ಶಿರಾಡಿ ಘಾಟ್

ಪುಸ್ತಕದ ಲೇಖಕ/ಕವಿಯ ಹೆಸರು
ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಪ್ರಕಾಶಕರು
ಸಾಹಿತ್ಯಲೋಕ ಪಬ್ಲಿಕೇಷನ್ಸ್, ರಾಜಾಜಿ ನಗರ, ಬೆಂಗಳೂರು-೫೬೦೦೧೦, ಮೊ: ೯೯೪೫೯೩೯೪೩೬
ಪುಸ್ತಕದ ಬೆಲೆ
ರೂ. ೧೬೦.೦೦, ಮುದ್ರಣ : ೨೦೨೫

ಭಯಂಕರ ಹೆದರಿಕೆ ಹುಟ್ಟಿಸುವ ಕಥೆಗಳನ್ನು ಓದಬೇಕೆಂದು ಬಯಸುವವರಿಗಾಗಿಯೇ ಅನುಭವಿಸಿದವರ ಅನಿಸಿಕೆಗಳನ್ನು ಕೇಳಿ, ತಮ್ಮದೇ ಆದ ಕಲ್ಪನೆಯಲ್ಲಿ ಬರೆದಂತಹ ಕಥೆಗಳು ‘ಶಿರಾಡಿ ಘಾಟ್’ ನಲ್ಲಿವೆ. ರಮೇಶ್ ಶೆಟ್ಟಿಗಾರ್ ಮಂಜೇಶ್ವರ ತಮ್ಮ ಅನುಭವದಲ್ಲಿ ಕಂಡುಬಂದ ದೆವ್ವಗಳಿಗೆ ಒಂದಿಷ್ಟು ಕಥಾರೂಪ ಕೊಟ್ಟು ಬರೆದ ಕಥೆಗಳು ಭಯಂಕರವಾಗಿವೆ.

ಲೋಕಾಯುಕ್ತದಲ್ಲೂ ಭ್ರಷ್ಟಾಚಾರವೇ? (ಭಾಗ 1)

ತಾಯ ಎದೆ ಹಾಲೆ ವಿಷವಾದರೆ, ಬೇಲಿಯೇ ಎದ್ದು ಹೊಲ ಮೇಯ್ದರೆ, ರಕ್ಷಕರೇ ಭಕ್ಷಕರಾದರೇ, ಕಾಯುವವರೇ ಕೊಲ್ಲುವವರಾದರೇ, ಲೋಕಾಯುಕ್ತವೇ ಭ್ರಷ್ಠವಾದರೆ, ಶಿವ ಶಿವ ಶಿವಾ. ಭ್ರಷ್ಟಾಚಾರವೆಂಬುದು ಎಷ್ಟು ವ್ಯಾಪಕವಾಗಿದೆ ಎಂದರೆ ಮನುಷ್ಯನ ದೇಹದ ನರ ನಾಡಿಗಳಲ್ಲೂ ಭ್ರಷ್ಟಾಚಾರದ ವಿಷ ತುಂಬಿಕೊಂಡಿರುವಂತಿದೆ. ಅಂದರೆ ಕೆಟ್ಟ, ಭ್ರಷ್ಟ ಹಣದ ಪ್ರಭಾವ ಇಡೀ ಸಮಾಜವನ್ನು ಆವರಿಸಿಕೊಂಡಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೬೧) - ಕೊನೆಗೆ

ಆ ಮನೆಯಲ್ಲಿದ್ದದ್ದು ಮೂರು ಮಕ್ಕಳು, ಒಂದು ಗಂಡು ಎರಡು ಹೆಣ್ಣು. ಕೊನೆಯ ಮಗು ಅವರ ಇಷ್ಟದ ಪ್ರಕಾರ ಆದದ್ದಲ್ಲ. ಆ ಕಾರಣಕ್ಕೆ ಆ ಮಗುವಿನ ಮೇಲೆ ಅಷ್ಟೇನು ಪ್ರೀತಿಯೂ ಇರಲಿಲ್ಲ. ಬೈಗುಳಕ್ಕೆ ಹೊಡೆತಕ್ಕೆ ಮನೆ ಕೆಲಸಕ್ಕೆ ಆಗಾಗ ಎಲ್ಲರ ಮುಂದೆ ಹೀಯಾಳಿಸುವುದಕ್ಕೆ ಆ ಮಗು ಬಳಕೆಯಾಗುತ್ತಿತ್ತು. ಮೊದಲೆರಡು ಮಗುವಿನ ಮೇಲೆ ಇದ್ದ ಪ್ರೀತಿ ಇರಲೇ ಇಲ್ಲ.

Image

ವಿಶಾಖ ವನ

ಇದು ಬುದ್ಧನ ಕಾಲದಲ್ಲಿ ನಡೆದ ಘಟನೆ. ಒಮ್ಮೆ ಬುದ್ಧ ಆಮ್ರವನದಲ್ಲಿ (ಮಾವಿನ ತೋಪು) ಬಿಡಾರ ಹೂಡಿದ್ದನು. ಬೆಳಿಗ್ಗೆ ಸೂರ್ಯೋದಯದಲ್ಲಿ ಆತನ ಪ್ರವಚನ ಸಾಗುತ್ತಿತ್ತು. ತಂಪಾದ ಬೆಳಕು, ಹಸಿರು ವನಸಿರಿ, ಸುತ್ತಮುತ್ತ ಹರಡಿತ್ತು. ಬುದ್ಧನ ಪ್ರವಚನ ಶಾಂತವಾಗಿ ಹರಿದಿತ್ತು. ಅಲ್ಲಿಗೆ ಒಬ್ಬಳು ಮಹಿಳೆ ಬಂದಳು. 

Image

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 34

305) ಮೂಲ ಹಾಡು : ಖುದಾ ಭೀ ಆಸಮಾನ್ ಸೆ ಕಭೀ
ನನ್ನ ಅನುವಾದ:
ದೇವರೂ ಆಗಸದಿಂದ
ಭೂಮಿಯ ಕಡೆ ನೋಡಿದಾಗ
ನನ್ನ ನಲ್ಲೆಯ ನೋಡಿ
ಯಾರು ಇವಳನು ಸೃಷ್ಟಿಸಿದರು ಎನ್ನುವ!

306) ಮೂಲ ಹಾಡು : ಚಂದಾರೆ ಚಂದಾರೆ ಕಭೀ ಜಮೀಂ ಪರ
ನನ್ನ ಅನುವಾದ:
ಚಂದಿರ ಚಂದಿರ ಭೂಮಿಗೆ ಬಾರೋ
ಜತೆಗೆ ಕೂತು ಮಾತನಾಡುವ

307) ಮೂಲ ಹಾಡು : ಛುಪಾನಾ ಭೀ ನಹೀ ಆತಾ
ನನ್ನ ಅನುವಾದ:
ಮುಚ್ಚಿಡೋಕೂ ಆಗೋಲ್ಲ
ಅದ ಹೇಳೋಕೂ ಆಗೋಲ್ಲ
ನಂಗೆ ಇರುವುದು ನಿನ್ನಲ್ಲಿ ಪ್ರೀತಿ
ಅದ ಹೇಳೋಕೂ ಆಗೋಲ್ಲ

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 33

295) ಮೂಲ ಹಾಡು : ಪಾಯೋಜಿ  ಮೈನೆ ರಾಮ ರತನ ಧನ ಪಾಯೋ
ನನ್ನ ಅನುವಾದ : 
ಸಿಕ್ಕಿತು ಎನಗೆ ರಾಮನಾಮ ಎಂಬ ರತುನ
ವಸ್ತು ಅಮೂಲ್ಯವ  ಕೊಟ್ಟನು ಗುರುವು
ಬಲು ಕೃಪೆ  ಎನ್ನಲಿ ಮಾಡುತಲಿ

ಜನುಮ ಜನುಮದ ನಿಧಿಯು ಸಿಕ್ಕಿತು
ಉಳಿದವು ಎಲ್ಲ ಕಳೆದರೆ ಏನು?

ಆಗದು ಖರ್ಚು , ಕದಿಯನು ಕಳ್ಳ
ವೃದ್ಧಿಯ ಪಡೆವುದು ನೋಡಿ

ಸತ್ಯದ ನಾವೆ , ಗುರುವೇ ನಾವಿಕ
ಭವಸಾಗರವ ದಾಟಿಸುವ

ಮೀರೆಯ ಪ್ರಭು ಆ ಗಿರಿಧರನು
ಅವನನು ಹೊಗಳಿ ಹಾಡುವೆ ದಿನವೂ

ಯೋಗ ಮತ್ತು ಧ್ಯಾನ (ಭಾಗ 2)

ಸರಳ ಧ್ಯಾನ. ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು, ಒಂದು ಸಣ್ಣ ವಿವರಣೆ.

Image

ಸ್ಟೇಟಸ್ ಕತೆಗಳು (ಭಾಗ ೧೩೬೦) - ಬೇಡಿಕೆ

ಅಲ್ಲ ನನ್ನ ನಿಜವಾದ ಕೆಲಸ ಏನು? ನಿಮ್ಮ ಬೆರಳುಗಳನ್ನು ರಕ್ಷಿಸುವುದು, ಕೈಯ ಅಂದವನ್ನು ಹೆಚ್ಚಿಸುವುದು, ಹಾಗಾಗಿ ನಿಮ್ಮ ಕೈಯಲ್ಲಿ ಉಗುರಾಗಿ ನಾನು ಶೋಭಿಸುತ್ತೇನೆ. ಆದರೆ ನೀವು ಮಾಡ್ತಾ ಇರೋದು ಏನು? ಕೆಲವರಂತೂ ನನ್ನನ್ನ ಕಚ್ಚಿ ಕಚ್ಚಿ ತಿಂದು ಸರಿಯಾಗಿ ಬೆಳೆಯುವ ಅವಕಾಶವನ್ನೇ ನೀಡಿಲ್ಲ. ಇನ್ನು ಕೆಲವರು ಮಣ್ಣು ಕೊಳೆಗಳನ್ನು ತುಂಬಿಸಿ ನನ್ನ ಅಂದವನ್ನು ಹಾಳು‌ಮಾಡಿ ಬಿಟ್ಟಿದ್ದೀರಿ.

Image

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 32

 

285) ಮೂಲ ಹಾಡು :  ಏ ಆಯಿನಾ ಜೊ ತುಮ್ಹೆ ಕಮ್ ಪಸಂದ ಕರತೇ ಹೈ

ನನ್ನ ಅನುವಾದ : 
ಈ ಕನ್ನಡಿ ನಿನ್ನನು
ಕಡಿಮೆ ಇಷ್ಟ ಪಡುತಾವೆ
ಇವಕೆ ಗೊತ್ತು
ನಾ ನಿನ್ನನು
ಇಷ್ಟಪಡುವೆ ಅಂತ

286) ಮೂಲ ಹಾಡು :  ಸಂಡೇ ಕಿ ರಾತ ಧೀ

ನನ್ನ ಅನುವಾದ : 
ರವಿವಾರ ರಾತ್ರಿ ಅವತ್ತು
ಮೊದಲನೇ ಭೇಟಿ ಇದ್ದಿತು
ಇದ್ದೆ ನಾನು, ಇದ್ದಳವಳು
ಕೊಂಚ ಮಳೆಯೂ ಇದ್ದಿತು

287) ಮೂಲ ಹಾಡು : ಹಂ ಅಪನೀ ತರಫ ಸೇ ತುಮ್ಹೆ ಚಾಹತೇ ಹೈ
ನನ್ನ ಅನುವಾದ :   ನಾನೇನೋ ನಿನ್ನ ಬಯಸುವೆ ನಲ್ಲೆ
ನಿನ್ನದೇ ಏನೂ ಭರವಸೆ ಇಲ್ಲ

288) ಮೂಲ ಹಾಡು :  ಅಗರ್ ಹಮ್ ಕಹೇ ಔರ್ ವೋ ಮುಸ್ಕುರಾಯೆ