ಯಕ್ಷಗಾನ ಪುರಾಣ ಜ್ಞಾನ ದರ್ಶನ

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಕೃಷ್ಣ ಶೆಟ್ಟಿ (ಕುಡು ಮಲ್ಲಿಗೆ)
ಪ್ರಕಾಶಕರು
ಪರಿಣಿತ ಪ್ರಕಾಶನ, ಶಾಂತಿನಗರ, ಕಾವೂರು ಅಂಚೆ, ಮಂಗಳೂರು-೫೭೫೦೧೫
ಪುಸ್ತಕದ ಬೆಲೆ
೨೫೦.೦೦ ಮೊದಲ ಮುದ್ರಣ: ೨೦೧೧

‘ಕುಡು ಮಲ್ಲಿಗೆ’ ನಾಮಾಂಕಿತದಿಂದ ಖ್ಯಾತಿ ಪಡೆದ ಕೆ.ಕೃಷ್ಣ ಶೆಟ್ಟಿಯವರದ್ದು ಬಹುಮುಖ ಪ್ರತಿಭೆ. ಹುಟ್ಟಿದ್ದು ಮಲೆನಾಡಿನ ಕುಡುಮಲ್ಲಿಗೆಯಲ್ಲಿ. ಇವರು ಕಲಿತದ್ದು ಕಮ್ಮಿಯಾದರೂ ಅನುಭವ ಇವರನ್ನು ಪಕ್ವರನ್ನಾಗಿಸಿದೆ. ವೃತ್ತಿ ಸಂಬಂಧ ಮುಂಬೈ, ಉಡುಪಿಗಳಲ್ಲಿ ತಿರುಗಾಡಿದರೂ ನೆಲೆ ನಿಂತದ್ದು ಮಂಗಳೂರಿನಲ್ಲಿ.

ಅಜ್ಜಿಯ ಉಪಾಯ ಮತ್ತು ಹುಲಿ

ಒಂದಾನೊಂದು ಕಾಲದಲ್ಲಿ ಪರ್ವತದ ಬುಡದಲ್ಲಿ ಅಜ್ಜಿಯೊಬ್ಬಳು ವಾಸ ಮಾಡುತ್ತಿದ್ದಳು. ಆ ಪರ್ವತದಲ್ಲಿ ಒಂದು ಹುಲಿಯಿತ್ತು. ಅದು ಅಜ್ಜಿಯ ಮೂಲಂಗಿ ಹೊಲಕ್ಕೆ ಆಗಾಗ ಬರುತ್ತಿತ್ತು.

ಅಜ್ಜಿ ಕಷ್ಟ ಪಟ್ಟು ಬೆಳೆಸಿದ ಮೂಲಂಗಿಗಳನ್ನು ಎಳೆದು ಎಳೆದು ಇಡೀ ಹೊಲವನ್ನು ಹುಲಿ ಹಾಳು ಮಾಡುತ್ತಿತ್ತು. ತನ್ನ ಹಸಿವು ನೀಗಿಸಲಿಕ್ಕಾಗಿ ಹುಲಿ ಮೂಲಂಗಿ ಎಳೆದು ಹಾಕುತ್ತಿದ್ದರೆ ಅಜ್ಜಿ ಸುಮ್ಮನಿರುತ್ತಿದ್ದಳು. ಆದರೆ, ಉಪಟಳ ಮಾಡಲಿಕ್ಕಾಗಿಯೇ ಹುಲಿ ಹಾಗೆ ಮಾಡುತ್ತಿತ್ತು. ಇದರಿಂದಾಗಿ ಅಜ್ಜಿಗೆ ಭಾರೀ ಕೋಪ ಬರುತ್ತಿತ್ತು.

Image

ಸ್ಪೆಷಲ್ ಬಟಾಟೆ ಪಲ್ಯ

Image

ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಬೆಳ್ಳುಳ್ಳಿ, ಸಾಸಿವೆ, ಉದ್ದಿನ ಬೇಳೆ, ಒಣಮೆಣಸು, ಕರಿಬೇವು, ಸಣ್ಣದಾಗಿ ಕತ್ತರಿಸಿದ ನೀರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಸಣ್ಣದಾಗಿ ಕತ್ತರಿಸಿದ ಬಟಾಟೆ, ಕತ್ತರಿಸಿದ ಟೋಮೇಟೋ, ಸಣ್ಣದಾಗಿ ಕತ್ತರಿಸಿದ ಹಸಿ ಮೆಣಸು ಹಾಕಿ. ಬಟಾಟೆ ಬೇಯಲು ಬೇಕಾದಷ್ಟು ನೀರನ್ನು ಹಾಕಿ.

ಬೇಕಿರುವ ಸಾಮಗ್ರಿ

ಹದ ಗಾತ್ರದ ಬಟಾಟೆ ೨, ನೀರುಳ್ಳಿ ೧, ಟೋಮೇಟೋ ೨, ಕಾಯಿ ಮೆಣಸು ೨-೩, ಕೊತ್ತಂಬರಿ ಸೊಪ್ಪು, ರುಚಿಗೆ ಉಪ್ಪು, ಸ್ವಲ್ಪ ಇಂಗು, ಅರಸಿನ ಹುಡಿ ಅರ್ಧ ಚಮಚ

ಒಗ್ಗರಣೆಗೆ: ಸ್ವಲ್ಪ ಸಾಸಿವೆ, ಬೆಳ್ಳುಳ್ಳಿ ೩-೪ ಎಸಳು, ಉದ್ದಿನ ಬೇಳೆ ೧ ಚಮಚ, ಒಣ ಮೆಣಸು ೨, ಸ್ವಲ್ಪ ಎಣ್ಣೆ, ಕರಿಬೇವಿನ ಸೊಪ್ಪು

 

ಸ್ಪೆಷಲ್ ಶಾವಿಗೆ ಒಗ್ಗರಣೆ

Image

ಮೊದಲು ಶಾವಿಗೆಯನ್ನು ಕಾವಲಿಯಲ್ಲಿ ಹಾಕಿ ಹುರಿಯಿರಿ. ನಂತರ ಬಾಣಲೆಗೆ ತೆಂಗಿನ ಎಣ್ಣೆ ಹಾಕಿ ಅದಕ್ಕೆ ಕತ್ತರಿಸಿದ ಕಾಯಿಮೆಣಸು, ಕತ್ತರಿಸಿದ ಈರುಳ್ಳಿ, ಉದ್ದಿನ ಬೇಳೆ, ಕಡಲೇ ಬೇಳೆ, ಕರಿ ಬೇವಿನ ಸೊಪ್ಪು ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಹುರಿದ ಶ್ಯಾವಿಗೆಯನ್ನು ಹಾಕಿ, ಒಲೆಯನ್ನು ಸಣ್ಣದು ಮಾಡಿ, ಬೇಯಲು ಬೇಕಾದಷ್ಟು ನೀರನ್ನು ಹಾಕಿ ಸರಿಯಾಗಿ ಮಗುಚಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.

ಬೇಕಿರುವ ಸಾಮಗ್ರಿ

ವರ್ಮಸೆಲ್ಲಿ ಶ್ಯಾವಿಗೆ ೧ ಕಪ್, ನೀರುಳ್ಳಿ ೧, ಕಾಯಿ ಮೆಣಸು ೩-೪, ಉದ್ದಿನ ಬೇಳೆ ೧ ಚಮಚ , ಕಡಲೇ ಬೇಳೆ ೧ ಚಮಚ, ಸ್ವಲ್ಪ ತೆಂಗಿನ ಎಣ್ಣೆ, ರುಚಿಗೆ ಉಪ್ಪು, ಬೇಕಾದಲ್ಲಿ ಸ್ವಲ್ಪ ಸಕ್ಕರೆ, ಕರಿಬೇವಿನ ಸೊಪ್ಪು

ರಾಮ್ ಪ್ರಸಾದ್ ಬಿಸ್ಮಿಲ್ ಎಂಬ ಕ್ರಾಂತಿಕಾರಿಯನ್ನು ನೆನೆಯುತ್ತಾ...!

ಜೂನ್ ೧೧ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಎಂಬ ಕವಿ, ಮಹಾನ್ ಕ್ರಾಂತಿಕಾರಿ, ಅಪ್ಪಟ ದೇಶಪ್ರೇಮಿ, ಸ್ವಾತಂತ್ರ್ಯ ಸಂಗ್ರಾಮದ ವೀರನ ಜನ್ಮ ದಿನ. ಕೇವಲ ಕ್ರಾಂತಿಕಾರಿಯಾಗಿ ಅಲ್ಲ ಉತ್ತಮ ವಾಗ್ಮಿ, ಕವಿಯಾಗಿಯೂ ರಾಮ್ ಪ್ರಸಾದ್ ಬಿಸ್ಮಿಲ್ ಇವರು ನಮ್ಮ ಮನದಾಳದಲ್ಲಿ ಅಮರರಾಗಿ ಉಳಿಯುತ್ತಾರೆ. ೧೮೯೭ರಲ್ಲಿ ಷಹಜಹಾನಪುರ ಎಂಬಲ್ಲಿ ಮುರಳೀಧರ ಮತ್ತು ಮೋಲಮತಿ ದಂಪತಿಗಳ ಸುಪುತ್ರರಾಗಿ ಜನಿಸುತ್ತಾರೆ.

Image

ಮೊಟ್ಟೆಯ ದೋಸೆ

Image

ಈರುಳ್ಳಿ ಮತ್ತು ಕಾಯಿಮೆಣಸನ್ನು ಸಣ್ಣಗೆ ತುಂಡರಿಸಿಕೊಳ್ಳಿ. ಗೋಧಿ ಹಿಟ್ಟಿಗೆ ಮೊಟ್ಟೆಯನ್ನು ಒಡೆದು ಹಾಕಿ ಅದರಲ್ಲೇ ಹಿಟ್ಟನ್ನು ಕಲಸಿ. ತುಂಬಾ ದಪ್ಪವಾಗದಂತೆ ಸ್ವಲ್ಪ ನೀರನ್ನು ಹಾಕ ಬಹುದು. ದೋಸೆ ಹಿಟ್ಟಿನಷ್ಟು ಹದಕ್ಕೆ ಬಂದ ಬಳಿಕ ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಕಾಯಿಮೆಣಸು, ಬೇವು ಮತ್ತು ಕೊತ್ತಂಬರಿ ಸೊಪ್ಪು, ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಬೇಕಿರುವ ಸಾಮಗ್ರಿ

ಗೋಧಿ ಹಿಟ್ಟು ೧ ಕಪ್, ಮೊಟ್ಟೆ ೨, ಈರುಳ್ಳಿ  ೧, ಕಾಯಿ ಮೆಣಸು ೨-೩, ರುಚಿಗೆ ಉಪ್ಪು, ಸ್ವಲ್ಪ ಎಣ್ಣೆ, ಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು

 

ಬಿಳಿ ಬಣ್ಣದ ಬೆಳಕು ಏಳು ಬಣ್ಣದ ಕಾಮನಬಿಲ್ಲು ಆಗುವುದು ಹೇಗೆ?

ಬೆಳಕು ಎನ್ನುತ್ತಲೇ ಎಲ್ಲೋ ಒಂದು ಕಡೆ ನಮ್ಮ ಮನಸ್ಸಲ್ಲೂ ಜ್ಯೋತಿ ಬೆಳಗಿದ ಅನುಭವ. ಬೆಳಕಿದ್ದರೆ ವಿಶ್ವದಲ್ಲಿ ಇಲ್ಲರೂ ಚಟುವಟಿಕೆಯಲ್ಲಿರುತ್ತಾರೆ. ಗಿಡಗಳು ತಮ್ಮ ಆಹಾರ ಉತ್ಪಾದಿಸಿ ನಮ್ಮ ಆಹಾರವನ್ನು ನೀಡುತ್ತವೆ. ಬೆಳಕೆಂದರೆ ಜ್ಞಾನ, ಕತ್ತಲೆಂದರೆ ಅಜ್ಞಾನ ಅಂಧಕಾರ ಹೀಗೆ ಹತ್ತು ಹಲವು ವಿಶ್ಲೇಷಣೆಗಳಿವೆ. ನಮ್ಮ ಪೂರ್ವಜರು ಕಂಡು ಹಿಡಿದ ಒಂದು ಮಹತ್ತರವಾದ ಬೆಳಕೆಂದರೆ ಬೆಂಕಿ.

Image

ಮನುಷ್ಯನ ಕ್ರೌರ್ಯವನ್ನು ತೆರೆದಿಡುವ ಕಾಂಬೋಡಿಯದ ‘ಜಿನೊಸೈಡ್’ ಮ್ಯೂಸಿಯಂ

ಮಾನವ ನಿರ್ಮಿತ ಪ್ರಪಂಚದ ಅದ್ಭುತಗಳಲ್ಲಿ ಒಂದು ಎಂದು ಖ್ಯಾತಿ ಪಡೆದ ಅಂಗ್ಕೊರ್ (Angkor) ದೇವಾಲಯಗಳಿರುವುದು  ಕ್ಯಾಂಬೋಡಿಯದ ಹಿಂದಿನ ರಾಜಧಾನಿ ಅಂಗ್ಕೊರ್ ನಗರದಲ್ಲಿ. ಇವುಗಳು ಮಾನವನ  ಪರಿಕಲ್ಪನೆ, ಸೃಜನಶೀಲತೆ (ಕ್ರಿಯೇಟಿವಿಟಿ) ಮತ್ತು   ಅಸಾಮಾನ್ಯ ಸಾಧನೆಯ ಒಂದು ಬೃಹತ್ ಪ್ರತೀಕ. ಜೊತೆಗೆ ಅದೇ ಮಾನವ ಅತ್ಯಂತ ಕ್ರೂರಿಯೂ ಆಗಬಲ್ಲ ಎಂಬ ಮಾತಿಗೆ ನಿದರ್ಶನ ಆ ದೇಶದ ಈಗಿನ ರಾಜಧಾನಿ ಪ್ನಾಮ್ ಪೆನ್ಹ್ (Phnom Penh) ನಲ್ಲಿರುವ ತುವೋಲ್ ಸ್ಲೆಂಗ್ ಹತ್ಯಾಕಾಂಡದ ವಸ್ತುಸಂಗ್ರಹಾಲಯ (Tuol Sleng Genocide Museum). 2019ರ ನವಂಬರದಲ್ಲಿ ನಾನು ಮತ್ತು ಐದು ಮಂದಿ ಬಂಧುಗಳು  ಕ್ಯಾಂಬೋಡಿಯಕ್ಕೆ ಭೇಟಿ ಕೊಟ್ಟಾಗ ಅವೆರಡನ್ನು ನೋಡುವ  ಅವಕಾಶ ಲಭಿಸಿತು.

Image

ಅಂದದ ಆರೋಗ್ಯಕ್ಕೆ ಆಪ್ತ ವೈದ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಪೂರ್ಣಿಮಾ ಕೋಡೂರು
ಪ್ರಕಾಶಕರು
ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು-ಅಂಚೆ, ಹೊಸನಗರ, ಶಿವಮೊಗ್ಗ-೫೭೭೪೪೫
ಪುಸ್ತಕದ ಬೆಲೆ
ರೂ.೫೦.೦೦ ಮುದ್ರಣ :೨೦೦೭

ಪುಸ್ತಕದ ಲೇಖಕಿಯಾದ ಡಾ.ಪೂರ್ಣಿಮಾ ಕೊಡೂರು ಇವರು ಸ್ವತಃ ಆಯುರ್ವೇದ ವೈದ್ಯೆಯೂ ಆಗಿರುವುದರಿಂದ ತಮ್ಮ ವೈದ್ಯಕೀಯ ವೃತ್ತಿಯ ಜೊತೆಗೆ ಜನರಿಗೆ ಆಪ್ತವಾಗುವ ರೀತಿಯಲ್ಲಿ ಆಯುರ್ವೇದ ಮನೆ ಮದ್ದುಗಳನ್ನು ನೀಡಿದ್ದಾರೆ. ಈ ಪುಸ್ತಕದಲ್ಲಿ ನಮಗೆ ಬರುವ ಹಲವಾರು ಕಾಯಿಲೆಗಳಿಗೆ ಮನೆ ಮದ್ದುಗಳ ವಿವರಗಳಿವೆ. ನಾವಿಂದು ನಮಗೆ ಬರುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿಕೊಳ್ಳುತ್ತೇವೆ.

ರೈತರ ಬದುಕು ಬದಲಿಸಿದ ಬಲವಾನ್ ಈರುಳ್ಳಿ

ಬಲವಾನ್ ಸಿಂಗ್ ಹರಿಯಾಣದ ಭಿವಾನಿ ಜಿಲ್ಲೆಯ ಅಲಕ್‍ಪುರ ಗ್ರಾಮದ ೫೯ ವರುಷದ ರೈತ. ವಿಜ್ನಾನಿಗಳಿಗೆ ಸರಿಮಿಗಿಲೆನುವಂತೆ ಅತ್ಯುತ್ತಮ ಗುಣವಟ್ಟದ ಈರುಳ್ಳಿ ತಳಿಯೊಂದ್ನ್ನು ಅಭಿವೃದ್ಧಿ ಪಡಿಸಿರುವುದು ಅವರ ಹೆಗ್ಗಳಿಕೆ.
ಉತ್ತಮ ಗುಣಮಟ್ಟದ ಈರುಳ್ಳಿ ಬೀಜಗಳನ್ನು ಅವರು ಖರೀದಿಸಿದ್ದು ೧೯೮೦ರ ದಶಕದಲ್ಲಿ. ಅನಂತರ, ಪ್ರತಿಯೊಂದು ಈರುಳ್ಳಿ ಬೆಳೆಯ ಫಸಲಿನಿಂದಲೂ ಅತ್ಯುತ್ತಮ ಈರುಳ್ಳಿಗಳನ್ನು ಬೀಜಕ್ಕಾಗಿ ತೆಗೆದಿಟ್ಟರು. ಈರುಳ್ಳಿಗಳ ಗಾತ್ರ, ಆಕಾರ ಮತ್ತು ಬಿಗಿತ – ಇವುಗಳ ಆಧಾರದಿಂದ ಅವರ ಆಯ್ಕೆ.

Image