿಟ್ಟಾ', 1996ರಲ್ಲಿ 'ತಿರುತ್ತ್', 2000ದಲ್ಲಿ 'ಪರ್ಯಾಯ ಕಥಗಳ್' ಬೆಳಕು ಕಂಡವು. ಎರಡು ವರ್ಷದ ಹಿಂದಷ್ಟೇ ಇವರ ಕಾದಂಬರಿ ಲಂತನ್ ಬತ್ತೇರಿಯಿಲೆ ಲೂತಿಯಾನಿಗಳ್ ' ಪ್ರಕಟವಾಗಿದೆ. 1975ರಲ್ಲಿ ಐಎಎಸ ಪಾಸ್ ಮಾಡಿದ ಮಾಧವನ್ ಈಗ ಬಿಹಾರ್ ಕೇಡರ್ ನ ಹಿರಿಯ ಐಎಎಸ್ ಅಧಿಕಾರಿ.

***