ಕೃಷಿ ತ್ಯಾಜ್ಯಗಳ ಸದ್ಭಳಕೆ ಮತ್ತು ನೀರಿನ ಸಂರಕ್ಷಣೆ.

ಮಳೆ ಬರುತ್ತದೆ, ಭೂಮಿ ಒದ್ದೆಯಾಗಿ ನೀರು ಉಳಿಯುತ್ತದೆ ಎಂದು ನಾವು ಬೇಕಾಬಿಟ್ಟಿ ನೀರಿನ ಉಪಯೋಗ ಮಾಡುತ್ತಿದ್ದರೆ, ಒಂದೆಡೆ ಮಳೆ ಕೈಕೊಡುತ್ತದೆ, ಕುಡಿಯುವ ನೀರಿಗೇ ಬರವಾಗುತ್ತದೆ. ಇತೀಚಿನ ವರ್ಷಗಳಲ್ಲಿ ದೇಶದಲ್ಲೇ ಅತೀ ಕಡಿಮೆ (ಸರಾಸರಿ) ಮಳೆಯಾಗಿರುವುದು ಕರ್ನಾಟಕದಲ್ಲಿ ಎಂಬ ವರದಿ ಕೇಳಿ ಬರುತ್ತಿದೆ.

Image

ಪಿಟ್ಕಾಯಣ

ಪುಸ್ತಕದ ಲೇಖಕ/ಕವಿಯ ಹೆಸರು
ರಾಜಾರಾಂ ತಲ್ಲೂರು
ಪ್ರಕಾಶಕರು
ಬಹುರೂಪಿ ಪ್ರಕಾಶನ, ಸಂಜಯ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೩೦೦.೦೦, ಮುದ್ರಣ: ೨೦೨೫

‘ಪಿಟ್ಕಾಯಣ’ ಈ ಕೃತಿಯು ಬಹು ಆಯಾಮಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಹಾಗೆಂದು ಅದು ಓದುಗರನ್ನು ಪರೀಕ್ಷಿಸುತ್ತದೆ ಎಂದೇನೂ ಅಲ್ಲ. ಬದಲಾಗಿ ಆಯಾ ವಯಸ್ಕರಿಗೆ ತಕ್ಕಂತೆ ಆಸಕ್ತಿಯಿಂದ ಸಲೀಸಾಗಿ ಓದಿಸಿಕೊಳ್ಳುತ್ತದೆ. ಈ ಕೃತಿಯ ಲೇಖನಗಳ ತಲೆಬರಹ ಓದುಗರನ್ನು ಕುತೂಹಲಿಗರನ್ನಾಗಿಸುವುದಲ್ಲದೆ, ಅವರಲ್ಲಿ ಬೆರಗನ್ನೂ ಉಂಟುಮಾಡುತ್ತವೆ.

ಸ್ಟೇಟಸ್ ಕತೆಗಳು (ಭಾಗ ೧೨೨೮) - ಅಸೂಯೆ

ದಾರಿ ತಪ್ಪಿ ಬಂದ ಬೆಕ್ಕೊಂದು ನಮ್ಮ ಮನೆಯಲ್ಲಿ ಬದುಕುವುದಕ್ಕೆ ಆರಂಭ ಮಾಡಿತು. ದಿನ ಕಳೆದಂತೆ ನಮ್ಮ ಮನೆಯಲ್ಲಿ ಒಬ್ಬನಾಗಿ ಬಿಟ್ಟಿತು. ಈ ಮನೆಯಲ್ಲಿ ಅವನದು ಒಂದು ಸ್ಥಾನ ಗಟ್ಟಿಯಾಗಿ ಸ್ಥಾಪಿತವಾಗಿತ್ತು. ಹಾಗೆ ದಿನಗಳು ಕಳಿತಾ ಇದ್ದ ಹಾಗೆ ಒಂದು ದಿನ ಮನೆಯ ಸುತ್ತಮುತ್ತ ಒಂದು ಸಣ್ಣ ಬೆಕ್ಕಿನ ಮರಿಯ ಅಳುವ ಶಬ್ದ ಕೇಳುವುದಕ್ಕೆ ಆರಂಭವಾಯಿತು. ಒಳಗಿದ್ದ ಇವನಿಗೆ ಒಂದಷ್ಟು ತಳಮಳ ಶುರುವಾಯಿತು.

Image

ದಣಿವರಿಯದ ಹಕ್ಕಿ - ಸಮುದ್ರ ಗರುಡ

ನಾವು ಒಂದಷ್ಟು ಪಕ್ಷಿಪ್ರಿಯರು ಸೇರಿಕೊಂಡು ಒಮ್ಮೆ ಉತ್ತರಕನ್ನಡ ಜಿಲ್ಲೆಯ ಕೈಗಾ ಎಂಬ ಊರಿಗೆ ಹೋಗಿದ್ದೆವು. ನಮ್ಮಂತೆಯೇ ಪಕ್ಷಿವೀಕ್ಷಕರು ಸೇರಿಕೊಂಡು ಅಲ್ಲಿನ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕೈಗಾ ಪಕ್ಷಿ ಹಬ್ಬವನ್ನು ಆಯೋಜನೆ ಮಾಡಿದ್ದರು. ಅಲ್ಲಿ ಕಾಳೀನದಿ ಹರಿಯುತ್ತಿತ್ತು. ಕಾಳೀ ನದಿಗೆ ಅಡ್ಡಲಾಗಿ ನಾಲ್ಕು ಅಣೆಕಟ್ಟೆಗಳನ್ನು ಕಟ್ಟಲಾಗಿದೆ. ಅವುಗಳೆಂದರೆ ಗಣೇಶಗುಡಿ, ಬೊಮ್ಮನಹಳ್ಳಿ, ಕೊಡಸಳ್ಳಿ ಮತ್ತು ಕದ್ರಾ.

Image

ಆದರ್ಶ ಅಧಿಕಾರಿ

ಇಂದು ಆದರ್ಶ ಅಧಿಕಾರಿ ಡಾ. ಆನಂದ್ (ಭಾ.ಆ.ಸೇ.) ಇವರ ಬಗ್ಗೆ ತಿಳಿದುಕೊಳ್ಳೋಣ. ನನ್ನ ಹುದ್ದೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇವರ ಅಧೀನದಲ್ಲಿ ಬರುತ್ತದೆ. ಈಗ ಬರೆಯುತ್ತಿರುವ ಲೇಖನ ಆದರ್ಶ ಅಧಿಕಾರಿ ಡಾ. ಆನಂದ್ ಕುರಿತು (ಭಾರತೀಯ ಆಡಳಿತ ಸೇವೆ.) ಇವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Image

ಅನಿರೀಕ್ಷಿತ ರೋಗಗಳು ಮತ್ತು ಸಾವುಗಳ ಸುತ್ತ ನಿಜ ಬದುಕಿನ ಹುಡುಕಾಟ

ಆರೋಗ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಸುದ್ದಿಗಳು ಸಹಜವಾಗುತ್ತಿರುವ ಕಾಲಘಟ್ಟದಲ್ಲಿ ನಾವು ನೀವು. ಕೆಲವು ದಶಕಗಳ ಹಿಂದೆ 80 ರ ನಂತರದ ಅನಾರೋಗ್ಯ ಮತ್ತು ಸಾವುಗಳ ಸುದ್ದಿಗಳನ್ನು ಕೇಳುತ್ತಿದ್ದೆವು.

Image