ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೆನಪು

ಹೇ ರಾಧೆ,

ನಿನ್ನ ಬಳೆಗಳ ಮೆಲ್ದನಿಗಳಿಗೆ
ಝೇಂಕರಿಪ ಬೆಳ್ಳಿ ಕಾಲ್ಗೆಜ್ಜೆ,
ನನ್ನ ಮುರಳೀ ಗಾನಕ್ಕೆ ನಿನ್ನ ಗಾನವು ಬೆರೆತು

ಯಕ್ಷಲೋಕದ ಅನರ್ಘ್ಯ ರತ್ನ

ಶೇಣಿಯವರು ಕಾಲವಾದಾಗ ಕಡೇಪಕ್ಷ ಮುಖ್ಯಮಂತ್ರಿಗಳ ಕಚೇರಿಯಿಂದ ಒಂದು ಸಂತಾಪ ಸಂದೇಶ ಕೂಡ ಬರಲಿಲ್ಲ. ಅಗಲಿದ್ದು ಸಾಮಾನ್ಯ ವ್ಯಕ್ತಿತ್ವವಲ್ಲ. ಕರ್ನಾಟಕ ಮತ್ತು ಕೇರಳ ಸರ್ಕಾರಗಳಿಂದಲೂ ರಾಜ್ಯ ಪ್ರಶಸ್ತಿ ಪುರಸ್ಕೃತ, ಎರಡು ಡಾಕ್ಟರೇಟ್‌ ಪ್ರಬಂಧಗಳ ಸೃಷ್ಟಿಗೆ ವಸ್ತುವಾದ ಸಾಧಕ, ಜೊತೆಗೆ ಸ್ವತಃ ವಿಶ್ವ ವಿದ್ಯಾಲಯವೊಂದರಿಂದ ಗೌರವ ಡಾಕ್ಟರೇಟ್‌ ಪಡೆದ ಪ್ರತಿಭೆ. ಆದರೂ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿಯಾದಿಯಾಗಿ ಯಾರೊಬ್ಬರಿಂದಲೂ ಒಂದು ಪ್ರತಿಕ್ರಿಯೆ ಬರಲಿಲ್ಲ!

`ಗದಾಯುದ್ಧ'ದ ಪ್ರಸಂಗದಲ್ಲಿ ಸರ್ವಸ್ವವನ್ನೂ ಕಳೆದುಕೊಂಡು ವೈಶಂಪಾಯನ ಸರೋವರಕ್ಕೆ ಧಾವಿಸುವ ಮುನ್ನ ಧುರ್ಯೋಧನನಾಗಿ ಶೇಣಿಯವರು ಆಡುವ ಮಾತು:

`ಪಾಂಡವರೇ ಗೆದ್ದುಕೊಳ್ಳಲಿ ರಾಜ್ಯವನ್ನು. ಆದರೆ ರಾಜ ಸಭೆಗೆ ಭೀಷ್ಮರಂಥ ಹಿರಿಯರನ್ನು ಎಲ್ಲಿಂದ ತಂದಾರು? ದ್ರೋಣನಂಥ ಆಚಾರ್ಯರನ್ನು ಎಲ್ಲಿಂದ ತಂದಾರು?... ಎಲ್ಲಾ ಅನರ್ಘ್ಯ ರತ್ನಗಳು. ನನ್ನ ಕಾಲದಲ್ಲಿ ಮಾತ್ರ ಇದ್ದವುಗಳು.'

ಒಂದೆಡೆ ಸಂತಾಪ. ಇನ್ನೊಂದೆಡೆ ರಾಜ್ಯ ಪಾಂಡವರ ಪಾಲಾದರೂ ಅವರ ರಾಜಸಭೆಗೆ ಹಿಂದಿನ ವೈಭವ ಇರುವುದಿಲ್ಲ ಎಂಬ ಖಳನಾಯಕನ ಸಂತೃಪ್ತಿ.

ಶೇಣಿಯವರನ್ನು ಕಳೆದುಕೊಂಡ ಯಕ್ಷಗಾನವೂ ಹಾಗೆಯೇ. ಯಕ್ಷರಂಗ ಮುಂದಿನ ಜನಾಂಗಕ್ಕೂ ಉಳಿದೀತು. ಅದು ಎಲ್ಲಾ ಸವಾಲುಗಳನ್ನೂ ಎದುರಿಸಿ ಉಳಿದಿದೆ. ಆದರೆ ಅಲ್ಲಿ ಶೇಣಿಯವರಂಥ ಭೀಷ್ಮರು ಇರುವುದಿಲ್ಲ. ಅವರು ನಮ್ಮ ಕಾಲಕ್ಕೆ ಮಾತ್ರ ಇದ್ದ ಅನರ್ಘ್ಯ ರತ್ನ.

ನಾವೆಲ್ಲ ಯಕ್ಷಗಾನವನ್ನು ನೋಡಿ ಅರ್ಥೈಸುವ ವೇಳೆಗಾಗಲೇ ಶೇಣಿಯವರು ಮೇಳದಿಂದ ನಿವೃತ್ತಿ ಪಡೆದಿದ್ದರು. ಯಕ್ಷಗಾನದಂಥ ಸಾಂಪ್ರದಾಯಿಕ ಮನರಂಜನಾ ಮಾಧ್ಯಮಗಳಿಂದ ವಿಮುಖರಾಗುತ್ತಿ ರುವ ತಲೆಮಾರೊಂದರಲ್ಲೂ ಆ ಕಲೆಯಲ್ಲಿ ಆಸಕ್ತಿ ಉಳಿಸಿಕೊಂಡಿರುವ ನಾವು ಶೇಣಿಯವರ ಮಾತುಗಾರಿಕೆಯನ್ನು ಕೇಳಿದ್ದು ಬಹುತೇಕ ಯಕ್ಷಗಾನ ಕ್ಯಾಸೆಟ್‌ಗಳ ಮೂಲಕ. ಶೇಣಿಯವರನ್ನು ಹಾಗೆಯೇ ಪೌರಾಣಿಕ ಪಾತ್ರಗಳನ್ನು ಅವರ ಮಾತುಗಾರಿಕೆಯ ಮೂಲಕವೇ ಕಂಡೆವು ಮತ್ತು ಅಭಿಮಾನಿಗಳಾದೆವು.

ಬೇಂದ್ರೆ:ಪ್ರಾರ್ಥನೆ: ಕನ್ನಡ, ಸಂಸ್ಕೃತ

ಮೊದಲು ಸುಪ್ರಸಿದ್ಧವಾದ ಈ ಪ್ರಾರ್ಥನಾ ಶ್ಲೋಕವನ್ನು ನೋಡಿ:
ಓಂ ಸಹನಾವವತು ಸಹನೌ ಭುನಕ್ತು
ಸಹವೀರ್ಯಂಕರವಾವಹೈ
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ

ಇದು ಕನ್ನಡದಲ್ಲಿ ಹೊಸ ಹುಟ್ಟು ಪಡೆದಿರುವ ಬಗೆಯನ್ನು ನೋಡಿ:

ಕೂಡಿ ಓದಿ, ಕೂಡಾಡಿ, ಕೂಡಿ
ಅರಿಯೋಣ ಕೂಡಿ ಕೂಡಿ
ಕೂಡಿ ತಿಂದು, ಕೂಡುಂಡು ಕುಡಿದು
ದುಡಿಯೋಣ ಕೂಡಿ ಕೂಡಿ

ಸಾವಿನ ಚೇತೋಹಾರಿ ಆರಂಭ

ಇದೊಂದು ವಿಶಿಷ್ಟ ಪ್ರವಾಸ ಕಥನ. ಕೇವಲ ಸ್ಥಳಪುರಾಣಕ್ಕೋ, ಊಟ ತಿಂಡಿಗಳ ವರ್ಣನೆಗೋ ಕಥನವನ್ನು ಸೀಮಿತಗೊಳಿಸದೆ ಆದರೆ ಅವನ್ನೂ ಉಳಿಸಿಕೊಂಡು ಫಿನ್ಲೆಂಡ್ ಕನ್ನಡದ ಸಂಸ್ಕೃತಿಗಳ ನಡುವಣ ತುಲನೆ ಮತ್ತು ವಿಶ್ಲೇಷಣೆಗಳ ಜತೆಗೆ ಸಾಗುವ ಕಥನ ಇದು. ಇದು ಕನಿಷ್ಠ ಹತ್ತು ಭಾಗಗಳಲ್ಲಿ ಪ್ರಕಟವಾಗಲಿದೆ.

-ಸಂಪದ ನಿರ್ವಾಹಕ ಬಳಗ

ಸ್ಥಳ: ಫಿನ್ಲೆಂಡ್. ೨೦೦೪ರ ಏಪ್ರಿಲ್ ಎರಡು. ಸ್ಟುಡಿಯೊ ಒಳಕ್ಕಿರಲಿ ಫಿನ್ಲೆಂಡ್ ದೇಶದೊಳಕ್ಕೆ ಕಾಲಿಟ್ಟೇ ಕೇವಲ ಎರಡು ಗಂಟೆ ಕಾಲವಾಗಿತ್ತು. ಫೋನ್ ರಿಂಗಾಯಿತು. ಪರವಾಗಿಲ್ಲ. ಹೊರಕ್ಕೆ ಹೋಗುವ ಸೌಲಭ್ಯವಿನ್ನೂ ದೊರೆತಿರದಿಲ್ಲದಿದ್ದರೂ ಒಳ ಕರೆಗಳು ಬರುತ್ತಿವೆಯಲ್ಲ. ೨೦೦೧ರಲ್ಲಿ ಇಲ್ಲಿಗೆ ಬಂದಾಗ ಪರಿಚಯವಾಗಿದ್ದ ಛಾಯಾಗ್ರಾಹಕ ಸಕ್ಕರಿ ಇರಬಹುದೆ? ಈ ಸ್ಟುಡಿಯೊ-ಇನ್-ರೆಸಿಡೆನ್ಸಿಯ ಮುಖ್ಯಸ್ಥೆ, ಸಕ್ಕರಿಯ ಮಡದಿ ಇರ್ಮೆಲಿ ಕೊಕ್ಕೊ ಇರಬಹುದೆ? ಸದ್ಯದ ಮುಖ್ಯಸ್ಥೆ, ಕಲಾವಿದೆ ಮಿನ್ನ ಇರಬಹುದೆ?

ಫಿನ್ಲೆಂಡ್ ಒಂದು ವಿಹಂಗಮ ನೋಟಯಾರಾದರೇನು. ಫೋನ್ ರಿಂಗಾಯಿತಲ್ಲ, ಅಷ್ಟೇ ಸಾಕು. ಇಡೀ ಒಂದೆರೆಡು ಗಂಟೆ ಕಾಲ ಸಂಜೆಯ ಮಳೆ, ಮಂಜು, ಕಾರ್ಮೋಡದಲ್ಲಿ ಫೋನಿಗಾಗಿ, ಈಗಾಗಲೇ ಗೊತ್ತಿರುವ ರಸ್ತೆಗಳನ್ನೆಲ್ಲ ಅಲೆದು ಸಾಕಾಗಿತ್ತು. ಫೋನ್ ಬೂತುಗಳೇನೋ ದಂಡಿಯಾಗಿತ್ತು. ಆದರೆ ಅದಕ್ಕೆ ಬೇಕಾದ ಕಾರ್ಡ್ ಕೊಳ್ಳುವುದು ಹೇಗೆಂದು ಗೊತ್ತಿರಲಿಲ್ಲ. ಕಾರ್ಡ್ ಮಾಡುವ ಅಂಗಡಿಗಳೆಲ್ಲ ಮುಚ್ಚಿಬಿಟ್ಟಿದ್ದವು. ಯಾರನ್ನಾದರೂ ಕೇಳೋಣವೆಂದರೆ ತಪ್ಪು ವಿಳಾಸ ಹೇಳಲಿಕ್ಕಾದರೂ ಇದೇನು ತಮಿಳುನಾಡೆ? ಅಥವ ಯಾವಾಗೆಂದರೆ ಆವಾಗ, ಎಲ್ಲೆಂದರಲ್ಲಿ ಜನರು ಕಣ್ಣಿಗೆ ಬೀಳಲು ಇದೇನು ಬೆಂಗಳೂರೆ? ಕಣ್ಣಿಗೆ ಬೀಳಲೂ ಒಂದು ಹೊತ್ತುಗೊತ್ತಿರುವ'ಶಿಸ್ತಿನ ಜನ ಇವರು

ಬದುಕೆಂಬುದು ಮಿಥ್ಯ... ಸತ್ಯ?

"ನೀನು ದೊಡ್ದವನಾದಗ ಎನಾಗುತ್ತೀಯಾ?" ಎಂಬ ಪ್ರಶ್ನೆ ಕೇಳಿದಾಗ ಮಗು, ತನ್ನ ಮುಕ್ತ ಮನಸ್ಸಿನಿಂದ "ನಾನು ಏರೊಪ್ಲೇನ್ ಓಡಿಸ್ತೇನೆ!" ಎಂದು ಉತ್ತರಿಸಿತು... ಇದನ್ನು ಕೇಳಿದಾಗ, ನನ್ನ ಮನಸ್ಸಿನಲ್ಲಿ ಪ್ರಶ್ನೆಗಳ ಅಲೆಗಳು ಬಡಿದಂತಾಯಿತು! ಕೆಲವನ್ನು ಈ ಲೆಖನದಲ್ಲಿ ವ್ಯಕ್ತಪಡಿಸುತ್ತಿದ್ದೇನೆ!

ಬ್ಲಾಗ್ ಸ್ಪಾಟ್ ಬ್ಲಾಕ್ ಬಗ್ಗೆ

ಬ್ಲಾಗ್ ಸ್ಪಾಟ್ ಗಳನ್ನು ಬ್ಲಾಕ್ ಮಾಡಿ ಕೇಂದ್ರ ಸರಕಾರ ಬಹಳ ದೊಡ್ಡ ತಪ್ಪು ಮಾಡಿತು.

ಜನತೆಯ ಸ್ವಾತಂತ್ರವನ್ನು ಕಿತ್ತಿಕೊಂಡಂತೆ ಆಗ್ಗಿತ್ತು. ಯಾರು ಬ್ಲಾಗ್ ಮುಲಕ ಏನು ತಿಳಿಸುವುದಿಲ್ಲ. ಇದ್ದನ್ನು ಸಕಾ೯ರ ಒಪ್ಪಿಕೊಳ್ಳ ಬೇಕು.

ಸಂಪದದಲ್ಲಿ ಮತ್ತಷ್ಟು ಹೊಸತು

ಇಂದಿನಿಂದ ಸಂಪದ ಕುರಿತು ಚರ್ಚೆಗಾಗಿ [:http://www.sampada.info/cgi-bin/mailman/listinfo|ಹೊಸ ಅಂಚೆಪೆಟ್ಟಿಗೆಗಳು (Mailing lists) ಲಭ್ಯ]. ಸಂಪದವನ್ನು ಪ್ರತಿನಿತ್ಯ ಸಾವಿರಾರು ಓದುಗರಿಗೆ ತಲುಪಿಸುವಲ್ಲಿ, ಮತ್ತಷ್ಟು ಉತ್ತಮಪಡಿಸುವಲ್ಲಿ ಸಾಕಷ್ಟು ಶ್ರಮ ಹಿನ್ನೆಲೆಯಲ್ಲಿ ನಡೆಯುತ್ತ ಬಂದಿದೆ.

ಸರ್ವರ್‌ ನಿರ್ವಹಣೆ, ಆಕರದ ಬದಲಾವಣೆಗಳು - ಸಂಪದದೊಂದಿಗೆ ನಡೆದುಕೊಂಡು ಬಂದಿರುವ [:http://learning.sampada.net|ಲರ್ನಿಂಗ್ ಸೆಂಟರ್], [:http://kannada.sf.net|ಕನ್ನಡ ಲೋಕಲೈಸೇಶನ್] ಹಾಗೂ [:http://planet.sampada.net|ಪ್ಲಾನೆಟ್ ಕನ್ನಡಗಳಂತಹ] ತಾಣಗಳು ಹಾಗೂ ಪ್ರಾಜೆಕ್ಟುಗಳ ನಿರ್ವಹಣೆ - ಇವೆಲ್ಲ ನಮ್ಮಲ್ಲಿ ಕೆಲವರು ದಿನನಿತ್ಯದ ಕೆಲಸದ ಮಧ್ಯೆ ಬಿಡುವುಮಾಡಿಕೊಂಡು ನಡೆಸಿಕೊಂಡು ಹೋಗುತ್ತಿರುವ ಕೆಲಸಗಳು. ಇನ್ನು ಮುಂದೆ ಈ ಕೆಲಸಗಳನ್ನು ಉತ್ಸಾಹವಿದ್ದವರೊಂದಿಗೆ ಹಂಚಿಕೊಂಡು ನಿಜವಾದ ಸಮುದಾಯವೊಂದರಂತೆ ಮುಂದುವರೆಯುವ ಕನಸು ಹೊತ್ತು ಹೊಸ ಅಂಚೆಪಟ್ಟಿಗಳನ್ನು ಪ್ರಾರಂಭಿಸಲಾಗಿದೆ.

ಈ ಹಿಂದೆ ಹಲವರು ಸಂಪದದ ಹಿನ್ನೆಲೆಯ ಕೆಲಸಗಳಲ್ಲಿ ಭಾಗವಹಿಸಲು ಆಸಕ್ತಿ ತೋರಿ ನನಗೆ ಪತ್ರ ಬರೆದದ್ದುಂಟು. ದಿನನಿತ್ಯದ ಈ-ಮೇಯ್ಲುಗಳ ರಾಶಿಯಲ್ಲಿ ಓದಿ ಉತ್ತರಿಸಬೇಕೆಂದುಕೊಂಡ ಪತ್ರಗಳು ಹಾಗೆಯೇ ಕರಗಿ ಹೋಗಿ ಕಳೆದುಹೋದವು. ಉತ್ಸಾಹ ತೋರಿದವರು ಅದರಿಂದ ನಿರಾಶರಾಗದೆ ಈ ಅವಕಾಶ ಬಳಸಿಕೊಂಡು ಸಮುದಾಯದೊಂದಿಗೆ ಕೂಡಿ ಪಾಲ್ಗೊಳ್ಳುವರೆಂದು ಆಶಿಸುತ್ತೇನೆ.

ಹೊಸ ಅಂಚೆಪಟ್ಟಿಗಳು ಇಂತಿವೆ:

ನಾನು ಒಬ್ಬ ಹೊಸ ಸಧಸ್ಯನಾಗಿದ್ದೇನೆ

ನಾನು ಇಂದು ಹೊಸ ಸಧಸ್ಯ ನಾಗಿದ್ದೇನೆ.

ನಾನು ಸುಲೇಖ.ಕಾಂ ನಲ್ಲಿ ಆಂಗ್ಲ ದಲ್ಲಿ ಬರಹಗಳನ್ನು ಬರೆಯುತ್ತಿದ್ದೇನೆ.

ಉತ್ತರ ಕರ್ನಾಟಕದಲ್ಲಿ ಕನ್ನಡ-೪

....ಇದಕ್ಕೆ ಕಾರಣಗಳನ್ನು ಶ್ರೀ ದ. ರಾ. ಬೇಂದ್ರೆಯವರು ಹೀಗೆ ಕೊಡುತ್ತಾರೆ .
"ಎಷ್ಟೋ ದಿವಸಗಳಿಂದ ರಾಜಾಶ್ರಯವನ್ನು ಕಳೆದುಕೊಂಡು ತೊಳಲುತ್ತಿರುವ ಕರ್ನಾಟಕವು ಇಂಗ್ಲೀಷರ ಆಳ್ವಿಕೆಯಲ್ಲಿ ಭಿನ್ನಭಿನ್ನವಾಗಿರುವದು ಮೊದಲನೆಯದು. ಪೇಶ್ವೆಯರ ಆಳ್ವಿಕೆ ತೀರಿದ ಮೇಲೆ ಆರೇ ಅಮಲದಾರರ ಆಳ್ವಿಕೆಯು ಎರಡನೆಯದು.ರಾಜಾಶ್ರಯ ದೊರೆತ ಮೈಸೂರ ಕನ್ನಡವು ಯಾವುದೋ ಕಾರಣದಿಂದ ನಮ್ಮ ಕೂಡ ಬಳಕೆ ಮಾಡದೇ ಇದ್ದದ್ದು ಮೂರನೆಯ ಕಾರಣ. ಕಾಲಪ್ರತಿಕೂಲತೆಯು ನಾಲ್ಕನೇ ಕಾರಣ. ಮೊದಲನೆಯ ತರಗತಿಯ ಕರ್ತೃತ್ವಶಾಲಿಗಳು ಹುಟ್ಟದಿದ್ದುದು ಐದನೇಯ ಕಾರಣ".