ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆಲೂರು ವೆಂಕಟರಾಯರು - ೧೨೬ನೇ ಜನ್ಮ ದಿನ

 

ವಿಜಯ ಕರ್ನಾಟಕದ ದಿನ ವಿಶೇಷ ಗಮನಿಸುತ್ತಿದ್ದಾಗ ಮೇಲಿನ ವಿಚಾರ ಅರಿವಿಗೆ ಬಂತು. ೧೮೮೦ರಲ್ಲಿ ಈ ದಿನ ವಿಜಾಪುರದಲ್ಲಿ 'ಕರ್ನಾಟಕ ಕುಲಪುರೋಹಿತ' ಆಲೂರು ವೆಂಕಟರಾಯರ ಜನನವಾಗಿತ್ತು.

ತಮಿಳು ಚಿತ್ರದಲ್ಲಿ ಸಂಗೊಳ್ಳಿ ರಾಯಣ್ಣನ ಅವಮಾನ

ದಿನಾಂಕ ೧೨ ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ತಮಿಳು ಸಿನಿಮಾವೊಂದರಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಪ್ರಾಣ ತೆತ್ತ ಗಂಡುಗಲಿ ಸಂಗೊಳ್ಳಿ ರಾಯಣ್ಣನ ಹೆಸರನ್ನು ದೇಶದ್ರೋಹಿ ಪಾತ್ರವೊಂದಕ್ಕೆ ಕೊಟ್ಟಿದ್ದಾರಂತೆ ನೋಡಿ ಇವರ ಉದ್ಧಟತನ. ನನ್ನ ಲೇಖನಗಳಲ್ಲಿ ದೋಷ ಕ್ಂಡು ಬಂದಲ್ಲಿ ನನ್ನನ್ನು ಕ್ಷಮಿಸಬೇಕು ಏಕೆಂದರೆ, ನನ್ನ ಆಪರೇಟಿಂಗ್ ಸಿಸ್ಟಮ್ windows 2000 ಇದರಲ್ಲಿ ಕನ್ನಡ ಫ಼ಾಂಟ್ ಸರಿಯಾಗಿ ಬರೋದಿಲ್ಲ, ಆದರೂ ಆದಷ್ಟು ತಪ್ಪುಗಳನ್ನು ಮಾಡದಿರಲು ಪ್ರಯತ್ನಿಸುತ್ತೇನೆ.......

ಸುಕೃತಿ

                          ಸುಕೃತಿ

                     ಅಕಾರದಿಂದ ಆಕೃತಿ,
                     ಉಕಾರದಿಂದ ಪ್ರಕೃತಿ,
                     ಮಕಾರದಿಂದ ಸಂಸ್ಕೃತಿ,
                     ಓಂ ಕಾರದಿಂದ ಸುಕೃತಿ.//ಪ//

ಬಾಂಬೆ ಡೈಯಿಂಗ್!

ದೇಶದ ವಾಣಿಜ್ಯ ನಗರಿ ಬಾಂಬೆ ಅಲಿಯಾಸ್ ಮುಂಬೈ ವರುಣನ ರೌದ್ರಾವತಾರದಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ಅನಾಹುತ. ಬೃಹನ್ನಗರದ ಜೀವನಾಡಿ ಲೋಕಲ್ ಟ್ರೇನಿನಲ್ಲಿ ದಿನದ ಕೆಲಸ ಮುಗಿಸಿ ಸಂಜೆ ಮನೆಗೆ ತೆರಳುತ್ತಿದ್ದ ಮುಗ್ಧ ನಾಗರಿಕರ ಮಾರಣಹೋಮ. ಕೇವಲ ಹನ್ನೆರಡೇ ನಿಮಿಷಗಳಲ್ಲಿ ಏಳು ಕಡೆ ಏಕಕಾಲಕ್ಕೆ ಜುಲೈ 11, 2006 ರಂದು ಸಂಭವಿಸಿದ ಸ್ಫೋಟದಲ್ಲಿ ನೂರಾರು ಮುಗ್ಧರು ಮಸಣದ ಹಾದಿ ಹಿಡಿದಿದ್ದಾರೆ.

ಕನ್ನಡ ಉಳಿಸುವಿಕೆ: ಭಿನ್ನ ನಿಲುವು

 

ಕನ್ನಡದ ಕೊರತೆ ಚರ್ಚೆಯ ಸರಣಿಯಲ್ಲಿ ನಾನು ಮಂಡಿಸಿದ ಅಭಿಪ್ರಾಯವೊಂದಕ್ಕೆ ಶ್ರೀ ಬೆನಕ ಸ್ವಲ್ಪ ದೀರ್ಘವಾದ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ. ನನ್ನ ಪ್ರತಿಕ್ರಿಯೆ ನಿರೀಕ್ಷಿಸಿದ್ದಕ್ಕಿಂತ ದೊಡ್ಡದಾಗಿದೆ ಎನಿಸಿದ್ದರಿಂದ ಲೇಖನವಾಗಿ ಪ್ರಕಟಿಸಿದ್ದೇನೆ.

ಸರ್ವಭಾಷಾ ಸರಸ್ವತಿ

ದಿವ್ಯವಾದ ವಾಕ್ ಅನ್ನು ದೇವತೆಗಳು ಸೃಜಿಸಿದರು. ಅದನ್ನು ನಾನಾರೂಪದ ಜೀವಿಗಳು ನುಡಿಯುತ್ತವೆ. ಇದು ಋಗ್ವೇದದ ಒಂದು ಸೂಕ್ತಿ. ನಾಗವರ್ಮನ 'ಕರ್ಣಾಟಕಭಾಷಾಭೂಷಣ'ದಲ್ಲಿ ಮಂಗಳಶ್ಲೋಕದ ಅರ್ಥ ಹೀಗಿದೆ. ಯಾವ ಪರಂಜ್ಯೋತಿಯಿಂದ ಸರ್ವಭಾಷಾರೂಪವಾದ ವಾಣಿ ಹೊರಹೊಮ್ಮಿತೋ ಅದಕ್ಕೆ ವಂದನೆ. 'ಕರ್ಣಾಟಕ ಶಬ್ದಾನುಶಾಸನ' ಕರ್ತನಾದ ಭಟ್ಟಾಕಳಂಕನು ಗ್ರಂಥಾರಂಭದಲ್ಲಿ ಮಾಡಿದ ಜಿನೇಶ್ವರಸ್ತುತಿಯೂ ಇದೇ ಅರ್ಥದ್ದಾಗಿದೆ. ಅಲ್ಲಿ ಭಾಷೆಯು ಸರ್ವಭಾಷಾಮಯಿ ಎಂದು ಹೇಳಲಾಗಿದೆ.

ಯಾವುದೀ ಹೊಸ ರಾಗ?

94.3 M.Hz ಕಂಪನಾಂಕಗಳಲ್ಲಿ ಹೊಸ ರೇಡಿಯೋ ಪ್ರಾರಂಭವಾಗಿದೆ. ರೇಡಿಯೋ ಜಾಕಿ ಇಲ್ಲ, ಬರೀ ಇಂಗ್ಲಿಷ್ ಮತ್ತು ಹಿಂದಿ ಹಾಡುಗಳು ಬರುತ್ತವೆ, ಇದು ಯಾವ ರೇಡಿಯೋ ?

“ಆಧುನಿಕ ಮೌಲ್ಯಗಳು..”.

ಇತ್ತೀಚೆಗೆ “ಸಂಪದ” ದ ಬ್ಲಾಗ್ ಬರಹಗಾರನಾದಮೇಲೆ, ನನ್ನ ಹಳೆಯ ಟಿಪ್ಪಣಿ ಮತ್ತು ಡೈರಿ ಪುಸ್ತಕಗಳನ್ನೆಲ್ಲ ತಿರುವಿ ಹಾಕುವಂತಾಯಿತು. ಲೇಖಕನಾಗಿ ಹಲವು ವರ್ಷಗಳ ನನ್ನ ಅನುಭವದಲ್ಲಿ ಹೇಳಬೇಕೆಂದರೆ, ಅವು ಬಹಳ ಕಚ್ಚಾ ಸಾಮಗ್ರಿಯನ್ನೊದಗಿಸುತ್ತವೆ, ಮತ್ತು ಹೊಚ್ಚ ಹೊಸ ವಿಷಯಗಳಿಗೆ ಇಂಬುಗೊಡುತ್ತ ಸಾರ್ವಕಾಲಿಕ ಮೌಲ್ಯಗಳನ್ನು ತೆರೆದಿಡುತ್ತವೆ. ಅಂತಹ ಬರಹಗಳನ್ನು ನಿಮ್ಮೊಂದಿಗೆ ಸಂಪದದಲ್ಲಿ ಹಂಚಿಕೊಳ್ಳುವ ತವಕವಿದೆ. ಅಂತಹ ಮೊದಲ ಪ್ರಯತ್ನವಿದು...

ನಮನ-೦೩: ಸುದ್ದಿಗಾರರೇ ಸುದ್ದಿಯಾದಾಗ!

ಕೆಲದಿನಗಳ ಹಿಂದೆ ಉಡುಪಿಯಲ್ಲಿ ವೈದ್ಯರೊಬ್ಬರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರೆಂದು ವರದಿಯಾಗಿತ್ತು.
ಆ ವೈದ್ಯ, ಡಾ| ಕಿರಣ ಆಚಾರ್ಯ, ಸಚಿವ ಆಚಾರ್ಯರ ಮಗನಾಗಿದ್ದರಿಂದ, ಪ್ರತಿಕೂಲ ಪ್ರಚಾರವೂ ಸಿಕ್ಕಿತ್ತು.
ಮೊದಲೇ, ಎರಡೂ ಕಡೆಯ ವಿವರ ಪಡೆದು ಪ್ರಕಟಿಸುವ ವೃತ್ತಿಪರತೆ ನಮ್ಮ ವರದಿಗಾರರಲ್ಲಿ ಕಡಿಮೆ.