ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಾಸ್ತುಪುರುಷನ ಅನುಗ್ರಹ

ನಾನು ಹದಿನೇಳು ವರ್ಷಗಳೆ ನನ್ನ ಹೆಂಡತಿ ಮಕ್ಕಳೊಂದಿಗೆ ವಠಾರದ ಒಂದು ಬಾಡಿಗೆ ಮನೆಯಲ್ಲಿದ್ದೆ. ಆ ಮನೆ ವಾಸ್ತು ಪ್ರಕಾರ ಬಹಳ ದೋಷದಿಂದ ಕೂಡಿತ್ತು. ನೈರುತ್ಯಕ್ಕೆ ಮುಂಬಾಗಿಲು, ಈಶಾನ್ಯದಲ್ಲಿ ಕಕ್ಕಸು, ಆಡಿಗೆ ಮಾಡುತ್ತಿದ್ದುದು ದಕ್ಷಿಣಾಭಿಮುಖವಾಗಿ. ಹೀಗೆ ಹೇಳುತ್ತಾ ಹೋದರೆ ಇನ್ನೂ ಇದೆ. ಇಲ್ಲೇ ನನ್ನ ಮಕ್ಕಳು ಹುಟ್ಟಿ ಬೆಳೆದರು. ಎಲ್ಲ ಸಾಮಾನ್ಯರಂತೆ ನಮ್ಮ ಕುಟುಂಬವೂ ಕಾಯಿಲೆ ಕಸಾಲೆ, ಆರ್ಧಿಕ ಮುಗ್ಗಟ್ಟು ಇದನ್ನೆಲ್ಲ ಎದುರಿಸಿದರೂ ನಾನೆಂದೂ ವಾಸ್ತು ಬಗ್ಗೆ ತಲೆ ಕೆಡಿಸಿಕೊಂಡವನಲ್ಲ. ಕಡೆಗೂ ಅಲ್ಲೇ ಹದಿನೈದು ವರ್ಷಗಳಾದ ಮೇಲೆ ನನ್ನ ಹೆಂಡತಿ ಒತ್ತಾಯಕ್ಕೆ ಮಣಿದು ವಾಸ್ತು ಶಾಸ್ತ್ರದತ್ತ ಕಣ್ತೆರೆದು ನೋಡುವಂತಾಯ್ತು. ನನಗೆ ಆ ಮನೆಯಲ್ಲಿ ಋಣಾತ್ಮಕ ದೋಷಗಳೇನೆ ಇದ್ದರೂ, ಧನಾತ್ಮಕ ಪ್ರಕಾರಗಳೂ ವಾಸ್ತು ತತ್ವಕ್ಕೆ ಒತ್ತುಕೊಡುವಂತೆ ಇದ್ದವು. ಉದಾಹರಣೆಗೆ ಉತ್ತರ ಮತ್ತು ಪೂರ್ವಭಾಗವು ತಗ್ಗಾಗಿಯೆ ಇದ್ದು, ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಭಾವು ಎತ್ತರದ ಸ್ಥಾನದಲ್ಲೆ ಇತ್ತು. ದಕ್ಷಿಣ ಭಾಗದಲ್ಲಿ ನಮಗೆ ಅರಿವಿಲ್ಲದಂತೆ ತುಳಸಿ ಕಟ್ಟೆಯನ್ನಿಟ್ಟಿದ್ದೆವು. ಆನಂತರ, ನಾನೊಂದಿಷ್ಟು ಮನೆಯ ಪೀಠೋಪಕರಣ, ಸಾಮಾನು ಸರಂಜಾಮು ಎಲ್ಲೆಲ್ಲಿರಬೇಕೆಂಬುದನ್ನು ಸಾಧ್ಯವಾದಷ್ಟು ಪುನ ರ್‍ ವ್ಯಸ್ಥೆಗೊಳಿಸಿದ್ದೆ. ಹೇಳಬೇಕೆಂದರೆ, ಯಾವುದೇ ಮನೆಯಲ್ಲಿ ಕೆಲವೊಂದು ಮೈನಸ್ ಪಾಯಿಂಟ್ಸ್ ಇದ್ದರೆ, ಇನ್ನೂ ಕೆಲವು ಪ್ಲಸ್ ಪಾಯಿಂಟ್ಸ್ ಇದ್ದೇ ಇರುತ್ತವೆ. ಶಾಸ್ತ್ರವನ್ನು ಸಂಪೂರ್ಣ ತೆಗಳುವವರ ಮಾತು ಬೇರೆಯೆ. ಈಗ ಮಕ್ಕಳೆಲ್ಲ ದೊಡ್ಡವರಾಗಿದ್ದಾರೆ. ಆ ವಠಾರದಿಂದ ಹೊರ ಬಂದಿದ್ದೇನೆ. ಟಾರಸಿಯ ಪ್ರತ್ಯೇಕ ಬಾಡಿಗೆ ಮನೆಯಲ್ಲಿದ್ದೇನೆ. ಮೊದಲಿಗೆ ಏನೇ ನೋಡಿಕೊಂಡು ಬಂದರೂ ಇದರಲ್ಲೂ ದೋಷಗಳಿವೆ. ಮನೆಯ ಮುಂದೆಯೆ ಈಶಾನ್ಯ ಮೂಲೆಯಲ್ಲಿ ತೆಂಗಿನ ಮರವಿದೆ. ಇದರಿಂದ ಮನೆಯ ಯಜಮಾನನ ಆರೋಗ್ಯಕ್ಕೇ ಕುತ್ತೆಂದು ತಿಳಿದಿದೆ. ನನ್ನಲ್ಲಿ ಮತ್ತು ದೇವರಲ್ಲಿ ನನಗೆ ನಂಬಿಕೆ ಇದೆ. ಆರೋಗ್ಯವಾಗಿಯೆ ಇದ್ದೇನೆ. ಇದೀಗ ನನ್ನನ್ನು ಕಾಡುವ ಮುಖ್ಯ ಪ್ರಶ್ನೆಗಳೆಂದರೆ....

ದರ್ಶನ

ಅಂತರಾಳದಿ ನಾ ಕರೆದೆ ಬಾ
ನಿನ್ನಂತೆ ನನ್ನನ್ನು ನೀ ಮಾಡ ಬಾ
ನಿನ್ನಯ ಶುದ್ಧ ಹೃದಯವ ನೀಡು ಬಾ
ನಿನ್ನಯ ಸಧ್ಗುಣಗಳ ಕಲಿಸಲು ಬಾ
ನಿನ್ನ ಹಾಗೆ ನಾ ಬಾಳಲು ತೋರು ಬಾ

ನನ್ನ ಅಪ್ಪ

ನನ್ನ ಅಪ್ಪ

ಹಸಿರು ಹಸಿರು ಹಸಿರು
ಹಸಿರೊಂದಿಗೆ ಒಂದಾಗುತ್ತಿವೆ ನನ್ನ ಉಸಿರು
ದುಃಖದಿ ಬಂದು ಕುಳಿತಿರುವೆ
ಕಂಬನಿಯ ಕಣ್ಣಲಿ ತಂದಿರುವೆ
ಕನಸುಗಳ ಸಾಲನು ಕಟ್ಟಿರುವೆ
ಜನ್ಮ ಕೊಟ್ಟ ತಂದೆಯು
ಜೊತೆ ಇಲ್ಲದೆ ಹೋದರಲ್ಲ
ಪ್ರೀತಿಯ ತೋರಿಸಿ
ನಾ ಪ್ರೀತಿಸಲು ಇಲ್ಲವಲ್ಲ
ವಿದ್ಯೆಯು ಕೊಟ್ಟು
ನಾ ಕಲಿತ ವಿದ್ಯೆ ನೋಡಲಿಲ್ಲ
ಸಿಹಿತಿನಿಸುಗಳನ್ನು ಕೊಟ್ಟರು
ಸಿಹಿಮಾತನಾಡಲು ಇಲ್ಲವಲ್ಲ
ಆಣ್ಣ ತಮ್ಮ ಅಕ್ಕ ತಂಗಿಯರ ಕೊಟ್ಟರು
ಅವರ ಸುಖ ಸಂತೋಷ ನೋಡಲಿಲ್ಲ
ಆಸ್ತಿ ಆಂತಸ್ತು ಕೊಟ್ಟು
ಅದರ ಸುಖ ಅನುಭವಿಸಲಿಲ್ಲ
ಒಂದನ್ನು ಮಾತ್ರ ಕೇಳುವೆ ಅಪ್ಪ
ಕನಸಿನಲ್ಲಿ ನಾ ಕಾಣಲು ಬಾ ಅಪ್ಪ

ಗೋಡ್ಸೆ ಯುಗ .

ಬಹಳ ಚಿಕ್ಕ ವಯಸ್ಸಿನಿಂದಲೂ ಮಹಾತ್ಮರ ತತ್ವಗಳು ನನ್ನ ಮನಸ್ಸಿಗೆ ನಾಟಿದ್ದವು . ಅವರ ಜೀವನ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟಾಸಾಧ್ಯವೆನಿಸುತ್ತಿತ್ತು .

ಯುವಪೀಳಿಗೆಗೆ ಕ್ರಿಕೆಟ್ ಹುಚ್ಚೇ ...!!!??

ಈ ಸಂಗತಿ ನಡೆದದ್ದು ೨೦೦೩ನೇ ಇಸವಿಯಲ್ಲಿ ...

"World Cup" cricket ಗೆ ಇನ್ನೆರಡು ದಿವಸ . ಮೊನ್ನೆ ಅಜ್ಜನ ಮೊದಲ ವರ್ಷದ ಶಿವಗಣಾರಧನೆ ನೆರವೇರಿತು . ಅಂದು ಶ್ರೇಯಸ್ ನ (ನನ್ನ ಸಹೋದರ) ತಾತನವರು Prof.Basavaraj ಒಂದು ಮುಖ್ಯ ವಿಷಯ ನಮ್ಮ ಮುಂದೆ ಇಟ್ಟರು .

ಅಮೃತವರ್ಷಿಣಿ , ದುರ್ಯೋಧನ , ಕರ್ಣ , ಭಾನುಮತಿ ಮತ್ತು ಬಿದ್ದು ಹೋದ ಮುತ್ತುಗಳು

(ಸ್ವಲ್ಪ ದೊಡ್ಡದೇ ಆದ ಬರಹ ಇದು.  ನಿಮಗೆ ಓದಲು ಹೆಚ್ಚು ಪುರುಸೊತ್ತು ಇಲ್ಲದಿದ್ದರೆ ಕೊನೆಗೆ ಸಾರಾಂಶವನ್ನು ಕೊಟ್ಟಿದ್ದೇನೆ , ಅದನ್ನು  ತಪ್ಪದೇ ಓದಿ)

ನೀವು ಅಮೃತವರ್ಷಿಣಿ ಚಲನಚಿತ್ರ ನೋಡಿರಬಹುದು . ಅಲ್ಲಿ ಈ ಪ್ರಸಂಗದ ಉಲ್ಲೇಖ ಇದೆ. ಮೊನ್ನೆ ನಾನು ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲಿ ಸೇಡಿಯಾಪು ಕೃಷ್ಣಭಟ್ಟರ ಲೇಖನಗಳ ಸಂಗ್ರಹ 'ವಿಚಾರ ಪ್ರಪಂಚ' ಕೊಂಡುಕೊಂಡೆ.

ಎರಡು ಒಳ್ಳೆಯ ನಗೆಹನಿಗಳು .

ಈಚೆಗೆ ನಾನು ಓದಿದ ಎರಡು ಒಳ್ಳೆಯ ನಗೆಹನಿಗಳು .

೧) ಹರಿಕಥೆಯ ಸಮಯ . ಪ್ರವಚನಕಾರನು ಸೇರಿದ ಜನರಿಗೆ "ಸ್ವರ್ಗಕ್ಕೆ ಹೋಗಲು ಯಾರಿಗೆ ಆಸಕ್ತಿ ಇದೆ ಅವರೆಲ್ಲಾ ಕೈ ಎತ್ತಿ" ಎಂದು ಕೇಳಿಕೊಳ್ಳುತ್ತಾನೆ. ಆಗ ಎಲ್ಲರೂ ಕೈ ಎತ್ತುತ್ತಾರೆ . ಅಲ್ಲಿ ಇದ್ದ ಒಬ್ಬಳೇ ಮುದುಕಿ ಮಾತ್ರ ಮೊದಲು ಕೈ ಎತ್ತಿ ಆಮೇಲೆ ಕೈ ಕೆಳಗಿಳಿಸುತ್ತಾಳೆ.