ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಫಲ ಸಂಪದ ಸಮ್ಮೇಳನ ಸಂ:೪

ಇಂಟರ್‌ನೆಟ್‌ನಲ್ಲಿ ತಂಪಾದ ಕನ್ನಡದ ನೆರಳು ಇನ್ನೂ ಹರವಿಕೊಳ್ಳಬೇಕಾಗಿದೆ. ಈ ಗುರಿಗೆ ಬದ್ಧವಾದ ಸಮುದಾಯವ(ಗಳ)ನ್ನು ಮತ್ತು ಕಂಪ್ಯೂಟರಿನಲ್ಲಿ ಬೇಕಾದ ತಾಂತ್ರಿಕ ಸೌಲಭ್ಯಗಳನ್ನು ಬೆಳೆಸುವುದೂ ಕೂಡ ಕನ್ನಡದ ಬೇಸಾಯವೇ ಆಗಿರುವುದು ೨೧ನೇ ಶತಮಾನದ ವಿಶೇಷ. ಹರಿಪ್ರಸಾದ್ ಅವರು ಈ ನಿಟ್ಟಿನಲ್ಲಿ ಮಾಡಿರುವ ಕೆಲಸ ಅಗಾಧವಾದದ್ದು ಮತ್ತು stratagic ಆದದ್ದು ಕೂಡ. ಇವರು ನಿರ್ಮಿಸಿ ಪಾಲಿಸುತ್ತಿರುವ ಸಂಪದವು ಇಂಟರ್‌ನೆಟ್‌ನಲ್ಲಿನ ಕನ್ನಡದ ಬೆಳೆಗೆ ಫಲವತ್ತಾದ ನೆಲವಾಗಿದೆ.

ಇದೆಂತಾ self help kiosk?

ವೊಡಾಫೋನಿನ ಜಯನಗರದ ಮಳಿಗೆಯಲ್ಲಿ self help kiosk ಒಂದನ್ನು ಇಡಲಾಗಿದೆ. ಆದರೆ ಈ ಕಿಯಾಸ್ಕ್ ಬಳಸಲು ಕನ್ನಡ ಮಾತ್ರ ಗೊತ್ತಿದ್ದರೆ ಸಾಕಾಗಲ್ಲ. ಯಾಕಂದ್ರೆ ಈ ಕಿಯಾಸ್ಕ್ ಕೊಡೋದು ಕೇವಲ ಇಂಗ್ಲಿಶ್ ಮತ್ತೆ ಹಿಂದಿ ಆಯ್ಕೆ ಮಾತ್ರ. ಫೋಟೋ ಲಗತ್ತಿಸಲಾಗಿದೆ ನೋಡಿ.


“ಕರ್ನಾಟಕದ ತರ‍್ಲೆ ಜನ”!

                ‘ಕರ್ನಾಟಕದ ಜನ ತರ‍್ಲೆ ಬುದ್ಧಿಯವರು’ ಎಂಬ ಹೊಸ ದರ್ಶನವನ್ನು ಹಿರಿಯ ದಾರ್ಶನಿಕ ಡಾ. ಎಸ್. ಎಲ್. ಭೈರಪ್ಪನವರು ಕರ್ನಾಟಕದ ಜನತೆಯ ಮೇಲೆ ಪ್ರಹಾರ ಮಾಡಿರುವುದಾಗಿ ಪತ್ರಿಕೆಯೊಂದರಲ್ಲಿ ವರಿಯಾಗಿದೆ.


                ರಾಜ್ಯದ ದಿನನಿತ್ಯದ ತರ‍್ಲೆ ರಾಜಕೀಯವನ್ನೇ ಅವರು ಈ ರೀತಿ ಹೇಳಿರಬಹುದು. ಹಾಗಾದರೆ ಈ ತರ‍್ಲೆ, ರಾಜ್ಯದ ಬಹುಸಂಖ್ಯೆಯ ಮಹಾಜನತೆಯದೋ ಅಥವಾ ಹೊಸದಾಗಿ ಅಧಿಕಾರದ ರುಚಿ ಕಂಡು ಗುಳಕಾವಣೆಯಲ್ಲೂ ಅಡ್ಡಕಸಬಿತನ ತೋರಿ ಸಿಕ್ಕಿಹಾಕಿಕೊಳ್ಳುತ್ತಿರುವ ಮೌಲ್ಯವಂತ ಪಕ್ಷದ ರಜಕಾರಣಿಗಳದ್ದೋ ಇಲ್ಲಾ ಅವರನ್ನು ಅಧಿಕಾರಕ್ಕೆ ತಂದು ಇನ್ನೂ ಹಾಡಿಹೊಗಳುತ್ತಿರುವ ವಂಧಿಮಾಗಧ ಬೆಂಬಲಿಗರದ್ದೋ ಎನ್ನುವ ಜಿಜ್ಞಾಸೆಯನ್ನೂ ಈ “ದರ್ಶನ” ಹುಟ್ಟಿಸೀತು!

ಇಂಡೋನೇಶ್ಯಾ ಮತ್ತು ಅಂತರ್ಜಾಲ

ಇಂಡೋನೇಶ್ಯಾವು ಅಂತಜಾಲ ಬಳಕೆಯಲ್ಲಿ ಮುಂದಿರುವ ದೇಶವಾಗುತ್ತಿದೆ.ಅದರಲ್ಲೂ ಸಾಮಾಜಿಕ ಜಾಲತಾಣಗಳನ್ನು ಇಲ್ಲಿನ ಜನರಷ್ಟು ಮೆಚ್ಚುವವರು ಬೇರೆಲ್ಲೂ ಇದ್ದಹಾಗಿಲ್ಲ.ಫೇಸ್‌ಬುಕ್ ಮತ್ತು ಟ್ವಿಟರ್ ಬಳಕೆಯಲ್ಲಿ ಇಂಡೋನೇಶ್ಯಾದವರದ್ದು,ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ಮೇಲುಗೈಯಾಗಿದೆ.ಜಗತ್ತಿನಲ್ಲೇ ಫೇಸ್‌ಬುಕ್ ಬಳಕೆದಾರರ ಸಂಖ್ಯೆಯಲ್ಲಿ ಇಂಡೋನೇಶ್ಯಾ ನಾಲ್ಕನೇ ಸ್ಥಾನದಲ್ಲಿದೆ.ಹೆಚ್ಚಿನವರು ಮೊಬೈಲ್ ಸಾಧನಗಳ ಮೂಲಕವೆ ಅಂತರ್ಜಾಲ,ಅದರಲ್ಲೂ ಈ ತಾಣಗಳ ಬಳಕೆ ಮಾಡುತ್ತಿದ್ದಾರೆ.ಭಾರತದ ಭೇಟಿಯ ನಂತರ ಒಬಾಮಾ ದಂಪತಿಗಳು ಇಂಡೋನೇಶ್ಯಾ ಪ್ರವಾಸಕ್ಕೆ ಹೋದದ್ದು ನೆನಪಿದೆಯೇ?ಒಬಾಮ ಪತ್ನಿಯ ಕೈಕುಲುಕಿ ಸ್ವಾಗತಿಸಿದ ಇಲ್ಲಿನ ಸಚಿವರೋರ್ವರ ಕ್ರಮವು,ಸಂಪ್ರದಾಯಕ

ಬೆರಗು

ಆಸ್ಫೋಟದಿಂದ ಚೆಲ್ಲಾಪಿಲ್ಲಿ

ರಟ್ಟಿದ ಒಂದು ತುಣುಕಲ್ಲಿ

ಕುದಿದು ತಣಿದ  ದ್ರವ -ಜಲದಾವಿರ್ಭಾವ

ಒಂದೊಂದೇ  ಕಣದ ಘರ್ಷಣೆ   ಜೀವದ ತುಡಿತ 

ಎಂದೋ ಮೂಡಿತು ನಿತ್ಯ ಭ್ರಮಣದವಧಿಯಲ್ಲಿ

ನೆಲಕೆ ಹಳದಿ ಹಸುರಿನ ಹರಹು

ಜಲಚರದ ಹೊರಳಿಕೆಯ ಹೊಳಹು

ತೋಳ ಚಾಚಿತು ಇಲ್ಲಿ -

ಪ್ರಾಣಿಗೆ ಪ್ರಾಣಿ ,ತ್ರಾಣವಿದ್ದವ ಬದುಕಿ

ಸೇರಿತೊಂದೊಂದೇ ಗೊಣಸು

ಸಂಕಲೆಯ ಬಳ್ಳಿಯ ಬೆಳೆಸು

ಹತ್ತಿರದ ಬಂದಿಗಳು-ಬಂಧುಗಳು

ಉಭಯ ಕುಶಲೋಪರಿ

ಕಣ್ಣಾಲಿ ತುಂಬಿಹುದೇ ಸೌಹಾರ್ದ ಭಾವ?

ತೋರಬೇಕೆಂದೇ ತೋರುವ ಪ್ರೀತಿ?

ಪರಸ್ಪರ ಈರ್ಷ್ಯೆಯೋ ಅರಿವಿನ

ಅಭಾವವೋ

ಈ ಬಿಟ್ಟ ಬಾಯಿಯ ಬೆರಗು ?

ಇರುವುದೇ ಅನ್ಯೋನ್ಯ ತಿಳಿಯಲಿಕೆ

ಜೈಮಿನಿಯ ಕಾವ್ಯ

ಯಮಜಾತನರಸುತನ ವೈಭವ ,ಶಿಖಿಧ್ವಜನ

ವಿಮಲ ಚಾಗವು,ಸುಧನ್ವನ ಭಕ್ತಿ ,ಶಶಿಹಾಸ 

ನಮಲ ಚಾರಿತ್ರ ,ಕರ್ಣಜ ಸುರಥ  ಬಭ್ರುವಾಹನರಧಿಕ ಶೌರ್ಯಂಗಳು

ಯಮಸತೀಪಿತನದಟು,ಹಂಸಧ್ವಜನ ನ್ಯಾಯ,

ಸಮರಸದ ಹರಿ-ಪಾಂಡುಜಾತಸಖ್ಯವು  ಮೆರೆಯೆ

ಕಮಲನಾಭನ ಮಹಿಮೆ ತುಂಬಿರುವ ಜೈಮಿನಿಗೆ ಸಮನಾದ ಕಾವ್ಯವಿಹುದು?

 

ಏಕತೆ

ಹಲವು ಮರಗಿಡ ಸೇರಿ ಬೆಳೆದಿರಲು ವನವು

ಹಲವು ಜನ,ಮತ,ಭಾಷೆ ಸೇರಿ ಜೀವನವು

ನಡೆಯುತಿದೆ ಭಿನ್ನತೆಯ ನಡುವಿನಲೇ ಐಕ್ಯ

ತಿಳಿದಿರಲು ಎಲ್ಲರೂ ಜಗಕಿಹುದು ಸೌಖ್ಯ