ತೆಂಗಿನ ಮರಗಳ ಶಿರ ಸ್ವಚ್ಛತೆ ಮತ್ತು ಇಳುವರಿ

ಯಾರ ತೆಂಗಿನ ಮರದಲ್ಲಿ ಪ್ರತೀ ವರ್ಷವೂ ಅಧಿಕ ಇಳುವರಿ ಬರುತ್ತದೆಯೋ ಅಂತವರ ತೆಂಗಿನ ಮರದ ಶಿರಭಾಗವನ್ನು ಒಮ್ಮೆ ನೋಡಿ. ಬಹಳ ಸ್ವಚ್ಚವಾಗಿ ಇರುತ್ತದೆ. ತೆಂಗಿನ ಮರಗಳಿಗೆ ಗೊಬ್ಬರ, ನೀರು ಕೊಡುವುದಲ್ಲದೆ ಅಗತ್ಯವಾಗಿ ಮಾಡಬೇಕಾದ ಕೆಲಸ ಶಿರ ಭಾಗದ ಸ್ವಚ್ಚತೆ. ಹೀಗೆ ಮಾಡುವುದರಿಂದ ಮರ ಆರೋಗ್ಯವಾಗಿರುತ್ತದೆ. ಉತ್ತಮ ಇಳುವರಿಯೂ ಬರುತ್ತದೆ.

Image

ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ

ವೈದ್ಯಕೀಯ, ಇಂಜಿನಿಯರಿಂಗ್ ಮುಂತಾದ ವೃತ್ತಿಪರ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ ಇ ಟಿ) ಈ ವರ್ಷ ಗೊಂದಲದ ಗೂಡಾಗಿ, ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದ್ದು ಅಕ್ಷಮ್ಯ.

Image

ನಿಮ್ಮ ಸಂತೋಷದ ಸಂದರ್ಭಗಳಲ್ಲಿ ಇವರುಗಳೂ ನೆನಪಾಗಲಿ....

ಮೇ 1..... ನಾಳೆ..... " ಜಗತ್ತಿನ ಎಲ್ಲಾ ಶೋಷಿತರು - ದೌರ್ಜನ್ಯಕ್ಕೆ ಒಳಗಾದವರು  ನನ್ನ ಸಂಗಾತಿಗಳು "- ಚೆಗುವಾರ.

Image

ಸ್ಟೇಟಸ್ ಕತೆಗಳು (ಭಾಗ ೯೫೧)- ಮಾನವ

ಪುಟ್ಟ ಬೀದಿಯ ತಿರುವಿನ ಮೊದಲ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಹೊಸತೊಂದು ತರಗತಿ ಆರಂಭವಾಗಿದೆ. ಅಲ್ಲಿ ದೊಡ್ಡದೊಂದು ಜಾಹೀರಾತಿನ ಫಲಕವನ್ನ ನೇತು ಹಾಕಿದ್ದಾರೆ. ಬನ್ನಿ ಇಲ್ಲಿ ಮಾನವರಾಗುವುದನ್ನು ಕಲಿಸುತ್ತೇವೆ ಅಂತ. ನಾನು ಮತ್ತೆ ಮತ್ತೆ ಯೋಚಿಸುವುದು ಅದನ್ನೇ ಇಲ್ಲಿ ಮಾನವರಾಗುವುದ್ದಕ್ಕೆ ಏನಿದೆ ಅಂತಾ?. ನಾವೆಲ್ಲರೂ ಮಾನವರಾಗಿಯೇ ಹುಟ್ಟಿದ್ದೇವೆ ಅಲ್ವಾ?

Image

‘ಮಲೆನಾಡ ಗಾಂಧಿ' ಗೋವಿಂದೇಗೌಡರ ನೆನಪಿನಲ್ಲಿ...

ಮಾಜಿ ಸಚಿವ ದಿ.ಗೋವಿಂದೇ ಗೌಡರ ಬಗ್ಗೆ ಇತ್ತೀಚೆಗೆ ಒಂದು ಪತ್ರಿಕೆಯಲ್ಲಿ ಲೇಖನ ಓದಿದೆ. ನಿಜಕ್ಕೂ ಅವರಂತಹ ವ್ಯಕ್ತಿಗಳು ರಾಜಕೀಯದಲ್ಲಿ ಅಪರೂಪ. ಅವರನ್ನು ಹತ್ತಿರದಿಂದ ಕಾಣುವ ಮತ್ತು ಅವರ ಜೊತೆ ಒಂದೆರಡು ಮಾತುಗಳನ್ನು ಆಡುವ ಅವಕಾಶ ನನಗೆ ೧೯೯೭ರಲ್ಲಿ ಸಿಕ್ಕಿತ್ತು.

Image

ಯಾವುದು ಬದುಕು ?

ಬದುಕು ಅಂದ್ರೆ ಯಾವುದು...? ಇದರ ಬಗ್ಗೆ ನೋಡೋಣ. ಗೋಪಾಲ ಎಂಬ ಯುವಕನಿದ್ದನು. ಈತನ ತಂದೆಗೆ ಎರಡು ಜನ ಪತ್ನಿಯರು. ಈತ ಮೊದಲ ಹೆಂಡತಿಯ ಮಗ. ಈತನ ಜೊತೆಗೆ ಇಬ್ಬರು ತಮ್ಮಂದಿರು ಮತ್ತು ಒಬ್ಬಳು ತಂಗಿ ಇದ್ದಳು. ಮಲತಾಯಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಇತ್ತು. ಈತ ಎಸ್ ಎಸ್ ಎಲ್ ಸಿ ಅನುತ್ತೀರ್ಣನಾಗಿದ್ದನು. ನಂತರ ಪಾಸ್ ಆಗಿ ಐಟಿಐ ಸೇರಿ ಕೆ ಎಸ್ ಆರ್ ಟಿ ಸಿ ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸಕ್ಕೆ ಸೇರಿದನು.

Image

ಕಾಡುಹಂದಿಯ ಕಣ್ಣು ನನ್ನ ಮೇಲೆ..! (ಭಾಗ 1)

ನನ್ನ ಹೈಸ್ಕೂಲು ದಿನಗಳಲ್ಲಿ ಜೇನು ಹುಡುಕುವುದು ನನ್ನ ಸಾಮಾನ್ಯ ಹವ್ಯಾಸ ಆಗಿತ್ತು. ನಮ್ಮ ಸಂಬಂಧಿಕರಿಗೆಲ್ಲಾ ನಮ್ಮದು ಜೇನುತುಪ್ಪ ಸಪ್ಲೈ ಮಾಡುವ ಮನೆ ಆಗಿತ್ತು. ಯಾರ ಮನೆಯಲ್ಲೂ ಜೇನುತುಪ್ಪ ಇರಲಿಲ್ಲ ಅಂದ್ರೂ ನಮ್ಮ ಮನೆಯಲ್ಲಿ ಮಾತ್ರ ಕನಿಷ್ಟಪಕ್ಷ ಒಂದೋ ಎರಡೋ ಕ್ವಾಟರ್ ಬಾಟಲ್ ನಲ್ಲಿ ಖಂಡಿತಾ ಇದ್ದೇ ಇರುತಿತ್ತು. ಡಿಸೆಂಬರ್ ನಿಂದ ಆರಂಭವಾಗುತಿದ್ದ ಈ ಜೇನು ಬೇಟೆ ಕೊನೆಯಾಗುತ್ತಿದ್ದದು ಮತ್ತೆ ಜೂನ್ ಜುಲೈಗೆ.

Image

ಬೇಸಿಗೆಯಲ್ಲಿ ಕಬ್ಬಿನ ಹಾಲು ಹಿತಕರ

ಹಿಂದಿನ ವರ್ಷಗಳಲ್ಲಿ ಕಾಣದ ಬಿಸಿಲಿನ ಬೇಗೆ ಈ ವರ್ಷ ಕಾಡುತ್ತಿದೆ. ಇದಕ್ಕೆ ಕಾರಣ ಬಹುಪಾಲು ನಾವೇ. ನಗರೀಕರಣ ಎನ್ನುವ ಸುಂದರ ಹೆಸರು ನೀಡಿ ನಾವು ಅರಣ್ಯವನ್ನು ನಾಶ ಮಾಡುತ್ತಾ ಬಂದಿದ್ದೇವೆ. ರಸ್ತೆಯ ಇಕ್ಕೆಲಗಳನ್ನು ಅಗಲಗೊಳಿಸುವ ನೆಪದಲ್ಲಿ ಈಗ ಒಂದೂ ಮರ ಕಾಣಿಸದಂತೆ ಮಾಡಿಹಾಕಿದ್ದೇವೆ. ಜೋರು ಬಿಸಿಲು ಎಂದು ಮರದ ನೆರಳಲ್ಲಿ ನಿಲ್ಲುವ ಎಂದು ಯೋಚನೆ ಮಾಡಲಿಕ್ಕೂ ಆಗದ ರೀತಿಯಲ್ಲಿ ಮರಗಳ ನಾಶ ಮಾಡಿದ್ದೇವೆ.

Image

ಧೀರತಮ್ಮನ ಕಬ್ಬ (ಸಂಪುಟ ೩)

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಸುರೇಶ ನೆಗಳಗುಳಿ
ಪ್ರಕಾಶಕರು
ಶುಭ ಪ್ರಕಾಶನ, ಎಕ್ಕೂರು ರಸ್ತೆ, ಮಂಗಳೂರು -೫೭೫೦೦೯
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೧

ವೃತ್ತಿಯಲ್ಲಿ ವೈದ್ಯರಾಗಿದ್ದುಕೊಂಡು ಪ್ರವೃತ್ತಿಯಲ್ಲಿ ಸಾಹಿತಿ, ಕವಿ ಆಗಿರುವ ಡಾ. ಸುರೇಶ ನೆಗಳಗುಳಿ ಅವರು ಬರೆದ ಮುಕ್ತಕಗಳ ಸಂಕಲನ ‘ಧೀರತಮ್ಮನ ಕಬ್ಬ'. ಇದು ಮೂರನೇ ಸಂಪುಟ. ನೆಗಳಗುಳಿ ಅವರ ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಅರವಿಂದ ಚೊಕ್ಕಾಡಿ. ಅದರಲ್ಲಿ “ಡಾ. ಸುರೇಶ ನೆಗಳಗುಳಿ ಅವರ ಮುಕ್ತಕಗಳು ಡಿ.ವಿ.ಜಿ.ಯವರನ್ನು ಹೋಲುವ ನೀತಿಬೋಧಕ ರಚನೆಗಳಾಗಿವೆ.