ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎಚ್ಚರ -ಝೆನ್ ಕಥೆ

ಜು‌ಇಗನ್ ಎಂಬ ಒಬ್ಬ ಭಿಕ್ಷು ಪ್ರತಿನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಮತ್ತೆಲ್ಲಕ್ಕಿಂತ ಮುಂಚೆ ತನಗೆ ತಾನೇ ಪ್ರಶ್ನೋತ್ತರ ನಡೆಸಿಕೊಳ್ಳುತ್ತಿದ್ದ . ಇಬ್ಬರ ಮಧ್ಯೆ ಅನ್ನುವ ಹಾಗೆ ಪ್ರಶ್ನೆ ಕೇಳಿಕೊಂಡು ಅದಕ್ಕೆ ತಾನೇ ಉತ್ತರ ಕೊಟ್ಟುಕೊಳ್ಳುತ್ತಿದ್ದ. ಹೀಗೆ-

ಅನಂತ ಕಲ್ಲೋಳರ ಬಾಲ್ಯದ ಯುಗಾದಿಯ ನೆನಪುಗಳು

ಪ್ರತಿ ವರ್ಷ ಯುಗಾದಿ ಹಬ್ಬ ಬಂದಾಗ ನನಗೆ ಅನಂತ ಕಲ್ಲೋಳರ ಒಂದು ಹಾಸ್ಯ ಲೇಖನ ನೆನಪಾಗುತ್ತದೆ. ಅವರು ಚಿಕ್ಕವರಿದ್ದಾಗ ಯುಗಾದಿ ಪೂಜೆಗೆ ಅವರ ಅಜ್ಜಿ ಪೂಜಾಕೋಣೆಯಲ್ಲಿ ಪೂಜಾಸಾಮಗ್ರಿಗಳನ್ನು ಅಣಿಮಾಡುತ್ತಿರುವಾಗ ' ಬೇವು ಬೆಲ್ಲದೊಳಿಡಲೇನು ಫಲ ?' ಎಂದು ಪುರಂದರದಾಸರ ಹಾಡನ್ನು ಹಾಡುತ್ತಾ ಅಲ್ಲೇ ಠಳಾಯಿಸುತ್ತಿದ್ದರಂತೆ. ' ಹಬ್ಬದ ದಿನ ಏನು ಅಪದ್ಧ ಹಾಡ್ತೀರೋ? ' ಎಂದು ಬೈಸಿಕೊಂಡರೆ 'ಅಪದ್ಧ ಏನು ಅದರಾಗ, ಮೊನ್ನೆ ಮೊನ್ನೆ ನೀವೆ ಪುರಂದರದಾಸರ ಪುಣ್ಯತಿಥಿ ಮಾಡಿದ್ರಲ್ಲ , ಅವರದS ಹಾಡು ಇದು' ಎಂದು ಮಾರುತ್ತರ ನೀಡುತ್ತಿದ್ದರಂತೆ. ಅಜ್ಜಿ ಸೋತು ಒಂದಿಷ್ಟು ಗೋಡಂಬಿಯನ್ನೋ ದ್ರಾಕ್ಷಿಯನ್ನೋ ಲಂಚ ಕೊಟ್ಟು ಸಾಗಹಾಕುತ್ತಿದ್ದರಂತೆ. ಆ ಹಾಡಿನ ಎರಡನೇ ಸಾಲು ' ಹಾವಿಗೆ ಹಾಲೆರೆದೇನು ಫಲ?' ನಾಗಪಂಚಮಿಗೆ ಮೀಸಲಾಗಿತ್ತು!

ಅಕಶೇರುಕ ಚಂಪಾ ಮತ್ತು ಸರೀಸೃಪ ಅನಂತಮೂರ್ತಿ

ಸುದ್ದಿಯಲ್ಲಿ ಕೇಳಿದ್ದು, ವೃತ್ತ ಪತ್ರಿಕೆಯಲ್ಲಿ ಓದಿದ್ದು.

ಸಂದರ್ಭ: ಅನಂತಮೂರ್ತಿಯವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು.

ಬೋಧನೆಯ ವರಸೆ - ಮತ್ತು ಇತರ ಕಥೆಗಳು

ಗುರು ಸಿಯುಂಗ್ ಸಾನ್ ತನ್ನ ವಿದ್ಯಾರ್ಥಿಗಳಿಗೆ ಯಾವಾಗಲೂ ಹೇಳುತ್ತಿದ್ದ - " ನೀವು ತಿನ್ನುತ್ತಿರುವಾಗ ಕೇವಲ ತಿನ್ನಿ , ಅಷ್ಟೆ . ಪೇಪರ್ ಓದುವಾಗ ಕೇವಲ ಪೇಪರ್ ಓದಿ, ಅಷ್ಟೆ . ನೀವು ಏನು ಮಾಡುತ್ತೀರೋ ಅದಕ್ಕಿಂತ ಹೊರತಾದದ್ದನ್ನು ಮಾಡಬೇಡಿ , ಎರಡೆರಡು ಕಡೆ ಗಮನ ಹರಿಸಬೇಡಿ . " ಒಂದು ದಿನ ಗುರು ಏನನ್ನೋ ತಿನ್ನುತ್ತ ಪೇಪರ್ ಓದುತ್ತಿರುವದನ್ನು ನೋಡಿದ ಶಿಷ್ಯ ಕೇಳಿದ -" ನಿಮ್ಮ ಬೋಧನೆಗೆ ವ್ಯತಿರಿಕ್ತವಾದದ್ದಲ್ಲವೇ ಇದು ? " ಗುರು ಉತ್ತರಿಸಿದ - " ನೀನು ತಿನ್ನುತ್ತ ಪೇಪರ್ ಓದುತ್ತ ಇರುವಾಗ , ಕೇವಲ ತಿನ್ನುತ್ತ ಪೇಪರ್ ಓದು ಅಷ್ಟೇ ".

ನಶ್ವರತೆ-ಝೆನ್ ಕಥೆ

ಗುರುವಿನ ಹತ್ತಿರ ಒಂದು ಬೆಲೆಬಾಳುವ ಪಿಂಗಾಣಿ ಬಟ್ಟಲು ಇತ್ತು . ಶಿಷ್ಯ ಇಕ್ಯೂ ಒಂದು ದಿನ ಅಕಸ್ಮಾತ್ತಾಗಿ ಒಡೆದುಬಿಟ್ಟ . ಗುರು ಅತ್ತಲೇ ಬರುವದು ಕಂಡಿತು . ಬಟ್ಟಲಿನ ಚೂರುಗಳನ್ನು ಮರೆ ಮಾಡಿಟ್ಟ .

ಬದಲಾವಣೆಯ ಕಥೆ

ಇದು ಎ.ಎನ್.ಮೂತಿ೯ರಾಯರ "ಅಪರವಯಸ್ಕನ ಅಮೇರಿಕ ಯಾತ್ರೆ" ಪುಸ್ತಕದಲ್ಲಿರುವ ಒಂದು ಕಥೆ..
ಮೈಸೂರು ಮಹಾರಾಜರ ಕಾಲ.ಅರಮನೆಯಲ್ಲಿನ ಕೆಲಸದಾಳುಗಳು ಮಾತಾಡುವ ಗ್ರಾಮ್ಯ ಭಾಷೆ ಯುವರಾಜರಿಗೆ ಸರಿ ಕಾಣಲಿಲ್ಲ.ಅದು ಅರಮನೆಗೆ ಶೋಭೆಯಲ್ಲ ಅನ್ನಿಸಿತು ಅವರಿಗೆ.ಹಾಗಾಗಿ ಅವರು ಕುಕ್ಕೆ ಸುಬ್ರಮಣ್ಯ ಶಾಸ್ತ್ರಿಗಳು ಅಂತ ಒಬ್ಬ ಭಾಷಾ ಪಂಡಿತರನ್ನ ತಮ್ಮ ಕೆಲಸದಾಳುಗಳಿಗೆ ಶುದ್ಧ ಭಾಷೆ, ಉಚ್ಚಾರಣೆ ಹೇಳಿ ಕೊಡುವುದಕ್ಕೆ ನೇಮಿಸಿದರು. ಈ ನಡುವೆ ಯುವರಾಜರು ವಿದ್ಯಾಭ್ಯಾಸದ ಸಲುವಾಗಿ ಒಂದು ವಷ೯ ಇಂಗ್ಲೆಂಡಿಗೆ ಹೋಗಿ ಬಂದರು.ಬಂದ ಮಾರನೆಯ ದಿನ ಅವರು ತಮ್ಮ ಉದ್ಯಾನದಲ್ಲಿ ಅಡ್ಡಾಡುತಿದ್ದಾಗ ಒಬ್ಬ ತಲೆಗೆ ರುಮಾಲು ಬಿಗಿದು ಹೂ ಪಾತಿ ಸರಿ ಮಾಡುತಿದ್ದವ ಕಂಡ.ಯುವರಾಜರಿಗೆ ಅವನನ್ನು ಎಲ್ಲೋ ನೋಡಿದ ನೆನಪಾಯ್ತು. ಯುವರಾಜರು ಆ ಮನುಷ್ಯನನ್ನು "ಯಾರಯ್ಯ ನೀನು, ಎಲ್ಲೋ ನೋಡಿದ ಹಾಗಿದೆಯಲ್ಲ" ಎಂದು ಕೇಳಿದಾಗ ಆತ