ನಾಡ ಪ್ರಭು ಕೆಂಪೇಗೌಡ ಮತ್ತು ಕವಿ ಬಂಕಿಮ ಚಂದ್ರರಿಗೆ ನಮೋ ನಮಃ

ನಾವು ಈ ದಿನ (ಜೂನ್ ೨೭) ದಂದು ಇಬ್ಬರು ಮಹಾನ್ ವ್ಯಕ್ತಿಗಳನ್ನು ಸ್ಮರಿಸಲೇ ಬೇಕಾದ ದಿನ. ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಹಾಗೂ ಭಾರತ ಸ್ವಾತಂತ್ರ್ಯ ಯೋಧರ ನರನಾಡಿಗಳಲ್ಲಿ ತಮ್ಮ ‘ವಂದೇ ಮಾತರಂ’ ಹಾಡಿನ ಮೂಲಕ ದೇಶಭಕ್ತಿಯ ಸಂಚಲನ ಮೂಡಿಸಿದ ಕವಿ ಬಂಕಿಮ ಚಂದ್ರ ಚಟ್ಟೋಪಾಧ್ಯಾಯರ ಜನ್ಮದಿನ. ನಾವು ಸದಾ ಸ್ಮರಿಸಬೇಕಾದ ಈ ಎರಡು ಮಹಾನ್ ವ್ಯಕ್ತಿಗಳಿಗೆ ಅಕ್ಷರ ನಮನ ಸಲ್ಲಿಸೋಣ.

Image

ಸ್ವಾಮಿ ಮತ್ತು ಅವನ ಸ್ನೇಹಿತರು

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಆರ್.ಕೆ. ನಾರಾಯಣ್ ಕನ್ನಡಕ್ಕೆ: ಎಚ್.ವೈ.ಶಾರದಾ ಪ್ರಸಾದ್
ಪ್ರಕಾಶಕರು
ಪ್ರ: ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ
ಪುಸ್ತಕದ ಬೆಲೆ
ಬೆಲೆ: ೪೦.೦೦ ಮೊದಲ ಮುದ್ರಣ: ೧೯೯೫

ಸ್ವಾಮಿ ಮತ್ತು ಅವನ ಸ್ನೇಹಿತರು ಖ್ಯಾತ ಸಾಹಿತಿ ಆರ್.ಕೆ.ನಾರಾಯಣ್ ಅವರ ಮಾಲ್ಗುಡಿ ಡೇಸ್ ಎಂಬ ಕಥಾ ಸಂಕಲನದ ಒಂದು ಕಥಾ ಭಾಗ. ಕನ್ನಡದ ಖ್ಯಾತ ನಟ, ನಿರ್ದೇಶಕ ಶಂಕರ್ ನಾಗ್ ಈ ಕಥೆಗಳನ್ನು ಕಿರುತೆರೆಗೆ ಧಾರವಾಹಿ ರೂಪದಲ್ಲಿ ತಂದಿದ್ದು ಎಲ್ಲರಿಗೂ ತಿಳಿದ ವಿಷಯ. ಹಿಂದಿಯಲ್ಲಿ ಬಹಳ ಹಿಂದೆ ಪ್ರಸಾರವಾದ ಮಾಲ್ಗುಡಿ ಡೇಸ್ ಈಗ ಮತ್ತೆ ಕನ್ನಡಕ್ಕೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. 

ಮನೋಹರ್ ಪರಿಕ್ಕರ್ ಹೇಳಿದ ಕಲ್ಲಂಗಡಿ ಕಥೆ

ಗೋವಾದ ವಿಮಾನ ನಿಲ್ದಾಣಕ್ಕೆ ಒಂದು ಟ್ಯಾಕ್ಸಿ ಬಂದು ನಿಲ್ಲುತ್ತೆ. ಅದರಿಂದ ಓರ್ವ ಮಧ್ಯ ವಯಸ್ಕ, ಸಾಧಾರಣ ಉಡುಪು ಧರಿಸಿದ ವ್ಯಕ್ತಿ ಸಣ್ಣ ಬ್ಯಾಗ್ ಹಿಡಿದುಕೊಂಡು ನೇರ ಒಳಗೆ ಬರುತ್ತಾರೆ. ಚೆಕ್ ಇನ್ ಮಾಡಿಸಿಕೊಂಡು ವಿಮಾನ ಏರಲು ಕುಳಿತುಕೊಂಡು ಬ್ಯಾಗ್ ಒಳಗಿನಿಂದ ಒಂದು ಪುಸ್ತಕ ತೆಗೆದು ಓದಲು ಶುರು ಮಾಡುತ್ತಾರೆ. ವಿಮಾನ ಏರಲು ಕರೆ ಬಂದಾಗಲೂ ಅಷ್ಟೇ ಸರದಿ ಸಾಲಿನಲ್ಲಿ ಹೋಗಿ ವಿಮಾನದಲ್ಲಿ ಕುಳಿತುಕೊಂಡು, ವಿಮಾನದಿಂದ ಇಳಿದಾಗಲೂ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಬಸ್ ಮೂಲಕವೇ ಪ್ರಯಾಣಿಸಿ ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಾರೆ. ಇವರು ಸಾಧಾರಣ ವ್ಯಕ್ತಿ ಎಂದು ತಿಳಿದಿರಾ?

Image

‘ಕಪಿಲ್ ಡೆವಿಲ್ಸ್’ ೧೯೮೩ರ ವಿಶ್ವಕಪ್ ವಿಜೇತರಾದದ್ದು ಹೇಗೆ ಗೊತ್ತಾ?

೧೯೮೩ರ ಕ್ರಿಕೆಟ್ ವಿಶ್ವಕಪ್ ಗಾಗಿ ಇಂಗ್ಲೆಂಡ್ ಗೆ ವಿಮಾನ ಹತ್ತುವ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ವಿದೇಶಕ್ಕೆ ಪಿಕ್ ನಿಕ್ ಹೋಗೋದು, ಚೆನ್ನಾಗಿ ತಿನ್ನೋದು, ತಿರುಗಾಡೋದು,ಮಜಾ ಮಾಡಿ ಭಾರತಕ್ಕೆ ಬರೋದು ಎಂದು ಕೊಂಡೇ ಹೋಗಿದ್ದರು. ಯಾಕೆಂದರೆ ಹಿಂದೆ ನಡೆದ ೨ ವಿಶ್ವಕಪ್ ಗಳಲ್ಲಿ ಭಾರತದ ಸಾಧನೆ ಸೊನ್ನೆ.  ಆದರೆ ಮೂರನೇ ವಿಶ್ವಕಪ್ ನಲ್ಲಿ ನಡೆದದ್ದೇ ಬೇರೆ. ಯಾವ ತಂಡಗಳು ಅತ್ಯಂತ ದುರ್ಬಲ ಎಂದು ಎಣಿಸಿದ್ದರೋ ಅವುಗಳು ಬಲಿಷ್ಟ ತಂಡಗಳ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದವು. ನಾವು ಮೊದಲಿಗೆ ೧೯೮೩ರ ವಿಶ್ವಕಪ್ ಮತ್ತು ಅದರಲ್ಲಿ ಆಟವಾಡಿದ ತಂಡಗಳ ಬಗ್ಗೆ ಗಮನಿಸುವ.

Image

ಮಗುವಿನ ಮನಸ್ಸಿನ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರಿಗೆ ಇಂದು ಜನ್ಮದಿನದ ಸಂಭ್ರಮ

ಸಾಹಿತ್ಯ ಲೋಕಕ್ಕೆ ಡಾ. ಎಚ್ಚೆಸ್ವಿ ಎಂದೇ ಚಿರಪರಿಚಿತರಾಗಿರುವ ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರಿಗಿಂದು ಜನ್ಮದಿನದ ಸಂಭ್ರಮ (ಜನನ: ೨೩-೦೬-೧೯೪೪). ಕವನಗಳು ನನ್ನಿಂದ ಮುನಿಸಿಕೊಂಡಿದ್ದರೂ ವೆಂಕಟೇಶಮೂರ್ತಿಯವರ ಬಗ್ಗೆ ಸ್ವಲ್ಪ ಸ್ವಲ್ಪ ಓದಿ ಕೊಂಡದ್ದಿದೆ. ನಾನಿಲ್ಲಿ ಅವರ ಕವನಗಳ ಬಗ್ಗೆ ಬರೆಯುದಿಲ್ಲ. ಆದರೆ ಅವರ ಬಗ್ಗೆ ಸ್ವಲ್ಪವಾದರೂ ಬರೆದರೆ ಅವರ ಜನ್ಮದಿನಕ್ಕೆ ಶುಭ ಕೋರಿದ ಹಾಗೆ ಆಗುತ್ತದೆ ಎಂಬ  ಕಿಂಚಿತ್ತು ನಂಬಿಕೆ ನನ್ನದು.

Image

ನುಗ್ಗೇಸೊಪ್ಪಿನ ಖಾರ ದೋಸೆ

Image

ತಯಾರಿಕಾ ವಿಧಾನ: ಮೊದಲಿಗೆ ತೊಗರಿ ಬೇಳೆ ಹಾಗೂ ಅಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ನೆನೆಸಿದ ಅಕ್ಕಿ ಹಾಗೂ ಬೇಳೆ, ಮೆಣಸು, ಹುಣಸೆ ಹುಳಿ, ಇಂಗು, ಉಪ್ಪು, ಕಾಯಿ ತುರಿ ಎಲ್ಲವನ್ನೂ ಸೇರಿಸಿ ನಯವಾಗಿ ರುಬ್ಬಿರಿ.

ಬೇಕಿರುವ ಸಾಮಗ್ರಿ

ಬೇಕಾಗುವ ವಸ್ತುಗಳು: ಸ್ವಲ್ಪ ನುಗ್ಗೆ ಸೊಪ್ಪು, ಕೆಂಪು ಮೆಣಸು ೭-೮, ತೊಗರಿ ಬೇಳೆ ಹಾಗೂ ಬೆಳ್ತಿಗೆ ಅಕ್ಕಿ ತಲಾ ಅರ್ಧ ಪಾವು, ನೀರುಳ್ಳಿ ೧, ತೆಂಗಿನ ತುರಿ ೨ ದೊಡ್ಡ ಚಮಚ, ಹುಣಸೆ ಹುಳಿ ಸ್ವಲ್ಪ, ಇಂಗು, ರುಚಿಗೆ ಉಪ್ಪು, ಎಣ್ಣೆ.

 

ರಣಜಿ ಪಂದ್ಯಗಳಲ್ಲಿ ಗರಿಷ್ಟ ವಿಕೆಟ್ ದಾಖಲೆಯ ರಾಜೀಂದರ್ ಗೋಯೆಲ್

ಸಾಮಾಜಿಕ ಜಾಲತಾಣದಲ್ಲಿ ಹೀಗೆಯೇ ಕಣ್ಣಾಡಿಸುತ್ತಿರುವಾಗ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆಯವರ ಟ್ವೀಟ್ ಒಂದು ಗಮನ ಸೆಳೆಯಿತು. ಒಂದು ಕಾಲದಲ್ಲಿ ದೇಶೀಯ ಕ್ರಿಕೆಟ್ ಜಗತ್ತಿನ ಪ್ರಮುಖ ಆಧಾರ ಸ್ತಂಭವಾಗಿದ್ದ ರಾಜೀಂದರ್ ಗೊಯೆಲ್ ಅವರ ನಿಧನಕ್ಕೆ ಅಂತಿಮ ನಮನ ಸಲ್ಲಿಸುತ್ತಿದ್ದೇನೆ ಎಂಬುದು ಆ ಟ್ವೀಟ್ ನ ಸಾರ. ಅದನ್ನು ಗಮನಿಸಿದ ನನಗೆ ರಾಜೀಂದರ್ ಗೋಯೆಲ್ ಎಂಬ ವ್ಯಕ್ತಿಯ ಬಗ್ಗೆ ತಿಳಿಯುವ ಮನಸ್ಸಾಯಿತು.

Image

ಭಾರತೀಯ ಚಿತ್ರಕಲೆ ಭಾಗ೬: ಹಸೆ ಚಿತ್ತಾರಗಳು

ನಮ್ಮ ಗ್ರಾಮೀಣ ಜನರ ಜೀವನಪ್ರೀತಿ ದೊಡ್ಡದು. ಪ್ರಕೃತಿಯನ್ನು ಗಮನಿಸುತ್ತಲೇ ಅವರು ಬದುಕಿದರು. ಪ್ರಕೃತಿಯ ಆಗುಹೋಗುಗಳಿಗೆ ಸ್ಪಂದಿಸುತ್ತ ಚಿತ್ರ ಬರೆದರು; ತಮ್ಮ ನೋವುನಲಿವುಗಳನ್ನು ಹಾಡುಗಳನ್ನಾಗಿಸಿದರು. ಅವರು ಬರೆದ ಚಿತ್ರಗಳು ಅವರ ಮನಸ್ಸಿನ ಭಾವನೆಗಳಿಗೆ ಆಕೃತಿ ಕೊಡುವ ಪ್ರಯತ್ನಗಳು.

Image

ಅಂತರಾಷ್ಟ್ರೀಯ ಯೋಗ ದಿನ ; ನಿತ್ಯ ಯೋಗ ಮಾಡಿ, ಆರೋಗ್ಯವಂತರಾಗಿರಿ

ಯೋಗ ಎನ್ನುವ ಒಂದು ಕಾಯಕವನ್ನು ನಾವು ಅನಾದಿ ಕಾಲದಿಂದಲೂ ಮಾಡುತ್ತಾ ಬಂದಿದ್ದೇವೆ. ಭಾರತೀಯರ ಪಾಲಿಗಂತೂ ಯೋಗ ಎನ್ನುವುದು ಹೊಸ ವಿಚಾರ ಅಲ್ಲವೇ ಅಲ್ಲ. ನಮ್ಮ ಋಷಿ ಮುನಿಗಳ ಕಾಲದಿಂದಲೂ ಆರೋಗ್ಯ ಮತ್ತು ಮಾನಸಿಕ ಧೃಡತೆಗಾಗಿ ನಾವು ಕಾಪಾಡಿಕೊಂಡು ಬಂದ ದಿವ್ಯ ಸಂಜೀವಿನಿ ವಿದ್ಯೆಯೇ ಯೋಗ. ಯೋಗ ಮಾಡಿ ನಿರೋಗಿಯಾಗಿ ಎನ್ನುವುದು ಇತ್ತೀಚಿನ ಮಾತಲ್ಲ. ತಲತಲಾಂತರದಿಂದ ಬಂದ ಒಂದು ಪ್ರಾಚೀನ ವಿದ್ಯೆ ಅದು. ಹಲವಾರು ಆಸನಗಳು.

Image