ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೇಸಿಗೆ ಬಂದಿದೆ :

೦೬-೪-೨೦೦೬ - ಗುರುವಾರ - ಮಧ್ಯಾನ್ಹ ೧-೦೦ ಗಂಟೆ

ಆತ್ಮೀಯ ಸಂಪದದ ಸ್ನೇಹಿತರೇ,
ಬೇಸಿಗೆ ಬಂದಿದೆ. ಆಹಾರದಲ್ಲಿ ಎಚ್ಚರ ವಹಿಸಿ. ಹೊರಗಡೆ ಏನನ್ನೂ ತಿನ್ನಲು ಹೋಗಬೇಡಿ. ಅದರಲ್ಲೂ ಎಣ್ಣೆ ಹಾಕಿದ ತಿಂಡಿಗಳು, ಮಸಾಲೆ ದೋಸೆ ಇತ್ಯಾದಿ, ಪಾನೀ ಪೂರಿ ಇತ್ಯಾದಿ, ಐಸ್ ಕ್ರೀಂ ಇವನ್ನೆಲ್ಲಾ ತಿನ್ನಲು ಹೋಗಬೇಡಿ. ಧಾರಾಳವಾಗಿ ಸಿಹಿ ಹಣ್ಣಿನ ರಸ ಕುಡಿಯಿರಿ. ಶುದ್ಧವಾದ ನೀರು ಯಥೇಚ್ಚವಾಗಿ ಕುಡಿಯಿರಿ. ಇಲ್ಲದಿದ್ದರೆ ಚೆನ್ನಾಗಿ ಕಾಯಿಸಿ ಆರಿಸಿರುವ ನೀರನ್ನೂ ಬೇಕಾದರೂ ಕುಡಿಯಬಹುದು. ಹೊಟ್ಟು ಸಮೇತ ಇರುವ ಧಾನ್ಯಗಳನ್ನು, ಅಂದರೆ ಪಾಲೀಶ್ ಮಾಡದಿರುವ ಕೆಂಪಕ್ಕಿ, ಹೊಟ್ಟು ತೆಗೆಯದೆ ಇರುವ ಗೋಧಿ, ಹೆಸರು ಕಾಳು, ಕಡ್ಲೆ ಕಾಳು ಇತ್ಯಾದಿ, ಎಲ್ಲಾ ತರಹದ ಮೊಳಕೆ ಬರಿಸಿದ ಕಾಳುಗಳ ಸೇವನೆಯನ್ನು ಮಾಡಿರಿ. ಪಾಲೀಶ್ ಮಾಡದೇ ಇರುವ ಕೆಂಪಕ್ಕಿ ಯನ್ನು ಊಟ ಮಾಡಿದರೆ ಈ ಕಡು ಬಿಸಿಲ ಬೇಗೆಯನ್ನು ಖಂಡಿತವಾಗಿ ಎದುರಿಸಬಹುದು. ಸುಸ್ತಾಗುವುದಿಲ್ಲ ಮತ್ತು ಸಂಕಟವಾಗುವುದಿಲ್ಲ.

ಅಜೇಯನ ರಂಗ ಪ್ರವೇಶ

ಸಂಪದಕ್ಕೆ ನನ್ನ ರಂಗ ಪ್ರವೇಶ ಇಂದೇ.. ಅದಕ್ಕೆ ಈ ಸ್ವ-ಪರಿಚಯ...

ನನ್ನ ಹೆಸರು: ಅಜೇಯ ಕುಮಾರ ... ಚಿಕ್ಕಮಗಳೂರು ಜಿಲ್ಲೆ.. ಬಾಲ್ಯ ಕಳೆದಿದ್ದೆಲ್ಲ ಬಾಳೆಹೊನ್ನೂರಿನ ಹತ್ತಿರದ ಜೇನುಗದ್ದೆಯ ಕಾಫಿ ತೋಟದ ಕಾಡಿನ ಮಡ್ಯದ ಒಂದು ಹಳ್ಳಿಯಲ್ಲಿ...ನಮ್ಮ ಹಳ್ಳಿಯಿಂದ ಬಸ್ ಗಾಗಿ ಸಹ ೭-೮ ಮೈಲಿ ಕಾಡಲ್ಲಿ ನಡೆದು ಬರಬೇಕು.. ಹಾಗಂತ ಕಾಡು ಮನುಷ್ಯ ಎಂದುಕೊಳ್ಬೇಡಿ...

ಗ್ರೆಗೊರಿ ಪೆಕ್ : ಒಂದು ಸ್ಮರಣೆ.

ಗ್ರೆಗೊರಿ ಪೆಕ್ : ಒಂದು ಸ್ಮರಣೆ. 'ಗನ್ಸ್ ಆಫ್ ನವರೊನ್', 'ಮೆಕೆನ್ನಾಸ್ ಗೋಲ್ಡ್,' ನಂತಹ ಪ್ರಸಿದ್ದ ಚಿತ್ರಗಳಲ್ಲಿ ಭಿನಯಿಸಿದ 'ದೀಮಂತ' ನಟ,ಬದುಕಿದ್ದಿದ್ದರೆ, ಈ ದಿನ ಅವನಿಗೆ 90 ಅರ್ಷ ತುಂಬುತ್ತಿತ್ತು ! 'ಪೆಕ್' ಹುಟ್ಟಿದ್ದು ಅಮೆರಿಕದ ಕ್ಯಾಲಿಫೋರ್ನಿಯ,ದಲ್ಲಿ. ಮುಂದೆ ಅವನು ಥಿಯೇಟರ್ ಗಳಲ್ಲಿ ದುಡಿದು, ನಂತರ ಹಾಲಿವುಡ್ ಸಿನಿಮಾ ರಂಗವನ್ನು ಪ್ರವೇಶಿಸುತ್ತಾನೆ. 5 ಬಾರಿ 'ಆಸ್ಕರ್ ಪ್ರಶಸ್ತಿ'ಗೆ ನೇಮಕಾತಿಯಾಗಿದ್ದು, 1962 ರಲ್ಲಿ ರಿಲೀಸ್ ಆದ 'ಆಟಿಕಸ್ ಫಿಂಚ್' ಎಂಬ ಚಿತ್ರದಲ್ಲಿ ಶ್ರೇಷ್ಟ ಅಭಿನಯ ಮಾಡಿದ್ದಕ್ಕೆ ಪುರಸ್ಕ್ರುತನಾದನು.

ಕನ್ನಡದಲ್ಲಿನ ನವೀಕ್ರುತ ಗಾದೆಗಳು

ಈವರೆಗೆ ತು೦ಬಾ ಸೀರಿಯಸ್ ವಿಶಯಗಳು ಪ್ರಸ್ತಾಪವಾಗಿವೆ.
ಈಗ ಸ್ವಲ್ಪ ಫನ್ ಟೈ೦ಮ್

ಉ.ದಾ

ಹೆತ್ತವಳ ಸ೦ಕಟ ಸಿಝೇರಿಯನ್ ಆದವಳಿಗೆ ಏನು ಗೊತ್ತು

ತೆಂಕಣ ಗಾಳಿಯಾಟ !

ತೆಂಕಣ ಗಾಳಿಯಾಟ !

-ಶ್ರೀ. ಪಂಜೆ ಮಂಗೇಶರಾಯರು.

ಗಿಡಗಿಡದಿಂ -ಚೆಲುಗೊಂಚಲು ಮಿಂಚಲು- ಮಿಡಿಯನು ಹಣ್ಣನು, ಉದುರಿಸಿ ಕೆದರಿಸಿ, ಎಡದಲಿ ಬಲದಲಿ ಕೆಲದಲಿ ನೆಲದಲಿ, ಪಡುವಣ ಮೋಡವ ಬೆಟ್ಟಕ್ಕೆ ಗಟ್ಟಕೆ ಹೊಡೆದಟ್ಟುತ, ಕೋಲ್ ಮಿಂಚನು ಮಿರುಗಿಸಿ, ಗುಡುಗನು ಗುಡುಗಿಸಿ, ನೆಲವನು ನಡುಗಿಸಿ, ಸಿಡಿಲನು ತಾಳೆಗೆ ಬಾಳೆಗೆ ಎರಗಿಸಿ, ಜಡಿಮಳೆ ಸುರಿವೋಲ್, ಬಿರುಮಳೆ ಬರುವೋಲ್, ಕುಡಿ ನೀರನು ಒಣಗಿದ ನೆಲಕೆರೆವೋಲ್, ಬಂತೈ ಬೀಸುತ ! ಬೀಸುತ ಬಂತೈ

! ತೆಂಕಣ ಗಾಳಿಯು ಕೊಂಕಣ ಸೀಮೆಗೆ ಬಂತೈ ! ಬಂತೈ ! ಬಂತೈ ! ಆರು ಪದ್ಯಗಳಲ್ಲಿ ಹಿಡಿದಿಟ್ಟ,'ತೆಂಕಣ ಗಾಳಿಯ ಆರ್ಭಟ' ವನ್ನು ನಾವು ಅನುಭವಿಸುತ್ತಿದ್ದೇವೋ, ಎನ್ನುವಂತೆ 'ಹೃದಯಂಗಮವಾಗಿ' ನಿವೇದಿಸಿದ್ದಾರೆ !

ಇಲ್ಲಿ,ನಾನು ಕೊನೆಯ ಪದ್ಯವನ್ನು ಮಾತ್ರ,ಕೊಟ್ಟಿದ್ದೇನೆ.