ಹಲವಾರು ಪ್ರಯೋಜನಗಳ ಒಂದೆಲಗ ಸಸ್ಯ

‘ಒಂದೆಲಗ' ಹೆಸರೇ ಹೇಳುವಂತೆ ಒಂದೇ ಎಲೆಯನ್ನು ಹೊಂದಿರುವ ಸಸ್ಯ. ಇದೊಂದು ಔಷಧೀಯ ಸಸ್ಯವಾಗಿಯೂ, ಆಹಾರ ಯೋಗ್ಯ ಸೊಪ್ಪಾಗಿಯೂ ಹಲವಾರು ವರ್ಷಗಳಿಂದ ಬಳಕೆಯಲ್ಲಿದೆ. ಆಡುಭಾಷೆಯಲ್ಲಿ ಇಲಿ ಕಿವಿ ಎಂದೂ, ತುಳು ಭಾಷೆಯಲ್ಲಿ ‘ತಿಮರೆ' ಎಂದೂ, ಕೊಂಕಣಿಯಲ್ಲಿ ‘ಏಕ್ ಪಾನೀ’ ಅಥವಾ ಏಕ್ ಪಾನ್ ಎಂದೂ ಕರೆಯುತ್ತಾರೆ. ಒಂದೆಲಗವು ನೆಲವನ್ನೇ ನೆಚ್ಚಿಕೊಂಡು ಬಳ್ಳಿಯಂತೆ ಬೆಳೆಯುವ ಒಂದು ಸಸ್ಯವಾಗಿದ್ದು.

Image

ಪ್ರಕೃತಿ

ಪುಸ್ತಕದ ಲೇಖಕ/ಕವಿಯ ಹೆಸರು
ಹಾ ಮ ಸತೀಶ
ಪ್ರಕಾಶಕರು
ಕಥಾಬಿಂದು ಪ್ರಕಾಶನ, ಕುಂಜತ್ ಬೈಲ್, ಮಂಗಳೂರು
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೨೪

“ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಪ್ರವೃತ್ತಿಯಲ್ಲಿ ಕವಿ, ಸಾಹಿತಿ, ನಾಟಕಕಾರ, ಹಾಡುಗಾರ ಶ್ರೀ ಹಾ ಮ ಸತೀಶರ ಗಝಲ್ ಸಂಕಲನ ‘ಪ್ರಕೃತಿ' ಪ್ರೀತಿ ಬದುಕು ಸಂಕಲನಕ್ಕೆ ನನ್ನ ಅನುಭವದ ಒಂದೆರಡು ಸಾಲುಗಳನ್ನು ಬರೆಯಲು ಸಂತಸಪಡುತ್ತೇನೆ. ನಾನು ಕಂಡ ಹಾಗೆ ಸತೀಶರು ಸಾಹಿತ್ಯ ಪ್ರಪಂಚದ ದೈತ್ಯ ಪ್ರತಿಭೆ, ಎಲೆಯ ಮರೆಯ ಕಾಯಿ ಎನ್ನಬಹುದು.

ಬಾಹ್ಯ ಸಾಧನೆಯ ಶಿಖರವೇರಲು ನಾವು ಮಾಡಬೇಕಾದ ಪ್ರಯತ್ನವೇನು?

ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ. ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ… ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ ನಮಗಿಂತ ಕೆಳಗಿರುವಂತೆ ಭಾಸವಾಗುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೯೦೮)- ಸುಳ್ಳು

ಅವನು ಮಾತನಾಡೋದು ಕಡಿಮೆ. ಆಗಾಗ ಏನಾದರೂ ಒಂದು ಮಾತನ್ನ ಉದುರುಸ್ತಾ ಇರ್ತಾನೆ. ಅದರಲ್ಲಿ ಅರ್ಥಾನೂ ಇರುತ್ತೆ. ಕೆಲವೊಂದು ಸಲ ಅರ್ಥ ಆಗೋದು ತಡವಾಗುತ್ತೆ .ಹೀಗಿದ್ದವ ಮೊನ್ನೆ ಒಂದು ದೊಡ್ಡ ಮಾತನಾಡಿದ್ದ." ಸುಳ್ಳು ಮಾತನಾಡುತ್ತೆ ಸುಳ್ಳಿನ ಒಳಗೊಂದು ಅರ್ಥ ಇರುತ್ತೆ ನಾವು ಆ ಸುಳ್ಳನ್ನ ಅರ್ಥಮಾಡಿಕೊಳ್ಳೋದಿಲ್ಲ ನೇರವಾಗಿ ಅವರು ಹೇಳುವ ಸುಳ್ಳನ್ನೇ ತಿಳಿದುಕೊಂಡು ಬಿಡುತ್ತೇವೆ.

Image

ದಾಹ ಶಮನವು ರೋಗಕ್ಕೆ ಮೂಲವಾಗದಿರಲಿ...

ಬೇಸಿಗೆಯ ಸುಡು ಬಿಸಿಲು. ಕುಡಿಯುವ ನೀರಿಗೂ ಹಾಹಾಕಾರ. ಎಲ್ಲೆಲ್ಲೂ ಗಮನ ಸೆಳೆಯುತ್ತಿದೆ 'ಸಾಪ್ಟ್ ಡ್ರಿಂಕ್ಸ್'. ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರೂ ಯಥೇಚ್ಛವಾಗಿ ಇದರ ದಾಸರಾಗಿದ್ದೇವೆ. ದಾಹವನ್ನು ನೀಗಿಸಲು ಬಣ್ಣ ಬಣ್ಣದ 'ಕೂಲ್ ಡ್ರಿಂಕ್ಸ್' ಗೆ ಪರ್ಯಾಯವೇ ಇಲ್ಲದಂತೆ ಭಾಸವಾಗುತ್ತಿದೆ. ಇವುಗಳ ಸೇವನೆ ಚಟವಾಗಿ ಕಾಡುತ್ತಿರುವುದು ಸಹಜವಾಗಿದೆ. 

Image

ಪೆದ್ದಚೆರುವಿನ ರಾಕ್ಷಸ (ಕಾಡಿನ ಕಥೆಗಳು ಭಾಗ - 2)

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು
ಪುಸ್ತಕ ಪ್ರಕಾಶನ, ಸರಸ್ವತಿ ಪುರಂ, ಮೈಸೂರು
ಪುಸ್ತಕದ ಬೆಲೆ
ರೂ. 84/-

ನರಭಕ್ಷಕ ಹುಲಿಗಳ ಬೇಟೆಯ ಮೈನವಿರೇಳಿಸುವ ಇನ್ನೊಂದು ಕಥನ ಇದು. ಇಂಗ್ಲಿಷಿನಲ್ಲಿ ಕೆನೆತ್ ಆಂಡರ್ಸನ್ ಬರೆದಿರುವ ಈ ಅನುಭವಗಳನ್ನು ಅನುವಾದಿಸಿ, ಸಂಗ್ರಹ ರೂಪಾಂತರವಾಗಿ ನೀಡಿದ್ದಾರೆ ಪೂರ್ಣಚಂದ್ರ ತೇಜಸ್ವಿ.

ಚುನಾವಣೆ ಘೋಷಣೆಯಾಗಿದೆ...

ಮುಂದಿನ ಸುಮಾರು 75 ದಿನಗಳು ಸಾಕಷ್ಟು ಕುತೂಹಲ ಮತ್ತು ಸಂಘರ್ಷಮಯ ಸಾಮಾಜಿಕ ರಾಜಕೀಯ ವಾತಾವರಣ ನಿರ್ಮಾಣವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ವ್ಯಕ್ತಿಗಳಾದ ನಾವು ಹೆಚ್ಚು ಜವಾಬ್ದಾರಿಯಿಂದ, ತಾಳ್ಮೆಯಿಂದ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ವೈಯಕ್ತಿಕ ಹಾಗೂ ದೇಶದ ಹಿತಾಸಕ್ತಿಯಿಂದ ಬಹಳ ಮುಖ್ಯ.

Image

ಗರಿ ಗರಿ ನಿಪ್ಪಟ್ಟು

Image

ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ, ಕಡಲೆಕಾಯಿ ಬೀಜ, ಹುರಿಗಡಲೆಗಳನ್ನು ಸೇರಿಸಿಡಿ. ಈ ಮಿಶ್ರಣಕ್ಕೆ ಇಂಗು, ವನಸ್ಪತಿ, ಈರುಳ್ಳಿ, ಕರಿಬೇವು, ಉಪ್ಪು, ಮೆಣಸಿನ ಹುಡಿ, ಎಳ್ಳು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.

ಬೇಕಿರುವ ಸಾಮಗ್ರಿ

ಅಕ್ಕಿ ಹಿಟ್ಟು ೨ ಕಪ್, ಮೈದಾ ಹಿಟ್ಟು ೧ ಕಪ್, ಚಿರೋಟಿ ರವೆ- ಅರ್ಧ ಕಪ್, ತರಿಯಾಗಿ ಹುಡಿ ಮಾಡಿದ ಹುರಿಗಡಲೆ - ೩ ಚಮಚ, ತರಿಯಾಗಿ ಹುಡಿ ಮಾಡಿದ ಕಡಲೇಕಾಯಿ ಬೀಜ - ೩ ಚಮಚ, ಕತ್ತರಿಸಿದ ಈರುಳ್ಳಿ - ೩ ಚಮಚ, ಮೆಣಸಿನ ಹುಡಿ - ೨ ಚಮಚ, ಇಂಗು - ಅರ್ಧ ಚಮಚ, ತರಿಯಾಗಿ ಹುಡಿ ಮಾಡಿದ ಎಳ್ಳು - ೧ ಚಮಚ, ವನಸ್ಪತಿ (ಡಾಲ್ಡಾ) - ೨ ಚಮಚ, ಕತ್ತರಿಸಿದ ಬೇವಿನ ಸೊಪ್ಪು - ೨ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಸ್ಟೇಟಸ್ ಕತೆಗಳು (ಭಾಗ ೯೦೭)- ಬದುಕಿನ ಕಲಿಕೆ

ಸನ್ನಿವೇಶಗಳು ಬದುಕು ಕಲಿಸ್ತಾವೆ ಅಂತ ಪ್ರತಿಸಲ ಮನೆಯಲ್ಲಿ ಅಪ್ಪ ಹೇಳ್ತಾನೇ ಇದ್ರು ಕೂಡ ಮಕ್ಕಳಿಗೆ ಅರ್ಥವೇ ಆಗಿರಲಿಲ್ಲ. ಅವರ ಪ್ರಕಾರ ಪ್ರತಿಯೊಂದು ನಾವು ಕಲಿತೇ ಆಗಬೇಕೇ ವಿನಃ ಸನ್ನಿವೇಶದ ರೂಪದಲ್ಲಿ ಕಲಿಯುವುದಲ್ಲ ಅನ್ನೋದಾಗಿತ್ತು. ಅದನ್ನ ಅಪ್ಪ ಎಷ್ಟೇ ವಿವರಿಸುವುದಕ್ಕೆ ಪ್ರಯತ್ನಪಟ್ಟರೂ ಅವರಿಗೆ ಅದು ಅರ್ಥನೇ ಆಗಿರಲಿಲ್ಲ. ಶಾಲೆಯಿಂದ ಪ್ರವಾಸ ನಿಗದಿಯಾಗಿತ್ತು. ಎಲ್ಲರೂ ಸಂಭ್ರಮದಿಂದ ಹೊರಟಿದ್ದರು.

Image