ನಮ್ಮೊಳಗೆ ಬುದ್ಧನೊಬ್ಬ

ಪುಸ್ತಕದ ಲೇಖಕ/ಕವಿಯ ಹೆಸರು
ಮಹಾದೇವ ಬಸರಕೋಡ
ಪ್ರಕಾಶಕರು
ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್, ಭುವನೇಶ್ವರಿ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೩೦.೦೦, ಮುದ್ರಣ: ೨೦೨೫

`ನಮ್ಮೊಳಗೆ ಬುದ್ದನೊಬ್ಬʼ ಅರವು ಮತ್ತು ಬದುಕಿನ ಚಿಂತನೆಗಳು ಮಹಾದೇವ ಬಸರಕೋಡ ಅವರ ಕೃತಿಯಾಗಿದೆ. ಮಹಾದೇವ ಬಸರಕೋಡರ ಈ ಕೃತಿಯ ಪ್ರತಿ ಲೇಖನವೂ ಕಿರಿದೇ, ಆದರೆ ಒಳಗಿನ ಹೂರಣ ಘನ. ಬಸರಕೋಡರ ಕ್ಯಾನ್ಸಾಸ್ ಚಿಕ್ಕದೇ, ಆದರೂ ಅಲ್ಲೊಂದು ದೃಷ್ಟಾಂತವನ್ನಿಟ್ಟು ಮಾತಾಡಲು ಮರೆಯುವುದಿಲ್ಲ ಅವರು. ಹೀಗಾಗಿ ಈ ಬರಹಗಳು ಹೆಚ್ಚು ಆಪ್ತವಾಗುತ್ತವೆ ಕೂಡ. ಓದಲು ವೇಳೆಯಿಲ್ಲ ಅನ್ನುವವರ ಕಾಲವಿದು.

ನಮಗಾಗಿ ಪರಿಸರ ಮುಗಿದು, ಪರಿಸರಕ್ಕಾಗಿ ನಾವು ಎಂಬ ದುಸ್ಥಿತಿಯಲ್ಲಿ...

ಜೂನ್ ತಿಂಗಳೆಂದರೆ ಮೊದಲು ನೆನಪಾಗುವುದು ವಿಶ್ವ ಪರಿಸರ ದಿನ. ಈ ವರ್ಷದ World environment day ಜೂನ್ 5. ಕಳೆದ  ವರ್ಷದ ತಾಪಮಾನದ ಹೊಡೆತಕ್ಕೆ ಬಹಳಷ್ಟು ಜನ ಮತ್ತು ಪ್ರಾಣಿ ಪಕ್ಷಿಗಳು ನುಜ್ಜುಗುಜ್ಜಾದ ಕಾರಣ ಇದರ ನೆನಪು ಬೇಗ ಆಗುತ್ತಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೪೧೨) - ಅಲೆದಾಟ

ವೇದಿಕೆಯಲ್ಲಿ‌ ಆತ ಹಾಡುವುದ್ದಕ್ಕೆ‌ ನಿಂತರೆ ಎಲ್ಲರೂ ತಲೆದೂಗುತ್ತಾರೆ. ಹಾಗಾಗಿ‌ ಟಿವಿಯೊಳಗಿನ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದ್ದ. ಭಾಗವಹಿಸುವಿಕೆ ಎಲ್ಲರಿಗೂ ಪ್ರಿಯವಾಗುತ್ತಾ ಹೋಯಿತು. ಆತ ಗೆಲುವಿನ ಮೆಟ್ಟಿಲನ್ನ ಹತ್ತಲಾರಂಭಿಸಿದ. ಹೆಚ್ಚು ಹೆಚ್ಚು ಕಡೆ ಅವಕಾಶಗಳು ಸಿಗುತ್ತವೆ ಅನ್ನುವ ಸುದ್ದಿ ತಿಳಿಯಿತು.

Image

ಜ್ಞಾನ ಪಿಪಾಸು !

ಇಲ್ಲೊಂದು ಸ್ವಾರಸ್ಯಕರವಾದ ಕಥೆಯಿದೆ. ಒಂದು ಹಳ್ಳಿಯಲ್ಲಿ ಗುರು ಒಬ್ಬರು ತನ್ನ ಏಕಮಾತ್ರ ಶಿಷ್ಯನಿಗೆ ಪಾಠ ಮಾಡುತ್ತಿದ್ದರು. ಆದರೆ ಅವರ ಪಾಠ ಅಲ್ಪ ಸಮಯದಲ್ಲಿ ಮುಗಿಯುತ್ತಾ ಇತ್ತು. ಪಾಠ ಮುಗಿದ ನಂತರ ಶಿಷ್ಯನು ಗುರು ಹೇಳುವ ಎಲ್ಲ ಕೆಲಸಗಳನ್ನೂ ಮಾಡಬೇಕಿತ್ತು. ಹೆಚ್ಚು ಕೆಲಸ, ಕಡಿಮೆ ಪಾಠ ಪ್ರತೀ ನಿತ್ಯ ನಡೆಯುತ್ತಾ ಇತ್ತು.

Image

ಮಳೆಗಾಲಕ್ಕೆ ಸೂಕ್ತವಾದ ಆಹಾರ ಪದ್ದತಿ

ಅಂತೂ ಇಂತೂ ಮಳೆಗಾಲ ರಾಜ್ಯಕ್ಕೆ ಕಾಲಿಟ್ಟಿದೆ. ಚಂಡ ಮಾರುತದ ಕಾರಣಕ್ಕೆ ಪ್ರಾರಂಭವಾದ ಗಾಳಿ ಮಳೆ ಮುಗಿದು ಮುಂಗಾರು ಮಾರುತದ ಮಳೆ ಪ್ರಾರಂಭವಾಗಿದೆ. ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುತ್ತಲೇ ಸಣ್ಣ ಪುಟ್ಟ ಆರೋಗ್ಯದ ಸಮಸ್ಯೆಗಳು ಕಾಡುವುದು ಸಾಮಾನ್ಯ. ಅದರಲ್ಲೂ ಪುಟ್ಟ ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ಬೇಗ ಸಮಸ್ಯೆಗಳು ಕಾಡುತ್ತವೆ.

Image

ಫಲಿತಾಂಶ ಹೆಚ್ಚಳ: ಮಿಂಚಿನ ಸಂಚಾರ ಸ್ವಾಗತಾರ್ಹ

ರಾಜ್ಯದಲ್ಲಿ ಎಸೆಸೆಲ್ಸಿ ಫಲಿತಾಂಶ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ ಆತಂಕ, ನೀಡಿರುವ ಎಚ್ಚರಿಕೆಯ ಬೆನ್ನಿಗೆ ಶಿಕ್ಷಣ ಇಲಾಖೆಯು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿರುವುದು ಶ್ಲಾಘನೀಯ, ಫಲಿತಾಂಶ ಉತ್ತಮಗೊಳ್ಳುವುದಕ್ಕಾಗಿ ಹಿರಿಯ ಅಧಿಕಾರಿಗಳನ್ನೇ ಸ್ವತಃ ಕಾರ್ಯರಂಗಕ್ಕೆ ಇಳಿಸುವ ನಿರ್ಧಾರವನ್ನು ಇಲಾಖೆಯು ತೆಗೆದುಕೊಂಡಿದೆ.

Image

ನ್ಯಾಯಾಂಗ ಮತ್ತು ಮಾಧ್ಯಮ ಲೋಕದ ಎರಡು ಸುದ್ದಿಗಳು

ಪ್ರಖ್ಯಾತ ಸಿನಿಮಾ ನಟನೊಬ್ಬನನ್ನು ಕೊಲೆ ಆರೋಪದ ಖಚಿತ ಆಧಾರದ ಮೇಲೆ ಪಂಚತಾರಾ ಹೋಟೆಲ್ಲಿನ ವ್ಯಾಯಾಮ ಶಾಲೆಯಿಂದ ಬಂಧಿಸಿ ಕರೆತರಲಾಗುತ್ತದೆ. ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತದೆ. ಮಾಧ್ಯಮ ಲೋಕ ಪೊಲೀಸ್ ತನಿಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತದೆ.

Image