ಕನ್ನಡಕ್ಕೆ ಡಬ್ಬಿಂಗ್ ಬೇಕೆ, ಬೇಡವೆ?
ಕನ್ನಡಕ್ಕೆ ಡಬ್ಬಿಂಗ್ ಬೇಕೆ? ಬೇಡವೇ? ಈ ಕೊಂಡಿ ಯಲ್ಲಿ ಚರ್ಚೆ ಪ್ರಾರಂಭಿಸಿದ್ದೇನೆ, ನಿಮ್ಮ ಅಭಿಪ್ರಾಯ ನೀಡಿ,
- Read more about ಕನ್ನಡಕ್ಕೆ ಡಬ್ಬಿಂಗ್ ಬೇಕೆ, ಬೇಡವೆ?
- Log in or register to post comments
ಕನ್ನಡಕ್ಕೆ ಡಬ್ಬಿಂಗ್ ಬೇಕೆ? ಬೇಡವೇ? ಈ ಕೊಂಡಿ ಯಲ್ಲಿ ಚರ್ಚೆ ಪ್ರಾರಂಭಿಸಿದ್ದೇನೆ, ನಿಮ್ಮ ಅಭಿಪ್ರಾಯ ನೀಡಿ,
ಕವಿತೆಗಳನ್ನು ಅರ್ಥೈಸಿಕೊಳ್ಳುವದು ಹೇಗೆ ? ಈ ಬಗ್ಗೆ ಹಿಂದೊಂದು 'ಎಲ್ಲೋ ಹುಟ್ಟಿ ಎಲ್ಲೋ ಬೆಳೆದು' ಸಣ್ಣ ಲೇಖನವನ್ನು ಬರೆದಿದ್ದೆ . ಮೊನ್ನೆ ಸಂಪದದಲ್ಲಿ ಬೇಂದ್ರೆಯವರ 'ಪರಾಗ' ಕವಿತೆಯ ಕುರಿತು ಒಂದು ಒಳ್ಳೆಯ ಲೇಖನ ನೋಡಿದೆ . ಇತ್ತೀಚೆಗೆ ಶ್ರೀ ಎಚ್. ಎಸ್. ವೆಂಕಟೇಶಮೂರ್ತಿಯವರ 'ಮೂವತ್ತು ಮಳೆಗಾಲ' ( ಸಮಗ್ರ ಕಾವ್ಯ ) - ಭಾಗ ಒಂದರಲ್ಲಿ ಈ ಕೆಳಗಿನ ಕವನ ನೋಡಿದೆ. ಕವನ ತುಂಬ ಸರಳವಾಗಿದೆ . ಅದರೆ ಅದು ಕಾವ್ಯವನ್ನು ಅರ್ಥೈಸಿಕೊಳ್ಳುವ ಕುರಿತಾಗಿರುವದರಿಂದ ಕಾವ್ಯಾಸಕ್ತರಿಗೆ ಅನುಕೂಲವಾಗಬಹುದೆಂದು ಇಲ್ಲಿ ಕೊ(ಕು)ಟ್ಟಿದ್ದೇನೆ.
ಹಾಡು ಹಾಡು ಎಂದರೆ ಇನ್ನೂ ಜಾಡು ಮೂಡದ ಕಾಡು !
ಹಿಡಿದದ್ದೇ ಹಾದಿ , ಅದೇ ಆದಿ .
ರೊಟ್ಟಿ ಮುರಿಯುವದಕ್ಕೆ ಒಂದು ಮುಖವೇ ?
ಹಲ್ಲೊಂದಿದ್ದರೆ ಹೇಗೂ ಸುಖವೇ.
ಸಂಪದದ ಹೊಸ ಹೊದಿಕೆ ಆಕರ್ಷಕವಾಗಿದೆ.
ಹಿಂದಿದ್ದ ಇಂಟರ್ಫೇಸ್ ಸೋಬರ ಎನ್ನಿಸುತ್ತಿತ್ತು.
ಉದುಪಿ ಜಿಲ್ಲೆ ನಕ್ಸಲ್ ಪಿಡುಗಿಗೊಳಗಾಗಿರುವ ಜಿಲ್ಲೆಗಳಲ್ಲೊಂದು. ಇದೇ ಕಾರಣವನ್ನು ಮಂದಿಟ್ಟುಕೊಂಡು ಅತ್ತ ಆಗುಂಬೆ ಮತ್ತು ಇತ್ತ ಅಮಾಸೆಬೈಲು ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯಿಂದ ಚಾರಣಪ್ರಿಯರಿಗೆ ಕಿರಿಕಿರಿ. ಕುದ್ರೆಮುಖದ ಬದಿಗೆ ತಿರುಗಿದರೆ ಅರಣ್ಯ ಇಲಾಖೆಯಿಂದ ಚಾರಣಕ್ಕೆ ಅನುಮತಿ ಇಲ್ಲ. ಒಟ್ಟಾರೆ ಉಡುಪಿ ಜಿಲ್ಲೆಯ ಚಾರಣಿಗರಿಗೆ ಕೈ ಕಾಲು ಕಟ್ಟಿ ಹಾಕಿದ ಪರಿಸ್ಥಿತಿ. ಆದರೂ 'ಕ್ಯಾಲ್ಕ್ಯುಲೇಟೆಡ್ ರಿಸ್ಕ್' ತಗೊಂಡು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇವರಿಬ್ಬರ ಕಣ್ತಪ್ಪಿಸಿ, ಸ್ಥಳೀಯರ ನೆರವು ಪಡಕೊಂಡು ಸಣ್ಣ ಪುಟ್ಟ ಚಾರಣಗೈಯುವುದು ನಡೆದೇ ಇದೆ. ಚಾರಣದ ಹುಚ್ಚು ಹತ್ತಿದ ಮೇಲೆ ಬೇರೇನು ತಾನೆ ಮಾಡಲು ಸಾಧ್ಯ?
ಕನ್ನಡದಲ್ಲಿ ವಿಜ್ಞಾನ ಕುರಿತ ಬರಹಗಳನ್ನೋದುವ ಹವ್ಯಾಸ ಬೆಳೆಸಿಕೊಂಡವರಿಗೆ [kn:ನಾಗೇಶ ಹೆಗಡೆ|ನಾಗೇಶ್ ಹೆಗಡೆಯವರ] ಪರಿಚಯ ಇಲ್ಲದಿರುವುದಿಲ್ಲ. ಇವರ ಕೃತಿ 'ಇರುವುದೊಂದೇ ಭೂಮಿ' ಕನ್ನಡದ ಮಹತ್ವದ ಕೃತಿಗಳಲ್ಲೊಂದು.
ಸಂಪದ Podcastನ ಮುಂದಿನ ಸಂಚಿಕೆಯಲ್ಲಿ ಇವರೊಂದಿಗೆ "ಕನ್ನಡದಲ್ಲಿ ವಿಜ್ಞಾನ ಬರಹ" ವಿಷಯದ ಸುತ್ತ ಮಾತುಕತೆ. ಈ ಸಂಚಿಕೆಯಲ್ಲಿ ಹಿಂದಿನ ಸಂಚಿಕೆಯಂತೆ [:http://sampada.net/feedback|ನೀವೂ ಪ್ರಶ್ನೆಗಳನ್ನು ಕಳುಹಿಸಬಹುದು]. ಆಯ್ದ ಪ್ರಶ್ನೆಗಳನ್ನು ಸಂದರ್ಶನದ ಸಮಯದಲ್ಲಿ ನಾಗೇಶ ಹೆಗಡೆಯವರ ಮುಂದಿಡಲಾಗುವುದು.
* ಪ್ರಶ್ನೆ ಕನ್ನಡದಲ್ಲಿರಲಿ.
* ಪ್ರಶ್ನೆ ಸ್ಪಷ್ಟವಾಗಿರಲಿ.
* ನಿಮ್ಮ ಪ್ರಶ್ನೆಗೆ ಸ್ಪಷ್ಟವಾದ ಹಿನ್ನೆಲೆಯಿದ್ದಲ್ಲಿ ಅದನ್ನು ವಿವರಿಸುವುದನ್ನು ಮರೆಯಬೇಡಿ.
* ಪ್ರಶ್ನೆಯೊಂದಿಗೆ ನಿಮ್ಮ ಪೂರ್ಣ ಹೆಸರನ್ನು ತಿಳಿಸುವುದು ಮರೆಯಬೇಡಿ.
ಧನ್ಯವಾದಗಳು,
(ಪ್ರಶ್ನೆಗಳನ್ನು ಮೇಲೆ ಲಿಂಕ್ ಮಾಡಿರುವಂತೆ [:http://sampada.net/feedback|feedback ಫಾರ್ಮ್] ಮೂಲಕ ನಮಗೆ ಕಳುಹಿಸಬಹುದು)
ಶ್ರೀ ಮುದವೀಡು ಕೃಷ್ಣರಾಯರು ಹೀಗೆ ಹೇಳಿದ್ದಾರೆ :
"ಈ ಪ್ರದೇಶವು ಕನ್ನಡ ನಾಡಿನ ಭಾಗವೆಂಬ ಅರಿವೂ ಇಲ್ಲಿಯ ಜನರಿಗಿಲ್ಲದಾಗಿ 'ದಕ್ಷಿಣ ಮಹಾರಾಷ್ಟ್ರ'ವೆಂಬ ಅಸಂಬದ್ಧ ಹಣೆಪಟ್ಟಿಯು ಇದರ ಪಾಲಿಗೆ ಬಂದಿತು. ೧೮೮೫ರಿಂದ ೧೯೧೫ರವರೆಗಿನ ಅವಧಿಯಲ್ಲಿ ಪರಿಸ್ಥಿತಿ ಬಹಳೇ ಕೆಟ್ಟಿತು. ಮುಂಬಯಿ ಅಧಿಕಾರದ ಕೇಂದ್ರವಾಗಿದ್ದ ಮಹಾರಾಷ್ಟ್ರದ ಕಡೆಯಿಂದ ಮರಾಠೀ ಭಾಷೆಯ ಅಧಿಕಾರಿಗಳೇ ಹೆಚ್ಚಾಗಿ ಬರತೊಡಗಿದರು. ಶಿಕ್ಷಣ ವಿಭಾಗವು ಅವರ ಗುತ್ತಿಗೆಯಾಯಿತು. ವಕೀಲಿಯಂತಹ ಹೊಸವರ್ಚಸ್ಸಿನ ಧನೋತ್ಪಾದಕ ಉದ್ಯೋಗಗಳಿಗೆ ಈ ಹೊಸ ಪ್ರದೇಶವು ಅವರಿಗೆ ತೆರೆದಿಟ್ಟಂತಾಯಿತು. ರೇಲ್ವೆಯ ಕಛೇರಿಗಳು ಇಲ್ಲಿಗೆ ಬಂದವು. ವ್ಯಾಪಾರೋದ್ಯೋಗದ ಬೆನ್ನು ಹತ್ತಿ ಅನೇಕ ಮರಾಠರು ಇಲ್ಲಿ ಬಂದು ನೆಲೆಸಿದರು. ಮಹಾರಾಷ್ಟ್ರದಲ್ಲಿಯ ನಾಟಕ ಕಂಪನಿಗಳಿಗೆ ಇದೊಂದು ಹೊಸ ಕ್ಷೇತ್ರವೇ ಲಭ್ಯವಾಗಿ ಅವರ ನಾಟಕಗಳು ತೆರಪಿಲ್ಲದೆಯೇ ಆಗಹತ್ತಿದವು. ಅಲ್ಲಿಯ ವ್ಯಾಖ್ಯಾನಕಾರರು , ಪುರಾಣಿಕರು , ಕೀರ್ತನಕಾರರು , ಗಾಯಕರು , ನರ್ತಕಿಯರು ಇಲ್ಲಿ ಬಂದು ನೆಲೆಸಹತ್ತಿದರು . ಇವರಿಗೆಲ್ಲ ಇಲ್ಲಿದ್ದ ಮರಾಠೀ ಅಧಿಕಾರಿಗಳಿಂದಲೂ ಇಲ್ಲಿಯೇ ನೆಲೆಯೂರಿದ ಮರಾಠಿಗರಿಂದಲೂ ಚೆನ್ನಾಗಿ ಆಶ್ರಯ ದೊರೆತು ಮತ್ತೂ ಹೊಸಬರಿಗೆ ಇತ್ತ ಕಡೆಗೆ ದುಡ್ಡು ಗಳಿಸಲಿಕ್ಕೆ ಬರಲು ಪ್ರೋತ್ಸಾಹ ದೊರೆಯಹತ್ತಿತು. ಇದೆಲ್ಲ ಕಾರಣಗಳಿಂದಾಗಿ ಪಂಪ, ರನ್ನ , ಕುಮಾರವ್ಯಾಸರ ತಿರುಳ್ಗನ್ನಡ ನಾಡಾದ ಈ ಸೀಮೆಯಲ್ಲಿ ಕನ್ನಡ ನುಡಿಯ ಹಿಂದೆ ಬಿದ್ದು ಮರಾಠೀ ಭಾಷೆಯು ಬೆಳೆಯಹತ್ತಿತು. ಅಭಿಮಾನೀ ಮರಾಠಿಗರು ತಮ್ಮ ವರ್ಚಸ್ಸಿನಿಂದ ಇಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಮರಾಠೀ ಶಾಲೆಗಳನ್ನು ಸ್ಥಾಪಿಸಿಕೊಂಡರು. ಇನು ಸುಸಂಸ್ಕೃತ ಕನ್ನಡಿಗರು ಮೇಲ್ತರಗತಿಯ ಶಿಕ್ಷಣಕ್ಕೆ ಪುಣೆ , ಮುಂಬೈಗೆ ಹೋದಾಗ ತಮ್ಮ ಮಕ್ಕಳಿಗೆ ಸಾಮಾನ್ಯ ವ್ಯವಹಾರಕ್ಕೆ ಅನಾನುಕೂಲವಾಗಬಾರದೆಂಬ ವಿಚಾರದಿಂದ , ಅತ್ತಕಡೆಯ ಹೆಣ್ಣು ಗಂಡಿನ ವಿವಾಹ ಸಂಬಂಧ ಬಂದಾಗ 'ಆರೇ'* ಅರಿಯದವರೆಂಬ ಅಪಮಾನಕ್ಕೆ ಗುರಿಯಾಗಬಾರದೆಂಬ ವಿವೇಕಶೂನ್ಯ ಹಂಬಲದಿಂದ ತಮ್ಮ ಮಕ್ಕಳನ್ನೂ ಮರಾಠೀ ಶಾಲೆಗಳಿಗೇ ಕಳಿಸಹತ್ತಿದರು. ಹೀಗೆ ಪುಣೆ , ಮುಂಬೈ ಕಡೆಗೆ ಹೋಗಿ ಬಂದ ಸುಶಿಕ್ಷಿತ ಕನ್ನಡಿಗರು ತಮ್ಮ ತಾಯಿನುಡಿಯಾದ ಕನ್ನಡವನ್ನೇ ಮರೆತು ಮರಾಠಿಯನ್ನೇ ಮನೆಯ ಮಾತನ್ನಾಗಿ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದರು. ಮೈಸೂರಿನ ಕಡೆಯಿಂದ ಮನೆಗೆ ಬಂದ ಅಚ್ಚಗನ್ನಡದ ಗೃಹಿಣಿಯರನ್ನು ಮರಾಠಿಯನ್ನು ಕಲಿಯಹಚ್ಚಿ ಅವರ ಅಬದ್ಧ ಸುಬದ್ಧ 'ಆರೇ'ದಿಂದಲಾದರೂ ಮನೆತನವನ್ನೇ ಮರಾಠೀಮಯ ಮಾಡುವ ಮೋಹಕ್ಕೆ ಒಳಗಾದರು. ಹೀಗೆ ಅನೇಕ ಕಾರಣಗಳಿಂದ ಇತ್ತ ಕಡೆಯ ಕನ್ನಡಿಗರ ಸ್ವಾಭಿಮಾನ , ಸ್ವಭಾಷಾಭಿಮಾನವು ಕುಗ್ಗುತ್ತ ನಡೆದು , ಕನ್ನಡವು ಮುಗ್ಗರಿಸಿ ಬಿದ್ದು ಮರಾಠಿಯ ಪ್ರಾಬಲ್ಯವೇ ಹೆಚ್ಚಾಗಿ ಅದರ ವರ್ಚಸ್ಸೇ ಬೆಳೆಯಲಾರಂಬಿಸಿತು. ' ಓದಿದರೆ ಮರಾಠಿ ಪುಸ್ತಕಗಳನ್ನೇ ಓದಬೇಕು , ತರಿಸಿದರೆ ಮರಾಠಿ ವರ್ತಮಾನಪತ್ರ ಮಾಸಪತ್ರಿಕೆಗಳನ್ನೇ ತರಿಸಬೇಕು. ನೋಡಿದರೆ ಮರಾಠಿ ನಾಟಕಗಳನ್ನೇ ನೋಡಬೇಕು. ಕೇಳಿದರೆ ಮರಾಠಿ ಹಿಂದೂಸ್ಥಾನೀ ಸಂಗೀತವನ್ನೇ ಕೇಳಬೇಕು' ಎಂಬ ಸೊಲ್ಲೇ ಎಲ್ಲೆಲ್ಲಿಯೂ ಹರಡಿಕೊಂಡ ವಿಪರೀತ ಪರಿಸ್ಥಿತಿಯಿಂದ ಈ ಕನ್ನಡನಾಡು ಜರ್ಜರಿತವಾಗಿ ಹೋಯಿತು. "
ಭೂಮಿ ಒಡಲಿನಿಂದ ಬಂತೆ ಈ ವೃಕ್ಷ ...?
ಯಾಕೆ ಎಂಬುದು ತಿಳಿಯದು .
ಆಕಾರ ವಿಕಾರ ಚಕಾರ ಎತ್ತಿದ ನೊಂದವ ;
ಎಕೆ ಎಂಬುದು ತಿಳಿಯದು ...?
ಜಿಟಿ - ಜಿಟಿ ಜಿಟಿ - ಜಿಟಿ ಮಳೆಯು ಬರುತಿದೆ ,
ನೆಲವು ನೆಂದು ಹಸಿದ ಮಣ್ಣಿನ ಸುವಾಸನೆಯು ತರುತಿದೆ ;
ವರುಷದ ಮುಂಗಾರಿನ ಸೂಚನೆಯು ಇದಾದರೆ ,
ಹರುಷದ ಅಲೆಯ ಮೇಲೆ ಸವಾರಿ ಇದಕೆ ಕಾದರೆ .
೧೮ ನೆಯ ವಿಶ್ವಕಪ್ ಕಾಲ್ಚೆಂಡಿನಾಟದ ಫೈನಲ್ಸ್ ಭಾನುವಾರ, ೯ ನೆಯ ತಾರೀಖು ಜುಲೈ ೨೦೦೬ ರಂದು ಜರ್ಮನಿಯ ಒಲಂಪಿಯ ಸ್ಟೇಡಿಯಾನ್, ಬರ್ಲಿನ್ ನಲ್ಲಿ ನಡೆಯಿತು.ಈ ಮಹಾಸಮರದಲ್ಲಿ ಇಟಲಿಯ ತಂಡ (೫-೩) ಗೋಲಿನ ಅಂತರದಿಂದ ಫ್ರಾನ್ಸ್ ನ್ನು ಧ್ವಂಸಗೊಳಿಸಿ ಫುಟ್ಬಾಲ್ ಛಾಂಪಿಯನ್ ಪಟ್ಟವನ್ನೇರಿತು. ಇದು ೧೨೦ ನಿಮಿಷದ ನಂತರವೂ ಹಣಾ ಹಣಿ ಮುಂದುವರಿದಾಗ ಅಂತಿಮ ಫಲಿತಾಂಷ ನಿರ್ಧರಿಸಲು ಪೆನಾಲ್ಟಿಶೂಟ್ ಔಟಿನಿಂದ ಮಾತ್ರ ಸಾಧ್ಯವಾಯಿತು.ಇಟಲಿ ೧೯೮೨ ರಲ್ಲಿ ಛಾಂಪಿಯನ್ ಆಗಿತ್ತು.ಪುನಃ ೨೪ ವರ್ಷಗಳ ಬಳಿಕ ಅದನ್ನು ದಕ್ಕಿಸಿಕೊಂಡಿದೆ !
ಇದೇನಿದು ಮೂರುಮೂರು ತಲೆಬರಹ ಎನ್ನುತ್ತೀರಾ ? ನಿಮಗೆ ಗೊತ್ತಿರಲಿಕ್ಕಿಲ್ಲ . ಮೊದಲಿಗೆ ಕಾದಂಬರಿಗಳು ಕನ್ನಡದಲ್ಲಿ ಪ್ರಾರಂಭವಾದಾಗ ಈ ರೀತಿಯೇ ಹೆಸರುಗಳನ್ನು ಕೊಡುತ್ತಿದ್ದರು ! ಇರಲಿ. ಈಗ ವಿಷಯಕ್ಕೆ ಬರೋಣ .