ಅಡುಗೆ ಮಾಡುವ ವಿಧಾನ - ಒಂದು ಚುಟುಕ
ಅಡುಗೆ ಮಾಡುವ ವಿಧಾನ (ರಾಶಿ ಅವರ ನಗೆಹನಿಯ ಸ್ಫೂರ್ತಿಯಿಂದ)
ಊರಿಗೆ ಹೋಗುವ ಮುನ್ನ ಹೇಳಿಕೊಡುತ್ತಿದ್ದಳು
- Read more about ಅಡುಗೆ ಮಾಡುವ ವಿಧಾನ - ಒಂದು ಚುಟುಕ
- Log in or register to post comments
ಅಡುಗೆ ಮಾಡುವ ವಿಧಾನ (ರಾಶಿ ಅವರ ನಗೆಹನಿಯ ಸ್ಫೂರ್ತಿಯಿಂದ)
ಊರಿಗೆ ಹೋಗುವ ಮುನ್ನ ಹೇಳಿಕೊಡುತ್ತಿದ್ದಳು
ಗೆಳೆಯರೆ,
ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಮುಂಬೈ-ಪುಣೆ, ಪುಣೆ ನಗರದ ಕನ್ನಡಾಸಕ್ತರನ್ನು ಮುಖಾಮುಖಿಯಾಗಿಸುವ ಉದ್ದೇಶದಿಂದ, ಮೊಟ್ಟಮೊದಲ ಭೇಟಿಯನ್ನು ಬರುವ ಭಾನುವಾರ ಹಮ್ಮಿಕೊಂಡಿದೆ.
ಹಸಿವು
--- ಜಯಂತ ಮಹಾಪಾತ್ರ (Hunger)
ದೇಹದಾಹದ ಸೆಳವು ನನ್ನಲ್ಲಿ ಇಷ್ಟೆಂದು ನಂಬಲಾರೆ;
ಮೀನುಗಾರನೆಂದ ಅಸಡ್ಡೆಯಿಂದ: ಬೇಕಾ ನಿನಗೆ ಅವಳು.
ನರಜಾಲದಂತೆ ಅವನ ಹಿಂದೆಳೆವ ಬಲೆ; ಶಬ್ದಗಳೇ
ತನ್ನ ಉಳಿವಿನ ಇರಾದೆ ಪೂಜ್ಯಗೊಳಿಸಿತೆಂಬಂತಿದ್ದ ಅವನು.
ಕಣ್ಣೊಳಗೆ ಬಿಳಿಯೆಲುಬು ತೊನೆಯುವುದ ಕಂಡೆ.
ಕರೀಂ ಲಾಲಾ ತೆಲಗಿ ಮಂಪರು ಪರೀಕ್ಷೆಯಲ್ಲಿ ಬಾಯಿ ಬಿಟ್ಟರೂ ಅದನ್ನು ಅಲ್ಲಗಳೆಯುತ್ತಿರುವ ನಮ್ಮ ಲಜ್ಜೆಗೆಟ್ಟ ರಾಜಕಾರಣಿಗಳಿಗೆ ಏನು ಹೇಳೋಣ. ಬುದ್ಧಿಜೀವಿಗಳೆನಿಸಿಕೊಂಡು ಸಣ್ಣ ಸಣ್ಣ ವಿಚಾರಕ್ಕೆ ಕಚ್ಚಾಡುವ ಇವರು ಈಗ ಜನಸಾಮಾನ್ಯ ನಿಗೆ ಇದರ ನಿಜ ಸ್ಥಿತಿಯ ಅರಿವು ಮೂಡುವಂತೆ ಬರೆಯುವದು ಅವಶ್ಯವಲ್ಲವೆ. ಇಲ್ಲದಿದ್ದರೆ ಸಾಮಾನ್ಯರು ಇದನ್ನು ರಾಜಕೀಯ ಪಿತೂರಿ ಎಂದು ತಿಳಿಯುವ ಅಪಾಯ ಇಲ್ಲವೆ?
ರಾತ್ರಿ ಊಟವಾದ ಮೇಲೆ, ಕೂಡಲೆ ಮಲಗದೇ, ಏನಾದರೂ ಕೆಲಸಕ್ಕೆ ಬೇಕಾದ್ದು- ಬೇಡದ್ದು ಹರಟುತ್ತ ಬಿದ್ದುಕೊಳ್ಳುವುದು, ಗಂಟೆ ಹನ್ನೆರಡು ಹೊಡೆದ ನಂತರವೇ, "ಏ ಸಾಕು ಮಲ್ಗನ್ರೋ" ಎಂದು ನಿದ್ರಿಸುವುದು, ನಮ್ಮ ಜನ್ಮಕ್ಕಂಟಿದ ವ್ಯಾಧಿ. ನಾವು ಹಿಂದಿನ ದಿನ ತಡರಾತ್ರಿಯವರೆಗೆ, ಏನು ಹರಟುತ್ತಿದ್ದೆವು ಎಂಬುದು, ದೇವರಾಣೆಯಾಗಿಯೂ ನಮಗೆ ಮರುದಿನ ಬೆಳಗ್ಗೆ ನೆನೆಪಿರುವುದಿಲ್ಲ. ಬಹುತೇಕ, ನಮ್ಮಂತಹ ಹೆಚ್ಚಿನ ಬ್ರಹ್ಮಚಾರಿ ಹುಡುಗರ ಹಣೆಬರಹ ಇದೇ ಇರಬೇಕು!
[ನನಗನ್ನಿಸಿದ್ದು]: ಹೇಳಿ ಹೋಗೋ ಕಾರಣ....?
ದಿನ ಬೆಳಗಾದ್ರೆ ಎ೦ದಿನ೦ತೆ ಎದ್ದೇಳ್ತೀವಿ, ಕಣ್ಣರೆಪ್ಪೆ ಮುಚ್ಚಿ ತೆಗೆಯೋದು ಗೊತ್ತಾಗದ ಹಾಗೆ ತಯಾರಾಗಿ ಕೆಲಸಕ್ಕೆ ಹೋಗೋವಾಗ, ಮನೆಯಲ್ಲಿರೋರಿಗೆ ಹೋಗಿ ಬರ್ತೀನಿ ಅ೦ತ ಭರವಸೆ ಕೊಟ್ಟು ಹೊರಡ್ತೀವಿ. ಆ ಭರವಸೆಯನ್ನ ಎಷ್ಟರಮಟ್ಟಿಗೆ ಉಳಿಸಿಕೊಳ್ತೀವಿ ಅನ್ನೋ ಭರವಸೆ ನಮ್ಮಲ್ಲಿ ಇಲ್ಲದ ಹಾಗೆ ಮಾಡಿದೆ ಈಗಿನ ಬೆ೦ಗಳೂರಿನ ಪರಿಸ್ಠಿತಿ.
ಇದು ನಾನು ಬಹಳ ಹಿಂದೆ ಓದಿ ಇಂದಿಗೂ ನೆನಪಿನಲ್ಲುಳಿದ , ಅ.ರಾ.ಸೇ ಅವರ ಒಂದು ಹಾಸ್ಯ ಲೇಖನ.
ಒಂದು ಕಾರು ಪ್ರಯಾಣದ ಮಧ್ಯೆ ಒಂದು ಹಳ್ಳಿಯಲ್ಲಿ ಕೆಟ್ಟು ನಿಲ್ಲುತ್ತದೆ. ಕಾರಿನ ಮೇಲೆ ಚೆನ್ನೈ ಸಂಗೀತ ಅಕಾಡೆಮಿ ಎಂಬ ಬೋರ್ಡ್ ಇದೆ. ಅಲ್ಲೊಬ್ಬ ಸಂಗೀತಾಭಿಮಾನಿ. ಅವನು ಈ ಕಾರಿನ ಪ್ರಯಾಣಿಕರಿಗೆ ಎಲ್ಲ ಅನುಕೂಲ ಮಾಡಿಕೊಡುತ್ತಾನೆ. ತಿಂಡಿ, ವಿಶ್ರಾಂಟಿ , ಕಾರು ರಿಪೇರಿ ಇತ್ಯಾದಿ . ಕೊನೆಗೆ ಅವರು ಹೊರಡುವ ವೇಳೆ ಅವರ ಕಿವಿಗೆ ಬೀಳುವಂತೆ ಸಣ್ಣ ದನಿಯಲ್ಲಿ ಸಂಗೀತದ ಸಣ್ಣ ಆಲಾಪ ಮಾಡುತ್ತಾನೆ. ಪ್ರಯಾಣಿಕರು ಅದನ್ನು ಕೇಳಿ ಇವನತ್ತ ಹೊರಳಿ ನಂತರ ತಮ್ಮತಮ್ಮಲ್ಲಿ ಕಣ್ಣೋಟಗಳ ವಿನಿಮಯ ಮಾಡಿಕೊಂಡು ' ನಿಮಗೆ ನಂತರ ಪತ್ರ ಬರೆಯುತ್ತೇವೆ' ಎಂದು ಹೇಳಿ ಹೊರಡುತ್ತಾರೆ.
ಎಲ್ಲರಿಗೂ ನಮಸ್ಕಾರ,
ನನ್ನ ಹೆಸರು ನಟರಾಜ, ನಾನು ಸಂಪದಕ್ಕೆ ಹೊಸದಾಗೆ ಸದಸ್ಯನಾಗಿದ್ದೇನೆ. ಸಂಪದವನ್ನು ಮೊದಲಿನಿಂದಲು ಒದುತ್ತಿದ್ದೆ ಆದರೆ ಸದಸ್ಯನಾಗಿರಲಿಲ್ಲ.
ಬದುಕೆಂಬ ಬದುಕಿದು ಐತಿ ಬಾsಳ ಸಣ್ಣದು
ಅದಕsನೋ ತಮ್ಮಾ ಆರಾsಮಿರೋ ತಿಮ್ಮಾ
ಇವೊತ್ತು ಜೋಳದ ರೊಟ್ಟಿ ಇಲ್ಲಂದರ
ಚಪಾತಿ ತಿಂದ ಆರಾsಮಿರು
ಗೆಳೆಯಾರಾರು ಸಿಗಲಿಲ್ಲಂದರ
ಟಿ.ವಿ. ನೋಡಕೊಂಡ್ ಆರಾsಮಿರು
ಜಿಮ್ಮಿಗೆ ಹೋಗುದಾಗಲಿಲ್ಲಂದರ
ಒಂದೆರಡ ಹೆಜ್ಜಿ ನಡsದ ಆರಾsಮಿರು
MBA ಮಾಡಬೇಕು ಅನ್ನಕೊಂಡಿದ್ದಿ
S/W ನಾಗs ಆರಾsಮಿರು
ಮನಿಗೆ ಹೋಗುದಾಗಲಿಲ್ಲಂದರ
ಪೋನಿನಾಗ ಮಾತಾಡಿ ಆರಾsಮಿರು
ಯಾರನೋ ನೋಡುದು ಆಗಲಿಲ್ಲಂದರ
ಅವರ ದನಿ ಕೇಳಿ ಆರಾsಮಿರು
ನಿನ್ನೆಂಬುದು ಕಳೆದು ಹೋಗೇತಿ
ಒಳ್ಳೆಯದರ ನೆನಪಿನಾsಗ ಆರಾsಮಿರು
ನಾಳೆ ಹೆಂಗೈತೋ ಗೊತ್ತಿಲ್ಲ
ಕನಸಿನಾಗs ಆರಾsಮಿರು