ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಕನ್ನಡದ ಬಳಕೆ ಹೆಚ್ಚಿಸ ಬೇಕಾದ ಅಗತ್ಯ

January 17, 2006 - 9:29pm — ಪ್ರದೀಪ್ ಬೆಳಗಲ್

ಕನ್ನಡದ ಬಳಕೆ ಹೆಚ್ಚಿಸ ಬೇಕಾದ ಅಗತ್ಯ

ಪ್ರದೀಪ್ ಬೆಳಗಲ್'s picture

ಇಂಗ್ಲೀಷ್ ಹಾಗೂ ಕನ್ನಡದ ಬಗೆಗಿನ ಚರ್ಚೆ ಹೆಚ್ಚೂ ಕಡಿಮೆ ನಿಂತು ಹೋಗಿದೆ. ಬಹುಶಃ ಮತ್ತೆ ಶಾಲೆ ಪ್ರಾರಂಭವಾಗುವ ವೇಳೆಗೆ ಚಾಲೂ ಆದರೂ ಆದೀತು.

ಇಂಗ್ಲೀಷ್ ನ್ನು ಒಂದನೇ ತರಗತಿಯಿಂದ ಪ್ರಾರಂಭಿಸಲು ಒಪ್ಪಿ, ಜೊತೆ ಜೊತೆಗೆ ಕನ್ನಡ ಮಾಧ್ಯಮ ಕಡ್ಡಾಯ ಜಾರಿ ಎಂಬ ಬೇಡಿಕೆಯನ್ನೂ ಗಂಭೀರವಾಗಿ ಪರಿಗಣಿಸುವಂತೆ ಒಂದು ರಾಜಿಸೂತ್ರವನ್ನೂ ತಯಾರಿಸಲಾಯಿತು. ಆಮೇಲೇನಾಯಿತು ತಿಳಿಯದು.

ಇಂಗ್ಲೀಷ್ ನ್ನು ಒಂದನೇ ಕ್ಲಾಸ್ ನಿಂದ ಪ್ರಾರಂಭಿಸುವುದರ ಬಗೆಗೆ ನನಗಿರುವ ಸಮಸ್ಯೆಯೆಂದರೆ ಅದು ಕುಗ್ಗುತ್ತಿರುವ ಕನ್ನಡ ಬಳಕೆಯನ್ನು ಇನ್ನಷ್ಟು ಕುಗ್ಗಿಸುವ ಸಾಧ್ಯತೆ ಇರುವುದು.ಬದಲಾಗಿ ಇಂದು ಆಗಬೇಕಾಗಿರುವುದು ಕನ್ನಡದ ಬಳಕೆಯ ಹಿಗ್ಗುವಿಕೆ.

ಆದರೆ ಬಗೆಗಿನ ಬುದ್ಧಿಜೀವಿಗಳ ಕಾಳಜಿ ಪೂರ್ಣ ಅರ್ಥ ನನಗಿನ್ನೂ ಅರಿವಾಗಿಲ್ಲ. ಉದಾಹರಣೆಗೆ ಕನ್ನಡಕ್ಕೆ ಕ್ಲಾಸಿಕಲ್ ಭಾಷೆಯ ಸ್ಥಾನಮಾನ ಕೊಡುವ ಬಗೆಗೆ ಒತ್ತಾಯಿಸುವುದು ಸರಿಯೇ. ಆದರೆ ಕನ್ನಡವನ್ನೊಳಗೊಂಡೂ ಎಲ್ಲಾ ಭಾಷೆಗಳಿಗೂ ರಾಷ್ಟ್ರೀಯ ಭಾಷೆ ಸ್ಥಾನಮಾನ ಕೊಡುವ ಬಗೆಗೆ ಒತ್ತಾಯಗಳು ಏಕೆ ಬರುತ್ತಿಲ್ಲ?

ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯುಪಿಎ ತನ್ನ ಅಜೆಂಡಾದಲ್ಲಿ `ಎಲ್ಲಾ ಶೆಡ್ಯೂಲ್ ಎಂಟರಲ್ಲಿರುವ ಭಾಷೆಗಳಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಕೊಡುವ ಬಗೆಗೆ ಅಧ್ಯಯನ ಮಾಡಲು ಸಮತಿಯೊಂದನ್ನು ರಚಿಸುವ ಅಶ್ವಾಸನೆ ಕೊಟ್ಟಿದೆ` (ತಮಿಳಿಗೆ ಕ್ಲಾಸಿಕಲ್ ಭಾಷೆಯ ಸ್ಥಾನಮಾನ ನೀಡುವ ಬಗೆಗಿನ ಯುಪಿಎನ ಅಶ್ವಾಸನೆ ಪ್ರಾಂತೀಯ ಭಾಷೆಗಳ ಬಗೆಗಿನ ಅಶ್ವಾಸನೆಯ ನಂತರ ಬರುತ್ತದೆ. ಅದರೆ ಅದನ್ನು ಮೊದಲು ಮಾಡಲಾಯಿತು. ಅಲ್ಲದೆ ಪ್ರಾಂತೀಯ ಭಾಷೆಗಳ ಬಗೆಗಿನ ಈ ಅಶ್ವಾಸನೆ ಹಿಂದಿನ ಎನ್‌ಡಿಎ ಅಜೆಂಡಾದಲ್ಲಿ ಸಹ ಇತ್ತು.) ಇದರ ಪರಿಣಾಮಗಳೇನು ಹಾಗೂ ಇದು ಕನ್ನಡ ಹಾಗೂ ಇತರ ಪ್ರಾಂತೀಯ ಭಾಷೆಗಳ ಬಳಕೆಯ ವ್ಯಾಪ್ತಿಯನ್ನು ಹಿಗ್ಗಿಸುತ್ತದೆಯೇ ಎಂಬುದರ ಬಗೆಗೆ ಇಂದು ಚರ್ಚೆಗಳು ನಡೆಯುತ್ತಿಲ್ಲ. ಈ ಬಗೆಗೆ ಒತ್ತಾಯ ತರುವುದು ಅಗತ್ಯವಿಲ್ಲವೇ?

ಇದು ನಮ್ಮ ಆದ್ಯತೆಗಳ ಸ್ವರೂಪವನ್ನು ಸೂಚಿಸುತ್ತದೆಯೇ?

ಭಾಷೆಗಳ ಸಾವಿನ ಬಗೆಗೆ ಇಂದು ಚರ್ಚೆಯಾಗುತ್ತಿದೆ. ವಾಣಿಜ್ಯ, ಉದ್ಯಮ ಹಾಗೂ ಜ್ಞಾನ ಮಾಧ್ಯಮವಾಗಿ ಬಳಸದೆ ಕನ್ನಡವನ್ನೂ ಒಳಗೊಂಡು ಯಾವ ಪ್ರಾಂತೀಯ ಭಾಷೆಗಳೂ ಉಳಿಯಲಾರವು. ಅವುಗಳ ಸಾವಿನ ಮಹೂರ್ತ ಭಿನ್ನವಾಗ ಬಹುದಷ್ಟೆ. ಇದು ತಕ್ಷಣ ಆಗುತ್ತದೆ ಎಂದೇನೂ ಅಲ್ಲ, ಬಳಕೆಯನ್ನು ಕಳೆದು ಕೊಂಡ ಭಾಷೆಗಳಿಗೆ ಭವಿಷ್ಯವಿಲ್ಲ, ಅವು ಸಾವಿನೆಡೆ ದೂಡಲ್ಪಡುತ್ತವೆ.

ಹಾಗಾದರೆ ನಾವು ಎತ್ತ ಸಾಗುತ್ತಿದ್ದೇವೆ?

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ By: ismail (10 replies) August 12, 2005 - 2:41pm
  • ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ By: tarlesubba (Oct 8 2007 - 5:47am)
  • ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ By: ritershivaram (Jun 7 2007 - 6:11pm)
  • ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ By: ritershivaram (Jun 7 2007 - 6:11pm)
  • Re: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ By: mnsrao (Apr 2 2007 - 1:16am)
  • ಕನ್ನಡದ ಬಳಕೆ ಹೆಚ್ಚಿಸ ಬೇಕಾದ ಅಗತ್ಯ By: ಪ್ರದೀಪ್ ಬೆಳಗಲ್ (Jan 17 2006 - 9:29pm)
  • ತರ್ಕಬದ್ಧವಾಗಿದೆ By: tvsrinivas41 (Aug 12 2005 - 11:03pm)
  • ನಿಮ್ಮ ವಿಚಾರಗಳು ನಿಜಕ್ಕೂ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ. By: (Aug 12 2005 - 9:04pm)
  • ವಾಸ್ತವ ಚಿತ್ರಣ By: hpn (Aug 12 2005 - 3:12pm)
    • Re: ವಾಸ್ತವ ಚಿತ್ರಣ By: ವೈಭವ (Apr 2 2007 - 9:55am)
    • ವಸ್ತುಸ್ಥಿತಿ By: ಶ್ಯಾಮ ಕಶ್ಯಪ (Aug 12 2005 - 11:48pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು


ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator