ವಾಸ್ತುಪುರುಷನ ಅನುಗ್ರಹ
ನಾನು ಹದಿನೇಳು ವರ್ಷಗಳೆ ನನ್ನ ಹೆಂಡತಿ ಮಕ್ಕಳೊಂದಿಗೆ ವಠಾರದ ಒಂದು ಬಾಡಿಗೆ ಮನೆಯಲ್ಲಿದ್ದೆ. ಆ ಮನೆ ವಾಸ್ತು ಪ್ರಕಾರ ಬಹಳ ದೋಷದಿಂದ ಕೂಡಿತ್ತು. ನೈರುತ್ಯಕ್ಕೆ ಮುಂಬಾಗಿಲು, ಈಶಾನ್ಯದಲ್ಲಿ ಕಕ್ಕಸು, ಆಡಿಗೆ ಮಾಡುತ್ತಿದ್ದುದು ದಕ್ಷಿಣಾಭಿಮುಖವಾಗಿ. ಹೀಗೆ ಹೇಳುತ್ತಾ ಹೋದರೆ ಇನ್ನೂ ಇದೆ. ಇಲ್ಲೇ ನನ್ನ ಮಕ್ಕಳು ಹುಟ್ಟಿ ಬೆಳೆದರು. ಎಲ್ಲ ಸಾಮಾನ್ಯರಂತೆ ನಮ್ಮ ಕುಟುಂಬವೂ ಕಾಯಿಲೆ ಕಸಾಲೆ, ಆರ್ಧಿಕ ಮುಗ್ಗಟ್ಟು ಇದನ್ನೆಲ್ಲ ಎದುರಿಸಿದರೂ ನಾನೆಂದೂ ವಾಸ್ತು ಬಗ್ಗೆ ತಲೆ ಕೆಡಿಸಿಕೊಂಡವನಲ್ಲ. ಕಡೆಗೂ ಅಲ್ಲೇ ಹದಿನೈದು ವರ್ಷಗಳಾದ ಮೇಲೆ ನನ್ನ ಹೆಂಡತಿ ಒತ್ತಾಯಕ್ಕೆ ಮಣಿದು ವಾಸ್ತು ಶಾಸ್ತ್ರದತ್ತ ಕಣ್ತೆರೆದು ನೋಡುವಂತಾಯ್ತು. ನನಗೆ ಆ ಮನೆಯಲ್ಲಿ ಋಣಾತ್ಮಕ ದೋಷಗಳೇನೆ ಇದ್ದರೂ, ಧನಾತ್ಮಕ ಪ್ರಕಾರಗಳೂ ವಾಸ್ತು ತತ್ವಕ್ಕೆ ಒತ್ತುಕೊಡುವಂತೆ ಇದ್ದವು. ಉದಾಹರಣೆಗೆ ಉತ್ತರ ಮತ್ತು ಪೂರ್ವಭಾಗವು ತಗ್ಗಾಗಿಯೆ ಇದ್ದು, ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಭಾವು ಎತ್ತರದ ಸ್ಥಾನದಲ್ಲೆ ಇತ್ತು. ದಕ್ಷಿಣ ಭಾಗದಲ್ಲಿ ನಮಗೆ ಅರಿವಿಲ್ಲದಂತೆ ತುಳಸಿ ಕಟ್ಟೆಯನ್ನಿಟ್ಟಿದ್ದೆವು. ಆನಂತರ, ನಾನೊಂದಿಷ್ಟು ಮನೆಯ ಪೀಠೋಪಕರಣ, ಸಾಮಾನು ಸರಂಜಾಮು ಎಲ್ಲೆಲ್ಲಿರಬೇಕೆಂಬುದನ್ನು ಸಾಧ್ಯವಾದಷ್ಟು ಪುನ ರ್ ವ್ಯಸ್ಥೆಗೊಳಿಸಿದ್ದೆ. ಹೇಳಬೇಕೆಂದರೆ, ಯಾವುದೇ ಮನೆಯಲ್ಲಿ ಕೆಲವೊಂದು ಮೈನಸ್ ಪಾಯಿಂಟ್ಸ್ ಇದ್ದರೆ, ಇನ್ನೂ ಕೆಲವು ಪ್ಲಸ್ ಪಾಯಿಂಟ್ಸ್ ಇದ್ದೇ ಇರುತ್ತವೆ. ಶಾಸ್ತ್ರವನ್ನು ಸಂಪೂರ್ಣ ತೆಗಳುವವರ ಮಾತು ಬೇರೆಯೆ. ಈಗ ಮಕ್ಕಳೆಲ್ಲ ದೊಡ್ಡವರಾಗಿದ್ದಾರೆ. ಆ ವಠಾರದಿಂದ ಹೊರ ಬಂದಿದ್ದೇನೆ. ಟಾರಸಿಯ ಪ್ರತ್ಯೇಕ ಬಾಡಿಗೆ ಮನೆಯಲ್ಲಿದ್ದೇನೆ. ಮೊದಲಿಗೆ ಏನೇ ನೋಡಿಕೊಂಡು ಬಂದರೂ ಇದರಲ್ಲೂ ದೋಷಗಳಿವೆ. ಮನೆಯ ಮುಂದೆಯೆ ಈಶಾನ್ಯ ಮೂಲೆಯಲ್ಲಿ ತೆಂಗಿನ ಮರವಿದೆ. ಇದರಿಂದ ಮನೆಯ ಯಜಮಾನನ ಆರೋಗ್ಯಕ್ಕೇ ಕುತ್ತೆಂದು ತಿಳಿದಿದೆ. ನನ್ನಲ್ಲಿ ಮತ್ತು ದೇವರಲ್ಲಿ ನನಗೆ ನಂಬಿಕೆ ಇದೆ. ಆರೋಗ್ಯವಾಗಿಯೆ ಇದ್ದೇನೆ. ಇದೀಗ ನನ್ನನ್ನು ಕಾಡುವ ಮುಖ್ಯ ಪ್ರಶ್ನೆಗಳೆಂದರೆ....
- Read more about ವಾಸ್ತುಪುರುಷನ ಅನುಗ್ರಹ
- 1 comment
- Log in or register to post comments