ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೀತಿಯ ಹಬ್ಬ

ಇಂದುಪ್ರೇಮಿಗಳ ದಿನ.ಅದೆಷ್ಟೋ ಮೂಡದ ಮಾತುಗಳಾಚೆಯ ಸಂಕೇತ ಸಂಬಂಧ ಸಾಮಿಪ್ಯಗಳು ತಲೆ ಎತ್ತುತ್ತವೆ. ಪ್ರೇಮಿಗಳು ಮಾತ್ರ ತಲೆ ತಗ್ಗಿಸುತ್ತಾರೆ! ತಲ್ಲಣವನ್ನು ಹಿಡಿ ಹ್ರುದಯದಲ್ಲಿರಿಸಿ ಉಸುರುವವರೇನು ಪ್ರೀತಿಯ ಪಸರುವವರೇನು..!

ವಿಜ್ಜಾಚರಣ ಸಂಪನ್ನ - ಭಗವಾನ್ ಬುದ್ಧನ ಕುರಿತಾದ ಒಳ್ಳೆಯ ಅಧ್ಯಯನ

ವಿಜ್ಜಾಚರಣ ಸಂಪನ್ನ ಅಂದರೆ ಜ್ಞಾನ ಮತ್ತು ಆಚರಣೆಗಳಿಂದ ಕೂಡಿದ ಎಂದರ್ಥ. ಈ ಪುಸ್ತಕ ಬುದ್ಧನ ಕುರಿತು ಪ್ರಚಲಿತ ವಿಷಯಗಳನ್ನಾಧರಿಸದೆ , ಪಾಲಿ ಭಾಷೆಯಲ್ಲಿರುವ ಬೌದ್ಧ ಸಾಹಿತ್ಯ ಮೂಲಗಳನ್ನು ಅಧ್ಯಯನ ಮಾಡಿ ಬರೆದಿರುವ ಪುಸ್ತಕ . ಉದಾಹರಣೆಗೆ ಎಲ್ಲರೂ ನಂಬಿಕೊಂಡಿರುವಂತೆ ರಾಜಕುಮಾರ ಸಿದ್ಧಾರ್ಥ ಒಬ್ಬ ರೋಗಿ , ಹಣ್ಣು ಹಣ್ಣು ಮುದುಕ, ಮತ್ತು ಒಂದು ಶವಯಾತ್ರೆಯನ್ನು ನೋಡಿ ಸಂಸಾರವನ್ನು ತ್ಯಜಿಸಿದ ಘಟನೆ ನಿಜಕ್ಕೂ ಅವನ ಜೀವನದಲ್ಲಿ ನಡೆದದ್ದೇ ಅಲ್ಲ ; ಅದು ಬೇರೆ ಯಾರೋ ಸನ್ಯಾಸಿಗೆ ಸಂಬಂಧಿಸಿದ್ದು ರಾಜಕುಮಾರ ಸಿದ್ದಾರ್ಥನಿಗೆ ಆರೋಪಿಸಲ್ಪಟ್ಟು , ಅಸಂಖ್ಯ ಕಲಾವಿದರಿಗೆ , ಕವಿಗಳಿಗೆ ವಸ್ತುವಾಗಿದೆ.

ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ ಗೊತ್ತಿದ್ದರೆ ತಿಳಿಸಿ.

ನೀವು ಈ ಜನಪದ ಹಾಡನ್ನು ಕೇಳಿರಬಹುದು .( ಜೋಗಿ ಚಿತ್ರದಲ್ಲಿ ಇರುವದು ಅಲ್ಲ. ಜನಪದದಲ್ಲಿ ಇರುವ ಹಾಡು) . ಸಿ. ಅಶ್ವಥ್ ಮತ್ತಿತರರು ಇದನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ.

ಕನ್ನಡ ಪ್ರಭ-ಲೇಖನ

ಕನ್ನಡ ಪ್ರಭ ದಲ್ಲಿನ ಜೋಗಿಯವರ -ಮಾಯಾಲೋಕ ದ ಬಗೆಗಿನ ಲೇಖನ ಓದಿದೆ. ಇತ್ತೀಚೆಗೆ ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಗಮನಕೊಡುತ್ತಿರುವ ಕನ್ನಡ ಪ್ರಭದ ಸಾಪ್ತಾಹಿಕ ಪುರುವಣಿಯಲ್ಲಿ ಅದೂ ತೇಜಸ್ವಿಯವರ ಮಹತ್ವಪೂರ್ಣ ಕಾದಂಬರಿ ಬಗ್ಗೆ ಇಂತಹ ಸಾಮನ್ಯ ದರ್ಜೆಯ ಅದೂ ಮುಖಪುಟದಲ್ಲಿ ಪ್ರಕಟವಾಗಿರುವುದು ನೋಡಿ ಬೇಸರವಾಯಿತು.

ಐದನೆಯ ಸಂಚಿಕೆ - ಡಾ|| ಜಿ ಎಸ್ ಶಿವರುದ್ರಪ್ಪನವರೊಂದಿಗೆ

ಸಂಪದದ ಗೆಳೆಯರಿಗಾಗಿ ಈ ಬಾರಿ ಕನ್ನಡದ ಕವಿ ಡಾ|| ಜಿ ಎಸ್ ಶಿವರುದ್ರಪ್ಪನವರ ಸಂದರ್ಶನ. ತಾವು ಅನೇಕರು ಜಿ ಎಸ್ ಎಸ್ ಅವರ ಎಷ್ಟೋ ಕವಿತೆಗಳನ್ನು ಓದಿದ್ದೀರಿ, ಹಾಡುಗಳನ್ನ ಕೇಳಿದ್ದೀರಿ, ಕನ್ನಡದ ತುಂಬ ಜನ ಪ್ರೀತಿಯನ್ನು ಗಳಿಸಿಕೊಂಡಿರುವ, ನಮ್ಮ ಎಷ್ಟೋ ಭಾವನೆಗಳಿಗೆ ಮಾತನ್ನು ಕೊಟ್ಟಿರುವ ಬಹಳ ಮುಖ್ಯವಾದ ಕವಿ ಅವರು. ಮೊನ್ನೆ ತಾನೆ, ಅಂದರೆ ಫೆಬ್ರುವರಿ ೭ನೇ ತಾರೀಖು ನಮ್ಮ ಜಿ ಎಸ್ ಎಸ್ ಅವರಿಗೆ ೮೦ ವರ್ಷ ತುಂಬಿ, ಈಗ ೮೧ರ ಹರೆಯಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ನಡೆದ ಈ ಸಂದರ್ಶನದಲ್ಲಿ:

೧. ಕಾವ್ಯೋದ್ಯಮ ಶುರು ಮಾಡಿದ್ದು, ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿದ್ದು, ಬಾಲ್ಯ

೨. ಕಾವ್ಯಗಳಲ್ಲಿ 'ಕತ್ತಲು ಬೆಳಕು' ಈ ಸಂಗತಿಗಳ ಬಗ್ಗೆ ನಮ್ಮೊಡನೆ ಸಂವಾದ ನಡೆಸಿದ್ದಾರೆ.

ರಂಗ್ ದೇ ಬಸಂತಿ

ಇದು ಸಿನೆಮಾ ವಿಮರ್ಶೆ ಮಾಡುವ ಪ್ರಯತ್ನ ಅಲ್ಲ.

'ರಂಗ್ ದೇ ಬಸಂತಿ' ನಾನು ಇತ್ತೇಚೆಗೆ ನೋಡಿದ ಒಂದು ಒಳ್ಳೆಯ ಚಲನಚಿತ್ರ.ಸ್ಯೂ(Sue), ತನ್ನ ಅಜ್ಜನ ಡೈರಿಯನ್ನು ಆಧಾರವಾಗಿಟ್ಟುಕೊಂಡು ಭಾರತದ ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ ಕ್ರಾಂತಿಕಾರಿಗಳ ಕುರಿತು ಸಾಕ್ಶ್ಯಚಿತ್ರ ಮಾಡಲು ಭಾರತಕ್ಕ್ತೆ ಬರುವುದರೊಂದಿಗೆ ಕತೆ ಪ್ರಾರಂಭವಾಗುತ್ತದೆ.ತನ್ನ ಚರಿತ್ರೆಯೊಂದಿಗೆ ಗುರುತಿಸಿಕೊಳ್ಲಲಾಗದ ಗೆಳೆಯರ ಗುಂಪೊಂದು(Products of modern India), ಸಾಕ್ಶ್ಯಚಿತ್ರದಲ್ಲಿ ಅಭಿನಯಿಸುತ್ತಾ, ಭಗತ್ ಸಿಂಗ್, ಚಂದ್ರಶೇಕರ ಆಝಾದ್ ಮೊದಲದ ಪಾತ್ರಗಳ ಜೊತೆ ಗುರುತಿಸಿಕೊಳ್ಳುತ್ತಾರೆ. ತಮ್ಮ ಗೆಳೆಯನ ಸಾವಿಗೆ ಪ್ರತಿಕಾರ ತೆಗೆದುಕೊಳ್ಳಲು, ಭಾರತದ ರಕ್ಷಣಾ ಮಂತ್ರಿಯ ಕೊಲೆ ಮಾಡಿ,ಅದನ್ನು ಜಗತ್ತಿಗೆ ಆಕಾಶವಾಣಿಯ ಮೂಲಕ ತಿಳಿಸುತ್ತಾರೆ.ಈ ಮಧ್ಯೆ ಗೆಳೆಯರ ನಡುವಿನ ತಮಾಷೆಯ ಮಾತುಕತೆ(Fun) ಇದೆ.ಹಿಂದೂ ಮೂಲಭೂತವಾದಿಗಳು ಬಂದು ಹೋಗುತ್ತಾರೆ.ಈ ದೇಶದಲ್ಲಿ ಏನು ಬದಲಾಗೊಲ್ಲ ಎನ್ನುವ ಯುವ ಜನತೆಯ ನಿರಾಶವಾದ ಇದೆ.ಇದನ್ನು ನಾವೇ ಬದಲಾಯಿಸಬೇಕು ಎನ್ನುವ ಸಂದೇಶದೊಂದಿಗೆ ಸಿನೆಮಾ ಮುಗಿಯುತ್ತದೆ.

ಭಾಗ - ೮

ಊರಿಗೆ ಹೋದ ತಕ್ಷಣ ತಿಳಿದ ವಿಷಯವೇನೆಂದರೆ - ೨-೩ ದಿನಗಳ ಹಿಂದೆ ನನ್ನ ತಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ೨೦ ವರ್ಷಗಳ ಹಿಂದೆ ಅಂದರೆ ೧೯೬೪ರಲ್ಲಿ ನನಗಿನ್ನೂ ೪ ವರ್ಷವಾಗಿದ್ದಾಗ ಹೀಗೊಮ್ಮೆ ಆಗಿತ್ತಂತೆ. ಆಗ ಎಡಭಾಗಕ್ಕೆ ಪಾರ್ಶ್ವವಾಯುವಾಗಿ ಅಂಕೋಲಕ್ಕೆ ಹೋಗಿ ನಾಟಿ ವೈದ್ಯರಿಂದ ಔಷೋಧೋಪಚಾರ ಮಾಡಿಸಿ ಸರಿ ಹೋಗಿದ್ದರಂತೆ. ಈಗ ಮತ್ತೆ ಹೀಗಾಗಿದ್ದಾಗ (ಈ ಸಲ ಶರೀರದ ಬಲಭಾಗಕ್ಕೆ ಅಟ್ಯಾಕ್ ಆಗಿತ್ತು), ತಮ್ಮನ್ನು ಅಂಕೋಲಕ್ಕೆ ಕರೆದೊಯ್ಯು ಎಂದು ನನಗೆ ಹೇಳಿದ್ದರು. ಆಸ್ಪತ್ರೆಗೆ ಕರೆದೊಯ್ಯುವುದಾಗಿ ನಾನು ಹೇಳಲು, ನನ್ನ ತಾಯಿಯೂ ತಂದೆಯವರು ಹೇಳಿದಂತೆಯೇ ಕೇಳಲು ಹೇಳಿದ್ದರು. ಮಾರನೆಯ ದಿನ ಬೆಳಗ್ಗೆ ಶಿವಮೊಗ್ಗ ಮುಖಾಂತರ ಅಂಕೋಲಕ್ಕೆ ಪ್ರಯಾಣ ಬೆಳೆಸಿದೆವು. ರಾತ್ರಿ ೮.೩೦ರ ಹೊತ್ತಿಗೆ ಅಂಕೋಲಾ ತಲುಪಿ ಬಸ್ ನಿಲ್ದಾಣದ ಹತ್ತಿರವಿರುವ ಒಂದು ಹೊಟೆಲ್‍ಗೆ ಊಟಕ್ಕೆಂದೆ ಹೋದರೆ, ಇನ್ನೇನು ಹೊಟೆಲ್ ಮುಚ್ಚುವ ವೇಳೆ ಆಗಿದೆಯೆಂದೂ ತಿನ್ನಲು ಅವಲಕ್ಕಿ ಮಾತ್ರವಿದೆಯೆಂದೂ ಅದರ ಮಾಲಿಕ ಹೇಳಿದ್ದರು. ಅದನ್ನೇ ತಿಂದು ಉಳಿಯಲು ಹತ್ತಿರದಲ್ಲೇ ಇದ್ದ ಒಂದು ಲಾಡ್ಜ್‍ನಲ್ಲಿ ಕೋಣೆಯನ್ನು ಹಿಡಿದಿದ್ದೆವು.