ಸಕಾರಾತ್ಮಕ ಮತ್ತು ನಕಾರಾತ್ಮಕ

ಸಕಾರಾತ್ಮಕ - ಪಾಸಿಟಿವ್ ವಿಷಯಗಳ ಬಗ್ಗೆಯೇ ಹೆಚ್ಚು ಮಾತನಾಡಬೇಕು, ಓದಬೇಕು, ಬರೆಯಬೇಕು, ತಿಳಿಯಬೇಕು, ತಿಳಿಸಬೇಕು ಎಂಬುದು ಒಂದು ಸಾಮಾನ್ಯ ಸಾರ್ವಜನಿಕ ಅಭಿಪ್ರಾಯ.

Image

ಸ್ಟೇಟಸ್ ಕತೆಗಳು (ಭಾಗ ೧೩೩೩) - ಬಾಗಿಲು

ಅಲ್ಲಿ ಹಾದು ಹೋಗುವುದ್ದಕ್ಕೆ ಇರೋದು ಒಂದೇ ಬಾಗಿಲು. ಅಲ್ಲಿ ಸಾಗುವ ಎಲ್ಲರೊಳಗೆ ಒಂದೊಂದು ಭಾವ ಸಮ್ಮಿಳಿತವಾಗಿದೆ.

Image

ಸೋಲನ್ನು ಗೆಲ್ಲುವ ದಾರಿ

ವಾಸ್ತವದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದರೂ ನಾವು ಪಾಸಿಟಿವ್‌ ಆಗಿದ್ದರೆ ಗೆಲ್ಲಬಹುದು. ಸೋಲುಗಳು ಪಾಠ ಕಲಿಸುತ್ತವೆ, ನಿಜ. ಆದರೆ ಸತತ ಸೋಲುಗಳು ದಿಕ್ಕು ತಪ್ಪಿಸುತ್ತವೆ. ಆತ್ಮವಿಶ್ವಾಸ ಕೆಡಿಸುತ್ತವೆ. ಸಂಕಷ್ಟಕ್ಕೆ ತಳ್ಳುತ್ತವೆ. ಸಂಕಟ ಬಂದಾಗ ನಾವು ಏನು ಮಾಡುತ್ತೇವೆ? ಸಂಕಟ ಪರಿಹರಿಸಿಕೊಳ್ಳಲು ಮಾನವ ಪ್ರಯತ್ನಗಳನ್ನು ನಡೆಸುತ್ತೇವೆ. ಆದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ನಮ್ಮ ಕೈಯ್ಯಲ್ಲೇ ಇರುವುದಿಲ್ಲ. ಕೆಲವೊಮ್ಮೆ ಸವಾಲುಗಳು ಎಷ್ಟು ಜಟಿಲವಾಗುತ್ತವೆ ಎಂದರೆ ಮಾನವ ಪ್ರಯತ್ನಕ್ಕೆ ಅವುಗಳ ಪರಿಹಾರಗಳು ನಿಲುಕುವುದೇ ಇಲ್ಲ. ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಕೈಗೆಟುಕದೇ ಇದ್ದಾಗ ಪರಿಸ್ಥಿತಿ ಹದಗೆಡುತ್ತದೆ. ಆಗ ಎಲ್ಲರೂ ಮಾಡುವ ಕೆಲಸ ಎಂದರೆ ದೇವರ ಮೊರೆಹೊಗುವುದು.

ಮಾನವೀಯತೆ ಎಂಬ ಮೋಕ್ಷವ ಹುಡುಕುತ್ತಾ...

ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲಿ ಉಳಿಸಬೇಕಾದ ಅನಿವಾರ್ಯತೆ ಈಗ ಅತ್ಯಂತ ಪ್ರಮುಖ ವಿಷಯವಾಗಬೇಕಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೩೨) - ಜೀವ

ಪುಟ್ಟ ಕಾಲುಗಳು ಹಾಗೇ ಕಣ್ಣ ಮುಂದೆ ಹಾದು ಹೋದವು. ಮುಖ ಕಾಣಲೇ ಇಲ್ಲ. ಕೆಲವು ಕ್ಷಣಗಳು ಹೋದ ದಾರಿಯನ್ನೇ ಗಮನಿಸುತ್ತಿದ್ದವು. ಕಾಯುವಿಕೆಗೆ ಫಲ ಸಿಕ್ಕಿತು ಕೃಷ್ಣನ ಆಗಮನ ಆ ಮನೆಗಾಗಿದೆ. ಕೆಲವು ವರ್ಷಗಳಿಂದ ಆ ಮನೆಯೊಳಗೆ ನಗು ಹಾಗೇ ಹಾದು ಹೋಗಿತ್ತೇ ವಿನಃ ಬದುಕಿರಲಿಲ್ಲ. ಈಗ ಮನೆಗೆ ನಗು ಹೆಜ್ಜೆ ಇಟ್ಟಾಗಿದೆ.

Image

ಒಳ್ಳೆಯವರಿಗೇ ಕಷ್ಟ ಬರುತ್ತೆ ಏಕೆ?

ಒಳ್ಳೆಯವರು ಎಂದು ಗುರುತಿಸಿಕೊಂಡವರು ಸಂಕಷ್ಟಗಳಿಗೆ ಸಿಲುಕಿದಾಗ ಆ ನೋವನ್ನು ಸಹಿಸಿಕೊಳ್ಳುವ ಶಕ್ತಿಯಿಲ್ಲದ ಅವರ ಹಿತೈಷಿಗಳು ಹತಾಶರಾಗಿ ಒಳ್ಳೆಯವರಿಗೆ ಕಾಲವಿಲ್ಲ, ಒಳ್ಳೆಯವರಿಗೆ ಕಷ್ಟ ಜಾಸ್ತಿ ಬರುತ್ತೆ ಎಂದು ದೇವರ ಮೇಲೆ ಹಿಡಿ ಶಾಪ ಹಾಕುತ್ತಾರೆ. ಹಾಗಾದರೆ ಇಲ್ಲಿ ಒಳ್ಳೆಯವರು ಎಂದರೆ ಯಾರು?

Image