ಯವಕ್ರೀತನ ಕಥೆ
8 hours 38 minutes ago - ಬರಹಗಾರರ ಬಳಗಇಂದು ನಾವು ಯವಕ್ರೀತನ ಬಗ್ಗೆ ತಿಳಿದುಕೊಳ್ಳೋಣ. ಈ ಕಥೆಯನ್ನು ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಒಂದು ಪ್ರವಚನದಲ್ಲಿ ಹೇಳಿದ ಪುರಾತನ ಕಥೆ.
ಪುರಾಣ ಕಾಲದಲ್ಲಿ ಭಾರದ್ವಾಜ ಎಂಬ ಋಷಿಯಿದ್ದನು. ಈತನ ಮಗನೇ ಯವಕ್ರೀತ. ಭಾರದ್ವಾಜ ಅಂತರ್ಮುಖಿ ಯಾದುದರಿಂದ ತನ್ನ ಮಗನ ಕಡೆ ಗಮನ ಹರಿಸಲಿಲ್ಲ. ಯವಕ್ರೀತನಿಗೆ ವಯಸ್ಸು ಹದಿನೆಂಟು ಸುಂದರನಾಗಿದ್ದನು. ಸದೃಢ ದೇಹ ಇತ್ತು. ತಂದೆ ಗಮನ ಹರಿಸದೆ ಇದ್ದುದ್ದರಿಂದ, ಈತ ದೇಹ, ಬುದ್ಧಿ ಮತ್ತು ಮನಸ್ಸನ್ನು ಬಳಸಲಿಲ್ಲ. ವಿದ್ಯೆ ಪಡೆಯಲಿಲ್ಲ. ನಾವು ದೇಹ, ಮನಸ್ಸು ಮತ್ತು ಬುದ್ಧಿ ಬಳಸದೆ ಇದ್ದರೂ ವಯಸ್ಸು ಆಗುತ್ತದೆ. ಹಾಗೆ ಯವಕ್ರೀತನಿಗೆ ವಯಸ್ಸು ಹದಿನೆಂಟಾಯಿತು. ವಿದ್ಯೆ ಪಡೆಯಲಿಲ್ಲ. ಆಗಿನ ಕಾಲದಲ್ಲಿ ಸದೃಢ ದೇಹಕ್ಕೆ, ಸುಂದರ ದೇಹಕ್ಕೆ ಬೆಲೆ ಕೊಡುತ್ತಿರಲಿಲ್ಲ. ವಿದ್ಯೆಗೆ ಬೆಲೆ ಕೊಡುತ್ತಿದ್ದರು. ಈತನ ಗೆಳೆಯರು ವಿದ್ಯೆ ಪಡೆದಿದ್ದರು. ಹಾಗಾಗಿ ಈತನ ಗೆಳೆಯರನ್ನು ಗೌರವಿಸುತ್ತಿದ್ದರು ಹಾಗೂ ಮಾತನಾಡಿಸುತ್ತಿದ್ದರು. ಯವಕ್ರೀತನನ್ನು ತಿರಸ್ಕಾರದಿಂದ ನೋಡುತ್ತಿದ್ದರು. ಇದರಿಂದ ಯವಕ್ರೀತನಿಗೆ ಚಿಂತೆಯಾಯಿತು. ಯೋಜಿಸಿದ. ಈಗಾಗಲೇ ನನಗೆ ಹದಿನೆಂಟು. ವರ್ಷ. ಈಗ ಕಲಿಯಲು ಹೋದರೆ 12 ವರ್ಷ ಕಲಿಯಬೇಕು. ಇದಕ್ಕೆ ಏಕ್ ದಮ್ ಕಲಿಯಬೇಕು. ಅಂದರೆ ಯಂತ್ರ, ಮಂತ್ರ ತಾಯತ ಕಟ್ಟಿ ಅಥವಾ ತಪಸ್ಸು ಯಾವುದಾದರೂ ಸರಿಯೇ ಏಕ್ ದಂ ವಿದ್ಯಾವಂತನಾಗಬೇಕೆಂದು, ದೊಡ್ಡ ಜ್ಞಾನಿಯಾಗಬೇಕೆಂದು ನಿರ್ಧರಿಸಿದನು.
ಏನು ಮಾಡುವುದು ಎಂದು, ಬಲ್ಲವರನ್ನು ಕೇಳಿದ. ಬಲ್ಲವರು ಹೇಳಿದರು ವಿದ್ಯಾ ದೇವತೆಗಳಾದ ಸರಸ್ವತಿ ಮತ್ತು ಗಣಪತಿ ಒಲಿದರೆ ಆಯ್ತು ಎಂದರು. ಆಗ ಯವಕ್ರೀತ ಒಂದು ನದಿ ದಡದಲ್ಲಿ, ಸುತ್ತ ಅಗ್ನಿ ಹಾಕಿಕೊಂಡು, ತಪಸ್ಸಿಗೆ ಕುಳಿತನು. ಮೊದಲಿಗೆ ಸರಸ್ವತಿ ಕುರಿತು ತಪಸ್ಸು ಶುರು ಮಾಡಿದನು.… ಮುಂದೆ ಓದಿ...